ಹುಚ್ಚು ಮನಸ್ಸಿನ ಹನ್ನೊಂದನೇ ಮುಖ


Team Udayavani, Jul 13, 2019, 4:48 PM IST

DRAMA-REVIEW1-copy-copy

ಪ್ರತಿ ಮನುಷ್ಯನಿಗೂ ತನ್ನೆಲ್ಲ ಮೂಲಭೂತ ಹಕ್ಕು- ಕರ್ತವ್ಯಗಳೊಂದಿಗೆ, ಸ್ವತಂತ್ರವಾಗಿ, ಘನತೆಯಿಂದ ಬದುಕುವ ಆಸೆಯಿರುತ್ತದೆ. ಸಮಾಜ ತನ್ನನ್ನು ತಾನು ನಾಗರೀಕ ಎಂದು ಕರೆದುಕೊಳ್ಳುವುದಕ್ಕಾಗಿ ಒಂದಿಷ್ಟು ರೀತಿ- ನೀತಿ- ವ್ಯವಸ್ಥೆಗಳನ್ನು ಮಾಡಿಟ್ಟುಕೊಂಡು ಅದರಾಚೆ ಮತ್ತು ಈಚೆ ಯಾವುದೂ ಘಟಿಸುವುದು ಸಾಧ್ಯವಿಲ್ಲ ಎಂದುಕೊಂಡು ಮನುಷ್ಯರನ್ನು ಚೌಕಗಳಲ್ಲಿ ಬಂಧಿಸಿಡಲು ಶುರುಮಾಡುತ್ತದೆ. ಅದರೊಳಗಡೆ ಸೇರದವರು, ಶಾಪಗ್ರಸ್ತರಂತೆ ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲೂ ಸೋತುಬಿಡುತ್ತಾರೆ. ಮಾನಸಿಕ ಅಸ್ವಸ್ಥರದ್ದೂ ಅಂಥದ್ದೇ ಒಂದು ಸೋಲು.

“ಹೆಜ್ಜೆ’ ಥೀಯೇಟರ್‌, ಇತ್ತೀಚೆಗೆ ಮÇÉೇಶ್ವರಂನ ಸೇವಾ ಸದನದಲ್ಲಿ “ನಗ್ನ 99′ ಎಂಬ ನಾಟಕವನ್ನು ಪ್ರಸ್ತುತಪಡಿಸಿತು. ಹನಮಂತ ಹಾಲಿಗೇರಿ ರಚಿತ, ಹೇಮಂತ್‌ ಕುಮಾರ್‌ ನಿರ್ದೇಶನದ ಮೊದಲ ಪ್ರಯೋಗವಿದು. ಮಾನಸಿಕ ಅಸ್ವಸ್ಥರ ಸಹಜ ಲೈಂಗಿಕ ಮನೋಭಿಲಾಷೆಯು ಹೇಗೆ ಸೋ ಕಾಲ್ಡ… ನಾಗರಿಕ ಸಮಾಜದ ಹಾಸ್ಯದ ವಸ್ತುವಾಗುತ್ತದೆ? ನಾಟಕದಲ್ಲಿ ಬರುವ ಅರೆಹುಚ್ಚನ ಲೈಂಗಿಕ ಕಾಮನೆಗಳನ್ನು ಸಮಾಜ ಹೇಗೆ ಅಸಹಜವೆಂದು ಅಲ್ಲಗಳೆದುಬಿಡುತ್ತದೆ? ಅದಕ್ಕೆ ಹೇಗೆ ವಿಕೃತಿ ಮತ್ತು ಅತ್ಯಾಚಾರಗಳ ಆರೋಪಗಳ ಬಣ್ಣ ಹಚ್ಚಿಬಿಡುತ್ತದೆ?- ಇವೆಲ್ಲನ್ನೂ ಎಲ್ಲೂ ವಾಚ್ಯಗೊಳಿಸದೆ ನಾಟಕ ಹೇಳಿತು.
ನಾಟಕದಲ್ಲಿ ಬಾಗಲಕೋಟೆಯ ಪರಿಸರದ ಭಾಷೆ ಅತ್ಯಂತ ಸಶಕ್ತವಾಗಿ ತೆರೆಯ ಮೇಲೆ ಮೂಡಿಬಂದಿದೆ. ಮಿತವಾದ ರಂಗಪರಿಕರಗಳು, ಬೆಳಕು, ರಂಗವಿನ್ಯಾಸ, ವಸ್ತ್ರವಿನ್ಯಾಸ ಎಲ್ಲವೂ ಹದದಲ್ಲಿ ಬೆರೆತು ನಮ್ಮನ್ನೆಲ್ಲ ಆ ಪರಿಸರದ ಭಾಗವನ್ನಾಗಿ ಮಾಡುತ್ತವೆ.

ನಾಟಕದಲ್ಲಿ ಕಾಡುವ ಸನ್ನಿವೇಶಗಳು ಬಹಳಷ್ಟಿವೆ. “ರಾಮುವಿನ ಕಾಟ ಬಹಳ ಆಗಿದೆ’ ಎಂದು ಅವನ ತಾಯಿ, ಮನೆಯಲ್ಲಿ ಕೂಡಿಹಾಕಿರುವುದು ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತೆ. “ಹೊರಗೆ ಬರ್ತೀಯೇನಪ್ಪಾ?’ ಎಂದು ಒಬ್ಬ ವ್ಯಕ್ತಿ ಪ್ರಶ್ನಿಸಿದಾಗ, ನಾಯಕ “ನೀವು ಬಡಿಯೋದಿಲ್ಲಾಂದ್ರ ಮಾತ್ರ ಬತೇìನಿ’ ಎನ್ನುತ್ತಾನೆ. ಆ ಒಂದು ಮಾತು ಇಡೀ ನಾಟಕದ ಜೀವಾಳದಂತಿದೆ. ಮತ್ತೂಂದು ದೃಶ್ಯದಲ್ಲಿ ರಾಮುವಿನ ತಾಯಿ, “ಊರಿನ ಕುಟುಂಬಗಳು ಬಾಳಬಕು ಅಂತಾ ನಾ ಇವನ್ನ ಇಲ್ಲಿ ಕಟ್ಟಿ ಹಾಕಿನಿ’ ಎನ್ನುವ ಸಂಭಾಷಣೆಗಳು ಮನಸ್ಸಿಗೆ ನಾಟುತ್ತವೆ.

ಹೊಸಬರೇ ತುಂಬಿಕೊಂಡಿರುವ ತಂಡದಲ್ಲಿ ಎಲ್ಲ ಕಲಾವಿದರ ಅಭಿನಯವೂ ಸಮತೂಕದಲ್ಲಿದೆ. ಮುಖ್ಯವಾಗಿ, ನಾಟಕದ ಕೇಂದ್ರಬಿಂದುವಾದ ಮಾನಸಿಕ ಅಸ್ವಸ್ಥ ರಾಮು ಆಗಿ ಚಂದ್ರಶೇಖರರೆಡ್ಡಿ, ಬಾಲ ರಾಮು ಆಗಿ, ನವೀನ್‌ ಹಾಸನ್‌, ರತ್ನ ಆಗಿ ರಿಯಾ ನಾರಾಯಣ ಮತ್ತು ರಾಮುವಿನ ತಾಯಿಯಾಗಿ ರಮ್ಯಾ ವರ್ಷಿಣಿ ಪ್ರೇಕ್ಷಕರನ್ನು ತಮ್ಮ ಸಹಜ ಅಭಿನಯದಿಂದ ಆವರಿಸಿಕೊಂಡರು. ದೇವೇಂದ್ರನಾಗಿ ಶಿವಕುಮಾರ್‌ ವತ್ತುಮುರಣಿ, ಟಿವಿ ವರದಿಗಾರರಾಗಿ, ನೀರಜ್‌ ಹುಬ್ಬಳ್ಳಿ, ಸುಜಯ…, ಯಶವಂತ್‌ ಹಾಗೂ ದಿನೇಶ್‌, ತಹಶೀಲ್ದಾರನಾಗಿ ಅಕ್ಷಯ್‌ ಮೇಸ್ತ, ಹೊನ್ನಾವರ, ರಾಧಾಳಾಗಿ ಮಮತಾ ಮಂಡ್ಯ, ಪಾರಿಯಾಗಿ ಕವಿತಾ, ಪೊಲಿಸ್‌ ಇನ್ಸ್‌ಪೆಕ್ಟರ್‌ ಆಗಿ ಸಂದೀಪ್‌, ಕಾಲೇಜು ವಿದ್ಯಾರ್ಥಿನಿಯಾಗಿ ಗೌತಮಿ ಕೊಪ್ಪಳ ಮುಂತಾದವರು ಪಾತ್ರವೇ ತಾವಾಗಿ ಗಮನ ಸೆಳೆದರು.

ನಾಟಕದಲ್ಲಿ ಕೆಲವು ಕುಂದುಕೊರತೆಗಳೂ ಕಂಡುಬಂದವು. ನಾಟಕ ಬಹಳಷ್ಟು ಕಡೆ ಹಿನ್ನೆಲೆ ಧ್ವನಿಯ ಮೂಲಕವೇ ಕಥೆಯನ್ನು ಹೇಳಿಸಿಬಿಡುತ್ತದಾದ್ದರಿಂದ ರತ್ನಳ ಬದುಕು ನಮ್ಮನ್ನ ಆಳವಾಗಿ ತಟ್ಟುವುದಿಲ್ಲ. ನಾಟಕ ಅದರ ಪರಿಧಿಯಾಚೆ ಬಂದು ಕೇವಲ ಕಥೆ ಹೇಳುತ್ತಿದೆ ಅಂತನ್ನಿಸುವಾಗಲೇ ಮತ್ತೆ ನಾಟಕಕ್ಕೆ ಹೊರಳಿಕೊಳ್ಳುತ್ತದೆ. ಬೆಳಕು, ಹಿನ್ನೆಲೆ ಸಂಗೀತ, ಮತ್ತೂಂದಿಷ್ಟು ಸಶಕ್ತ ರೂಪಕಗಳನ್ನು ಬಳಸುವಲ್ಲಿ ಗಮನ ನೀಡಬಹುದಿತ್ತು.

– ದಾದಾಪೀರ್‌ ಜೈಮನ್‌

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.