ಚೆಟ್ಟಿನಾಡ್‌ ಅರಮನೆಯೊಳಗೊಂದು ಅಡುಗೆ ಮನೆ


Team Udayavani, Jan 14, 2017, 3:56 PM IST

12.jpg

ಸೌತ್‌ ಎಂಡ್‌ ಸರ್ಕಲ್ಲಿನಿಂದ ಜಯನಗರಕ್ಕೆ ಹೋಗುವ ದಾರಿಯಲ್ಲಿ, ಸಿಂಡಿಕೇಟ್‌ ಬ್ಯಾಂಕಿನ ಬಳಿ ಬಲಕ್ಕೆ ತಿರುಗಿದರೆ, ಅಲ್ಲೊಂದು ಹೊಟೆಲ್‌ ನಿಮ್ಮ ಕಣ್ಣಿಗೆ ಬೀಳುತ್ತದೆ. ಕಣ್ಣರಳಿಸಿ ನೋಡಿದರೆ ಗೂಫಾ ಎಂಬ ಹೆಸರೂ ಅದರ ಪಕ್ಕದಲ್ಲೇ ದಿ ಪ್ರಸಿಡೆಂಟ್‌ ಎಂಬ ಫ‌ಲಕವೂ ಕಣ್ಣಿಗೆ ಬೀಳುತ್ತದೆ. ಪ್ರಸಿಡೆಂಟ್‌ ರೆಸ್ಟುರಾಂಟಿನ ಮುಂದೆ ನಿಂತರೆ ಮುಚ್ಚಿದ ಬಾಗಿಲು ಕಣ್ಣು ಸೆಳೆಯುತ್ತದೆ. ಮಹಾರಾಜರ ಕಾಲದ ಭವ್ಯವಾದ ಬಾಗಿಲಂತೆ ಭಾಸವಾಗುವ, ಮಹಾದ್ವಾರದ ಮುಂದೆ ಚರಿತ್ರೆಯ ಪುಟಗಳಿಂದ ಇಳಿದುಬಂದಂತೆ ಕಾಣುವ ವ್ಯಕ್ತಿಯೊಬ್ಬ ನಿಂತಿದ್ದು, ನೀವು ಮುಂದಕ್ಕೆ ಹೆಜ್ಜೆಯಿಡುತ್ತಿದ್ದಂತೆ ಬಾಗಿಲು ತೆರೆದು ನಿಮ್ಮನ್ನು ಒಳಗೊಳ್ಳುತ್ತಾನೆ.

ನೀವಾಗ ಚೆಟ್ಟಿನಾಡ್‌ ಅರಮನೆಯೊಳಗೆ ಕಾಲಿಡುತ್ತೀರಿ. ದಪ್ಪದಪ್ಪದ ಕಂಬಗಳ, ಆಕರ್ಷಕ ಚಾವಣಿಯ, ಹಳೆಯ ಅನುಭವ ಕೊಡುವ ಪೀಠೊಪಕರಣಗಳ, ಒಳಾಂಗಣ, ಪಡಸಾಲೆ, ಜಗಲಿಗಳ ಅರಮನೆಯ ಪ್ರತಿರೂಪದ ಹೆಸರೇ ಚೆಟ್ಟಿನಾಡ್‌ ಕಿಚನ್‌.

ಚೆಟ್ಟಿನಾಡ್‌ ಅಂದರೇನೇ ಅಡುಗೆಯವರು. ವಿಶೇಷ ಬಗೆಯ ಅಡುಗೆ ಮಾಡುವುದರಲ್ಲಿ ಹೆಸರಾದವರು. ಅವರನ್ನು ಭಾರತದ ಮಾಸ್ಟರ್‌ ಶೆಫ್ಗಳೆಂದು ಕರೆಯುತ್ತಾರೆ. ಘಮಘಮಿಸುವ ಮಸಾಲೆ ತಯಾರಿಸುವುದರಲ್ಲಿ ಚೆಟ್ಟಿನಾಡಿಗರು ಎತ್ತಿದ ಕೈ.  ಪ್ರತಿಯೊಂದು ತಿನಿಸಿನ ಜೊತೆಗೂ ಅವರು ಬೇಯಿಸಿದ ಮೊಟ್ಟೆಯನ್ನು ಬಳಸುತ್ತಾರೆ. ಬದನೆಕಾಯಿ-ನುಗ್ಗೇಕಾಯಿ ಸಾಂಬಾರು ಮಾಡುವುದರಲ್ಲಿ ಅವರು ಹೆಸರುವಾಸಿ. ಚಿಕನ್‌ ಚೆಟ್ಟಿನಾಡ್‌ ಆರೋಗ್ಯಕ್ಕೂ ನಾಲಗೆಗೂ ಶ್ರೇಷ್ಠ. ಏಡಿ, ಮೀನು, ಕೋಳಿಗಳಿಂದ ಮಾಡಿದ ಘಮ್ಮನೆಯ ಮಸಾಲೆ ಬೆರೆತ ಅಡುಗೆಗಳನ್ನು ನೀವು ಚೆಟ್ಟಿನಾಡ್‌ ಕಿಚನ್‌ನಲ್ಲೂ ಸವಿಯಬಹುದು.

ಉದಾಹರಣೆಗೆ ಸೂಪ್‌ ಕೊಡಿ ಎಂದರೆ ಅವರು ನಂಡು ಮೆಲಗು ರಸಂ ಕೊಡುತ್ತಾರೆ. ಏಡಿಯನ್ನು ಹದವಾಗಿ ಬೇಯಿಸಿ ಅದಕ್ಕೆ ಕರಿಮೆಣಸಿನ ಪುಡಿ ಹಾಕಿ ಮಾಡಿದ ಆ ಸೂಪ್‌ ನಿಮಗೆ ಮತ್ತೆಲ್ಲೂ ಸಿಗಲಾರದು. ಸ್ಟಾರ್ಟರ್ಸ್‌ ಅಂದರೆ ಎಗ್‌ ಕಳಕಿ, ಚೆಟ್ಟಿನಾಡ್‌ ಎಗ್‌ ರೋಸ್ಟ್‌, ಚಿಕನ್‌ ಚುಕ್ಕಾ, ಚೆಟ್ಟಿನಾಡ್‌ ಚಿಲ್ಲಿ ಚಿಕನ್‌- ಹೀಗೆ ನಾನಾ ಥರದ ರುಚಿಕಟ್ಟಾದ ತಿನಿಸುಗಳು ಬಂದು ಕೂರುತ್ತವೆ. ಇವೆಲ್ಲಕ್ಕೂ ಚೆಟ್ಟಿನಾಡ್‌ ಮಸಾಲೆ ಬೆರೆತಿರುತ್ತದೆ ಅನ್ನುವುದೇ ವಿಶೇಷ. ಹೀಗಾಗಿ ಚೆಟ್ಟಿನಾಡ್‌ ಕಿಚನ್ನಿನಲ್ಲಿ ನಿಮಗೆ ಸಿಗುವುದು ಅವರ ಅಡುಗೆ ಮನೆಯಲ್ಲೇ ತಯಾರಿಸಲ್ಪಟ್ಟ ವಿಶೇಷವಾದ ಕಮ್ಮನೆಯ ಮಸಾಲೆ ಬೆರೆತ ತಿನಿಸುಗಳು.

ಜಯನಗರಕ್ಕೆ ಸಮೀಪ ಇರುವುದರಿಂದ ಸಸ್ಯಾಹಾರಿಗಳಿಗೂ ಅಲ್ಲಿ ವಿಶೇಷ ರೆಸಿಪಿಗಳಿದ್ದಾವೆ. ಪಾಲ್ಕಟ್ಟಿ ಚುಕ್ಕಾ ಎಂಬುದು ಪನೀರ್‌ನಿಂದ ಮಾಡಿದ ವಿಶೇಷ ತಿನಿಸು, ಹಾಗೆಯೇ ಮಶ್ರೂಮ್‌, ಬೇಬಿ ಕಾನುìಗಳಿಂದ ಮಾಡಿದ ವಿಶೇಷ ಅಡುಗೆಗೂ ಇಲ್ಲುಂಟು. ಉರುಲೈ ಕಲ್ಯಾಣ ರೋಸ್ಟ್‌ ಎಂಬುದು ಆಲೂಗಡ್ಡೆಯ ಒಂದು ಸ್ಪೆಷಲ್‌ ಅಡುಗೆ. ಪೊರಿಚಾ ಮುಟ್ಟೈ ಕೊಳಂಬು ಅಂದರೆ ಮೊಟ್ಟೆಯಿಂದ ಮಾಡಿದ ಗಸಿ. 

ನಮ್ಮೂರಲ್ಲಿ ಪಡ್ಡು ಅಂತ ಮಾಡುತ್ತಾರಲ್ಲ, ಅದನ್ನೇ ಚೆಟ್ಟಿನಾಡ್‌ ಕಿಚನ್‌ನಲ್ಲಿ ಮಟನ್ನಿನಿಂದ ಮಾಡುತ್ತಾರೆ. ಅದಕ್ಕೆ ಮಟನ್‌ ಕೋಲ ಉರಂಡೈ ಎಂದು ಕರೆಯುತ್ತಾರೆ. ಹಾಗೆಯೇ ವಿರುದುನಗರ್‌ ಆಯಿಲ್‌ ಪರೋಟ ಎಂಬ ಪಕ್ಕಾ ದೇಸಿ ಶೈಲಿಯ ಪರೋಟವೂ ಇಲ್ಲಿ ಸಿಗುತ್ತದೆ. ಶ್ಯಾವಿಗೆ, ಅಪ್ಪಮ್‌ ಕೂಡ ಉಂಟು. ಅಟ್ಟುಕಲ್‌ ಪಾಯ ಎಂಬ ಮಜ್ಜಿಗೆಹುಳಿಯಂಥ ರಸದೊಂದಿಗೆ ಇಡಿಯಪ್ಪಂ ತಿಂದರೆ ಸಿಗುವ ಸಂತೋಷವೇ ಬೇರೆ.

ಇಲ್ಲಿಯ ಮೆನು ಓದಲು ಮತ್ತು ಅರ್ಥಮಾಡಿಕೊಳ್ಳಲು ಅನ್ಯಭಾಷಿಗರಿಗೆ ಕಷ್ಟ. ಆದರೆ ನಿಮಗೆ ನೆರವಾಗುವುದಕ್ಕೆ ಫ‌ುಡ್‌ ಅಂಡ್‌ ಬೆವರೇಜಸ್‌ ಮ್ಯಾನೇಜರ್‌ ಭಾಸ್ಕರ್‌ ಇದ್ದಾರೆ. ಅವರಿಗೆ ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು ಗೊತ್ತು. ಏನೇನು ತಿನ್ನಬೇಕು ಅನ್ನುವುದನ್ನು ಅವರ ಬಳಿಯೇ ಕೇಳುವುದು ಒಳ್ಳೆಯದು.

ಚೆಟ್ಟಿನಾಡ್‌ ಕಿಚನ್‌ ನಿಮ್ಮ ನಾಲಗೆ ರುಚಿಯನ್ನು ಹರಿತಗೊಳಿಸುವ ಊಟದ ಮನೆ.

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.