ಕಸ್ತೂರಿ ಪ್ರಭ ವಾರ್ಷಿಕೋತ್ಸವ
Team Udayavani, Jun 1, 2019, 3:00 AM IST
“ಕಸ್ತೂರಿ ಪ್ರಭ’ ಕನ್ನಡ ಮಾಸ ಪತ್ರಿಕೆಯ 5ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ, ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್, ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಅನಸೂಯಾ ಹೆಸರಘಟ್ಟ, ವಿಜಯ ಗುರುರಾಜ, ವಿಶಾಲ ಆರಾಧ್ಯ, ಸುಕನ್ಯ ವಿನಾಯಕ್, ಶಾಂತಲಾ ಸುರೇಶ್, ಜೈ ಕಿರಣ್, ಜ್ಞಾನಮೂರ್ತಿ ಬಿ.ಎಚ್., ವಿ.ಆರ್. ಸುಬ್ರಹ್ಮಣ್ಯ ಶರ್ಮ, ನಾಗರಾಜ, ಬಿ.ಶಿವಕುಮಾರ್, “ಕನ್ನಡ ಸೇವಾರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎಲ್ಲಿ?: ಶೇಷಾದ್ರಿಪುರ ಪ್ರೌಢಶಾಲೆ
ಯಾವಾಗ?: ಜೂ.2, ಭಾನುವಾರ ಬೆಳಗ್ಗೆ 10.30-1.30