ಇಡೀ ದಿನ ಯಕ್ಷಗಾನ
Team Udayavani, May 26, 2018, 2:25 PM IST
ಯಕ್ಷಪ್ರಿಯರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. “ಸುಜ್ಞಾನ ಸುದರ್ಶನ ಯಕ್ಷಗಾನ’ ವತಿಯಿಂದ ಒಂದೇ ದಿನ ನಾಲ್ಕು ಯಕ್ಷಗಾನ ಪ್ರಸಂಗಗಳು ನಡೆಯುತ್ತಿವೆ. ಪ್ರೊ.ಎಂ.ಎ.ಹೆಗಡೆ ವಿರಚಿತ “ಕುಶ ಲವ’, ಪಾರ್ಥಿ ಸುಬ್ಬ ವಿರಚಿತ “ವಾಲಿ ವಧೆ’, ತಲೆಂಗಳ ಶಂಭಟ್ರ “ಅಕ್ಷಯಾಂಬರ ವಿಲಾಸ’ ಹಾಗೂ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ “ಮಾರುತಿ ಪ್ರತಾಪ’ ಪ್ರಸಂಗಗಳು ನಡೆಯಲಿವೆ.
ಅದೇ ಸಂದರ್ಭದಲ್ಲಿ ಉದ್ಯಮಿ ಎಂ.ಎಸ್.ಜನಾರ್ದನ ಕಾರಂತ ಹಾಗೂ ಪದ್ಮಾವತಿ ದಂಪತಿಗೆ “ಆದರ್ಶ ದಾಂಪತ್ಯ ಸಮ್ಮಾನ’ ನೀಡಿ ಗೌರವಿಸಲಾಗುವುದು. ಡಾ.ಪಿ. ಸದಾನಂದ ಮಯ್ಯ ಹಾಗೂ ಸುನಂದ ಮಯ್ಯ ದಂಪತಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜೊತೆಗೆ ಸಂಗೀತ ಸಂಗಮ ಕಾರ್ಯಕ್ರಮವನ್ನೂ ಆನಂದಿಸಬಹುದು.
ಎಲ್ಲಿ?: ಡಾ.ಎಚ್.ಎನ್.ಕಲಾಕ್ಷೇತ್ರ, ನ್ಯಾಷನಲ್ ಕಾಲೇಜು, 7ನೇ ಬ್ಲಾಕ್, ಜಯನಗರ
ಯಾವಾಗ?: ಮೇ 27, ಭಾನುವಾರ ಬೆ.10
ಹೆಚ್ಚಿನ ಮಾಹಿತಿಗೆ: 9900218166, 9449259333