ಹಾಡುಗಳ ಮೂಲಕ ಅಂಬಿಗೆ ನಮನ
Team Udayavani, Mar 2, 2019, 12:30 AM IST
ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನ ಜತೆ ಜತೆಗೇ ಹಲವಾರು ಸುಮಧುರ ಹಾಡುಗಳು ನೆನಪಾಗುತ್ತವೆ.ಅಂಥ ಹಾಡಿನ ಮೂಲಕ ಗೌರವ ಸಲ್ಲಿಸಲೆಂದೇ “ಅಂಬಿ ನಮನ’ ಎಂಬ ಬೃಹತ್ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸುಪ್ರಸಿದ್ಧ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಮ್, ವಿಜಯ್ ಪ್ರಕಾಶ್, ಗುರುಕಿರಣ್, ಮಂಜುಳಾ ಗುರುರಾಜ್, ಅರ್ಚನಾ ಉಡುಪ, ಅನುರಾಧ ಭಟ್, ನಂದಿತಾ ಅವರು ಅಂಬರೀಷ್ ನಟಿಸಿರುವ ಚಿತ್ರಗಳ ಗೀತೆಗಳನ್ನು ಹಾಡಲಿದ್ದಾರೆ. ಹಂಸಲೇಖ, ಅರ್ಜುನ್ ಜನ್ಯ ಕೂಡ ಉಪಸ್ಥಿತರಿರುತ್ತಾರೆ. ಸ್ಟಾರ್ ನಟರಾದ ವಿ. ರವಿಚಂದ್ರನ್, ಸುದೀಪ್, ದರ್ಶನ್, ಯಶ್ ಪಾಲ್ಗೊಳ್ಳುವರು. ಅಂಬರೀಶ್ ಅವರ ಆಯ್ದ ಗೀತೆಗಳಿಗೆ, ಯುವ ಕಲಾವಿದರು ಡ್ಯಾನ್ಸ್ ಮಾಡಲಿದ್ದಾರೆ. ಸಮರ್ಥನಂ ಅಂಗವಿಕಲರ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದ ಮುಂದಾಳತ್ವವನ್ನು ರಾಕ್ಲೈನ್ ವೆಂಕಟೇಶ್ ಮತ್ತು ನಟ ಶಿವರಾಮ್ ವಹಿಸಿದ್ದಾರೆ.
ಅಂಬಿಗೆ ನಮನ
ಯಾವಾಗ?: ಮಾ.3,
ಭಾನುವಾರ, ಸಂ.5.30
ಎಲ್ಲಿ?: ನ್ಯಾಶನಲ್ ಕಾಲೇಜು
ಮೈದಾನ, ಬಸವನಗುಡಿ
ಪ್ರವೇಶ: 250 ರೂ.ಮೇಲ್ಪಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!