ಮೆಶಿನ್‌ ಮೇಡ್‌ ಪಾನಿಪುರಿ

ಮಿಸ್ಟರ್‌ ಪಾನಿಪುರಿ, ನಿಮ್ಗೆ ಯಾವ ಟೇಸ್ಟ್‌ ಬೇಕುರೀ?

Team Udayavani, Jul 13, 2019, 4:52 PM IST

shutterstock_1069516973

 

ನಿಮ್ಗೆ ಹೇಗೇ ಬೇಕೋ ಹಾಗೆ ಪಾನಿಪುರಿ ಕೈಗಿಡೋ ಮಷಿನ್ನಿನ ಕತೆ ಇದು. ಇದನ್ನು ಬೆಂಗಳೂರಿಗೆ ಪರಿಚಯಿಸಿದ್ದು, , ಮಿ. ಪಾನಿಪುರಿ, ಫಾಸ್ಟ್‌ಫ‌ುಡ್‌ ಸೆಂಟರ್‌. ಬೆಂಗಳೂರಿನಲ್ಲಿ ಇದು ಪ್ರವೇಶ ಪಡೆದಾಗಿನಿಂದ, ಇದರ ಸುತ್ತ ಪಾನಿಪುರಿ ಪ್ರಿಯರು ಮುತ್ತಿಕ್ಕುತ್ತಿದ್ದಾರೆ…

ಭಯ್ನಾ, ಥೋಡಾ ಮೀಠಾ ಡಾಲ್‌ ದೋ, ಭಯ್ನಾ, ನಮಕ್‌ ಜ್ಯಾದಾ ಹೋಗಯಾ… ಪಾನಿಪೂರಿ ತಿನ್ನುವಾಗ ಹೀಗೆ ದೂರು ಹೇಳದವರೇ ಇಲ್ಲವೇನೋ. ಉಪ್ಪು, ಹುಳಿ, ಖಾರ, ಸಿಹಿಯಲ್ಲಿ ಚೂರು ವ್ಯತ್ಯಾಸವಾದರೂ, ಪಾನಿಪೂರಿಯ ಮಜವೇ ಹೊರಟು ಹೋಗುತ್ತದೆ. ಅಷ್ಟಲ್ಲದೆ, ಪಾನಿಪೂರಿ ಗಾಡಿ ಇರುವ ಜಾಗ, ತಯಾರಿಸುವವನ ಸ್ವತ್ಛತೆ ಕಡೆಗೆ ಗಮನ ಹರಿಸದಿದ್ದರೆ ಹೊಟ್ಟೆಗೆ ಪೆಟ್ಟು! ಅಬ್ಬಬ್ಟಾ, ಒಂದು ಪ್ಲೇಟ್‌ ಪಾನಿಪೂರಿಗೆ ಎಷ್ಟೆಲ್ಲಾ ಯೋಚಿಸಬೇಕು ಅಲ್ವಾ? ಆದರೆ, ಇನ್ಮುಂದೆ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಬೇಡ. ಯಾಕಂದ್ರೆ, ನಿಮ್ಮ ಪಾನಿಪೂರಿಯ ರುಚಿ-ಶುಚಿಗಾಗಿ ಯಂತ್ರವೊಂದು ಬಂದಿದೆ.

ಎಟಿಎಂ ಮಷಿನ್‌ನಿಂದ ಗುಂಡಿ ಒತ್ತಿ ಹಣ ತೆಗೆದಂತೆ, ಪಾನಿಪೂರಿ ವೆಂಡಿಂಗ್‌ ಮಷಿನ್‌ನಿಂದ ನಿಮಗೆ ಬೇಕಾದ ರುಚಿಯ ಪಾನಿಪೂರಿ ಪಡೆಯಬಹುದು. ಸೆನ್ಸಾರ್‌ ಆಧಾರಿತ ಯಂತ್ರದಲ್ಲಿ ಖಾರ, ಮೀಡಿಯಂ ಮತ್ತು ಸ್ವೀಟ್‌ ಎಂಬ ಮೂರು ಆಯ್ಕೆಗಳಿರುತ್ತವೆ. ನಿಮಗೇನು ಬೇಕು ಅಂತ ಆಯ್ಕೆ ಮಾಡಿ, ಪೂರಿ ತುಂಬಿದ ತಟ್ಟೆಯನ್ನು ಮಷಿನ್‌ಗೊಡ್ಡಿದರೆ, ಪಾನಿ ಸುರಿಯುತ್ತದೆ. ರುಚಿಯ ಬಗ್ಗೆ ಅಂಗಡಿಯವನನ್ನು ದೂರುವ, ಸ್ವತ್ಛತೆಯ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ.

ಈ ಯಂತ್ರವನ್ನು ಬೆಂಗಳೂರಿಗೆ ತಂದಿರುವುದು, ಮಿ. ಪಾನಿಪುರಿ, ಫಾಸ್ಟ್‌ಫ‌ುಡ್‌ ಸೆಂಟರ್‌. ಅಹಮದಾಬಾದ್‌ನಲ್ಲಿ ವಾಟರ್‌ಶಾಟ್ಸ್‌ ಎಂಬ ಪಾನಿಪೂರಿ ಅಂಗಡಿಯು, ಈ ಯಂತ್ರವನ್ನು ಮೊದಲ ಬಾರಿಗೆ ಪರಿಚಯಿಸಿದ್ದು. ಸದ್ಯಕ್ಕೆ ಬಿನ್ನಿಪೇಟೆಯ ಇಟಿಎ ಮಾಲ್‌ ಮತ್ತು ಮಾಗಡಿ ರಸ್ತೆಯ ಜಿಟಿ ಮಾಲ್‌ನಲ್ಲಿರುವ ಮಿ.ಪಾನಿಪೂರಿ ಸೆಂಟರ್‌ನಲ್ಲಿ ಈ ಮಷಿನ್‌ ಇದೆ. ಈ ಯಂತ್ರ ಮಾಡಿಕೊಡುವ ಪಾನಿಪುರಿಯನ್ನು ಸವಿಯಲೆಂದೇ ಇಲ್ಲಿ, ಆಹಾರಪ್ರಿಯರು ಸಾಲುಗಟ್ಟಿರುತ್ತಾರೆ. ಮುಂಗಾರು ಮಳೆಯ ಈ ಹೊತ್ತಿನಲ್ಲಿ, ನೀವೂ ಇದರ ಸ್ಪೈಸಿ ರುಚಿ ಸವಿಯಿರಿ…

ಎಲ್ಲೆಲ್ಲಿದೆ?
– ಇಟಿಎ ಮಾಲ್‌, ಬಿನ್ನಿಪೇಟೆ
– ಜಿಟಿ ಮಾಲ್‌, ಮಾಗಡಿ ರಸ್ತೆ

ಟಾಪ್ ನ್ಯೂಸ್

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.