ಪರಿಷೆಯಲ್ಲಿ ಚಿಮಣಿಯ ದೀಪಾವಳಿ


Team Udayavani, Nov 23, 2019, 5:09 AM IST

parisheyalli

ಕೆಲ ದಶಕಗಳ ಹಿಂದಿನ ಪರಿಷೆ, ಇಂದಿನಂತೆ ಕಡಲೆಕಾಯಿಗೂ ಹೊರತಾದ ಬೇರೆ ಸಾಮಾನುಗಳ ಮಾರಾಟ ಜಾತ್ರೆ ಯಾಗಿರಲಿಲ್ಲ. ನೂರಾರು ಬಗೆಯ ಕಡಲೆಕಾಯಿಗಳನ್ನು ಗೋಪುರದಂತೆ ಕೂಡಿಸಿ, ಪಾವು- ಸೇರು- ಚಟಾಕುಗಳಲ್ಲಿ ಅಳೆದು ಮಾರುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ರಾಮಕೃಷ್ಣ ಆಶ್ರಮದಿಂದ ಬಿ.ಎಂ.ಎಸ್‌. ಕಾಲೇಜಿನ ತನಕ, ದೊಡ್ಡ ಬಸವಣ್ಣನ ದೇಗುಲದ ಸುತ್ತ ಕಡಲೆಕಾಯಿ ಮಾರಾಟಗಾರರ ಭರಾಟೆ.

ಚೌಕಾಸಿ ವ್ಯಾಪಾರದಲ್ಲಿ ನಿಪುಣರಾಗಿದ್ದ ನನ್ನ ಚಿಕ್ಕಪ್ಪ, ತಮ್ಮ ಹತ್ತಾರು ಚೀಲಗಳಲ್ಲಿ ಆಯ್ದ ವಿವಿಧ ಬಗೆಯ ಕಡಲೆಕಾಯಿಗಳನ್ನು ತುಂಬಿಸಿಕೊಳ್ಳುತ್ತಿದ್ದರು. ಏತನ್ಮಧ್ಯೆ, ನಾವು ಹುಡುಗರಿಗೆ ಅವರು ಕೊಡುತ್ತಿದ್ದದ್ದು ಅಳತೆಯ ಲೆಕ್ಕಗಳನ್ನು, ಅದಕ್ಕೆ ಕಟ್ಟಿದ ಬೆಲೆಯನ್ನು ಕೂಡಿ- ಗುಣಿಸುವ ಅಸೈನ್‌ಮೆಂಟ್‌. ಇಳಿ ಬೆಳಕಿನ ಚಳಿಗಾಲದ ಆ ಸಂಜೆಗಳಲ್ಲಿ ಕಡಲೆಕಾಯಿ ವ್ಯಾಪಾರಿಗಳ ಚಿಮಣಿ ಬುಡ್ಡಿಯ ಬೆಳಕೇ ಕಣ್ಣಿಗೆ ರಾಚುವಂತಿರುತ್ತಿತ್ತು. ಇವರ ನಡುವೆ ದೀಪದ ಹಂಗಿಲ್ಲದೇ ವ್ಯಾಪಾರ ನಡೆಸುತ್ತಿದ್ದವರು ಹುರಿದ ಕಡಲೆಕಾಯಿ ಬೀಜ ಮಾರುವ ಕೈಗಾಡಿಯವರು.

ಇದ್ದಿಲ ಕಿಡಿ ಸಿಡಿಯುವ ಅವರ ಒಲೆಯ ಭಗಭಗ ದೂರದಿಂದಲೇ ನಮಗೆ ದೀಪಾವಳಿಯ ದೃಶ್ಯ ಕಟ್ಟಿಕೊಡುತ್ತಿತ್ತು. ಬಿಸಿ ಬಾಣಲೆ, ಕಾದ ಮರಳು, ಅದರ ಮೇಲೆ ಬಣ್ಣ ದಟ್ಟವಾಗುತ್ತಿದ್ದ ಕಡಲೆಕಾಯಿ ಬೀಜ- ಇವೆಲ್ಲಕ್ಕೂ ಮಿಗಿಲಾಗಿ ಆ ಮಾರಾಟಗಾರ ಲಯಬದ್ಧವಾಗಿ ಜಾಲರಿಯನ್ನು ಬಾಣಲೆಗೆ ತಾಗಿಸಿ ಸೃಷ್ಟಿಸುತ್ತಿದ್ದ ಶಬ್ದ ಮಾಧುರ್ಯ. ಇಡೀ ಪೊಟ್ಟಣದ ಕಡಲೆಕಾಯಿ ಬೀಜವನ್ನು ಗಾಡಿಯ ಸುತ್ತಲೇ ತಿಂದು ಮುಗಿಸುವಾಗ ಒಲೆಯ ಬಿಸಿ ಚಳಿಗಾಲದ ಆ ಸಂಜೆಯನ್ನು ಮತ್ತಷ್ಟು ಆಪ್ತವಾಗಿಸುತ್ತಿತ್ತು.

* ಸುಧೀಂದ್ರ ಹಾಲ್ದೊಡ್ಡೇರಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.