ಎ4 ಸೂಪರ್‌ ಸ್ಟಾರ್


Team Udayavani, Jan 8, 2018, 3:18 PM IST

08-23.jpg

ದಶಕದ ಹಿಂದಷ್ಟೇ ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆ ಪ್ರವೇಶಿಸಿದ್ದ ಜನಪ್ರಿಯ ಲಕ್ಷುರಿ ಕಾರುಗಳಲ್ಲಿ ಒಂದಾದ ಆಡಿ ಎ4 ಈಗಲೂ ಸೂಪರ್‌ ಹಿಟ್‌!  ಜರ್ಮನಿ ಮೂಲದ ವೋಲ್ಸ್‌ವ್ಯಾಗನ್‌ ಗ್ರೂಪ್‌ನ ಸದಸ್ಯ ಕಂಪನಿಯಾಗಿರುವ ಆಡಿ ಲಕ್ಷುರಿ ಕಾರುಗಳ ತಯಾರಿಕೆಯಲ್ಲಿ ವಿಶ್ವದಲ್ಲೇ ಅಗ್ರ ನಾಲ್ಕೈದು ಕಂಪನಿಗಳಲ್ಲಿ ಒಂದಾಗಿದೆ. ಇದೀಗ ತನ್ನ ಮೋಸ್ಟ್‌ ಪಾಪ್ಯುಲರ್‌ ಸೆಡಾನ್‌ ಸೆಗೆ¾ಂಟ್‌ನ ಎ4 ಕಾರಿನ 9ನೇ ತಲೆಮಾರಿನ
ಅರ್ಥಾತ್‌ ಜನರೇಷನ್‌ ಕಾರನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿರುವ ಆಡಿ ಕಂಪನಿ ಈ ಮೂಲಕ ಮಾರುಕಟ್ಟೆಯನ್ನೂ ವಿಸ್ತರಿಸಿಕೊಳ್ಳುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಎ4, ಮಂಗಳೂರು, ಬೆಂಗಳೂರು ಸೇರಿದಂತೆ ಭಾರತದ ಕೆಲವು ಪ್ರಮುಖ ನಗರ ಪ್ರದೇಶಗಳಲ್ಲಿ ಅಚ್ಚರಿ ಮೂಡಿಸುವಷ್ಟು ಗ್ರಾಹಕರನ್ನು ಸೃಷ್ಟಿಸಿಕೊಂಡಿದೆ. ಮರ್ಸಿಡೀಸ್‌ ಬೆಂಜ್‌ ಸಿ ಕ್ಲಾಸ್‌ ಹಾಗೂ ಬಿಎಂಡಬ್ಲ್ಯು 3ಸಿರೀಸ್‌ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲ ಕಾರು ಇದಾಗಿದ್ದು, ಇವುಗಳ ಜನಪ್ರಿಯತೆ ನಡುವೆಯೂ ಭಾರಿ ಮಾರುಕಟ್ಟೆ ಕಂಡುಕೊಂಡಿದೆ. ಕಾರಣ ಈ ಹಿಂದಿನ ಜನರೇಷನ್‌ಗಳಿಗಿಂತ ಉತ್ಕೃಷ್ಟ ಗುಣಮಟ್ಟ ಕಾಪಾಡಿಕೊಳ್ಳಲಾಗಿದೆ. ವಿನ್ಯಾಸ ಹಾಗೂ ತಂತ್ರಜಾnನ ಅಳವಡಿಕೆಯಲ್ಲಿ ಇತರೆ ಯಾವುದೇ ಕಾರಿಗೆ ಸವಾಲೊಡ್ಡುವಂತೆ ವಿನ್ಯಾಸಗೊಳಿಸಲಾಗಿದೆ. ಹೆಡ್‌ ಮತ್ತು ಟೈಲ್‌ ಲ್ಯಾಂಪ್‌ಗ್ಳ ವಿನ್ಯಾಸ ತತ್‌ಕ್ಷಣದಲ್ಲಿ ಬ್ರಾಂಡ್‌ ಆಡಿ ನೆನಪಿಸಿಬಿಡುತ್ತದೆ.

ಹೈಟೆಕ್‌ ವಿನ್ಯಾಸ
ಈ ಮೊದಲ ವೇರಿಯಂಟ್‌ಗಳಿಗಿಂತಲೂ ಅಂದಾಜು 120 ಕೆಜಿ ಭಾರ ಕಡಿಮೆ ಹೊಂದಿದ್ದರೂ ರೋಡ್‌ ಗ್ರಿಪ್‌ ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಧನ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ನೂತನ ಎ4 ಡ್ಯಾಶ್‌ಬೋರ್ಡ್‌ನ ವಿನ್ಯಾಸ ಚಾಲಕ ಸ್ನೇಹಿಯಾಗಿದೆ. ಏರ್‌ವೆಂಟ್ಸ್‌ನ ವಿನ್ಯಾಸ ಡ್ಯಾಶ್‌ಬೋರ್ಡ್‌ನ ಔಟ್‌ಲುಕ್‌ ಹೆಚ್ಚಿಸುವಂತಿದೆ. ವಚೂವಲ್‌ ಕಾಕ್‌ಪಿಟ್‌ ಇನ್‌ ಸ್ಟ್ರೆಮೆಂಟ್‌ ಕ್ಲಸ್ಟರ್‌, ಕನ್ಸಾಲ್‌ ಸ್ಟಾಕ್‌, 8.3 ಇಂಚಿನ ಎಂಎಂಐ ಡ್ಯಾಶ್‌ ಟಾಪ್‌ ಸ್ಕ್ರೀನ್‌, ಟಚ್‌ ಪ್ಯಾಡ್‌ ಎಂಎಂಐ ಕಂಟ್ರೋಲರ್‌ ಅತ್ಯಾಧುನಿಕ ತಂತ್ರಜಾnನಗಳಿಂದ ಕೂಡಿವೆ.

ಸುರಕ್ಷತೆಗೆ ಒತ್ತು
ಆಡಿ ಎಂದಿಗೂ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅತ್ಯಂತ ಗುಣಮಟ್ಟದ ಸುರಕ್ಷತಾ ವ್ಯವಸ್ಥೆಯನ್ನೇ 
ನೀಡುವುದರಿಂದಲೇ ಹೆಚ್ಚಿನ ಗ್ರಾಹಕರು ಒಮ್ಮೆ ಆಡಿ ಕಾರುಗಳಿಗೆ ಅಂಟಿಕೊಂಡರೆ ಮತ್ತೆ ತಿರುಗಿ ಬೇರೆ ಕಾರಿನತ್ತ ನೋಡುವುದಿಲ್ಲ.
ಎ4 ಕಾರಿನಲ್ಲಿ 8 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಉಳಿದಂತೆ ಲೇನ್‌ ಕೀಪಿಂಗ್‌ ಅಸಿಸ್ಟ್‌, ಬ್ಲೆ„ಂಡ್‌ ಸ್ಪಾಟ್‌ ಮಾನಿಟರಿಂಗ್‌, ರೇರ್‌
ಕ್ರಾಸ್‌ ಮೆಸ್‌ ಅಲರ್ಟ್‌, ಆಕ್ರೀವ್‌ ಕ್ರೂಸ್‌ ಕಂಟ್ರೋಲ್‌ಗ‌ಳನ್ನೂ ಅಳವಡಿಸಲಾಗಿದೆ.

ಗುಣಮಟ್ಟದ ಎಂಜಿನ್‌
1.4ಲೀಟರ್‌ ಟಿಎಫ್ಎಸ್‌ಐ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಎ 4 ಸಾಮರ್ಥ್ಯ ಅಸಾಮಾನ್ಯ. 150 ಅಶ್ವಶಕ್ತಿ ಸಾಮರ್ಥ್ಯ ಹೊಂದಿರುವ ಎ 4, 8.5 ಸೆಕೆಂಡ್‌ಗಳಲ್ಲಿ 0-100 ಕಿ.ಮೀ. ವೇಗ ಕಂಡುಕೊಳ್ಳಲಿದೆ. 210 ಕಿ.ಮೀ. ಗರಿಷ್ಠ ವೇಗ ಇದರದ್ದಾಗಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ಗೆ 17 ಕಿ.ಮೀ. ಮೈಲೇಜ್‌ ಹೊಂದಿದೆ. 

17 ಕಿ.ಮೀ. ಪ್ರತಿ ಲೀಟರ್‌ಗೆ ಮೈಲೇಜ್‌
54 ಲೀಟರ್‌ ಇಂಧನ ಶೇಖರಣೆ ಗರಿಷ್ಠ ಮಿತಿ 

ಶೋ ರೂಂ ಬೆಲೆ: 39-45 ಲಕ್ಷ ರೂ.

ಉದ್ದ 4701 ಮಿ.ಮೀ./ ಅಗಲ 1826 ಮಿ.ಮೀ
 165 ಮಿ.ಮೀ. ಗ್ರೌಂಡ್‌ ಕ್ಲಿಯರೆನ್ಸ್‌
 ಬೂಟ್‌ ಸ್ಪೇಸ್‌ 480 ಲೀಟರ್‌
ಕಾರಿನ ಭಾರ 1595 ಕಿಲೋ ಗ್ರಾಂ.

ಅಗ್ನಿಹೋತ್ರಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.