ಬಾಹುಬಲಿ ಅಭಿಷೇಕಕ್ಕೆ ಏನು ಬಳಸುತ್ತಾರೆ ?


Team Udayavani, Feb 17, 2018, 12:13 PM IST

3-a.jpg

 ಅಭಿಷೇಕಕ್ಕೆ ಬೇಕಾದ ಪರಿಕರಗಳನ್ನು 8 10 ದಿನಕ್ಕೆ ಮೊದಲು ಸಿದ್ಧಗೊಳಿಸುತ್ತಾರೆ. ಇದನ್ನು ಸಿದ್ಧ ಗೊಳಿಸುವುದು ಬೇರಾರು ಅಲ್ಲ. ಭಕ್ತರೇ. ಪಾರಂಪರಿಕ ಶೈಲಿಯಲ್ಲಿ, ಜೈನ ಸಂಪ್ರದಾಯಗಳನ್ನು ಅನುಸರಿಸಿಯೇ ಇವುಗಳನ್ನು ತಯಾರಿಸುವುದು. ಹೆಚ್ಚಾ ಕಡಿಮೆ 700 800 ಜನ ಈ ಕೆಲಸವನ್ನು ಮಾಡುತ್ತಾರಂತೆ. 
 ಮೊದಲ ದಿನ 500 ಕಳಸದಷ್ಟು ಮಜ್ಜನವಾಗುತ್ತದೆ. ನಂತರ ಇದರಲ್ಲಿ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಇದರಲ್ಲಿ 300ಲೀ. ಹಾಲು, 300ಲೀ. ಕಬ್ಬಿನಹಾಲು, 20ಕೆ.ಜಿ ಚಂದನದ ಪುಡಿ, ಅಷ್ಟೇ ಪ್ರಮಾಣದಲ್ಲಿ ಶ್ರೀಗಂಧದ ಪುಡಿ, ಸರಿಸುಮಾರು 1ಕೆಜಿಯಷ್ಟು ಕೇಸರಿ, 50ಕೆ.ಜಿಯಷ್ಟು ಅರಿಶಿಷಣ ಪುಡಿ, ಒಂದು ಟನ್‌ ನಷ್ಟು ಕಲ್ಕ ಚೂರ್ಣವನ್ನು ಬಳಸುತ್ತಾರೆ. 

ಸುರಳಿಗಳೇ ಕೇಶಗಳು..
ಬಾಹುಬಲಿಯಲ್ಲಿ 64 ಕೇಶ ಸುರಳಿಗಳ ಕೇಶವಿನ್ಯಾಸದಿಂದ ಕೂಡಿದೆ. ಬಾಹುಬಲಿಯನ್ನು ಕೆತ್ತಿಸಿದ ಚಾಮುಂಡರಾಯ ಅಪ್ಪಟ ಕನ್ನಡಪ್ರೇಮಿ. ಆತ ಚಾವುಂಡರಾಯ ಪುರಾಣ ಅನ್ನೋ ಕಾವ್ಯವನ್ನೇ ಬರೆದಿದ್ದಾನೆ. ಗೊಮ್ಮಟನ ಪಾದದ ಬಳಿ ಕನ್ನಡದ ಕೆತ್ತನೆಯೂ ಇದೆ. ಗುರು ನೇಮಿಚಂದ್ರ ರಚಿಸಿದ ಗೊಮ್ಮಟಸಾರ ಕೃತಿಗೆ ಪ್ರಾಕೃತ ಭಾಷೆಯಲ್ಲಿ ಚಾಮುಂಡರಾಯ ರಚಿಸಿದ ವ್ಯಾಖ್ಯಾನಗ್ರಂಥ ವೀರಮತ್ತಂಡಿ ಅಂತ. ಹೀಗೆ ಚಾಮುಂಡರಾಯನ ಮಾತೃಭಾಷೆ ಕನ್ನಡವೇ ಆಗಿತ್ತು. 

ಸಾಲದ ಅಡವು
ಒಡೆಯರ ಕಾಲದಲ್ಲಿ ಗೋಮ್ಮಟೇಶ್ವರಿಗೆ ಸೇರಿದ ಭೂಮಿಯನ್ನು ಕೆಲವುರ ಸಾಲಕ್ಕಾಗಿ ಅಡವಿಟ್ಟಿದ್ದರಂತೆ. ವಿಷಯ ತಿಳಿದ ಚಾಮರಾಜ ಒಡೆಯರು ಅಡವಿಟ್ಟುಕೊಂಡಿದ್ದವರನ್ನು ಕರೆಸಿ ಅಡವಿಟ್ಟ ಸಾಲವನ್ನು ತೀರಿಸುತ್ತೇವೆ ಎಂದಾಗ ಅವರು ಭೂಮಿಯನ್ನು ಬಿಟ್ಟಕೊಟ್ಟರಂತೆ. 

ಅಮೆರಿಕದಲ್ಲಿ ಅತ್ಯಂತ ಹಳೆಯ ಬಾಹುಬಲಿ

ಅಮೆರಿಕದ ನ್ಯೂಯಾರ್ಕ್‌ ಮೆಟ್ರೋಪಾಲಿಟಿನ್‌ ವಸ್ತು ಸಂಗ್ರಾಹಾಲಯದಲ್ಲಿ ಸುವರ್ಣ ಲೇಪಿತ ಪಂಚಲೋಹದ ಬಾಹುಬಲಿಯ ಮೂರ್ತಿಯೊಂದಿದೆ. 11.1 ಸೆಂ.ಮೀ ಇರುವ ಈ ಮೂರ್ತಿಯನ್ನು ಸ್ಯಾಮ್ಯೂಯಲ್‌ ಎಲಿನ್‌ಬರ್ಗ್‌ ಎಂಬುವವರು 1987ರಲ್ಲಿ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಸ್ತು ಸಂಗ್ರಹಾಲಯದ ದಾಖಲೆಗಳ ಪ್ರಕಾರ, ಈ ಮೂರ್ತಿಯು ಕರ್ನಾಟಕದಿಂದ ಬಂದಿದ್ದು, ಬಾದಾಮಿ ಚಾಲುಕ್ಯರ ಕಾಲಕ್ಕೆ ಸಂಬಂಧಿಸಿದ್ದು ಎಂದಿದೆ. 6-7ನೆಯ ಶತಮಾನದ್ದೆಂದು ಹೇಳಲಾಗಿದೆ.

ಈ ಮೂರ್ತಿಯ ಬಗ್ಗೆ ಅಧ್ಯಯನ ಮಾಡಿದ ನಾಡೋಜ ಪೊ›. ಹಂ.ಪ ನಾಗರಾಜಯ್ಯನವರು ಇದು “ಇದುವರೆಗೂ ಉಳಿದು ಬಂದಿರುವ ಬಾಹುಬಲಿ ಮೂರ್ತಿಗಳಲ್ಲಿಯೇ ಅತ್ಯಂತ ಪ್ರಾಚೀನತಮ ಎಂದಿದ್ದಾರೆ. ಅವರು ಸಂಶೋಧಿಸಿದ ಪ್ರಕಾರ ಮೂರ್ತಿಯ ಕಾಲ ಐದು-ಆರನೆಯ ಶತಮಾನಕ್ಕೆ ಸಲ್ಲುತ್ತದೆ. ಈ ಆಧಾರದ ಮೇಲೆ ಮೂರ್ತಿಯ ಕಾಲವನ್ನು ಕದಂಬರ ಆಡಳಿತದ ಕೊನೆಯ ಹಾಗೂ ಬಾದಾಮಿ ಚಾಲುಕ್ಯರ ಆಡಳಿತದ ಪ್ರಾರಂಭದ ಕಾಲಘಟ್ಟ ಎಂದು ಗುರುತಿಸಬಹುದು.

ಮುಂಬೈನಲ್ಲಿ ಶ್ರವಣಬೆಳಗೊಳದ ಬಾಹುಬಲಿ ಮುಂಬೈನ ಮೆಟ್ರೋಪಾಲಿಟಿನ್‌ ವಸ್ತುಸಂಗ್ರಹಾಲಯದಲ್ಲಿ 8ನೆಯ ಶತಮಾನದ ಕಾಲಾವಧಿಯ ಕಾಯೋತ್ಸರ್ಗದ ಲೋಹದ ಬಾಹುಬಲಿ ಮೂರ್ತಿಯೊಂದಿದೆ. ಇದು ಶ್ರವಣಬೆಳಗೊಳದಿಂದ ತಂದಿದ್ದು ಎಂದು ಹಂ.ಪ ನಾಗರಾಜಯ್ಯನವರು ಹೇಳುತ್ತಾರೆ. ಇದೊಂದು ಸ್ವತಂತ್ರ ವಿಗ್ರಹವಾಗಿದ್ದು, ದುಂಡು ಶಿಲ್ಪದ ಮಾದರಿಯಾಗಿದೆ. ಈ ಮೂರ್ತಿಯ ಅಸ್ತಿತ್ವದಿಂದ 8ನೆಯ ಶತಮಾನದ ಹೊತ್ತಿಗಾಗಲೇ ಕರ್ನಾಟಕದಲ್ಲಿ ಅದರಲ್ಲೂ ಶ್ರವಣಬೆಳಗೊಳದಲ್ಲಿ ಲೋಹದ ಮೂರ್ತಿಗಳನ್ನು ತಯಾರಿಸುವ ಉದ್ಯಮ ಬೆಳೆದಿತ್ತು ಎಂಬುದನ್ನು ಮನಗಾಣಬಹುದು. ಬಾಹುಬಲಿ ಲೋಹದ ಬಿಂಬವು ಚಿಕ್ಕದಾದರೂ ಪ್ರಮಾಣ ಬದ್ಧವಾಗಿದೆ. ಪಾದದ ಹಿಮ್ಮಡಿಯಿಂದ ಹೊರಟ ವಲ್ಲರಿಗಳು ಮೊಣಕಾಲನ್ನು ಬಳಸಿ ತೊಡೆಯ ಮುಂಭಾಗ ಹಿಂಭಾಗವನ್ನು ಆವರಿಸಿದೆ. ಕೈಗಳಿಗೆ ನಿರಾಧಾರ ಬಳ್ಳಿಗಳನ್ನು ಚಿತ್ರಿಸಲಾಗಿದೆ. ಏರುಬಾಚಿದ ಕೂದಲು ಭುಜದ ಮೇಲೂ ಇಳಿದಿದೆ.ನೀಳಕರ್ಣ, ನಾಸಿಕ, ನಯನ, ಕದಪು, ಬಾಹುಗಳು, ಎದೆಯ ಭಾಗ, ಸೊಂಟ,ತೊಡೆ, ಕೈ ಕಾಲುಗಳ ಪ್ರಮಾಣಗಳನ್ನು ಶಿಲ್ಪಿ ಪ್ರಮಾಣಬದ್ಧವಾಗಿ ಕೆತ್ತಿದ್ದಾನೆ.

ಸಾಲದ ಅಡವು
ಒಡೆಯರ ಕಾಲದಲ್ಲಿ ಗೊಮ್ಮಟೇಶ್ವರಿಗೆ ಸೇರಿದ ಭೂಮಿಯನ್ನು ಕೆಲವರು ಸಾಲಕ್ಕಾಗಿ ಅಡವಿಟ್ಟಿದ್ದರಂತೆ. ವಿಷಯ ತಿಳಿದ ಚಾಮರಾಜ ಒಡೆಯರು ಅಡವಿಟ್ಟುಕೊಂಡಿದ್ದವರನ್ನು ಕರೆಸಿ ಅಡವಿಟ್ಟ ಸಾಲವನ್ನು ತೀರಿಸುತ್ತೇವೆ ಎಂದಾಗ ಅವರು ಭೂಮಿಯನ್ನು ಬಿಟ್ಟುಕೊಟ್ಟರಂತೆ.

ಚಿತ್ರಗಳು: ಆಸ್ಟ್ರೋಮೋಹನ್‌, ಯಜ್ಞ  

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.