ಚೌರಾಸಿಯಾ ಬಾನ್ಸುರಿ ಧ್ಯಾನ
Team Udayavani, Jan 25, 2020, 6:01 AM IST
“ವಿಮಾನ ಏರುವುದಕ್ಕೂ ಮೊದಲು, ಕೊಳಲನ್ನು ನುಡಿಸುತ್ತಾ ನುಡಿಸುತ್ತಾ ಆಕಾಶ ಕಂಡವನು ನಾನು. ಮನಸ್ಸು ಹಕ್ಕಿಯಾಗಿ, ಭೂಮಿಗೆ ಇಳಿಯುವುದನ್ನೇ ಮರೆಯುತ್ತಿದ್ದೆ’ ಎಂದವರು, ಬಾನ್ಸುರಿ ವಾದಕ ಹರಿಪ್ರಸಾದ್ ಚೌರಾಸಿಯಾ. ಅವರಷ್ಟೇ ಅಲ್ಲ, ಅವರ ಬಾನ್ಸುರಿ ದನಿ ಕೇಳಿದ ಯಾರೂ, ಹಾಗೆ “ಗಗನಯಾನಿ’ ಆಗಬಲ್ಲರು.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹರಿಪ್ರಸಾದ್ ಕಾರ್ಯಕ್ರಮ ನೀಡುವುದಕ್ಕಾಗಿ ಸಾಕಷ್ಟು ಸಲ ಬೆಂಗಳೂರಿಗೆ ಬಂದಿದ್ದಾರೆ. ಹಾಗೆ ಬಂದು ಹೋದಾಗಲೆಲ್ಲ, ಕೊಳಲ ಗುಂಗಿ ನಲ್ಲಿ ತೇಲಿಸಿಯೇ ಹೋಗಿರುವುದು ವಿಶೇಷ. ಇದೀಗ ಮತ್ತೆ ಅವರು, ಬೆಂಗಳೂರಿನಲ್ಲಿ ಶೋಗೆ ಸಜ್ಜಾಗಿದ್ದಾರೆ. ತಣ್ಣನೆ ಚಳಿಯಲ್ಲಿ, ಮೈಮರೆಸುವ ಕೊಳಲಿನ ದನಿ, ಹೃದಯಕ್ಕೆ ಇಳಿಸುವ ಆ ಮಧುರ ಗಳಿಗೆಗೆ ಸಾಕ್ಷಿಯಾಗುವ ಸರದಿ ನಮ್ಮದಷ್ಟೇ.
ಯಾವಾಗ?: ಜ.25, ಶನಿವಾರ, ಸಂ.7.30
ಎಲ್ಲಿ?: ಫೋರಂ ಶಾಂತಿನಿಕೇತನ ಮಾಲ್, ವೈಟ್ಫೀಲ್ಡ್
ಪ್ರವೇಶ: 699 ರೂ. ಮೇಲ್ಪಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್