ಕರದಂಟು ಇಲ್ಲುಂಟು !


Team Udayavani, Oct 13, 2018, 3:11 PM IST

255414.jpg

ಉತ್ತರ ಕರ್ನಾಟಕದ ಗರಡಿ ಮನೆಯ ಪೈಲ್ವಾನರಿಗೆ ಪೌಷ್ಟಿಕ ಆಹಾರವಾಗಿದ್ದ ವಿಜಯಾ ಕರದಂಟು 111 ವರ್ಷಗಳ ನಂತರ ಸಿಲಿಕಾನ್‌ ಸಿಟಿಗೆ ಬಂದಿದೆ.

ಕರದಂಟು…ಉತ್ತರ ಕರ್ನಾಟಕದ ಪ್ರತಿ ಮನೆಮನೆಯ ಅಚ್ಚುಮೆಚ್ಚಿನ ಸಿಹಿ ತಿಂಡಿ. ನೈಸರ್ಗಿಕ ಅಂಟು, ಚುಕ್ಕಿ ಬೆಲ್ಲ, ಶುದ್ಧ  ತುಪ್ಪದ ಜೊತೆಗೆ ಹತ್ತಾರು ಬಗೆಯ ಡ್ರೈ ಫ್ರೂಟ್ಸ್‌ಗಳ ಮಿಶ್ರಣದಲ್ಲಿ ತಯಾರಾಗುವ ಕರದಂಟುವಿಗೆ ಶತಮಾನದ ಇತಿಹಾಸವಿದೆ. 1907ರಲ್ಲಿ ಬಾಗಲಕೋಟೆ ಜಿಲ್ಲೆಯ ಅಮೀನಗಡದ ಐಹೊಳ್ಳಿ ಮನೆತನದ ದಿವಂಗತ ಸಾವಳಿಗೆಪ್ಪ ಐಹೊಳ್ಳಿಯವರು ಈ ಕರದಂಟು ಸಿಹಿಯ ಮೂಲ ತಯಾರಕರು. 111 ವರ್ಷಗಳಿಂದ ಕರದಂಟು ಸಿಹಿಯನ್ನು ಉಣಬಡಿಸುತ್ತಿರುವ ವಿಜಯಾ ಸಂಸ್ಥೆಯವರು ಬೆಂಗಳೂರಿನಲ್ಲಿ ಹೊಸ ಶಾಖೆ ತೆರೆದಿದ್ದಾರೆ.

ಲೇಟಾದರೂ ಲೇಟೆಸ್ಟಾಗಿ ಕೆಲ ವರ್ಷಗಳ ಹಿಂದೆ ವಿಜಯಾ ಕರದಂಟು ಸ್ವಂತ ವೆಬ್‌ಸೈಟ್‌ ಶುರು ಮಾಡುವ ಮೂಲಕ ಆನ್‌ಲೈನ್‌ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಆನ್‌ಲೈನ್‌ ಮೂಲಕ ಆರ್ಡರ್‌ ಕೊಟ್ಟು ತರಿಸಿಕೊಳ್ಳುತ್ತಿದ್ದವರಲ್ಲಿ ಹೆಚ್ಚಿನವರು ಬೆಂಗಳೂರಿನವರೇ ಆಗಿದ್ದರು. ಆರ್ಡರ್‌ ಏಬರುತ್ತಿದ್ದವು. ಆದರೆ ಕೊರಿಯರ್‌ ಮೂಲಕ ಕಳಿಸಿ ಕೊಡುವುದೇ ಸಮಸ್ಯೆಯಾಗಿತ್ತು. ಕೆಲವೊಮೆಆರ್ಡರ್‌ ತಡವಾಗುತ್ತಿದ್ದರೆ, ಇನ್ನು ಕೆಲವೊಮ್ಮೆ ಆರ್ಡರ್‌ ತಲುಪುತ್ತಲೇ ಇರಲಿಲ್ಲ. ಈ ತಾಪತ್ರಯವೇ ಬೇಡವೆಂದು ಬೆಂಗಳೂರಲ್ಲಿ ಶಾಖೆ ತೆರೆದಿದ್ದೇವೆ ಎನ್ನುತ್ತಾರೆ ಮಾಲೀಕರು. ಇಲ್ಲೇನೇನು ಸಿಗುತ್ತೆ? ಅಮೀನಗಡ ವಿಜಯಾ ಕ್ಲಾಸಿಕ್‌ ಕರದಂಟು, ಅಮೀನಗಡ ವಿಜಯಾ ಪ್ರೀಮಿಯಮ್‌ ಕರದಂಟು, ಲಡಗಿ ಲಡ್ಡು, ಡಿಂಕ್‌ ಲಡ್ಡುಗಳನ್ನು ಇಲ್ಲಿ ಸವಿಯಬಹುದು. ಬೆಂಗಳೂರಿನ ಮಂದಿ ಫಿಟ್‌ನೆಸ್‌ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವುದನ್ನು ಮನಗಂಡು ಬೆಂಗಳೂರಿಗರಿಗೆಂದೇ ಸ್ಪೆಷಲ್‌ ಕರದಂಟನ್ನು ಪರಿಚಯಿಸಿದ್ದಾರೆ. ಇದರ ಹೆಸರು ಸುಪ್ರೀಂ ಕರದಂಟು. ಇದು ಆಗ್ಯಾìನಿಕ್‌ ಕರದಂಟು. ಸಾವಯವ ಮತ್ತು ನೈಸರ್ಗಿಕ ಸಾಮಗ್ರಿಯನ್ನು ಬಳಸಿ ತಯಾರಿಸುತ್ತಾರೆ.

ಉಡುಪಿ ಗೋಡಂಬಿ
ನೂರು ವರ್ಷಗಳಿಂದ ರುಚಿಯನ್ನು ಕಾಪಾಡಿಕೊಂಡು ಬಂದಿರುವುದು ಹೆಗ್ಗಳಿಕೆ, ನಿಜ. ಆದರೆ ಏನೇನೂ ಬದಲಾವಣೆ ಆಗಿಲ್ಲ ಎಂದೇನಿಲ್ಲ. ಕಾಲಕ್ಕೆ ತಕ್ಕಂತೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿಕ್ಕಪುಟ್ಟ ಬದಲಾವಣೆಗಳಾಗಿವೆ. ದ್ರಾಕ್ಷಿ-ಗೋಡಂಬಿಗಳ ಜೊತೆಗೆ ವಾಲ್‌ನಟ್‌, ಅಕ್ರೂಟ್‌ ಸೇರಿದ್ದಾರೆ. ಅಮೀನಗಡದಲ್ಲೇ ತಯಾರಾಗುವ ಕರದಂಟಿಗೆ ಉಡುಪಿ ಗೋಡಂಬಿ, ಮಹಾರಾಷ್ಟ್ರದ ಕೊಲ್ಹಾಪುರ ಬೆಲ್ಲ ಅಂಧ್ರದ ತಾಂಡೂರಿಂದ ಗೇರು ಬೀಜ ಹೀಗೆ ಅನೇಕ ಕಡೆಗಳಿಂದ ಸಾಮಗ್ರಿಯನ್ನು ತರಿಸಿಕೊಳ್ಳಲಾಗುತ್ತದೆ.

ಈಗಿನ ಮಂದಿಗೆ ಪಿಜ್ಜಾ, ಬರ್ಗರ್‌ ಎಂದರೆ ರುಚಿ. ಅವರ ಮಾರ್ಕೆಟಿಂಗ್‌ ಮುಂದೆ ನಮ್ಮ ಹಳ್ಳಿ ತಿಂಡಿಗಳ ಹೊಳಪು ಮಾಸುತ್ತಿದೆ. ನಮ್ಮತನವನ್ನು ಉಳಿಸಿಕೊಳ್ಳಬೇಕೆಂದರೆ, ಆರೋಗ್ಯಕರವಾಗಿರುವ ಪ್ರಾಂತೀಯ ಆಹಾರ ವೈವಿಧ್ಯವನ್ನು ಕಾಪಾಡಿಕೊಳ್ಳಬೇಕು. ಆ ನಿಟ್ಟಿನಿಂದಲೇ ವಿಜಯಾ ಕರಂದಂಟನ್ನು ಬೆಂಗಳೂರಿನಲ್ಲಿ ಶುರು ಮಾಡಿದ್ದೇವೆ.
● ಸಂತೋಷ್‌ ಐಹೊಳ್ಳಿ, ಮಾಲೀಕರು

ಎಲ್ಲಿ?: ವಿಜಯಾ ಕರದಂಟು, ಮಾರುತಿ ಮಂದಿರ ಬಳಿ, ವಿಜಯನಗರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.