ಕಾಸ್ಮೋನಗರಿಯಲ್ಲಿ ಸಡಗರದ ಕಿಚ್ಚು
Team Udayavani, Jan 12, 2019, 5:48 AM IST
ಬಾಯಲ್ಲಿ ನೀರೂರಿಸುವ ವಿವಿಧ ಖಾದ್ಯಗಳ ಜೊತೆಗೆ ದಣಿವರಿಯದ ಆಟೋಟ, ಮನರಂಜನೆಗೆ ಸಂಗೀತ- ನೃತ್ಯ, ಮಕ್ಕಳನ್ನು ಸೆಳೆಯುವ ಮ್ಯಾಜಿಕ್ ಶೋ… ಎಲ್ಲಕ್ಕಿಂತ ಮುಖ್ಯವಾಗಿ ಕೋಟಿ ರೂಪಾಯಿ ಬೆಲೆ ಬಾಳುವ ರಾಯಲ್ ಶ್ವಾನಗಳ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ ಪದ್ಮನಾಭನಗರದ ಸಂಕ್ರಾಂತಿ ಉತ್ಸವ. ನೆಚ್ಚಿನ ಖಾದ್ಯ ಸವಿದು, ಸಂಗೀತ ಕೇಳಿ, ನೃತ್ಯ ಕಂಡು, ಆಟೋಟದಲ್ಲಿ ಪಾಲ್ಗೊಂಡು ವಾರಾಂತ್ಯವನ್ನು ಕಳೆಯಬಹುದು. ಸಂಕ್ರಾಂತಿ ಸಡಗರ, ಅವರೆ ಋತುವಿನ ಸಂಭ್ರಮವನ್ನು ಗಮನದಲ್ಲಿರಿಸಿಕೊಂಡು ಉತ್ಸವವನ್ನು ಆಚರಿಸಲಾಗುತ್ತಿದೆ.
ಹಬೆಯಾಡುವ ಖಾದ್ಯಗಳು
ಚುಮುಚುಮು ಚಳಿಗೆ ಬಿಸಿಬಿಸಿ ಬಜ್ಜಿ ಜೊತೆಗೆ ಚಹಾ, ಬೋಂಡಾ, ಧಾರವಾಡದ ಮಿರ್ಚಿ ಮಂಡಕ್ಕಿ, ಹುಬ್ಬಳ್ಳಿಯ ಗಿರ್ಮಿಟ್, ದಾವಣಗೆರೆ ಬೆಣ್ಣೆ ದೋಸೆ ಸೇರಿದಂತೆ 20ರಿಂದ 25 ವೆರೈಟಿ ದೋಸೆ, ಮೊಳಕೆ ಕಾಳಿನ ಚಾಟ್ಗಳು, ಅಷ್ಟೇ ಅಲ್ಲ, ಮಾಸದ ನೆನಪು ಸಾರುವ ವಿವಿಧ ಅವರೆ ಖಾದ್ಯಗಳೂ ಇಲ್ಲುಂಟು. ಒಟ್ಟು 500ಕ್ಕೂ ಅಧಿಕ ಖಾದ್ಯಗಳು ಉತ್ಸವದಲ್ಲಿ ದೊರೆಯಲಿದೆ. ಇದರ ಜೊತೆಗೆ ಸಂಕ್ರಾಂತಿ ಹಬ್ಬದ ವಿಶೇಷ ಖಾದ್ಯಗಳ ರುಚಿಯನ್ನೂ ಇಲ್ಲಿನ ಮಳಿಗೆಗಳಲ್ಲಿ ಸವಿಯಬಹುದು.
ಒಯ್ನಾರದ ಶ್ವಾನಮೇಳ ಮೇಳದ ವಿಶೇಷ ಆಕರ್ಷಣೆಯಾಗಿ ಶ್ವಾನ ಮೇಳವೂ ಜರುಗಲಿದೆ. ಕೋಟಿ ಕೋಟಿ ಬೆಲೆಯುಳ್ಳ ಶ್ವಾನಗಳು ಈ ಶ್ವಾನಮೇಳದ ವೈಶಿಷ್ಟé, ಒಂದು ಕೋಟಿಯಿಂದ 10 ಕೋಟಿಯವರೆಗೆ ಈ ನಾಯಿಗಳಿಗೆ ಬೆಲೆಯಿದೆ. ದೇಶದಲ್ಲೇ ಅತ್ಯರೂಪವಾದ ತಳಿಗಳು ಹೆಜ್ಜೆ ಹಾಕುವುದನ್ನು ಈ ಶ್ವಾನಮೇಳದಲ್ಲಿ ನೋಡಬಹುದು. ನಗರದ ಖ್ಯಾತ ಡಾಗ್ ಬ್ರಿàಡರ್ ಸತೀಶ್ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾನುವಾರ ಶ್ವಾನಮೇಳ ಜರುಗಲಿದೆ.
ಕೆಂಡ ಹಾಯುವ ಹೋರಿ
ಬೆಂಗಳೂರಿನಲ್ಲಿದ್ದುಕೊಂಡು ತಮ್ಮೂರನ್ನೂ, ಅಲ್ಲಿನ ಸಂಸ್ಕೃತಿಯನ್ನೂ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಸ್ವಲ್ಪವಾದರೂ ಊರಿನ ವಾತಾವರಣದ ಅನುಭವವನ್ನು ಕಿಂಚಿತ್ತಾದರೂ ನೀಡುವ ಸಲುವಾಗಿ ಹೋರಿ ಕೆಂಡ ಹಾಯುವ ಕಾರ್ಯ ಕ್ರಮವನ್ನೂ ಆಯೋಜಕರು ಹಮ್ಮಿಕೊಂಡಿದ್ದಾರೆ. ಹೋರಿ ಕೆಂಡ ಹಾಯುವುದನ್ನು ನೋಡಬೇಕೆಂದರೆ ಸೋಮವಾರದ ತನಕ ಕಾಯಬೇಕು. ಒಟ್ಟಿನಲ್ಲಿ ಇದರಿಂದ ಸಂಕ್ರಾಂತಿ ಜಾತ್ರೆಗೆ ಕಳೆ ಬಂದಂತೆಯೇ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ