ಚಲಿಸಿದ ಮರಗಳು!

ಪಂಚ ವೃಕ್ಷಗಳ ಶಿಫ್ಟಿಂಗ್‌ ಸಾಹಸ

Team Udayavani, Mar 14, 2020, 6:03 AM IST

chalisida

ಬಸವನಗುಡಿಯ ಬಿಎಂಎಸ್‌ ಕಾಲೇಜಿನ ಕ್ಯಾಂಪಸ್ಸಿನಲ್ಲಿದ್ದ 5 ಮರಗಳು ಯಾಕೋ ದುಃಖದಲ್ಲಿದ್ದವು. ಕಟ್ಟಡ ಕಟ್ಟುವ ಸಂಬಂಧ, ಅವು ಇನ್ನೇನು ಧರೆಗೆ ಉರುಳಬೇಕಿತ್ತು. ಅವುಗಳ ಪಾಲಿಗೆ ಅಕ್ಷರಶಃ ದೇವರಾಗಿ ಬಂದವರು ಇಬ್ಬರು ಹುಡುಗರು: ಚಿರಂಜನ್‌ ಮತ್ತು ಕೌಸ್ತುಭ್‌…

ಬೆಂಗಳೂರಿನಲ್ಲಿ ಮರಗಳ ಕಷ್ಟಗಳಿಗೆ ಕಿವಿಗೊಡುವ ದೇವರೇ ಇಲ್ಲ. ಯಾವುದೇ ಕಾಮಗಾರಿಗೂ ಮೊದಲು ಬಲಿಯಾಗುವುದೇ ಇಲ್ಲಿನ ಮರಗಳು. ಬಸವನಗುಡಿಯ ಬಿಎಂಎಸ್‌ ಕಾಲೇಜಿನ ಕ್ಯಾಂಪಸ್ಸಿನಲ್ಲಿದ್ದ 5 ಮರಗಳೂ ಇದೇ ದುಃಖದಲ್ಲೇ ಇದ್ದವು. ಕಟ್ಟಡ ಕಟ್ಟುವ ಸಂಬಂಧ, ಅವು ಇನ್ನೇನು ಧರೆಗೆ ಉರುಳಬೇಕಿತ್ತು. ಅವುಗಳ ಪಾಲಿಗೆ ಅಕ್ಷರಶಃ ದೇವರಾಗಿ ಬಂದವರು ಇಬ್ಬರು ಹುಡುಗರು: ಚಿರಂಜನ್‌ ಮತ್ತು ಕೌಸ್ತುಭ್‌.

ವಿದೇಶದಲ್ಲಿ ಮರಗಳಿಗೆ ಇಂಥ ದುಃಸ್ಥಿತಿ ಎದುರಾದಾಗ, ಅವುಗಳನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಶಿಫ್ಟ್ ಮಾಡುವುದರ ವಿಡಿಯೊ ಈ ಹುಡುಗರ ಕಣ್ಣಿಗೆ ಬಿದ್ದಿತ್ತು. ಆ ಪ್ರಕ್ರಿಯೆ ಬಗ್ಗೆ ಯೂಟ್ಯೂಬ್‌ಗಳಲ್ಲಿ ತಡಕಾಡುವಾಗಲೇ, ಈ ಹಿಂದೆ ಇದೇ ಬೆಂಗಳೂರಿನಲ್ಲಿ ವಿಜಯ್‌ ನಿಶಾಂತ್‌ ಎಂಬುವರು ಮರಗಳನ್ನು ಶಿಫ್ಟ್ ಮಾಡಿದ್ದ ಸಂಗತಿ ಕಣ್ಣಿಗೆ ಬಿತ್ತು. ಕೂಡಲೇ ಅವರನ್ನು ಸಂಪರ್ಕಿಸಿ, ಮಾಹಿತಿ ಪಡೆದು, ಮರ ವರ್ಗಾಯಿಸುವ ಸಾಹಸಕ್ಕೆ ಇವರಿಬ್ಬರೂ ಮುಂದಾದರು. ಕಾಲೇಜಿನ ಟ್ರಸ್ಟಿ ದಯಾನಂದ ಪೈ ಮತ್ತು ನಿರ್ದೇಶಕರು ಅಗತ್ಯ ಧನಸಹಾಯ ನೀಡಿದ್ದರಿಂದ ಕೆಲಸ ಇನ್ನಷ್ಟು ಸಲೀಸಾಯಿತು.

ಮರವನ್ನು ಯಥಾವತ್ತಾಗಿ, ಒಂದೆಡೆಯಿಂದ ಮತ್ತೂಂದೆಡೆಗೆ ಕೊಂಡೊಯ್ದು ಕೂರಿಸಲು ಸಾಧ್ಯವಿಲ್ಲ. ಅದರ ರೆಂಬೆಕೊಂಬೆಗಳು ಬಹಳ ಎತ್ತರಕ್ಕೆ ಚಾಚಿಕೊಂಡಿರುವ ಕಾರಣ, ವರ್ಗಾವಣೆಗೆ ಸಹಜವಾಗಿ ತೊಡಕಾಗುತ್ತದೆ. ಮೊದಲು ಅದರ ರೆಂಬೆ- ಕೊಂಬೆಗಳನ್ನು ಕಡಿದು, ಜೆಸಿಬಿ ಮೂಲಕ ಬುಡದಲ್ಲಿ ಐದಾರು ಅಡಿ ಮಣ್ಣು ತೆಗೆದು, ಕ್ರೇನ್‌ನಿಂದ ಮರವನ್ನು ನಿಧಾನಕ್ಕೆ ಎತ್ತಲಾಯಿತು. ತಮ್ಮ ಕಾಲೇಜಿನಿಂದ 10 ಕಿ.ಮೀ. ದೂರದಲ್ಲಿರುವ ಬನಶಂಕರಿಯ 6ನೇ ಹಂತದ ಶಿಲೊದ್ಯಾನದಲ್ಲಿ ಆ ಮರಗಳಿಗೆ ಸುಂದರ ಜಾಗ ನೋಡಿ, ಅಲ್ಲಿ ನೆಟ್ಟರು.

ಇಷ್ಟಕ್ಕೇ ಈ ಹುಡುಗರ ಕೆಲಸ ನಿಲ್ಲಲಿಲ್ಲ. ಹೊಸ ಜಾಗಕ್ಕೆ ಬಂದ ಮರಗಳಿಗೆ, ಮೊದಲು ಚಿಕಿತ್ಸೆ ನೀಡಿದರು. ರೆಂಬೆಗಳನ್ನು ಕಡಿದ ಜಾಗದಲ್ಲಿ ಔಷಧ ಹಚ್ಚಲಾಯಿತು. ಅದಕ್ಕೆ ಬೇಕಾದ ಗೊಬ್ಬರ, ನೀರು ಸೇರಿದಂತೆ ಸಕಲ ವ್ಯವಸ್ಥೆಯನ್ನೂ ಮಾಡಿದರು. ಈಗ ಮರಗಳು, ನಿಧಾನಕ್ಕೆ ಚಿಗುರುತ್ತಿವೆ. ಆ ಬಡಾವಣೆಯ ನಿವಾಸಿಗಳು, ಅವರ ಜೊತೆಗೇ ಈ ಹುಡುಗರೂ ವಲಸೆಯಾಗಿ ಬಂದ ಮರಕ್ಕೆ ನೀರುಣಿಸಿ, ಉಪಚರಿಸುತ್ತಿದ್ದಾರೆ.

ಆ ಮರಗಳು 10- 15 ವರ್ಷಗಳಿಂದ ಕಾಲೇಜಿನ ಆವರಣದಲ್ಲಿದ್ದವು. ಸಹಸ್ರಾರು ವಿದ್ಯಾರ್ಥಿಗಳಿಗೆ ನೆರಳು ಕೊಟ್ಟಿದ್ದವು. ಹೇಗಾದರೂ ಅವುಗಳಿಗೆ ಮರುಜೀವ ಕೊಡಬೇಕು ಎಂಬ ನಮ್ಮ ಆಶಯಕ್ಕೆ ಕಾಲೇಜಿನ ಆಡಳಿತ ಮಂಡಳಿಯೂ ನೆರವಾಯಿತು.
-ಚಿರಂಜನ್‌, ಎಂಜಿನಿಯರಿಂಗ್‌ ವಿದ್ಯಾರ್ಥಿ, ಬಿಎಂಎಸ್‌ ಕಾಲೇಜು

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.