ಶಭಾಷ್‌ ಸುಭಾಷ್‌ : ಬರಡು ನೆಲದಲ್ಲಿ ಬಂಗಾರದ ಬೆಳೆ


Team Udayavani, May 30, 2017, 1:32 AM IST

Isiri-Baale.jpg

ಬರಡು  ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದು ಪ್ರತಿವರ್ಷ ಲಕ್ಷ ಲಕ್ಷ ಹಣ ಗಳಿಸುವ ಮೂಲಕ ಇನ್ನಿತರ ರೈತರಿಗೆ ಮಾದರಿಯಾದವರು ಬಸವನಬಾಗೇವಾಡಿ ಪಟ್ಟಣದ ನಿವಾಸಿ ಸುಭಾಸ ಶಿವಪ್ಪ ಪೂಜಾರಿ. ಇವರಿಗೆ ಬರದ ಬಿಸಿ ತಟ್ಟೇ ಇಲ್ಲ. ಕಾರಣ, ಎರಡು ಎಕರೆಯ ತುಂಬಾ ಸಮ್ಮಿಶ್ರ ಬೆಳೆ ಇದೆ. ಬಾಳೆ, ನಿಂಬೆ, ಹೀರೆ, ಸೌತೆ ಹೀಗೆ ಒಂದಾ, ಎರಡಾ ಇವರಿಗೆ ಆದಾಯ ಮೂಲಗಳು?

1 ಎಕರೆ 20 ಗುಂಟೆಯಲ್ಲಿ ಬಾಳೆ, ಲಿಂಬೆ ಗಿಡಗಳ ಮಧ್ಯ ಭಾಗದಲ್ಲಿ ಹೀರೆ, ಸೌತೆ, ಬದನೆ, ಟೊಮೆಟೊ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಇದರಿಂದ ವರ್ಷದ ಆದಾಯ 4ಲಕ್ಷ ದಾಟುತ್ತದೆ. ಕೆಲವರು ನಿಂಬೆ ನಾಟಿ ಮಾಡಿ ಮೂರು ವರ್ಷ ಕಾಯುತ್ತಾರೆ. ಆದರೆ ಸುಭಾಸ ಕಾಯೋದು ಏಕೆ ಅಂತ ಬಾಳೆ ನಾಟಿ ಮಾಡಿದರು. ಹೀಗಾಗಿ ವರ್ಷದಲ್ಲೇ ಬಂಪರ್‌ ಬೆಳೆ ತೆಗೆದಿದ್ದಾರೆ.

ಬೆಳೆಯೋದು ಹೀಗೆ
10 + 10 ಅಡಿಗೆ 1ರಂತೆ ಬಾಳೆ ಗಿಡವನ್ನು, 20+20 ಅಡಿಗೆ 1 ರಂತೆ ಲಿಂಬೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಇದರ ಮಧ್ಯದಲ್ಲಿ ವಿವಿಧ  ತರಕಾರಿಗಳನ್ನು ಬೆಳೆಯುತ್ತಿದ್ದಾರೆ.  ಇದರ ಜೊತೆಯಲ್ಲೇ ತಮ್ಮ 2 ಎಕರೆ ಭೂಮಿಯ ಸುತ್ತಲೂ 15+15 ಅಡಿಗೆ ಒಂದು ತೆಂಗಿನ ಮರವನ್ನು ಬೆಳೆಸಿದ್ದಾರೆ. ಇದರ ಮಧ್ಯ ಭಾಗದಲ್ಲಿ ಪೇರಲೆ, ಚಿಕ್ಕು, ಪಪ್ಪಾಯಿ ಹೀಗೆ ಇನ್ನಿತರ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದಾರೆ. 1 ಎಕರೆ 20 ಗುಂಟೆಯಲ್ಲಿ 650 ಬಾಳೆ,  170ನಿಂಬೆ ಗಿಡಗಳಿವೆ.  ಜಮೀನಿನ ಸುತ್ತಲೂ 160 ತೆಂಗಿನ ಮರಗಳಿವೆ. 

ಮೊದಲು ಈ ಭೂಮಿ ಬರಿ ಕಲ್ಲು ಬಂಡೆಯಾಗಿತ್ತು. ಒಂದು ವರ್ಷದ ಕಾಲ ಹದ ಮಾಡಿ, ಕಲ್ಲುಗಳನ್ನು ಬೇರೆ ಕಡೆ ಹಾಕಿ, ಇದಕ್ಕೆ ಕೆರೆಯ ಕಪ್ಪು ಮಣ್ಣನ್ನು ಹಾಕಿದರು. ಆಮೇಲೆ  ಬಾಳೆ, ಲಿಂಬೆ, ತೆಂಗು ಗಿಡಗಳನ್ನು ನೆಡಲು ಮುಂದಾದವರು. ‘ಮೊದಲು ಬಾಳೆ, ಲಿಂಬೆ, ತೆಂಗನ್ನು ನಾಟಿ ಮಾಡಲು 50 ರಿಂದ 60 ಸಾವಿರ ಖರ್ಚಾಗಿದೆ. ಒಂದು ಕೊಳವೆ ಬಾವಿಯಿಂದ ಹನಿ ನೀರಾವರಿ ಮಾಡಿದ್ದೇನೆ. ಇದರಿಂದ ಬಿರು ಬೇಸಿಗೆಯಲ್ಲಿ ಕೂಡಾ ನೀರಿನ ಸಮಸ್ಯೆ ಉದ್ಬವಿಸುವುದಿಲ್ಲ’ ಎನ್ನುತ್ತಾರೆ ಸುಭಾಸ್‌.  

ಬೆಳೆಗಳಿಗೆ ರಾಸಾಯನಿಕ ಗೊಬ್ಬರ  ಬಳಕೆ ಸಂಪೂರ್ಣ ನಿಷೇಧ. ಪ್ರತಿವರ್ಷ ದನದ (ತಿಪ್ಪೆ) ಗೊಬ್ಬರ ಮತ್ತು ಮೇಕೆ ಗೊಬ್ಬರ ಹಾಕುತ್ತಾರೆ.  ಬೆಳೆದ ತರಕಾರಿಯನ್ನು ಬಸವನ ಬಾಗೇವಾಡಿಯಲ್ಲಿ ನಡೆಯುವ ಸೋಮವಾರ – ಗುರುವಾರದ ಸಂತೆಯಲ್ಲಿ ಹಾಕುತ್ತಾರೆ. ವಾರಕ್ಕೆ 4-5ಸಾವಿರ ಆದಾಯ ಗ್ಯಾರಂಟಿ. ಇದರಿಂದ ಆಳುಗಳ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ. 

– ಪ್ರಕಾಶ.ಜಿ. ಬೆಣ್ಣೂರ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.