ಮೈಸೂರು ಜತಿಯಲ್ಲಿ ಮಿಂಚಿದ ಹರ್ಷಿತಾ


Team Udayavani, Jan 25, 2020, 6:05 AM IST

minchida

ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ ಅಂತ ನೆರೆದವರಿಗೆ ಅನ್ನಿಸಲೇ ಇಲ್ಲ. ಆತ್ಮವಿಶ್ವಾಸ, ಹರ್ಷಚಿತ್ತ-ಹಸನ್ಮುಖದಿಂದ, ಲವಲವಿಕೆಯ ಅಂಗಿಕಾಭಿನಯಗಳಿಂದ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದ ಹರ್ಷಿತಾ, ಇತ್ತೀಚಿಗೆ ಎ.ಡಿ.ಎ.ರಂಗಮಂದಿರದಲ್ಲಿ “ರಂಗಪ್ರವೇಶ’ ನೆರವೇರಿಸಿಕೊಂಡಳು.

ಶ್ರುತಿಲಯ ಫೈನ್‌ ಆರ್ಟ್ಸ್ ನೃತ್ಯಶಾಲೆಯ ನುರಿತ ನಾಟ್ಯಗುರು ಹೇಮಲತಾ ಪ್ರಕಾಶರ ಸಮರ್ಥ ತರಬೇತಿಯಲ್ಲಿ ರೂಪುಗೊಂಡ ಕಲಾಶಿಲ್ಪ ಹರ್ಷಿತಾ. ಅಂದು ಆಕೆ ಪ್ರದರ್ಶಿಸಿದ ಕೃತಿಗಳೆಲ್ಲ ಉತ್ತಮ ಆಯ್ಕೆಯಿಂದ ಕೂಡಿದ್ದು, ಕಲಾವಿದೆಯ ಅಂತಃಸತ್ವಕ್ಕೆ, ಕಲಾಪ್ರಪೂರ್ಣತೆಗೆ ಕನ್ನಡಿ ಹಿಡಿದವು. “ಆಕರ್ಷಕ ಪುಷ್ಪಾಂಜಲಿ’ಯಿಂದ ಆರಂಭಿಸಿ, ನರ್ತನ ಗಣಪತಿ­ಯನ್ನು ಸ್ತುತಿಸಿ, ಮೈಸೂರು ಅರಸರ ಕಾಲದಲ್ಲಿ ದೇವದಾಸಿಯರು ಪ್ರಸ್ತುತಪಡಿಸುತ್ತಿದ್ದ “ಮೈಸೂರು ಜತಿ’ಯನ್ನು ಅತ್ಯಂತ ಮನೋಹರ ನೃತ್ತ, ಮುದವಾದ ಭಂಗಿಗಳ ಮೂಲಕ ನೃತ್ಯಾರ್ಪಣೆ ಮಾಡಿದಳು.

ಗುರು ಹೇಮಲತಾ ಅವರ ಕವಿತಾತ್ಮಕ ನಿರೂಪಣೆ, ನಟುವಾಂಗ ಪರಿಣಾಮಕಾರಿಯಾಗಿತ್ತು. ಅನಂತರ, ಅಪರೂಪದ ಉತ್ಕೃಷ್ಟಮಟ್ಟದ “ಗೋಕುಲಬಾಲ ಪದವರ್ಣ’ದಲ್ಲಿ ಶ್ರೀಕೃಷ್ಣನ ಬಾಲಲೀಲಾ ವಿಶೇಷಗಳನ್ನು, ತನ್ನ ನಂಬಿದ ಭಕ್ತರನ್ನು ಶ್ರೀಕೃಷ್ಣ ಕಾಪಾಡಿದ ಹಲವಾರು ಮನನೀಯ ಸಂಚಾರಿಗಳ ನಾಟಕೀಯ ಸನ್ನಿವೇಶಗಳ ಮೂಲಕ ಜತಿಗಳ ಝೇಂಕಾರಗಳಲ್ಲಿ ಕಟ್ಟಿಕೊಟ್ಟಳು ಕಲಾವಿದೆ. ತುಂಟಕೃಷ್ಣ ಯಶೋದೆ ಮೇಲೆ ಮುಚ್ಚಿಟ್ಟಿದ್ದ ಬೆಣ್ಣೆಯನ್ನು ಕದ್ದನಷ್ಟೇ ಅಲ್ಲ, ಅಂದವನು ನೋಡುಗರ ಹೃದಯಗಳನ್ನೂ ಅಪಹರಿಸಿಬಿಟ್ಟಿದ್ದ!

“ಶಿವಸ್ತುತಿ’ಯಲ್ಲಿ ಕಲಾವಿದೆಯ ಅಂಗಶುದ್ಧಿ, ಅಭಿನಯ ಸಾಮರ್ಥ್ಯ ಅಭಿವ್ಯಕ್ತವಾದರೆ, ದಾಸರ ದೇವರನಾಮದ ಸಾಕ್ಷಾತ್ಕಾರದ ಭಾವುಕತೆಯಲ್ಲಿ ಹರ್ಷಿತಾಳಿಗೆ ಇಡೀ ರಂಗ ಆಡುಂಬೊಲವಾಗಿತ್ತು. ಕೊರವಂಜಿಯ ನೃತ್ಯ­ವಂತೂ ಉಲ್ಲಾಸಮಯವಾಗಿದ್ದು, ಜಾನಪದ ಆಯಾಮಗಳ ಹೆಜ್ಜೆ-ಗೆಜ್ಜೆಗಳ ಮಟ್ಟು ಆನಂದದಾಯಕವಾಗಿತ್ತು. ಕೊನೆಯ ನೃತ್ಯಬಂಧ- “ತಿಲ್ಲಾನ’­ದಲ್ಲಿ ಹರ್ಷಿತಾ, ನವಚೈತನ್ಯದ ಚಿಲುಮೆಯಾಗಿ ನರ್ತನದ ಪ್ರತಿರೂಪವಾಗಿ ಮನಸೂರೆಗೊಂಡಳು.

* ವೈ.ಕೆ.ಸಂಧ್ಯಾ ಶರ್ಮ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.