ಶಂಕರನ ನೆನಪಿನ ಅಂಗಳ

15ನೇ ವಸಂತದ ಸಂಭ್ರಮ

Team Udayavani, Nov 2, 2019, 4:06 AM IST

ranga

ಶಂಕರನ ನೆನಪಲ್ಲಿ…: ಕನ್ನಡದ ಮೇರು ನಟ ಶಂಕರ್‌ ನಾಗ್‌ ಅವರ ಸ್ಮರಣಾರ್ಥ ಪತ್ನಿ ಅರುಂಧತಿ ನಾಗ್‌ ಸ್ಥಾಪಿಸಿದ ಸಂಸ್ಥೆ ಇದು. ರಂಗಪ್ರಿಯರಿಗೆ ಕೈಗೆಟಕುವ ದರದಲ್ಲಿ ರಂಗಮಂದಿರವನ್ನು ನಿರ್ಮಿಸುವುದು ಶಂಕರ್‌ ನಾಗ್‌ರ ಕನಸಾಗಿತ್ತು. ಅದರ ಸಾಕಾರ ರೂಪವೇ ಈ ರಂಗಶಂಕರ.

ದಾನಿಗಳ ನೆರವು: 1990ರಲ್ಲಿ ಶಂಕರ್‌ ನಾಗ್‌ರ ಅಕಾಲಿಕ ಮರಣದ ನಂತರ, ಸಂಕೇತ್‌ ಟ್ರಸ್ಟ್‌ ವತಿಯಿಂದ ಶಂಕರ್‌ ಸ್ಮರಣಾರ್ಥ ರಂಗಮಂದಿರ ನಿರ್ಮಿಸಲು ಯೋಚಿಸಲಾಯ್ತು. 1994ರಲ್ಲಿ ಸರ್ಕಾರದಿಂದ ಭೂಮಿಯೂ ಸಿಕ್ಕಿತು. ಆದರೆ, ನಿಧಿಯ ಕೊರತೆಯಿಂದಾಗಿ ನಿರ್ಮಾಣ ಕೆಲಸ 2001ರವರೆಗೆ ಶುರುವಾಗಲಿಲ್ಲ. ನಂತರ, ರಂಗಭೂಮಿ ಕಲಾವಿದರು, ರಂಗಪ್ರೇಮಿಗಳು ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಿ, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ರಂಗಶಂಕರ ತಲೆ ಎತ್ತಿ ನಿಂತಿತು.

ವೈಶಿಷ್ಟಗಳು: 1750 ಚದರ ಅಡಿಯ ವೇದಿಕೆ, 4 ಗ್ರೀನ್‌ ರೂಮ್ಸ್‌, ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಎ.ಸಿ., ವಿಶೇಷಚೇತನ ಪ್ರೇಕ್ಷಕರಿಗಾಗಿ ವೀಲ್‌ಚೇರ್‌ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ಎಲಿವೇಟರ್‌ ಇಲ್ಲಿದೆ. ರಂಗಶಂಕರದ ಆವರಣದಲ್ಲಿಯೇ ಪುಸ್ತಕದ ಅಂಗಡಿ, ರುಚಿರುಚಿ ಖಾದ್ಯಗಳನ್ನು ಉಣಬಡಿಸುವ ಕೆಫೆ ಕೂಡಾ ಇದೆ.

ಆಸನ ಸಾಮರ್ಥ್ಯ: 320

ಎಲ್ಲಿದೆ?: ಜೆ.ಪಿ. ನಗರ 2ನೇ ಹಂತ

ಉದ್ಘಾಟನೆ: ಅಕ್ಟೋಬರ್‌ 28, 2004

ನಿರ್ಮಾಣ ಅವಧಿ: 3 ವರ್ಷ (2001-04)

ವಿನ್ಯಾಸ: ವಾಸ್ತುಶಿಲ್ಪಿ ಶಾರುಖ್‌ ಮಿಸ್ತ್ರಿ ಅವರ ಯೋಜನೆಯಂತೆ ನಿರ್ಮಾಣವಾದ ಕಟ್ಟಡ.

(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ಅಂಥ ಪಾರಂಪರಿಕ ಕಟ್ಟಡಗಳ ಮಾಹಿತಿ ವಿಶೇಷ ಈ ಪಾಕ್ಷಿಕ ಅಂಕಣದ ಅಂತರಾಳ)

ರಂಗೋತ್ಸವ
ಬಹು ನಿರೀಕ್ಷಿತ ರಂಗ ಶಂಕರ ರಂಗೋತ್ಸವವು ಈ ಬಾರಿ ನ. 5-10ರವರೆಗೆ ನಡೆಯಲಿದೆ. ದೇಶದ ವಿವಿಧ ಭಾಗಗಳ ಉತ್ಸಾಹಿ ರಂಗ ತಂಡಗಳು ಭಾಗವಹಿಸುತ್ತಿವೆ. ನಾಟಕದ ಟಿಕೆಟ್‌ಗಳು ರಂಗ ಶಂಕರ ಬಾಕ್ಸ್‌ಆಫೀಸ್‌ ಮತ್ತು ಬುಕ್‌ಮೈಶೋನಲ್ಲಿ ಲಭ್ಯ.

ಪ್ರದರ್ಶನಗೊಳ್ಳುವ ನಾಟಕಗಳು
ನವೆಂಬರ್‌ 5
ನಾಟಕ: ನವ
ಭಾಷೆ: ಕನ್ನಡ
ಕಥಾವಸ್ತು: ಒಂಬತ್ತು ಮಂಗಳಮುಖೀಯರ ಕಥೆ.
ವಯೋಮಿತಿ: 8 ವರ್ಷ ಮೇಲ್ಪಟ್ಟವರು

ನವೆಂಬರ್‌ 6
ನಾಟಕ: ರಿಹ್ಲಾ
ಭಾಷೆ: ಹಿಂದೂಸ್ಥಾನಿ
ಕಥಾವಸ್ತು: ನೂತನ ದೇಶಕ್ಕಾಗಿ ಹಾತೊರೆಯುವ ಯುವ ಜನತೆಯ ಕಥೆ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನವೆಂಬರ್‌ 7
ನಾಟಕ: ಹೆಲೊ ಫ‌ರ್ಮಾಯಿಶ್‌
ಭಾಷೆ: ಹಿಂದಿ
ಕಥಾವಸ್ತು: ಉದ್ಯಮಶೀಲ ಹರಿಯಾಣದ ಮಹಿಳೆಯರು ಅಂತರಿಕ್ಷಕ್ಕೆ ಹೋಗುವ ಕಥೆ.
ವಯೋಮಿತಿ: 10 ವರ್ಷ ಮೇಲ್ಪಟ್ಟವರು

ನವೆಂಬರ್‌ 8
ನಾಟಕ: ಸಂಗೀತ್‌ ಬಾರಿ
ಭಾಷೆ: ಹಿಂದಿ/ ಮರಾಠಿ
ಕಥಾವಸ್ತು: ಲಾವಣಿ ನೃತ್ಯದ ಮೂಲ ಕಥಾ ಹಂದರವಿದೆ.
ವಯೋಮಿತಿ: 8 ವರ್ಷ ಮೇಲ್ಪಟ್ಟವರು.

ನವೆಂಬರ್‌ 9
ನಾಟಕ: ದಿ ಹಂಗರ್‌ ಆರ್ಟಿಸ್ಟ್‌
ಭಾಷೆ: ಮರಾಠಿ, ಇಂಗ್ಲಿಷ್‌, ಹಿಂದಿ
ಕಥಾಹಂದರ: ಉಪವಾಸದಿಂದ ಬದುಕು ಸಾಗಿಸುವನ ಕಥೆ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನವೆಂಬರ್‌ 10
ನಾಟಕ: ಈದ್ಗಾ ಕೆ ಜಿನ್ನತ್‌
ಭಾಷೆ: ಹಿಂದಿ, ಉರ್ದು
ಕಥಾವಸ್ತು: ಇಸ್ಲಾಮಿಕ್‌ ಕಥಾ ಹಂದರ.
ವಯೋಮಿತಿ: 14 ವರ್ಷ ಮೇಲ್ಪಟ್ಟವರು

ನಾಟಕದ ಸಮಯ: ನ. 5-9, ಸಂಜೆ 7.30
ಎಲ್ಲಿ?: ರಂಗಶಂಕರ
ಟಿಕೆಟ್‌ ದರ: 200 ರೂ.

ಟಾಪ್ ನ್ಯೂಸ್

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.