ರಂಗೋಲಿ ಚಿತ್ರಕಥಾ

ಚುಕ್ಕಿಗಳಲ್ಲೇ ಚಿತ್ರ ಮೂಡಿಸುವ ಆಚಾರ್ಯ

Team Udayavani, Feb 1, 2020, 6:10 AM IST

rangoli

ಇದೂ ಚುಕ್ಕಿಗಳ ಲೆಕ್ಕದ ರಂಗೋಲಿಯೇ. ಆದರೆ, ಅಕ್ಷಯ್‌ ಜಾಲಿಹಾಳ್‌ ಆಚಾರ್ಯ ಅವರು ಬಿಡಿಸುವ ರಂಗೋಲಿ, ಈ ಬಗೆಯದ್ದಲ್ಲ. ಇವರು ಚುಕ್ಕಿಯಿಟ್ಟರೆ, ಅಲ್ಲಿ ಸಾಲುಮರದ ತಿಮ್ಮಕ್ಕ ಬಗೆಬಗೆಯ ಬಣ್ಣದಲ್ಲಿ ನಗುತ್ತಾರೆ; ಬಾಪೂ ಚರಕ ನೇಯುತ್ತಾರೆ; ಸಿದ್ದಗಂಗಾ ಶ್ರೀಗಳು ಮೌನದಲ್ಲಿ ಪಿಸುಗುಡುತ್ತಾರೆ; ಪ್ರಧಾನಿ ಮೋದಿ, ಡೊನಾಲ್ಡ್‌ ಟ್ರಂಪ್‌ ಅನ್ನು ಆಲಿಂಗಿಸಿಕೊಳ್ಳುತ್ತಾರೆ…

ಚುಕ್ಕಿಗಳು ಚಾರಣ ಹೊರಟಾಗ ಒಂದು ರಂಗೋಲಿ ಹುಟ್ಟುತ್ತದಂತೆ. ಮನೆಯ ಅಂಗಳದಲ್ಲಿ, ಗುಡಿಯೊಳಗೆ, ದೇಗುಲ ಕಟ್ಟೆಯ ಮುಂದಿನ ರಂಗೋಲಿಗಳು, ಬಣ್ಣದಲ್ಲಿ, ಬಣ್ಣವಿಲ್ಲದೆಯೂ ಭಕ್ತಿ-ಭಾವದ ರೂಪಕಗಳಂತೆ ಸೆಳೆಯುತ್ತವೆ. ರಂಗೋಲಿ­ಯೆಂಬ ಚಿತ್ರದಲ್ಲಿಯೇ ನಮ್ಮ ಸಂಸ್ಕೃತಿಯ ಶ್ರದ್ಧೆ ಅಡಗಿದೆ. ಇಲ್ಲಿ ಒಂದೊಂದು ದೇವರಿಗೆ, ಒಂದೊಂದು ಆಚರಣೆಗೆ ಪ್ರಿಯವಾದ ರಂಗೋಲಿಗಳಿವೆ. ದೈವಿಕಭಾವದ ವಿಸ್ಮಯಗಳಂತೆ ಅವು ತೋರುತ್ತವೆ.

ಆದರೆ, ಬೆಂಗಳೂರಿನ ಚಂದಾಪುರದ ಅಕ್ಷಯ್‌ ಜಾಲಿಹಾಳ್‌ ಆಚಾರ್ಯ ಅವರು ಬಿಡಿಸುವ ರಂಗೋಲಿ, ಈ ಬಗೆಯದ್ದಲ್ಲ. ಅವರು ಚುಕ್ಕಿಯಿಟ್ಟರೆ, ಸಾಲುಮರದ ತಿಮ್ಮಕ್ಕ ಬಗೆಬಗೆಯ ಬಣ್ಣದಲ್ಲಿ ನಗುತ್ತಾರೆ; ಬಾಪೂ ಚರಕ ನೇಯುತ್ತಾರೆ; ಸಿದ್ದಗಂಗಾ ಶ್ರೀಗಳು ಮೌನದಲ್ಲಿ ಪಿಸುಗುಡುತ್ತಾರೆ; ಪ್ರಧಾನಿ ಮೋದಿ, ಡೊನಾಲ್ಡ್‌ ಟ್ರಂಪ್‌ ಅನ್ನು ಆಲಿಂಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಹಡಗು ನೀರನ್ನು ಸೀಳಿ ಚಲಿಸುವಂತೆ, ವಿಮಾನಗಳು ಆಕಾಶದ ನೀಲಿಯಲ್ಲಿ ಒಂದಾದಂತೆ, ಮರದ ರೆಂಬೆ ಮೇಲೆ ಕುಳಿತ ಹಕ್ಕಿ ಇನ್ನೇನು ಜಿಗಿಯುವಂಥ ದೃಶ್ಯಗಳು ಬೆರಗುಮೂಡಿಸುತ್ತವೆ.

ಇವೆಲ್ಲವೂ, ರಂಗೋಲಿ ಚಿತ್ರಗಳು ಸೃಷ್ಟಿಸೋ ಅವ ಅಕ್ಷಯ್‌, ಬಾಲ್ಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಸೇರಿಕೊಂಡಾಗ, ರಂಗೋಲಿ ಅವರನ್ನು ಮೊದಲ ಬಾರಿಗೆ ಸೆಳೆಯಿತು. ಅಲ್ಲಿ ಪೂಜೆಗೂ ಮುನ್ನ ಮಂಡಲ ಹಾಕಿ, ಅಲಂಕರಿಸುವ ಕಲೆಯ ಬಗ್ಗೆ ಆಕರ್ಷಿತರಾದರಂತೆ. ಹಾಗೆ ಮಂಡಲ ಹಾಕುವುದನ್ನು ಅಭ್ಯಸಿಸುತ್ತಲೇ, ರಂಗೋಲಿಯಲ್ಲಿ ನಾನಾ ಪ್ರಯೋಗಗಳಿಗೆ ಮುಂದಾದರು. ರಂಗೋಲಿ ಚಿತ್ರಕಲೆಯ ಅಭ್ಯಾಸವನ್ನೇ ತಪಸ್ಸಿನಂತೆ ಆಚರಿಸಿದರು. ಅದರ ಫ‌ಲಶ್ರುತಿಯೇ, ಈ ಚಿತ್ರ ರಂಗೋಲಿ.

ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥರ ಮುಂದೆ ರಂಗೋಲಿ ಹಾಕಿದ್ದು, ಅಕ್ಷಯ್‌ ಬದುಕಿನ ದೊಡ್ಡ ಟರ್ನಿಂಗ್‌ ಪಾಯಿಂಟ್‌. ಶ್ರೀಗಳು ತನ್ಮಯರಾಗಿ ನೋಡುತ್ತಾ ಇದ್ದಾಗ, ಕೆಲವೇ ಗಂಟೆಗಳಲ್ಲಿ ಅವರದ್ದೇ ಚಿತ್ರವುಳ್ಳ ರಂಗೋಲಿ ನೆಲದ ಮೇಲೆ ಮೂಡಿತ್ತು. “ರಂಗೋಲಿಯೊಳಗೆ ಇಂಥ ಚಿತ್ರಕಲೆ ಇರುವುದು ಗೊತ್ತೇ ಇರಲಿಲ್ಲ. ಈ ವಿಶೇಷತೆಯನ್ನು ಮುಂದುವರಿಸಿ’ ಎಂಬ ಅವರ ಆಶೀರ್ವಾದ, ನಾರಾಯಣ ಯಜ್ಞಶಾಲೆಯ ಅಕ್ಷಯ್‌ಗೆ ಪ್ರೇರಣೆ ನೀಡಿತು.

“ರಂಗೋಲಿಯನ್ನು ಕೇವಲ ದೇವರ ಮುಂದೆ, ಅಂಗಳಕ್ಕೆ ಸೀಮಿತ ಮಾಡಲಾಗಿದೆ. ಆದರೆ, ರಂಗೋಲಿಯಲ್ಲಿ ನಾವು ಲೆಕ್ಕಿಸದಷ್ಟು ಭಾವಧ್ವನಿಗಳಿವೆ. ಅದು ಕಲಾಕೃತಿಯ ಬಹುದೊಡ್ಡ ಮಾಧ್ಯಮ’ ಎನ್ನುವುದು ಅಕ್ಷಯ್‌ರ ಮಾತು. ಇದುವರೆಗೆ ಅವರು 1500ಕ್ಕೂ ಅಧಿಕ ರಂಗೋಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಒಂದೊಂದು ಚಿತ್ರ ಬಿಡಿಸಲು 10 ನಿಮಿಷದಿಂದ 8 ಗಂಟೆಗಳ ವರೆಗೂ ತೆಗೆದುಕೊಳ್ಳುತ್ತಾರೆ. ಇವರು ಬಿಡಿಸುವ ರಂಗೋಲಿಗಳು ಜಲವರ್ಣ, ತೈಲವರ್ಣದ ಚಿತ್ರಗಳಿಗಿಂತ ಹೆಚ್ಚು ಮೆರುಗಿನಿಂದ ಕೂಡಿದೆ ಎನ್ನುವುದು ಇನ್ನೊಂದು ವಿಶೇಷ.

ಎಷ್ಟು ಬಣ್ಣ ಬೇಕು?: ಒಂದು ಚಿತ್ರ ಬಿಡಿಸಲು 1 ಕಿಲೋದಿಂದ ಒಂದೂವರೆ ಕಿಲೋದಷ್ಟು ರಂಗೋಲಿ ಪುಡಿ ಇದ್ದರೆ ಸಾಕು. ಮಾರುಕಟ್ಟೆಯಲ್ಲಿ ನೈಸರ್ಗಿಕವಾಗಿ ರಂಗೋಲಿ ಪುಡಿ ಸಿಗುತ್ತದೆ. ಅದರ ಜೊತೆಗೆ ಕಪ್ಪೆಚಿಪ್ಪಿನ ಪುಡಿ, ವಿಭಿನ್ನ ಬಣ್ಣಗಳನ್ನು ಬಳಸಿಕೊಂಡು, ರಂಗೋಲಿ ಭಾವಚಿತ್ರ ತಯಾರಿಸುತ್ತಾರೆ.

ರಂಗೋಲಿಯಲ್ಲಿ ನಾನು ಕೇವಲ ದೇವರನ್ನಷ್ಟೇ ಕಾಣಲಿಲ್ಲ. ಜಗತ್ತನ್ನು ಕಂಡೆ. ಪ್ರಕೃತಿಯನ್ನು ನೋಡಿದೆ. ಸಮಾಜಕ್ಕಾಗಿ ಮಿಡಿದ ಹೃದಯಗಳನ್ನು ಚಿತ್ರಿಸಿದೆ.
-ಅಕ್ಷಯ್‌ ಜಾಲಿಹಾಳ್‌ ಆಚಾರ್ಯ, ಚಂದಾಪುರ

* ಬಳಕೂರು ವಿ.ಎಸ್‌. ನಾಯಕ್‌

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.