ಖುಷಿ ತಂದ ಕೃಷಿ ಮೇಳ; ಹೊಸ ತಳಿ, ಹೊಸ ತಂತ್ರಜ್ಞಾನ ಸಮಾಗಮ

ಇಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ

Team Udayavani, Oct 21, 2019, 5:00 AM IST

Isiri-a

ಗುರುವಾರದಿಂದ ಬೆಂಗಳೂರು ಕೃಷಿ ವಿವಿ ಆವರಣದಲ್ಲಿ ಕೃಷಿ ಮೇಳ ಶುರುವಾಗುತ್ತಿದೆ. ಈ ಸಲ ಮೇಳಕ್ಕೆ ಬಂದ ರೈತರಿಗೆ ನಿರಾಸೆ ಅನ್ನೋದಿಲ್ಲ. ಏಕೆಂದರೆ, ಕೃಷಿ ವಿಶ್ವವಿದ್ಯಾಲಯ, ತಾನೇ ಆವಿಷ್ಕರಿಸಿ, ಪರೀಕ್ಷೆಗೆ ಒಳಪಡಿಸಿ, ಅದರಿಂದ ಒಳ್ಳೆ ಫ‌ಲಿತಾಂಶ ಕೊಟ್ಟ ಏಳು ತಳಿಗಳನ್ನು ರೈತರ ಕೈಗೆ ಇಡಲು ವಿವಿ ಸಿದ್ಧವಾಗಿ ನಿಂತಿದೆ. ಇದರ ಜೊತೆಗೆ ರೈತರಿಗೆ ದೊಡ್ಡ ತಲೆನೋವು ಬೆಳೆಗೆ ನೀರು ಹಾಯಿಸುವುದು. ಕರೆಂಟ್‌ನ ಕಣ್ಣಾ ಮುಚ್ಚಾಲೆಯಿಂದ ಎಲ್ಲಾ ಕೆಲಸ ಬಿಟ್ಟು ನೀರು ಕಟ್ಟುವುದೇ ದೊಡ್ಡ ಉದ್ಯೋಗವಾಗಿ ಬಿಟ್ಟಿದೆ. ಈ ಬಾರಿಯೇ ಮೇಳದಲ್ಲಿ ಈ ಸಮಸ್ಯೆಗೂ ಒಂದು ಪರಿಹಾರ ಇದೆ. ಪಂಪ್‌ಸೆಟ್‌ಗೆ ಪ್ರೋಗ್ರಾಮರ್‌ ಅಳವಡಿಸುವ ಹೊಸ ತಂತ್ರಜ್ಞಾನ ಆವಿಷ್ಕಾರ ಮಾಡಿ ಯಶಸ್ವಿಯಾಗಿದೆ. ರೈತರು ಬೆಳೆ ಎದುರಿಗೆ ನಿಂತೇ ನೀರು ಹಾಯಿಸಬೇಕು ಅಂತಿಲ್ಲ. ಯಾವಾಗ ಬೇಕಾದರೆ, ಹನಿ ಹನಿಯಾಗಿ ನೀರು ಹಾಯಿಸಬಹುದು. ಆದರೆ, ನೀರು ಎಷ್ಟು ಸಮಯದ ತನಕ ಹಾಯಿಸಬೇಕು ಅನ್ನೋದರ ಸಮಯ ಮಿತಿಯನ್ನು ನಮೂದು ಮಾಡಿ ಹೋದರೆ, ಟೈಮರ್‌ ಸಾಧನ ನೀರನ್ನು ಹಾಯಿಸುತ್ತದೆ. ಈ ರೀತಿ ಕಮಾಂಡ್‌ ಅನ್ನು ರೈತರು ಮೊಬೈಲ್‌ ಮೂಲಕವೂ ಕೊಡಬಹುದಂತೆ.

ತಳಿಗಳ ವಿಚಾರಕ್ಕೆ ಬಂದರೆ ಏಕದಳ, ದ್ವಿದಳ, ಎಣ್ಣೆಕಾಳು, ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಹೊಸ ತಳಿಗಳನ್ನು ಆವಿಷ್ಕಾರ ಮಾಡಿ, ಮೇಳದಲ್ಲೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಏಕದಳದಲ್ಲಿ ಭತ್ತದ ಹೆಸರು- ಗಂಗಾವತಿ ಸೋನ (20594). ಇದರ ವಿಶೇಷ ಏನೆಂದರೆ, ಎಕರೆಗೆ 28 ಕ್ವಿಂಟಾಲ್‌ ಧಾನ್ಯ, ಮತ್ತು 34 ಕ್ವಿಂಟಾಲ್‌ ಹುಲ್ಲು ಕೊಡುವ ತಳಿ. 130ರಿಂದ 135 ದಿನಗಳ ಮಧ್ಯಮಾವಧಿಯ ಬೆಳೆಯಂತೆ. ಎಣ್ಣೆ ಕಾಳು ಬೆಳೆಯಲ್ಲಿ ಸೂರ್ಯಕಾಂತಿ (ಕೆಬಿಎಸ್‌ಎಚ್‌-78) ಇದೆ. ಎಕರೆಗೆ 8-10 ಕ್ವಿಂಟಾಲ್‌ ಇಳುವರಿ ಕೊಡುತ್ತದಂತೆ. ಇದರಿಂದ 350 ಕೆ.ಜಿ ಎಣ್ಣೆ ಸಿಗುತ್ತದೆ ಎನ್ನುತ್ತಾರೆ ವಿವಿಯ ಸಂಶೋಧಕ ಷಡಕ್ಷರಿ.

ವಾಣಿಜ್ಯ ಬೆಳೆಯಲ್ಲಿ ಕಬ್ಬಿನ ಹೊಸತಳಿ( ಸಿಓವಿಸಿ-16061) ಸಿದ್ಧವಾಗಿದೆ. ಎಕರೆಗೆ 65 ಟನ್‌ ಇಳುವರಿ ಕೊಡುವ ತಾಕತ್ತು ಇದಕ್ಕಿದೆಯಂತೆ. ಕೊಳೆ ರೋಗ ಇದರ ಬಳಿ ಸುಳಿಯುವುದಿಲ್ಲ. ಇನ್ನೊಂದು ತಳಿ ಸಿಓವಿಸಿ-16062 ಅಂತ. ಎಕರೆಗೆ 70 ಟನ್‌ ಇಳುವರಿಗೆ ಕೊಡುವ ಸಾಮರ್ಥ್ಯ ಇದೆಯಂತೆ. ಜೊತೆಗೆ ಬರದ ನಾಡಿಗೆ ಹೇಳಿ ಮಾಡಿಸಿದ ತಳಿ ಅಂತಾರೆ. ಅಲ್ಲದೇ, ಎಕರೆಗೆ ಐದು ಕ್ವಿಂಟಾಲ್‌ ಇಳುವರಿ ಕೊಡುವ ಉದ್ದು, ಲಾಲಾಬಾಗ್‌ ಮಧುರ ಎನ್ನುವ ಹಲಸು ಕೂಡ ಹೊಸ ತಳಿಯ ಪಟ್ಟಿಯಲ್ಲಿ ಇದೆ.
ಇವೆಲ್ಲವನ್ನೂ ಸುಖಾಸುಮ್ಮನೆ ಆವಿಷ್ಕಾರ ಮಾಡಿ ರೈತರ ಮುಂದೆ ಇಡುತ್ತಿಲ್ಲ. ಬದಲಾಗಿ, ದೊಡ್ಡಬಳ್ಳಾಪುರ, ಮಾಗಡಿ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ಚಿಂತಾಮಣಿ, ಚಾಮರಾಜನಗರದ ಕೃಷಿ ವಿವಿ ಹಂತಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಕೆಲವೊಂದು, ಭತ್ತ, ಕಬ್ಬಿನ ತಳಿಗಳನ್ನು ಪ್ರಗತಿಪರ ರೈತರ ಜಮೀನಿನಲ್ಲಿ ಬೆಳೆಸಿ, ಉತ್ತಮ ಫ‌ಲಿತಾಂಶವನ್ನು ಗಳಿಸಿದ ನಂತರವೇ ರೈತರ ಮುಂದೆ ಇಡುತ್ತಿರುವುದು ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳುಚಿಯಾಗೆ ಡಿಮ್ಯಾಂಡ್‌;
ಚಿಯಾಗೆ ಈಗಾಗಲೇ ಹೆಚ್ಚಿನ ಬೇಡಿಕೆ ಶುರುವಾಗಿದೆ. ಹೀಗಾಗಿ, ಕೃಷಿ ವಿವಿ ರೈತರ ಹಿತದೃಷ್ಟಿಯಿಂದ ಹೊಸತಳಿಯೊಂದನ್ನು ಸಂಶೋಧಿಸಿದೆ. ಎಕರೆಗೆ ಮೂರು ಕ್ವಿಂಟಾಲ್‌ನಷ್ಟು ಇಳುವರಿ ನೀಡುತ್ತದಂತೆ. ವಿಶೇಷ ಎಂದರೆ, ಇದನ್ನು ದನ ಕರುಗಳನ್ನು ತಿನ್ನುವುದಿಲ್ಲ, ರೋಗ ರುಜಿನ ಕಡಿಮೆಯಂತೆ. ” ರೈತರಿಗೆ, ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 25 ಸಾವಿರ ಸಿಕ್ಕರೂ, 50ಸಾವಿರ ನಿವ್ವಳ ಲಾಭ ಸಿಗುತ್ತದೆ’ ಎನ್ನುತ್ತಾರೆ ಡಾ. ನಿರಂಜನಮೂರ್ತಿ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಗ್ರಾಹಕರು ಹೆಚ್ಚಿನ ಗಮನ ಕೊಡುತ್ತಿರುವುದರಿಂದ ಪ್ರೊಟೀನ್‌ ಯುಕ್ತ ತಳಿ ಇದು. ಬೊಜ್ಜನು ಕಂಟ್ರೋಲ್‌ ಮಾಡುವುದರಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆಯಂತೆ. ಹೀಗಾಗಿ, ಚಿಯಾ ತಳಿಗೆ ಬೇಡಿಕೆ ಬಂದಿದೆ.

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.