ದುರ್ಯೋಧನನಿಗಾಗಿ ಈ ಮಹಾಭಾರತ ನೋಡಿ…
Team Udayavani, Oct 5, 2019, 3:01 AM IST
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯನ್ನು ಮರೆಯಲಾದೀತೆ? ಈಗಲೂ ಕೃಷ್ಣ, ಅರ್ಜುನ, ಭೀಮ, ದುರ್ಯೋಧನರೆಂದರೆ ಕಣ್ಮುಂದೆ ಬರುವುದು ಆ ಪಾತ್ರಧಾರಿಗಳೇ. ಅದರಲ್ಲೂ, ದುರ್ಯೋಧನನಾಗಿ ಮೆರೆದ ನಟ ಪುನೀತ್ ಇಸ್ಸಾರ್ ಅವರನ್ನು ಯಾರೂ ಮರೆತಿಲ್ಲ. ಅವರೀಗ ಮತ್ತೂಮ್ಮೆ ನಿಮ್ಮ ಮುಂದೆ ಬರಲಿದ್ದಾರೆ.
ಪುನೀತ್ ಅವರೇ ಬರೆದು, ನಿರ್ದೇಶಿಸಿರುವ “ಮಹಾಭಾರತ’ ನಾಟಕವು ಫೆಲಿಸಿಟಿ ಥಿಯೇಟರ್ ಕಂಪನಿ ಮೂಲಕ ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ ಕಾಣಲಿದೆ. ಪುನೀತ್ ಇಸ್ಸಾರ್ (ದುರ್ಯೋಧನ), ರಾಹುಲ್ ಬುಚರ್ (ಕರ್ಣ), ಹಲೀನ್ ಕೌರ್ (ದ್ರೌಪದಿ), ಯಶೋಧನ್ ರಾಣಾ (ಕೃಷ್ಣ), ದೀಕ್ಷಾ ರೈನಾ (ಕುಂತಿ), ಇತರರು ತೆರೆಯ ಮೇಲಿದ್ದಾರೆ. ಟಿಕೆಟ್ಗಳು ಬುಕ್ವೆುçಶೋನಲ್ಲಿ ಲಭ್ಯ
ಎಲ್ಲಿ?: ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ್ ರಸ್ತೆ, ವಸಂತನಗರ
ಯಾವಾಗ?: ಅ. 5-6, ಮಧ್ಯಾಹ್ನ 3 ಮತ್ತು ಸಂಜೆ 7
ಟಿಕೆಟ್ ದರ: 550 ರೂ. ಮೇಲ್ಪಟ್ಟು