ಪರಕಾಸು ಪ್ರವೇಶ! ಬ್ಯಾಂಕ್‌ ಖಾತೆಯಲ್ಲಿ ಯಾರದೋ ದುಡ್ಡು!


Team Udayavani, Oct 7, 2019, 4:43 AM IST

hhh

ಅಚಾನಕ್ಕಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ಲಕ್ಷಾಂತರ ಮೊತ್ತ ಜಮೆಯಾಗಿರುವ ಸಂದೇಶ ನಿಮ್ಮ ಮೊಬೈಲಿಗೆ ಬರುತ್ತದೆ. ಯಾರಿಗೋ ಕಳಿಸಬೇಕಿದ್ದ ಮೊತ್ತ, ತಪ್ಪಿನಿಂದಾಗಿ ನಿಮ್ಮ ಖಾತೆಗೆ ಬಂದಿರುತ್ತದೆ. ಅಷ್ಟು ಮಾತ್ರಕ್ಕೆ ಲಾಟರಿ ಹೊಡೆಯಿತೆಂದು ತಿಳಿದು ಖಾತೆದಾರರು ಆ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳಬಾರದು. ಹಾಗೊಂದು ವೇಳೆ ಮಾಡಿದಲ್ಲಿ ಮುಂದೊಮ್ಮೆ ಪೊಲೀಸರ ಅತಿಥಿ ಆಗಬೇಕಾಗುತ್ತದೆ!

ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ನಿಮಗೆ ಸೇರಬೇಕಾದ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಾಗೆಯೇ ನೀವು ಕೊಡಬೇಕಾದ ಹಣ ನಿಮ್ಮ ಖಾತೆಯಿಂದ ಡೆಬಿಟ್‌ ಆಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕಿನವರು ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ ಮತ್ತು ತೀವ್ರ ನಿಗಾ ಇಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಎಡವಿದರೂ ಬ್ಯಾಂಕುಗಳು ಭಾರೀ ದಂಡ ತೆರಬೇಕಾಗುತ್ತದೆ. ಇದು ಸಿಬ್ಬಂದಿಗಳ ತಪ್ಪಿನಿಂದಾಗಿ ನಡೆದರೆ, ಸಂಬಂಧಪಟ್ಟವರಿಂದ ವಸೂಲು ಮಾಡಲು ಸಾಧ್ಯವಾಗದಿದ್ದರೆ, ಹಣ ಕಳೆದುಕೊಂಡವನಿಗೆ ಪರಿಹಾರ ನೀಡಿ, ನಂತರ ಅದನ್ನು ತಪ್ಪು ಮಾಡಿದ ಸಿಬ್ಬಂದಿಯಿಂದ ವಸೂಲು ಮಾಡಿಕೊಳ್ಳುತ್ತಾರೆ. ಹೀಗಾಗಿಯೇ, ಸಿಬ್ಬಂದಿ ಕೂಡಾ ಅತಿ ಎಚ್ಚರಿಕೆಯಿಂದ ಇರುತ್ತಾರೆ. ಆದರೂ, ಎಷ್ಟೇ ಜಾಗರೂಕತೆಯಿಂದ ಇದ್ದರೂ ತಪ್ಪು ಮಾಡುವುದು ಮಾನವನ ಸಹಜ ಗುಣ.ಹಾಗಾಗಿ, ತಪ್ಪುಗಳು ಅಗುತ್ತಲೇ ಇರುತ್ತವೆ.

ಯಾವ ರೀತಿಯ ತಪ್ಪುಗಳು?
ಗ್ರಾಹಕರು ಚಲನ್‌ಗಳಲ್ಲಿ ಮತ್ತು ಇನ್ನಿತರ ದಾಖಲೆಗಳಲ್ಲಿ ತಪ್ಪು ಖಾತೆ ನಂಬರ್‌ಗಳನ್ನು ನಮೂದಿಸುವುದರಿಂದ, ಸಲ್ಲಬೇಕಾದ ಗ್ರಾಹಕನಿಗೆ ಹಣ ಸಿಗದೇ ತಪ್ಪು ಗ್ರಾಹಕನಿಗೆ (wrong customer) ಸಂದಾಯವಾಗುತ್ತದೆ. ಈ ತಪ್ಪು ಗ್ರಾಹಕರಿಂದ ಅಗುತ್ತದೆ ಮತ್ತು ಬ್ಯಾಂಕ್‌ ಸಿಬ್ಬಂದಿಗಳಿಂದಲೂ ಅಗುತ್ತದೆ. ಬ್ಯಾಂಕುಗಳಲ್ಲಿ ಖಾತೆ ನಂಬರ್‌ ಮತ್ತು ಹೆಸರು ಟ್ಯಾಲಿಯಾಗಬೇಕು. ಆದರೆ, ಬ್ಯಾಂಕಿನ ಕೆಲವು ವ್ಯವಹಾರಗಳಲ್ಲಿ ಮುಖ್ಯವಾಗಿ RTGS ಮತ್ತು NEFTಗಳಲ್ಲಿ ಕೇವಲ ಖಾತೆ ನಂಬರ್‌ಗಳನ್ನು ಗುರುತಿಸಿ ಕ್ರೆಡಿಟ್‌ ನೀಡುವುದರಿಂದ ಅನಾಹುತಗಳು ಆಗುವುದು ಹೆಚ್ಚು.

ಹಲವು ಸಂದರ್ಭಗಳಲ್ಲಿ ನಮೂದಿಸುವ ಹಣದ ಮೊತ್ತವು ತಪ್ಪಾಗಿ ಅವಾಂತರವಾಗುತ್ತದೆ. ಎಷ್ಟೋ ಬಾರಿ ಮೊತ್ತದಲ್ಲಿ ಇರುವ ಜೀರೋಗಳು ಹೆಚ್ಚಾಗಿ ಅಥವಾ ಕಡಿಮೆಯಾಗಿ ಗೊಂದಲವಾಗುತ್ತದೆ. ಒಂದು ಸೊನ್ನೆ ಹೆಚ್ಚುಕಮ್ಮಿಯಾದರೂ ಅದರಿಂದಾಗುವ ಪ್ರಮಾದ ಗಂಭೀರವಾದದ್ದು. ಹಾಗೆಯೇ ಬರೆಯುವಾಗ ಮತ್ತು ಗಣಕಯಂತ್ರದಲ್ಲಿ ಅಂಕೆಗಳನ್ನು ಪಂಚ್‌ ಮಾಡುವಾಗ ಅಂಕೆಗಳು ಜಂಬ್ಲಿಂಗ್‌ ಆಗಿ ಎಡವಟ್ಟುಗಳಾದ ಪ್ರಮೇಯಗಳು ಸಾಕಷ್ಟಿವೆ. ಈ ತಪ್ಪುಗಳು ಹೆಚ್ಚಾಗಿ ಗೊತ್ತಾಗುವುದು ಪಾಸ್‌ಬುಕ್‌ ಅಥವಾ ಅಕೌಂಟ್‌ ಸ್ಟೇಟ್‌ಮೆಂಟ್‌ ನೋಡಿದಾಗಲೇ.

ಗ್ರಾಹಕರೂ ಜವಾಬ್ದಾರರು
ಇತ್ತೀಚಿನ ದಿನಗಳಲ್ಲಿ, ಬ್ಯಾಂಕ್‌ ವ್ಯವಹಾರಗಳ ಸಂಕ್ಷಿಪ್ತ ಮಾಹಿತಿ ಎಸ್‌ಎಮ್‌ಎಸ್‌ ಸಂದೇಶದ ಮೂಲಕ ಬರುತ್ತಿದೆ. ಸಾಮಾನ್ಯವಾಗಿ ಖಾತೆಗೆ ಹೆಚ್ಚಿಗೆ ಡೆಬಿಟ್‌ ಆದರೆ, ನಿರೀಕ್ಷೆಗಿಂತ ಕಡಿಮೆ ಕ್ರೆಡಿಟ್‌ ಆದರೆ, ಅಥವಾ ಅನಿರೀಕ್ಷಿತ ಡೆಬಿಟ್‌ ಅಥವಾ ಕ್ರೆಡಿಟ್‌ ಆದರೆ, ಕೂಡಲೇ ಗ್ರಾಹಕರು ಬ್ಯಾಂಕುಗಳನ್ನು ಸಂಪರ್ಕಿಸಿ ಸಮಜಾಯಿಷಿ ಪಡೆಯುತ್ತಾರೆ. ಇನ್ಯಾವಾಗಲಾದರೂ ಬ್ಯಾಂಕಿಗೆ ಭೇಟಿ ನೀಡಿದಾಗ ವಿಚಾರಿಸಿದರಾಯಿತು ಎನ್ನುವವರೂ ಇದ್ದಾರೆ. ಅಂಥವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಮೊತ್ತವು ಗಮನಾರ್ಹವಾಗಿದ್ದರೆ ಮಾತ್ರ ತುರ್ತಾಗಿ ಸಂಪರ್ಕಿಸುತ್ತಾರೆ. ಅಕಸ್ಮಾತ್‌ ಹೆಚ್ಚಿಗೆ ಕ್ರೆಡಿಟ್‌ ಬಂದರೆ, ಬಹುತೇಕ ಗ್ರಾಹಕರು ಮಾಹಿತಿ ದೊರೆತ ತಕ್ಷಣ ಪ್ರಾಮಾಣಿಕವಾಗಿ ಬ್ಯಾಂಕಿನ ಗಮನಕ್ಕೆ ತರುತ್ತಾರೆ. ಕೆಲವರು ಬ್ಯಾಂಕುಗಳ ತಪ್ಪನ್ನು ದುರುಪಯೋಗ ಮಾಡಿಕೊಳ್ಳುವವರೂ ಇರುತ್ತಾರೆ. ಗ್ರಾಹಕರು ತಪ್ಪು ಡೆಬಿಟ್‌ ಮತ್ತು ಕ್ರೆಡಿಟ್‌ಗಳ ಬಗೆಗೆ ತಮಗೆ ಮಾಹಿತಿ ಇಲ್ಲ ಎನ್ನುವ ನೆವ (excuse) ಹೇಳುವಂತಿಲ್ಲ.

ಗ್ರಾಹಕರಿಗೆ ನೀಡುವ ಪಾಸ್‌ಬುಕ್‌ ಮತ್ತು ಸ್ಟೇಟ್‌ಮೆಂಟ್‌ಗಳ ಪುಟದ ಕೊನೆಯಲ್ಲಿ ಗ್ರಾಹಕರು ಇಂತಿಷ್ಟು ದಿನಗಳೊಳಗಾಗಿ ಪ್ರತಿಯೊಂದು ಎಂಟ್ರಿಗಳನ್ನು ಪರಾಮರ್ಶಿಸಬೇಕು ಮತ್ತು ಲೋಪದೋಷಗಳನ್ನು ಬ್ಯಾಂಕುಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎನ್ನುವ ನಿಬಂಧನೆ ಇರುತ್ತದೆ. ಈ ಅವಧಿಯ ನಂತರದ ದಿನಗಳಲ್ಲಿ ಬಂದರೆ ಸರಿಪಡಿಸುವುದು ಸ್ವಲ್ಪ ಕಷ್ಟ. ಇತ್ತೀಚಿಗೆ ಬ್ಯಾಂಕುಗಳು ಎಸ್‌.ಎಮ್‌.ಎಸ್‌ ಸಂದೇಶದ ಮೂಲಕ ತಿಂಗಳಾಂತ್ಯದಲ್ಲಿ ಖಾತೆಯಲ್ಲಿ ಇರುವ ಬ್ಯಾಲೆನ್ಸನ್ನು ಗ್ರಾಹಕನಿಗೆ ತಿಳಿಸುತ್ತಾರೆ. ಇದು ಗ್ರಾಹಕ ತನ್ನ ಖಾತೆಯಲ್ಲಿನ ವ್ಯವಹಾರದಲ್ಲಿನ ಲೋಪ ದೋಷಗಳನ್ನು ತಿಳಿಯಲು ಸಹಕಾರಿ.

ಬ್ಯಾಂಕಿನವರಿಗೆ ಸುದ್ದಿ ಮುಟ್ಟಿಸಿ
ಕೆಲವು ಬಾರಿ ಗ್ರಾಹಕರಿಗೆ ತಮಗೆ ಸಂಬಂಧಿಸಿಲ್ಲದ ಕ್ರೆಡಿಟ್‌ಗಳು ಖಾತೆಗೆ ಬರುತ್ತವೆ. ಅದರ ಹಿಂದಿನ ಕಾರಣ ಏನೇ ಇರಲಿ, ಗ್ರಾಹಕನು ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ಅದರ ವಾರಸುದಾರನಾಗಿರುವುದಿಲ್ಲ. ಒಂದು ಸಮಯದ ಪರಿಮಿತಿಯೊಳಗೆ ಇದನ್ನು ಸಂಬಂಧಪಟ್ಟ ಬ್ಯಾಂಕ್‌ ಶಾಖೆಗೆ ಗ್ರಾಹಕನು ತಿಳಿಸಬೇಕಾಗುತ್ತದೆ. ತಪ್ಪಾಗಿ ನೀಡಿದ ಕ್ರೆಡಿಟ್‌ಅನ್ನು ಸಂಪೂರ್ಣವಾಗಿ ಹಿಂತಿರುಗಿ ಪಡೆಯುವ ಎಲ್ಲಾ ಹಕ್ಕು ಬ್ಯಾಂಕಿಗೆ ಇರುತ್ತದೆ. ಈ ನಿಟ್ಟಿನಲ್ಲಿ ಕಾನೂನು ಸಹಿತ ಎಲ್ಲಾ ಕ್ರಮಗಳನ್ನು ಬ್ಯಾಂಕುಗಳು ತೆಗೆದುಕೊಳ್ಳಬಹುದು. ಒಮ್ಮೊಮ್ಮೆ ದೊಡ್ಡ ಮೊತ್ತದ ಹಣ ಬಂದಿದ್ದು. ಇದರ ಬಗೆಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡದಿದ್ದರೆ, ಈ ವಿವರ ಆದಾಯ ಕರ ಇಲಾಖೆಗಂತೂ ಗೊತ್ತಾಗುತ್ತದೆ. ಅವರು, ಈ ಮೊತ್ತವನ್ನು ಅಘೋಷಿತ ಆದಾಯವೆಂದು ತೆರಿಗೆ ಹಾಕಬಹುದು ಮತ್ತು ಅದಾಯದ ಮೂಲದ ಬಗೆಗೆ ಪ್ರಶ್ನಿಸಬಹುದು. ಇಂಥ ಅನಧಿಕೃತ ಕ್ರೆಡಿಟ್‌ ಬಂದಾಗ, ಅದನ್ನು ಬ್ಯಾಂಕಿಗೆ ಲಿಖೀತವಾಗಿ ತಿಳಿಸಿ ಮುಂದೆ ಬರಬಹುದಾದ ತೆರಿಗೆ ಸಂಬಂಧದ ಸಂಕಷ್ಟಗಳಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ಆ ಮೊತ್ತ ನಿಮ್ಮದಲ್ಲದ್ದರಿಂದ ಅದನ್ನು ಅಕಸ್ಮಾತ್‌ ಆಗಿ ಸ್ವಂತ ಖರ್ಚಿಗೆ ಬಳಸಿದರೆ, ಅದನ್ನು ಹಿಂತಿರುಗಿಸಬೇಕಾಗುತ್ತದೆ. ಹಿಂತಿರುಗಿಸಲು ವಿಫ‌ಲರಾದರೆ ಬ್ಯಾಂಕಿನವರು ಕಾನೂನಿನ ಕ್ರಮವನ್ನು ಜರುಗಿಸುತ್ತಾರೆ.

ಹಣ ಕಳೆದರೆ ಕಾನೂನು ಕ್ರಮ
ಇತ್ತೀಚೆಗೆ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆ ಅಡಿಯಲ್ಲಿ (Mಕಔಅಈ) ಒಂದು ಯೋಜನೆಯನ್ನು ಪೂರ್ಣಗೊಳಿಸಲು 40 ಲಕ್ಷ ಮಂಜೂರಾಗಿತ್ತು. ಮೂಲ ಫ‌ಲಾನುಭವಿ ತನ್ನ ಖಾತೆ ನಂಬರ್‌ ನಮೂದಿಸುವ ಕಡೆ ಮಾಡಿದ ಸಣ್ಣ ತಪ್ಪಿನಿಂದ ಹಣ ಬೇರೆಯೊಬ್ಬರ ಖಾತೆಗೆ ಜಮಾ ಆಗಿತ್ತು. ಅವರು ತಮ್ಮದಲ್ಲದ ಹಣ ತಮ್ಮ ಖಾತೆಗೆ ಬಂದಿರುವುದನ್ನು ಬ್ಯಾಂಕಿನ ಗಮನಕ್ಕೆ ತರಬೇಕಾಗಿತ್ತು. ಅದರೆ, ಅವರು ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ಸ್ವಂತ ಉದ್ದೇಶಕ್ಕೆ ನೀರಿನಂತೆ ಖರ್ಚು ಮಾಡಿದ್ದರು. ಆ ಹಣದಲ್ಲಿ ಮಗಳ ಮದುವೆ ಮಾಡಿದ್ದರು ಮತ್ತು ಅಸ್ತಿಯನ್ನೂ ಖರೀದಿಸಿದ್ದರು. ಈ ಅಚಾತುರ್ಯ ಗೊತ್ತಾದಾಗ ಅಷ್ಟೂ ಹಣವನ್ನು ಮರಳಿಸುವ ಮುಚ್ಚಳಿಕೆ ಬರೆದುಕೊಡಬೇಕಾಯಿತು. ಆದರೆ ದೊಡ್ಡ ಮೊತ್ತವಾಗಿದ್ದಿದ್ದರಿಂದ ಅವರಿಗೆ ಸಕಾಲದಲ್ಲಿ ಹಣವನ್ನು ಮರಳಿಸಲಾಗಲಿಲ್ಲ. ಕಡೆಗೆ ಅದು ಪೊಲೀಸ್‌ ಪ್ರಕರಣವಾಗಿ ಪರಿಗಣನೆಯಾಗಿ, ಅವರಿಗೆ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿತು. ಈ ಪ್ರಕರಣದಲ್ಲಿ ಬ್ಯಾಂಕ್‌ ಸಿಬ್ಬಂದಿಗಳ ನಿರ್ಲಕ್ಷ್ಯವನ್ನೂ ಗಣನೆಗೆ ತೆಗೆದುಕೊಂಡು ಅವರಿಗೂ ಶಿಕ್ಷೆ ನೀಡಲಾಯಿತು ಎನ್ನುವುದು ಬೇರೆಮಾತು.

ಗ್ರಾಹಕ ವಿಚಲಿತಗೊಳ್ಳಬೇಕಾಗಿಲ್ಲ
ಪ್ರತಿಯೊಬ್ಬ ಬ್ಯಾಂಕ್‌ ಗ್ರಾಹಕನೂ ತಮ್ಮ ಬ್ಯಾಂಕಿಂಗ್‌ ವ್ಯವಹಾರದಲ್ಲಿ ಒಮ್ಮೊಮ್ಮೆ ತಮ್ಮ ಖಾತೆಯಲ್ಲಿ ಹೆಚ್ಚು ಕ್ರೆಡಿಟ್‌- ಡೆಬಿಟ್‌, ಕಡಿಮೆ ಕ್ರೆಡಿಟ್‌- ಡೆಬಿಟ್‌, ಅನಿರೀಕ್ಷಿತವಾಗಿ ಹೆಚ್ಚು ಮೊತ್ತದ ಡೆಬಿಟ್‌- ಕ್ರೆಡಿಟ್‌ ಮುಂತಾದವುಗಳನ್ನು ಬೇರೆ ಬೇರೆ ರೂಪದಲ್ಲಿ ನೋಡಬೇಕಾಗುತ್ತದೆ ಮತ್ತು ಇಂಥ ಘಟನೆಗಳು ಅನಿವಾರ್ಯವೂ ಹೌದು. ಗ್ರಾಹಕನ ತಪ್ಪು ಇಲ್ಲದಿದ್ದರೆ, ಗ್ರಾಹಕ ವಿಚಲಿತಗೊಳ್ಳಬೇಕಾಗಿಲ್ಲ. ಬ್ಯಾಂಕಿನ ತಪ್ಪಿದ್ದರೆ ಬ್ಯಾಂಕ್‌ ಗ್ರಾಹಕನ ರಕ್ಷಣೆಗೆ ನಿಲ್ಲುತ್ತದೆ. ಆದರೂ ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಯಲ್ಲಿನ ವ್ಯವಹಾರಗಳನ್ನು ನಿರಂತರವಾಗಿ ಪರಿಶೀಲಿಸುತ್ತಿರಬೇಕು.

– ರಮಾನಂದ ಶರ್ಮಾ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.