ಕಾರಂತರ ಜನ್ಮ ದಿನಾಚರಣೆ
Team Udayavani, Oct 20, 2018, 5:39 PM IST
ಶಿವರಾಮ ಕಾರಂತ ವೇದಿಕೆ, ತರಳಬಾಳು ಕೇಂದ್ರ ಹಾಗೂ ಲಯನ್ಸ್ ಕ್ಲಬ್ ವತಿಯಿಂದ, ಶಿವರಾಮ ಕಾರಂತರ ಜನ್ಮ ದಿನಾಚರಣೆ ನಡೆಯುತ್ತಿದೆ. ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ, ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಹಿತಿಗಳಾದ ಡಾ. ವಿಜಯಾ ಸುಬ್ಬರಾಜ್ ಹಾಗೂ ಕೆ.ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ, ನಾಟ್ಯಾನುಭವ ತಂಡದವರಿಂದ “ಕೃಷ್ಣಲೀಲಾ’ ನೃತ್ಯರೂಪಕ ಹಾಗೂ ಎಚ್. ಡುಂಡಿರಾಜ್ರ ಬರೆದ “ಪುಕ್ಕಟೆ ಸಲಹೆ’ ಹಾಸ್ಯನಾಟಕ ಪ್ರದರ್ಶನ ಏರ್ಪಾಡಾಗಿದೆ.
ಎಲ್ಲಿ?: ತರಳಬಾಳು ಕೇಂದ್ರದ 2ನೆಯ ಮಹಡಿ, 3ನೇ ಮುಖ್ಯರಸ್ತೆ, ಆರ್.ಟಿ.ನಗರ
ಯಾವಾಗ?: ಅ.21, ಭಾನುವಾರ ಸಂಜೆ 4