ಟ್ರಾಫಿಕ್‌ ಅಂಬ್ರೆಲಾ

ಟ್ರಾಫಿಕ್‌ ಪೊಲೀಸರಿಗೆ ಸುಧಾರಿತ ಕಿಯೋಸ್ಕ್ನ ನೆರಳು

Team Udayavani, Feb 15, 2020, 6:10 AM IST

traffic-ambrella

ಬಿಸಿಲಿಗೂ ಬೆದರದೆ, ಮಳೆಗೂ ಜಗ್ಗದೆ, ಚಳಿಗೂ ಕುಗ್ಗದೆ ಡ್ಯೂಟಿ ಮಾಡುವ ಟ್ರಾಫಿಕ್‌ ಪೊಲೀಸರಿಗೆ ನೆರಳು ಒದಗಿಸಲು, ಅಂಬ್ರೆಲ್ಲಾಗಳು ನಗರದಾದ್ಯಂತ ಅರಳುತ್ತಿವೆ. “ರೆಡಿಮೇಡ್‌ ಕ್ಯೂಬಿಕಲ್‌ ಚೌಕಿಗಳು ಇವು…

ಸಿಗ್ನಲ್‌ ಬಿಡಲು ಇನ್ನೂ 90 ಸೆಕೆಂಡುಗಳು ಬಾಕಿ. ಸುಡುವ ಬಿಸಿಲು ಬೇರೆ. ಹೆಲ್ಮೆಟ್‌ನ ಒಳಗಿನ ಅಷ್ಟ ದಿಕ್ಕುಗಳಿಂದ ದಳದಳನೆ ಇಳಿವ ಬೆವರು… ಇದು “ಡ್ರೂಣ್‌ ಡ್ರೂಣ್‌’ ಎನ್ನುತ್ತಾ ಸದ್ದು ಮಾಡುವ ಬೈಕ್‌ ಮೇಲೆ ಕುಳಿತ ಸವಾರರು ನಿತ್ಯ ಅನುಭವಿಸುವ ಕತೆ. ಆದರೆ, ಅದೇ ಸಿಗ್ನಲ್‌ ವೃತ್ತದಲ್ಲಿ ಅಂಪೈರ್‌ನಂತೆ ನಿಂತಿರುತ್ತಾರಲ್ಲ, ಟ್ರಾಫಿಕ್‌ ಪೊಲೀಸ್‌, ಅವರಿಗೆ ಆ ಬಿಸಿಲು ಲೆಕ್ಕವೇ ಇಲ್ಲ. ಸವಾರರಿಗೆ ಬಿಸಿಲ ತಾಪ ತಾತ್ಕಾಲಿಕವಾಗಿ ತಟ್ಟಿದರೆ, ಪೊಲೀಸರಿಗೆ ಹಗಲಿಡೀ ಅವರ ಕರ್ಮಭೂಮಿ ಕುಲುಮೆಯಂತೆಯೇ ಇರುತ್ತೆ.

ಆದರೂ ಅವರು ಬಿಸಿಲಿನ ಮೇಲೆ ಗಮನ ನೆಡುವುದಿಲ್ಲ. ಬಿಸಿಲಿಗೂ ಬೆದರದೆ, ಮಳೆಗೂ ಜಗ್ಗದೆ, ಚಳಿಗೂ ಕುಗ್ಗದೆ ಡ್ಯೂಟಿ ಮಾಡುವ ಟ್ರಾಫಿಕ್‌ ಪೊಲೀಸರಿಗೆ ನೆರಳು ಒದಗಿಸಲು, ಅಂಬ್ರೆಲ್ಲಾಗಳು ನಗರದಾದ್ಯಂತ ಅರಳುತ್ತಿವೆ. ಅದೇ ರೆಡಿಮೇಡ್‌ ಕ್ಯೂಬಿಕಲ್‌ ಚೌಕಿ. ಈ ಸುಧಾರಿತ ಪೊಲೀಸ್‌ ಚೌಕಿಗಳನ್ನು (ಕಿಯೋಸ್ಕ್) ಬಿಬಿಎಂಪಿಯು ರೂಪಿಸುತ್ತಿದೆ.

ಒಳಗೆ ಏನೇನಿದೆ?: ಈ ಚೌಕಿಯೊಳಗೆ ಹೋದರೆ, ಯಾರಿಗೂ ಆಶ್ಚರ್ಯವಾಗುತ್ತೆ. ಪೊಲೀಸರಿಗೆ ಬೇಕಾದ ಸಕಲ ಅನುಕೂಲಗಳೂ ಇಲ್ಲಿವೆ. ಬೆಂಕಿ ನಂದಿಸುವ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ವಾಕಿಟಾಕಿ, ಶುದ್ಧ ಕುಡಿವ ನೀರು, ಧ್ವನಿವರ್ಧಕ, ಸಿಸಿಟಿವಿ ಕ್ಯಾಮೆರಾಗಳು ಚೌಕಿಯ ಪ್ರಮುಖ ವಿಶೇಷತೆಗಳು.

ಕುರ್ಚಿ, ಟೇಬಲ್‌, ಸಾರ್ವಜನಿಕರ ಕುಂದು- ಕೊರತೆ ಪರಿಶೀಲನಾ ಬಾಕ್ಸ್‌, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಎಲ್‌ಇಡಿ ಸ್ಕ್ರೀನ್‌ಗಳು ಇಲ್ಲುಂಟು. ಕಿಯೋಸ್ಕ್ ಮೇಲ್ಭಾಗದಲ್ಲಿ ಸೋಲಾರ್‌ ಪ್ಯಾನೆಲ್‌ ಇದೆ. ಬಾಗಿಲಿನ ಬಳಿಯೇ ಬಯೋಮೆಟ್ರಿಕ್‌ ಅಳವಡಿಕೆಯಾಗಿದ್ದು, ಟ್ರಾಫಿಕ್‌ ಪೊಲೀಸರಷ್ಟೇ ಇದನ್ನು ತೆರೆಯಬಹುದು. ಒಳಗೆ ಇಬ್ಬರು ಸಿಬ್ಬಂದಿ ಆರಾಮವಾಗಿ ಕುಳಿತುಕೊಳ್ಳಬಹುದು. 8 ದಿಕ್ಕುಗಳಲ್ಲೂ ನೋಡಲು ಅನುವಾಗಲು, ಚೌಕಿಗೆ ಗಾಜಿನ ಕಿಟಕಿಯಿದೆ.

ಸೈನ್‌ಪೋಸ್ಟ್‌ನ ಸೃಷ್ಟಿ: ಪೊಲೀಸ್‌ ಚೌಕಿ ನಿರ್ಮಾಣ ಮತ್ತು ನಿರ್ವಹಣೆಯ ಗುತ್ತಿಗೆಯನ್ನು “ಸೈನ್‌ಪೋಸ್ಟ್‌’ ಎಂಬ ಸಂಸ್ಥೆಗೆ 20 ವರ್ಷದ ಅವಧಿಗೆ ನೀಡಲಾಗಿದೆ. ಇನ್ನು ಬಿಬಿಎಂಪಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 509 ಜಂಕ್ಷನ್‌ಗಳಲ್ಲಿ ಪೊಲೀಸ್‌ ಚೌಕಿ ಅಳವಡಿಕೆಗೆ ಮೂರು ಪ್ಯಾಕೇಜ್‌ ಮಾಡಿ ಟೆಂಡರ್‌ ಆಹ್ವಾನಿಸಿದೆ. ಮೂರು ಪ್ಯಾಕೇಜ್‌ಗಳಲ್ಲಿ ಎರಡು ಪ್ಯಾಕೇಜ್‌ ಅಡಿಯಲ್ಲಿ 389 ಪೊಲೀಸ್‌ ಚೌಕಿ ನಿರ್ಮಿಸುವುದಕ್ಕೆ ಟೆಂಡರ್‌ ಅಂತಿಮಗೊಂಡಿದೆ.

ಎಲ್ಲೆಲ್ಲಿದೆ?: ಹಡ್ಸನ್‌ ವೃತ್ತ, ವೆಲ್ಲಾರ ಜಂಕ್ಷನ್‌, ಬಿಷಪ್‌ ಕಾಟನ್‌ ಶಾಲೆ, ಬ್ರಿಗೇಡ್‌ ರಸ್ತೆ, ವಿಂಡ್ಸರ್‌ ಮ್ಯಾನರ್‌ ವೃತ್ತ, ರಾಜಾರಾಂ ಮೋಹನ್‌ ರಾಯ್‌ ರಸ್ತೆ, ಲಾಲ್‌ಬಾಗ್‌ ವೃತ್ತ, ಮಿಲ್ಲರ್‌ ರಸ್ತೆ, ಬಸವೇಶ್ವರ ವೃತ್ತ, ಎಂ.ಜಿ. ರಸ್ತೆ, ಹಳೇ ಮದ್ರಾಸ್‌ ರಸ್ತೆ, ಪೊಲೀಸ್‌ ತಿಮ್ಮಯ್ಯ ವೃತ್ತ, ಶಾಂತಿನಗರ ಸರ್ಕಲ್‌, ಅನಿಲ್‌ ಕುಂಬ್ಳೆ ವೃತ್ತ, ಚಾಲುಕ್ಯ ವೃತ್ತ ಸೇರಿದಂತೆ 19 ಕಡೆ ಕಿಯೋಸ್ಕ್ ನಿರ್ಮಾಣಗೊಂಡಿದೆ. ಸದ್ಯದಲ್ಲೇ ಇವು ಅನಾವರಣಗೊಳ್ಳಲಿವೆ.

ದಣಿವಾದಾಗ ಹೊಸ ಚೌಕಿಯಲ್ಲಿ ಕೆಲ ಹೊತ್ತು ಸುಧಾರಿಸಿಕೊಳ್ಳಬಹುದು. ಒಂದೆಡೆ ಕುಳಿತು ನಾಲ್ಕು ದಿಕ್ಕುಗಳಲ್ಲಿ ಸಂಚಾರ ವೀಕ್ಷಣೆ ಮಾಡಬಹುದು. ಅಲ್ಲದೆ, ತಾಂತ್ರಿಕವಾಗಿಯೂ ಹಲವು ಅನುಕೂಲಗಳಿವೆ.
-ಸದಾನಂದ, ಸಂಚಾರಿ ಪಶ್ಚಿಮ ವಲಯ

ನಗರದಲ್ಲಿ ಹೊಸದಾಗಿ ಅಳವಡಿಸುತ್ತಿರುವ ಪೊಲೀಸ್‌ ಚೌಕಿಗಳಿಂದ ಸಂಚಾರಿ ಪೊಲೀಸರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಬಿಸಿಲು ಮಳೆ, ಗಾಳಿಯಿಂದ ರಕ್ಷಣೆ ಪಡೆಯಬಹುದು.
-ಜಗದೀಶ್‌ ಸಂಚಾರ ಸಿಬ್ಬಂದಿ, ಕೇಂದ್ರ ವಲಯ

* ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.