ಕಮಲಶಿಲೆ ಪ್ರಸಂಗಗಳು
Team Udayavani, Dec 21, 2019, 6:03 AM IST
ಪ್ರತಿಭಾಸಂಪನ್ನರ ದಂಡಿನ ಶ್ರೀ ಕಮಲಶಿಲೆ ಮೇಳವು ದೇವಿಯ ಸದ್ಭಕ್ತರ ಕೋರಿಕೆಯ ಮೇರೆಗೆ ಹರಕೆಯಾಟಕ್ಕೆ ಬೆಂಗಳೂರಿನತ್ತ ಹೊರಟು ನಿಂತಿದೆ. ಸೌಡ ಗೋಪಾಲರ ಮೇಲ್ವಿಚಾರಣೆಯೊಂದಿಗೆ ಮೇಳವು ಹೊಸಂಗಡಿ ರವೀಂದ್ರ ಶೆಟ್ಟಿ , ಗಜೇಂದ್ರ ಶೆಟ್ಟಿ ಆಜ್ರಿ, ಗೋಪಾಲ ಸೌಡ, ವಿಶ್ವನಾಥ ಹೆನ್ನಾಬೈಲ್, ಪಂಜು ಬಗ್ವಾಡಿ, ಕೃಷ್ಣ ಗಾಣಿಗ ಹೊಸಂಗಡಿ, ನಾಗೇಶ ಬೀಜೂರು, ಸಂಜೀವ ಗಾಣಿಗ, ನಿತೀನ್ ಶೆಟ್ಟಿ, ನಾಗರಾಜ ಆಲೂರು, ವಿಶ್ವನಾಥ ಕುಳ್ಳಂಬಳ್ಳಿ ಮುಖ್ಯಭೂಮಿಕೆಯಲ್ಲಿದ್ದಾರೆ.
ಬೆಂಗಳೂರಿನ ವಿವಿಧೆಡೆ ಡಿ.20ರಿಂದ ಆರಂಭಗೊಳ್ಳುವ ಆಟಗಳು, 28ರ ಶನಿವಾರದ ವರೆಗೆ ನಡೆಯಲಿವೆ. ಅಂಪಾರು ರತ್ನಾಕರ ಶೆಟ್ಟಿ ಸಂಯೋಜನೆಯಲ್ಲಿ ಡಿ.21ರ ಶನಿವಾರ ರಾತ್ರಿ ರವೀಂದ್ರ ಕಲಾಕ್ಷೇತ್ರದಲ್ಲಿ “ಶ್ರೀದೇವಿ ಬನಶಂಕರಿ’ ಪ್ರದರ್ಶನಗೊಳ್ಳುತ್ತಿದೆ. ಅಂದು ಅದೇ ವೇದಿಕೆಯಲ್ಲಿ ಶ್ರೀ ಸಚ್ಚಿದಾನಂದ ಚಾತ್ರರಿಗೆ ಮತ್ತು ಕಂದಾವರ ರಘುರಾಮ ಶೆಟ್ಟರಿಗೆ “ಕರಾವಳಿ ರತ್ನ ಪುರಸ್ಕಾರ’ ಪ್ರಧಾನ ಮಾಡಲಾಗುತ್ತದೆ.
ಚೆಲುವೆ ಚಿತ್ರಾವತಿ: ಡಿ.22, ತರಳಬಾಳು ಸಭಾಂಗಣ, ಆರ್.ಟಿ. ನಗರ
ಆಚಾರ್ಯ ದ್ರೋಣ- ರತಿ ಕಲ್ಯಾಣ”: ಡಿ.23, ರವೀಂದ್ರ ಕಲಾಕ್ಷೇತ್ರ
ದ್ರೌಪದಿ ಪ್ರತಾಪ- ಶ್ರೀನಿವಾಸ ಕಲ್ಯಾಣ: ಡಿ.27, ಉಡುಪಿ ಗಾರ್ಡನ್ ಹೋಟೆಲ್, ಸಂಜಯನಗರ
ಕಾರ್ತವೀರ್ಯ- ಮಹಿಷಾಸುರ- ಕನಕಾಂಗಿ: ಡಿ. 28, ರವೀಂದ್ರ ಕಲಾಕ್ಷೇತ್ರ