ಕಲ್ಲಿನ ಕೊಡೆ ಬಲ್ಲಿರಾ?
Team Udayavani, Mar 21, 2020, 6:06 AM IST
ಇದೊಂದು ಅಪರೂಪದ ಛತ್ರಿ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ- ಎಲ್ಲ ಋತುಗಳಲ್ಲೂ ಈ ಛತ್ರಿ ಹೀಗೆಯೇ ನಿಂತಿರುತ್ತೆ. ಇದು ಯಾವತ್ತೂ ಮಡಚಿ ಕೂತಿದ್ದನ್ನು ಯಾರೂ ನೋಡಿಲ್ಲ. ಈ ಕಲ್ಲಿನ ಛತ್ರಿ ಇರೋದು, ಬೆಂಗಳೂರಿನ ಒಂದು ಪ್ರಸಿದ್ಧ ದೇವಸ್ಥಾನದಲ್ಲಿ. ನಾಡಪ್ರಭು ಕೆಂಪೇಗೌಡರ ಕಾಲದ ವಾಸ್ತುಶೈಲಿಯ ಪ್ರಮುಖ ಮೊಹರಾಗಿ ಕಲ್ಲಿನ ಕೊಡೆಯನ್ನು ಇತಿಹಾಸ ತಜ್ಞರು ಗುರುತಿಸುತ್ತಾರೆ.
ಅಷ್ಟಮಂಗಲದ ಸಂಕೇತಗಳಲ್ಲಿ ಛತ್ರಿಯೂ ಒಂದು ಎಂದು ನಂಬಿ, ಅದನ್ನು ಶಿಲೆಯಲ್ಲಿ ಕೆತ್ತಿಸಿ, ದೇವರಿಗೆ ಸಮರ್ಪಿಸುವುದನ್ನು ನಾವಿಲ್ಲಿ ಕಾಣಬಹುದು. 8ರಿಂದ 10 ಅಡಿ ಎತ್ತರವಿರುವ ಶಿಲಾಛತ್ರಿಗಳು, ಸುಂದರ ಕೆತ್ತನೆಗಳಿಂದ ಕೂಡಿವೆ. ಇದು ಯಾವ ದೇವಸ್ಥಾನದಲ್ಲಿದೆ? ಥಟ್ಟನೆ ಹೇಳಿ…