ನೇಚರ್ ಬಜಾರ್
ಜಯಮಹಲಿನಲಿ ಕರಕುಶಲ ಘಮಲು
Team Udayavani, Jul 6, 2019, 3:57 PM IST
ದಸ್ತ್ಕರ್, ವತಿಯಿಂದ ನೇಚರ್ ಬಜಾರ್ನ 15ನೇ ಆವೃತ್ತಿ ನಗರದಲ್ಲಿ ನಡೆಯುತ್ತಲಿದೆ. 100ಕ್ಕೂ ಹೆಚ್ಚು ಕರಕುಶಲ ಗುಂಪುಗಳನ್ನು ಒಗ್ಗೂಡಿಸಿರುವ ದಸ್ತ್ಕರ್, ಈ ಬಾರಿಯ ಬಜಾರ್ನಲ್ಲಿ ಉದಯೋನ್ಮುಖ ಕರಕುಶಲ ಗುಂಪುಗಳು ಮತ್ತು ವಿನ್ಯಾಸಕರಿಗೆ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ನೀಡಿದೆ.
ಬಗೆಬಗೆಯ ಆ್ಯಕ್ಸೆಸರಿಗಳು, ಬೆಳ್ಳಿಯ ಆಭರಣ ಮತ್ತು ಅಲಂಕಾರಿಕ ವಸ್ತುಗಳು, ಲೋಹದ ಕರಕುಶಲ ಉತ್ಪನ್ನಗಳು, ಪಾಟರಿ ಮತ್ತು ಸೆರಾಮಿಕ್ಸ್, ಬ್ಯಾಸ್ಕೆಟ್ರಿ ಮತ್ತು ಫೈಬರ್ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ಸಾಂಪ್ರದಾಯಿಕ ಪೇಂಟಿಂಗ್ಗಳು, ಬ್ಲಾಕ್ ಪ್ರಿಂಟೆಡ್ ವಸ್ತ್ರಗಳು ಹೀಗೆ ದೇಶದ ಉದ್ದಗಲದ ಕರಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ವಸ್ತುಗಳು ಇಲ್ಲಿವೆ.
ಸಂತ್ರಸ್ತರಿಗೆ ನೆರವು
ಫನಿ ಚಂಡಮಾರುತದಿಂದ ಸಂತ್ರಸ್ತರಾದ ಕರಕುಶಲಕರ್ಮಿಗಳ ಮಳಿಗೆಗಳೂ ಬಜಾರ್ನಲ್ಲಿ ಇರುವುದು ಮತ್ತೂಂದು ವಿಶೇಷ. ಅವರ ನೆರವಿಗೆ ನಿಂತಿರುವ ದಸ್ತಕರ್, ಸಂತ್ರಸ್ತರಿಗಾಗಿ ಪ್ರತ್ಯೇಕ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿದೆ. ಸಂಕಷ್ಟಕ್ಕೆ ಸಿಲುಕಿದ ಕರಕುಶಲಕರ್ಮಿಗಳಿಗೆ ಆರ್ಥಿಕವಾಗಿ ನೆರವಾಗುವುದು ಈ ಮಳಿಗೆಗಳ ಉದ್ದೇಶ.
ಎಲ್ಲಿ?: ಜಯಮಹಲ್ ಪ್ಯಾಲೇಸ್ ಹೋಟೆಲ್, 1, ಜಯಮಹಲ್ರಸ್ತೆ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಹಿಂದೆ
ಯಾವಾಗ?: ಜು. 6-14, ಬೆಳಗ್ಗೆ 11-8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು