ಮತ್ತೆ ಬಂದಳು, ಮದುಮಗಳು…
Team Udayavani, Jan 18, 2020, 6:03 AM IST
ಬೆಂಗಳೂರಿಗೆ ಮತ್ತೆ ಮತ್ತೆ ಮಲೆನಾಡನ್ನು, ಸಹ್ಯಾದ್ರಿಯ ದಟ್ಟ ಕಾಡಿನ ನೆನಪುಗಳನ್ನು ಹೊತ್ತು ತರುವ ನಾಟಕ, “ಮಲೆಗಳಲ್ಲಿ ಮದುಮಗಳು’. ಇಡೀ ರಾತ್ರಿಯ ನಿದ್ರೆ, ಚಳಿಯನ್ನೂ ಲೆಕ್ಕಿಸದೆ, ರಾಷ್ಟ್ರೀಯ ನಾಟಕ ಶಾಲೆಯ ಹುಡುಗರು, ಬರೋಬ್ಬರಿ 9 ಗಂಟೆಗಳ ಕಾಲ ಪಾತ್ರಗಳ ಪರಕಾಯ ಪ್ರವೇಶಿಸಿ, ಕುವೆಂಪು ಅವರ ಬೃಹತ್ ಕಾದಂಬರಿಗೆ ರಂಗಜೀವ ನೀಡಲಿದ್ದಾರೆ. ಜಾನಪದ ನೋಟಗಳಿಂದ ಮದುಮಗಳನ್ನು ಈ ಬಾರಿಯೂ ಕಟ್ಟಿ ಕೊಡುತ್ತಿರುವುದು ನಿರ್ದೇಶಕ, ಸಿ. ಬಸವಲಿಂಗಯ್ಯ.
ಡಾ.ಕೆ.ವೈ. ನಾರಾಯಣ ಸ್ವಾಮಿ ಅವರ ರಂಗರೂಪ, ಹಂಸಲೇಖ ಅವರ ಸಂಗೀತ, ಗಜಾನನ ನಾಯಕ್ ಅವರ ಸಂಗೀತ ನಿರ್ವಹಣೆ, ಶಶಿಧರ ಅಡಪ ಅವರ ರಂಗವಿನ್ಯಾಸ, ನಂದಕಿಶೋರ್ ಅವರ ಬೆಳಕಿನ ಸಂಯೋಜನೆ ಈ ನಾಟಕದ ಶಕ್ತಿ. ಈ ಮಹಾ ನಾಟಕವು ಈಗಾಗಲೇ 85 ಪ್ರದರ್ಶನಗಳನ್ನು ಪೂರೈಸಿದೆ. ನಾಟಕದ ಸ್ಥಳದಲ್ಲಿ ಮತ್ತು ಬುಕ್ ಮೈ ಶೋನಲ್ಲಿ ಟಿಕೆಟ್ಗಳು ಲಭ್ಯ.
ಯಾವಾಗ?: ಜ.20- ಫೆ.29ರವರೆಗೆ, ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ
ಸಮಯ: ರಾತ್ರಿ 8ರಿಂದ ಮುಂಜಾನೆ 6
ಎಲ್ಲಿ?: ಕಲಾಗ್ರಾಮ, ಮಲ್ಲತ್ತಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ