ಚೈತನ್ಯ ಮಂದಿರದಲ್ಲಿ ದತ್ತ ಜಯಂತಿ


Team Udayavani, Dec 22, 2018, 3:26 PM IST

2-aaa.jpg

ಸರ್ವ ಗುರುಗಳ ಪಾದುಕೆಗಳು ಇಲ್ಲಿ ಒಂದೇ ಸೂರಿನಡಿ ಇವೆ. ಸದ್ಗುರುಗಳ ಪಾದುಕೆಗಳ ಪೂಜೆ ಮತ್ತು ದರ್ಶನಕ್ಕಾಗಿ ರೂಪಿಸಲಾಗಿರುವ ಏಕೈಕ ಮಂದಿರ, “ಶ್ರೀ ಸದ್ಗುರು ಚೈತನ್ಯ ಮಂದಿರ’. ಇದು, ಬೆಂಗಳೂರಿನ ಉತ್ತರಹಳ್ಳಿ- ಕೆಂಗೇರಿ ಮುಖ್ಯ ರಸ್ತೆಯ ತುರಹಳ್ಳಿ ಬಳಿಯ ಪಟಾಲಮ್ಮ ದೇಗುಲದ ಸಮೀಪದಲ್ಲಿ ಇದೆ. ದೇಶದಲ್ಲೇ ಸದ್ಗುರುಗಳ ಪಾದುಕೆಗಳ ಪೂಜೆಗೆಂದು ನಿರ್ಮಿತವಾದ ಏಕೈಕ ಮಂದಿರವಿದು. 

ಇಲ್ಲಿ ದೇಗುಲ ಸ್ಥಾಪನೆ ಆಗಿದ್ದು ತೀರಾ ಇತ್ತೀಚೆಗೆ. ಅದು 2009ನೇ ಇಸವಿ. ಬೆಂಗಳೂರಿಗೆ ಶೃಂಗೇರಿ ಮಠದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಪಾದಾರ್ಪಣೆ ಆಯಿತು. ಆಗ ಕೆ.ಎನ್‌. ವೆಂಕಟನಾರಾಯಣ ಅವರು ಗುರು­ಗಳಲ್ಲಿ, ಸದ್ಗುರು ಪಾದುಕೆಗಳನ್ನು ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿಕೊಂಡಾಗ ಜಗದ್ಗುರುಗಳು ತಾವು ಭಗವತಿಯಲ್ಲಿ ಪ್ರಾರ್ಥಿಸಿ ತಿಳಿಸುತ್ತೇವೆ ಎಂದರು. 2 ದಿನಗಳ ನಂತರ ಗುರುಗಳೇ ಪೂಜೆ ಮಾಡಿರುವಂಥ 
ಪಾದುಕೆ­ಗಳನ್ನು ಅನುಗ್ರಹಿಸಲು ನಿರ್ಧರಿಸಿದರು. ಈ ಪಾದುಕೆಗಳನ್ನು ಯಾರೂ ಧರಿಸು­ವಂತಿಲ್ಲ; ಗಾಣಗಾಪುರ ಸೇರಿದಂತೆ ಭಾರತದ 48 ದತ್ತ ಕ್ಷೇತ್ರಗಳಲ್ಲಿ ಪೂಜೆ ಮಾಡಿಸಿದ ನಂತರವೇ ಈ ಪಾದುಕೆಗಳನ್ನು ಸ್ಥಾಪಿಸಬೇಕು ಎಂದು ಗುರುಗಳು ಆದೇಶಿಸಿದರು. ಗುರುಗಳಿಂದ ಪಾದುಕೆಯನ್ನು ಅನುಗ್ರಹ ಪಡೆದ ನಂತರ ಅವರ ಆದೇಶ ದಂತೆ ಪಾದುಕಾ ಯಾತ್ರೆ ಶುರುವಾಯಿತು. ಗಾಣಗಾಪುರ, ಔದುಂ­ಬರ, ವಾಡಿ, ಸಜ್ಜನಘಡ,  ಗೋಂದಾವಳಿ, ಶಿರಡಿ, ತಿರುವ­ಣ್ಣಾ­ಮಲೈ ಮುಂತಾದ 48 ಕ್ಷೇತ್ರಗಳಿಗೆ ಗುರು-ಬಂಧು­ಗಳೊಡಗೂಡಿ ಪಾದುಕಾ ಯಾತ್ರೆ ಯಶಸ್ವಿಯಾಯಿತು. 

2009ರ ಡಿಸೆಂಬರ್‌ನಲ್ಲಿ, 14 ದಿನಗಳ ಅಭೂತಪೂರ್ವ­ವಾದ ಶ್ರೀ ಸದ್ಗುರು ಪಾದುಕಾ ಯಜ್ಞವು ಶಂಕರಮಠದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಚ್ಚರಿ ಎಂಬಂತೆ, 21 ಅವಧೂತರು ಧರಿಸಿರುವಂಥ ಪಾದುಕೆಗಳು ಈ ಕಾರ್ಯಕ್ರಮಕ್ಕೆ ಲಭ್ಯವಾಯಿತು. ತತ್‌ಕ್ಷಣದಲ್ಲೇ ಎಲ್ಲರ ಮನಸ್ಸಿಗೆ ಬಂದ ವಿಷಯ, ಒಂದೇ ಸೂರಿನಡಿ ಈ ಎಲ್ಲಾ ಗುರು ಚೈತನ್ಯಗಳನ್ನು ಪಾದುಕೆಯ ಮೂಲಕ ಆರಾಧಿಸುವ ಅವಕಾಶ ದೊರಕಿಸಲು ಪಾದುಕಾ ಮಂದಿರ ನಿರ್ಮಾಣವಾಯಿತು.

ಏನಿದೆ ಇಲ್ಲಿ?
108 ಗುರುಗಳ ಪಾದುಕೆಗಳನ್ನು ತಲಾ ಒಂದೊಂದು ಪ್ರತ್ಯೇಕ ಕಬೋìರ್ಡ್‌ಗಳಲ್ಲಿ, ಆಯಾ ಗುರುಗಳ ಭಾವಚಿತ್ರದ ಸಮೇತ ಇರಿಸಲಾಗಿದೆ. ಅವಧೂತ ಪರಂಪರೆ, ಮಠಾಧೀಶರ ಪರಂಪರೆ ಮತ್ತು ಸಮಾಜ ಸುಧಾರಕರ ಪರಂ­ಪರೆಯನ್ನು ಬೆಳಗಿದ ಮಹಾಮಹಿಮರ ಪಾದುಕೆ­ಗಳನ್ನು ಏಕಕಾಲಕ್ಕೆ ದರ್ಶನ ಮಾಡಿಸುವ ಈ ಯತ್ನ ಶ್ಲಾಘನೀಯ.

ಯಾರ್ಯಾರ ಪಾದುಕೆಗಳು?
ಶೃಂಗೇರಿ ಶಾರದಾ ಪೀಠದ ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು, ಅಭಿನವ ತೀರ್ಥ ಸ್ವಾಮಿಗಳು, ಹಾಲಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು, ಹತ್ತಾರು ಅವಧೂತರು, ಸ್ವಾಮಿ ವಿವೇಕಾನಂದ, ರಾಮಕೃಷ್ಣ  ಪರಮಹಂಸ, ಶ್ರೀ ಶಿರಡಿ ಸಾಯಿಬಾಬಾ, ಸತ್ಯಸಾಯಿ ಬಾಬಾ ಸೇರಿದಂತೆ ಒಟ್ಟು 108 ಮಂದಿ ಅಧ್ಯಾತ್ಮ ಗುರುಗಳ ಪಾದುಕೆಗಳು ಇಲ್ಲುಂಟು. ಹಲವು ಪಾದುಕೆಗಳನ್ನು ಸ್ವತಃ ಆ ಸದ್ಗುರುಗಳೇ ಬಳಸಿರುವುದು ವಿಶೇಷ. ಮತ್ತೆ ಕೆಲವುಗಳನ್ನು ಮೂಲ ಗುರುಸನ್ನಿಧಿಯಲ್ಲಿ ಸ್ಪರ್ಶಿಸಿ, 48 ದಿನಗಳ ಮಂಡಲ ಪೂಜೆ ನೆರವೇರಿಸಿ, ತಂದಿರಿಸಲಾಗಿವೆ.

ಅತ್ಯಂತ ಶುಭ್ರ ಪರಿಸರ
ವಿಶಾಲವಾದ ಸಭಾಂಗಣದಲ್ಲಿ 8 ಸಾಲುಗಳ, ಪ್ರತಿ ಸಾಲಿನಲ್ಲಿ 10- 12 ಗುರುಗಳ ಪಾದುಕೆಗಳನ್ನು ಇರಿಸಲಾ­ಗಿದೆ. ಪ್ರಶಾಂತ ವಾತಾವರಣ, ಶುಭ್ರ ಪರಿಸರದಲ್ಲಿ ನಡೆ ಯುತ್ತಾ ಸದ್ಗುರುಗಳ ಪಾದುಕೆಗಳನ್ನು ಕಣ್ತುಂಬಿ­ಕೊಳ್ಳುವ ಅನುಭವ ವರ್ಣಿಸಲಸದಳ. ಅಧ್ಯಾತ್ಮ ಅಂಗಳ­ದ­ಲ್ಲೊಂದು ಭಾವದ ಸ್ತುತಿಯಂತೆ ಭಾಸವಾಗುವುದು ಖಂಡಿತ. 

ದತ್ತಾತ್ರೇಯರನ್ನು ಏಕೆ ಪೂಜಿಸಬೇಕು?
ದತ್ತಾತ್ರೇಯರು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಅವತಾರಿ. ಅವಧೂತ ಸಂಪ್ರದಾಯದ ಮೂಲ ಗುರು ಅಂತಲೇ ಅವರನ್ನು ನಂಬಲಾಗಿದೆ. ಮಹಾನ್‌ ಯೋಗಿ­ಗಳಾದ ಇವರ ಸುತ್ತಲೂ ಚತುರ್ವೇದಗಳ ಗುರುತಾಗಿ ನಾಲ್ಕು ಶ್ವಾನಗಳಿದ್ದು ಜೊತೆಗೆ ಒಂದು ಹಸುವನ್ನೂ ಕಾಣ­ಬಹುದಾಗಿದೆ. ಇವರು ಔದುಂಬರ ವೃಕ್ಷದಲ್ಲಿ ನೆಲೆಸಿರು­ತ್ತಾರೆ ಎಂಬ ವಿಷಯವು ಸರ್ವವೇದ್ಯ. ಮಂದಿರದ ಎದುರು ಭಾಗದಲ್ಲಿ ಹಸಿರು ತುಂಬಿರುವಂಥ ಘಮಘಮಿ­ಸುವ ಪುಷ್ಪಗಳ ದತ್ತವನ ನಿರ್ಮಾಣವಾಗಿದೆ. ಈ ವನದಲ್ಲಿ ಅನೇಕ ಗೋವುಗಳಿದ್ದು ಭಕ್ತರಿಗೆ ಗೋ ಪೂಜೆ, ಗೋ ದಾನ ಮುಂತಾದ ಅನೇಕ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. 

ಪಾದುಕಾ ಮಹತ್ವ
ಗುರುವಿನ ಪಾದ ದೈವಸಮಾನ. ದೇವಾನು ದೇವತೆಗಳ ಪಾದದಷ್ಟೇ ಶ್ರೇಷ್ಠ. ದೇವರ ಆರಾಧನೆ- ದೇವರೊಡನೆ ಭಾವ- ಅಧ್ಯಾತ್ಮದ ಅನುಸಂಧಾನ ವುಳ್ಳ ಋಷಿಮುನಿಗಳ ಪಾದಗಳಿಗೂ ಅಗ್ರಮಾನ್ಯತೆ. ಅವುಗಳ ಪೂಜೆಯಲ್ಲೇ ಭಕ್ತರ ಧನ್ಯತೆ. ಅದುವೇ ಜೀವನದ ಸಾರ್ಥಕತೆ. ಶ್ರೀಪಾದ, ಗುರುಪಾದ, ತ್ರಿವಿಕ್ರಮ ಪಾದ, ರಾಮಪಾದ, ವಿಠuಲನ ಪಾದ…ಒಂದೇ,ಎರಡೇ? ಎಲ್ಲವೂ ಪೂಜಿಪ ಪಾದಗಳೇ. “ಗುರುವಿನ  ಗುಲಾಮನಾಗುವ ತನಕ ದೊರೆಯ ದಣ್ಣ  ಮುಕುತಿ’ ಎಂಬಂತೆ ಗುರುವಿನ ಪಾದಕ್ಕೆ ಎರಗುವುದರಲ್ಲೇ ಧನ್ಯತಾಭಾವ.

ಏನಿದೆ ವಿಶೇಷ ಕಾರ್ಯಕ್ರಮ?
ಚೈತನ್ಯ ಮಂದಿರದಲ್ಲಿ ಡಿ.22ರಂದು ಶ್ರೀ ದತ್ತಾತ್ರೇಯರ ಮತ್ತು ಶ್ರೀ ಶ್ರೀಧರ ಸ್ವಾಮಿಗಳವರ ಜಯಂತಿ ಜರುಗಲಿದೆ. ಈ ಪ್ರಯುಕ್ತ ವೇದಪಾರಾಯಣವನ್ನು ಆಯೋಜಿಸಲಾಗಿದೆ. ವೇದಬ್ರಹ್ಮಶ್ರೀ ಪ್ರಶಾಂತ್‌ ಭಟ್‌ ಮತ್ತು ಶಿಷ್ಯ ವೃಂದದವರು ನಡೆಸಿಕೊಡಲಿದ್ದಾರೆ. ಶ್ರೀ ವಿದ್ವಾನ್‌ ಯೋಗೀಶ್‌ ಅವರಿಂದ ಪ್ರವಚನ ಇರಲಿದೆ. ಇದೇ ವೇಳೆ, ಕೆಂಗೇರಿ ಚಕ್ರಪಾಣಿ ಅವರ ಸಂಗ್ರಹದ ಒಂದು ಸಾವಿರಕ್ಕೂ ಮೇಲ್ಪಟ್ಟು ಕರ್ನಾಟಕ ಪ್ರಾಚೀನ ದೇಗುಲಗಳ ಛಾಯಾಚಿತ್ರ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗೆ:www.padukamandira.com

ಇಲ್ಲಿದೆ ಗಣೇಶ ಪ್ರಪಂಚ
ಸಂಸ್ಥೆಯ ನಿರ್ವಾಹಕ ಟ್ರಸ್ಟಿ ಆದಿತ್ಯ ಪ್ರಕಾಶ್‌, 15 ವರ್ಷಗಳಿಂದ ಸಂಗ್ರಹಿಸಿದ ಗಣಪತಿಯ ಸಂಗ್ರಹವನ್ನು ಸದ್ಗುರು ಚೈತನ್ಯ ಮಂದಿರಕ್ಕೆ ದಾನ ನೀಡಿದ್ದಾರೆ. ಗಣಪತಿಯನ್ನು ಕೇವಲ ಮೂರ್ತಿ ರೂಪದಲ್ಲಷ್ಟೇಅಲ್ಲದೇ, ಪರಬ್ರಹ್ಮ ಸ್ವರೂಪನಾಗಿ ಕಾಣಬೇಕೆಂಬುದರ ಉದ್ದೇಶದಿಂದ ಈ ಗಣೇಶ ಪ್ರಪಂಚವನ್ನು ಸ್ಥಾಪಿಸಲಾಯಿತು. 2500ಕ್ಕೂ ಹೆಚ್ಚು ಗಣೇಶ
ಪ್ರತಿಮೆಗಳು ಇಲ್ಲಿವೆ.

ಸುಮಾ ಚಂದ್ರಶೇಖರ್‌

ಟಾಪ್ ನ್ಯೂಸ್

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.