ಶಬ್ದವೇಧಿ ಹ್ಯಾಕಿಂಗ್‌

ಪಾಸ್‌ವರ್ಡ್‌ ಕದಿಯಲು ಹೊಸ ತಂತ್ರ

Team Udayavani, Aug 26, 2019, 3:09 AM IST

shabdavide

ಇಂದಿನ ಇಂಟರ್ನೆಟ್‌ ಯುಗದಲ್ಲಿ ‘ಸೈಬರ್‌ ಸುರಕ್ಷತೆ’ಯ ಮಹತ್ವದ ಕುರಿತು ಆಗಾಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಳ್ಳುವುದನ್ನು ನೀವು ನೋಡಿರಬಹುದು. ಬ್ಯಾಂಕಿನಿಂದ ಏಕಾಏಕಿ ಹಣ ಮಂಗಮಾಯ ಆಗುವುದನ್ನು ಕಂಡು ಗಾಬರಿಯೂ ಆಗಿರಬಹುದು. ತಂತ್ರಜ್ಞಾನವೊಂದು ಬೆಳೆಯುತ್ತಿದ್ದಂತೆಯೇ ಅದು ಉಪಯೋಗದೊಂದಿಗೆ, ಅನೇಕ ಸವಾಲುಗಳನ್ನೂ ಜೊತೆಯಲ್ಲೇ ಹೊತ್ತು ತರುತ್ತದೆ. ಇಂಟರ್ನೆಟ್‌ ಬ್ಯಾಂಕಿಂಗ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ನಿಂದಾಗಿ ಇಂದು ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳಲ್ಲೇ ಜನರು ಬ್ಯಾಂಕ್‌ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

ಆನ್‌ಲೈನ್‌ ಶಾಪಿಂಗ್‌ ಕೂಡಾ ಇಂದಿನ ದಿನಗಳಲ್ಲಿ ಹೆಚ್ಚಳ ಕಂಡಿದೆ. ಹೀಗಾಗಿ, ತಂತ್ರಜ್ಞಾನವನ್ನು ಬಳಸಿಯೇ ಕಳ್ಳತನ ಮಾಡುವ ಪ್ರವೃತ್ತಿಯನ್ನು ನಾವು ಕಾಣಬಹುದು. ಯಾವುದೋ ಮೂಲೆಯಲ್ಲಿ ಕುಳಿತು, ಒಬ್ಬರ ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನಿನಲ್ಲಿ ಸಂಗ್ರಹವಾಗಿರುವ ಮಾಹಿತಿ ಕದಿಯುವವರನ್ನು ಹ್ಯಾಕರ್‌ ಎನ್ನುತ್ತಾರೆ. ಹ್ಯಾಕರ್‌ಗಳು ಬ್ಯಾಂಕು, ಇಮೇಲ್‌ ಮುಂತಾದ ಆನ್‌ಲೈನ್‌ ಸೇವೆಗಳ ಪಾಸ್‌ವರ್ಡ್‌ಗಳನ್ನೂ ಕದಿಯಬಲ್ಲರು. ಹ್ಯಾಕರ್‌ಗಳು ಪಾಸ್‌ವರ್ಡ್‌ಗಳನ್ನು ಕದಿಯಲು ನಾನಾ ತಂತ್ರಗಳನ್ನು ಬಳಸುತ್ತಾರೆ.

ನಕಲಿ ವೆಬ್‌ಸೈಟ್‌ ಸೃಷ್ಟಿ, ಕೀ ಲಾಗರ್‌(ಯಾವೆಲ್ಲಾ ಬಟನ್‌ಗಳು ಪ್ರಸ್‌ ಆಗಿದೆ ಎನ್ನುವ ಮಾಹಿತಿ ಕಲೆ ಹಾಕುವ ಸಾಫ್ಟ್ವೇರ್‌) ಬ್ಯಾಂಕ್‌ನವರಂತೆ ನಟಿಸಿ ಬ್ಯಾಂಕ್‌ ಖಾತೆಯ ಸೂಕ್ಷ್ಮ ಮಾಹಿತಿ ಕೇಳುವುದು, ಸೋಷಿಯಲ್‌ ಎಂಜಿನಿಯರಿಂಗ್‌ ಇವೆಲ್ಲಾ ನಾನಾ ತಂತ್ರಗಳು… ಸದ್ದು ಬಂದ ಕಡೆ ಬಾಣ ಹೂಡಿ ಶತ್ರುವನ್ನು ಸದೆಬಡಿಯುವ, “ಶಬ್ದವೇಧಿ’ ವಿದ್ಯೆಯ ಬಗ್ಗೆ ನೀವೆಲ್ಲರೂ ಕೇಳಿಯೇ ಇರುತ್ತೀರಿ. ಅದನ್ನು ಹ್ಯಾಕರ್‌ಗಳೂ ಬಳಸುವ ಸಾಧ್ಯತೆಯನ್ನು ಸಂಶೋಧನೆಯೊಂದು ದೃಢಪಡಿಸಿದೆ. ಒಂದೇ ವ್ಯತ್ಯಾಸವೆಂದರೆ, ಇಲ್ಲಿ ಶಬ್ದ ಬಂದತ್ತ ಪಾಸ್‌ವರ್ಡ್‌ ಕದಿಯಲಾಗುತ್ತದೆ.

ಟೆಕ್ಸಾಸ್‌ ವಿಶ್ವವಿದ್ಯಾಲಯದ ಸಂಶೋಧಕರು ಈ ಆಶ್ಚರ್ಯಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಕೀಬೋರ್ಡ್‌ನಲ್ಲಿ ಯಾವುದೇ ಅಕ್ಷರದ ಬಟನ್‌ ಪ್ರಸ್‌ ಮಾಡಿದಾಗ ನಿರ್ದಿಷ್ಟ ತರಂಗಾಂತರದ ಶಬ್ದ ಉಂಟಾಗುತ್ತದೆ. ಮನುಷ್ಯರಿಗೆ ಕೇಳದ ಈ ಶಬ್ದವನ್ನು ಮೈಕ್ರೋಫೋನ್‌ ಸಹಾಯದಿಂದ ಗ್ರಹಿಸುವ ಮೂಲಕ ಹ್ಯಾಕರ್‌ಗಳು ಪಾಸ್‌ವರ್ಡನ್ನು ಸುಲಭವಾಗಿ ಮತ್ತು ಖಚಿತವಾಗಿ ಊಹಿಸಬಹುದು. ಅದನ್ನೇ ಟೆಕ್ಸಾಸ್‌ನ ಸಂಶೋಧಕರು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ. ಶಬ್ದವನ್ನು ಗ್ರಹಿಸಲು ಮೈಕ್ರೋಫೋನ್‌ ಚಿಪ್‌ಅನ್ನು ಕೀಬೋರ್ಡ್‌ ಒಳಗಡೆ ಕಾಣದಂತೆ ಅವರು ಅಳವಡಿಸಿದ್ದರು.

ಈ ತಂತ್ರದಲ್ಲಿ ಹ್ಯಾಕರ್‌ಗೆ ಎದುರಾಗುವ ಪ್ರಮುಖ ಸವಾಲು ಎಂದರೆ, ಕೀಬೋರ್ಡ್‌ಅನ್ನು ಇಟ್ಟಿರುವ ಮೇಲ್ಮೆ„ ಯಾವ ಮಟೀರಿಯಲ್‌ನದು ಎನ್ನುವುದನ್ನು ಪತ್ತೆ ಹಚ್ಚುವುದು. ಏಕೆಂದರೆ, ಪ್ಲಾಸ್ಟಿಕ್‌, ಕಬ್ಬಿಣ ಹಾಗೂ ಮರ ಮೂರೂ ವಿಧಗಳ ಮೇಲ್ಮೆ„ ಮೇಲಿಟ್ಟಾಗ ಕೀಬೋರ್ಡ್‌ ವಿಭಿನ್ನ ರೀತಿಯ ಶಬ್ದಗಳನ್ನು ಸೃಷ್ಟಿಸುತ್ತದೆ. ಅದನ್ನು ಪತ್ತೆ ಮಾಡಲು ಸಾಧ್ಯವಾದರೆ ಕಳ್ಳ ಹ್ಯಾಕರ್‌ನ ಕೆಲಸ ಸುಲಭವಾದಂತೆಯೇ ಲೆಕ್ಕ. ಇವೆಲ್ಲಾ ಅಂದುಕೊಂಡಷ್ಟು ಸುಲಭವಲ್ಲ ನಿಜ. ಆದರೆ, ಜನರು ಎಚ್ಚರಿಕೆಯನ್ನಂತೂ ಅಗತ್ಯವಾಗಿ ವಹಿಸಲೇಬೇಕು. 

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.