ಸಾಲ ಮಾಡ್ತಿದ್ದೀರಾ? ಅಟೆನ್ಸ್ ನ್‌ ಪ್ಲೀಸ್‌….!


Team Udayavani, Oct 15, 2018, 6:00 AM IST

13.jpg

ಬ್ಯಾಂಕುಗಳು ಮನಬಂದಂತೆ ಬಡ್ಡಿದರವನ್ನು ನಿಗದಿಗೊಳಿಸುವಂತಿಲ್ಲ. ರಿಸರ್ವ್‌ ಬ್ಯಾಂಕ್‌ನ ಹದ್ದಿನ ಕಣ್ಣು ಸದಾ ನೋಡುತ್ತಿರುತ್ತದೆ. ಕೆಲವು ಸರ್ಕಾರದ ಯೋಜನೆಗಳ ಹೊರತಾಗಿ ಮೂಲ ದರಕ್ಕಿಂತ ಕಡಿಮೆದರದಲ್ಲಿ ಸಾಲ ಕೊಡುವಂತಿಲ್ಲ. ಹಾಗೆಯೇ ಮಾರುಕಟ್ಟೆ ಆಧರಿತ ದರಕ್ಕಿಂತ ಹೆಚ್ಚು ದರವನ್ನು ಠೇವಣಿಗೆ ಕೊಡುವಂತಿಲ್ಲ. 

ಸಾಲ ನೀಡಿಕೆಯ ಮೇಲಿನ  ಸರಾಸರಿ ಬಡ್ಡಿ ಮತ್ತು ಠೇವಣಿ ಮೇಲಿನ ಸರಾಸರಿ ಬಡ್ಡಿಯ ನಡುವಿನ ವ್ಯತ್ಯಾಸವನ್ನು  ಬ್ಯಾಂಕಿನ ಪರಿಭಾಷೆಯಲ್ಲಿ  ನೆಟ್‌ ಮಾರ್ಜಿನ್‌ ಎನ್ನುತ್ತಾರೆ.  ಇದು ಹೆಚ್ಚಾದರೆ ಬ್ಯಾಂಕಿನ  ಲಾಭ ಹೆಚ್ಚಾಗುತ್ತದೆ. ಕಡಿಮೆಯಾದರೆ ಲಾಭದ ಮೇಲೆ ಒತ್ತಡ ಬೀಳುತ್ತದೆ. ಬ್ಯಾಂಕಿನ  ನಿರ್ವಹಣಾ ವೆಚ್ಚವನ್ನು  ಬ್ಯಾಂಕುಗಳು ಈ ಮಾರ್ಜಿನ್‌ ನಿಂದಲೇ ಸರಿದೂಗಿಸುವುದು.   ಬ್ಯಾಂಕುಗಳ ನಿರ್ವಹಣೆಗೆ ಸರ್ಕಾರದಿಂದ ಯಾವುದೇ ಅನುದಾನ  ದೊರಕುವುದಿಲ್ಲ. ರಿಸರ್ವ್‌  ಬ್ಯಾಂಕ್‌ ಲೆಕ್ಕಾಚಾರದ  ಪ್ರಕಾರ ಕನಿಷ್ಠ ಶೇ. 3ರಷ್ಟು ಮಾರ್ಜಿನ್‌  ಅನಿವಾರ್ಯ. ಠೇವಣಿಗಾಗಲೀ ಅಥವಾ ಸಾಲಕ್ಕಾಗಲೀ ಬ್ಯಾಂಕುಗಳು ತಮ್ಮ ಬಡ್ಡಿದರವನ್ನು ನಿಗದಿ ಮಾಡುವಾಗ ಈ  ಅಂಶವನ್ನು   ಸದಾ ಗಮನದಲ್ಲಿ ಇಟ್ಟುಕೊಳ್ಳುತ್ತವೆ. 

 ಬಡ್ಡಿಯಲ್ಲಿ ಎರಡು ವಿಧ
ಬ್ಯಾಂಕ್‌ ಬಡ್ಡಿದರದ ಏರಿಳಿತದ ಲಾಭ ಗ್ರಾಹಕರಿಗೆ ದೊರಕುವಂತೆ, ಬದಲಾಗುವ ಬಡ್ಡಿದರ(floating rate of interest) ಚಾಲ್ತಿಯಲ್ಲಿ ಬಂದಿದೆ. ಇದರ ಪ್ರಕಾರ ಬ್ಯಾಂಕಿನ ಮೂಲ ದರ ( base rate)  ಬದಲಾದಂತೆ, ಸಾಲದ ಮೇಲಿನ ಬಡ್ಡಿದರವೂ  ಏರಿಳಿತ  ಕಾಣುತ್ತದೆ.  ಠೇವಣಿ ಮೇಲಿನ ಬಡ್ಡಿದರವೂ ಸಾಲದ ಮೇಲಿನ ಬಡ್ಡಿದರದಂತೆ  ಮುಖ್ಯವಾಗಿ  ಬೇಡಿಕೆ ಮತ್ತು  ಪೂರೈಕೆ ಮೇಲೆ ಅವಲಂಭಿತವಾಗಿರುತ್ತದೆ. ಹಾಗೆಯೇ ಇದು  ಬ್ಯಾಂಕ್‌ ತಡೆದುಕೊಳ್ಳಬಹುದಾದ cost of funds  ಮೇಲೂ ಇರುತ್ತದೆ. ಸಾಲದ ಬೇಡಿಕೆ  ಹೆಚ್ಚಾದಾಗ,   loanable funds ಬೇಕಾದಾಗ,  ಬ್ಯಾಂಕುಗಳು ಠೇವಣಿ ಮೇಲಿನ ಬಡ್ಡಿ ದರ ಏರಿಸಿ   funds mobilise ಮಾಡುತ್ತವೆ. ಸಾಲದ ಬೇಡಿಕೆ ಕಡಿಮೆಯಾದಾಗ, ಬ್ಯಾಂಕುಗಳಿಗೆ ಹೆಚ್ಚಿನ   funds ಅವಶ್ಯಕತೆ ಇರುವುದಿಲ್ಲ. ಅಂತೆಯೇ ಬ್ಯಾಂಕುಗಳು ಠೇವಣಿ ಮೇಲಿನ ಬಡ್ಡಿದರವನ್ನು ಕೊಂಚ ತಗ್ಗಿಸುತ್ತವೆ. ಸ್ಪರ್ದಾತ್ಮಕ ದರದ ಮೂಲಕ, ಹೆಚ್ಚು ಠೇವಣಿಯನ್ನು ಆಕರ್ಷಿಸುವದು  ಮತ್ತು   cost of funds ಅನ್ನು  ಲೆಕ್ಕಾಚಾರದೊಳಗೆ ಇಡುವುದು,  ಈ ಎರಡು ಅಂಶಗಳು ಬ್ಯಾಂಕಿನಲ್ಲಿ  ಠೇವಣಿ ಮೇಲಿನ ಬಡ್ಡಿದರವನ್ನು ನಿರ್ದೇಶಿಸುತ್ತವೆ.

ಹೇಗೆಂದರೆ ಹಾಗೇ ನಿಗದಿ ಇಲ್ಲ
ಬ್ಯಾಂಕುಗಳು ಮನಬಂದಂತೆ ಬಡ್ಡಿದರವನ್ನು ನಿಗದಿಗೊಳಿಸುವಂತಿಲ್ಲ. ರಿಸರ್ವ್‌ ಬ್ಯಾಂಕ್‌ನ ಹದ್ದಿನ ಕಣ್ಣು ಸದಾ ನೋಡುತ್ತಿರುತ್ತದೆ. ಕೆಲವು ಸರ್ಕಾರದ  ಯೋಜನೆಗಳ ಹೊರತಾಗಿ ಮೂಲ ದರಕ್ಕಿಂತ ಕಡಿಮೆದರದಲ್ಲಿ ಸಾಲ ಕೊಡುವಂತಿಲ್ಲ. ಹಾಗೆಯೇ ಮಾರುಕಟ್ಟೆ ಆಧರಿತ ದರಕ್ಕಿಂತ ಹೆಚ್ಚು ದರವನ್ನು  ಠೇವಣಿಗೆ ಕೊಡುವಂತಿಲ್ಲ. ಇದು ವಾಸ್ತವದಲ್ಲಿ ಒಂದು ರೀತಿಯ  ನಿಯಂತ್ರಿತ liberalization    ಎನ್ನಬಹುದೇನೋ? ಬಡ್ಡಿದರ ನಿಗದಿ  ಬ್ಯಾಂಕುಗಳಿಗೆ ಒಂದು ರೀತಿಯ ರಕ್ಷಣಾತ್ಮಕ  ಆಟ. ಠೇವಣಿಯಾಗಲಿ ಅಥವಾ ಸಾಲವಾಗಲಿ, ಅವುಗಳ ಮೇಲೆ  ಬಡ್ಡಿದರ ನಿಗದಿ ಮಾಡುವಾಗ ಬ್ಯಾಂಕುಗಳ  ಆದ್ಯತೆ ತಮ್ಮ ಹಣಕಾಸು ಸ್ಥಿತಿಗತಿ ನೋಡಿಕೊಳ್ಳುತ್ತವೆ. ಗ್ರಾಹಕರ ಅನುಕೂಲ ಮತ್ತು ಅವರಿಗೆ ದೊರಕುವ  ಲಾಭ ನಂತರದ ಆದ್ಯತೆ. ಪ್ರತಿ ಬಾರಿ ರೆಪೋದರ  ಇಳಿಸಿದಾಗಲೂ ರಿಸರ್ವ್‌ ಬ್ಯಾಂಕ್‌, ಸರ್ಕಾರ, ಗ್ರಾಹಕರು,ವಾಣಿಜ್ಯೋಧ್ಯಮ ಸಂಘಗಳು ಮತ್ತು ಮಾದ್ಯಮಗಳು ಸಾಲದ  ಮೇಲಿನ  ಬಡ್ಡಿದರವನ್ನು ಇಳಿಸುವಂತೆ ಒತ್ತಾಯ ಮಾಡುತ್ತವೆ. ರಿಸರ್ವ್‌ ಬ್ಯಾಂಕ್‌ ಕೂಡಾ ಅದೇ  ನಿರೀಕ್ಷೆಯಲ್ಲಿ ರೆಪೋ ದರವನ್ನು ಕಡಿಮೆ ಮಾಡುತ್ತದೆ. ಆದರೆ, ಯಾವ ಬ್ಯಾಂಕೂ ಅಷ್ಟು ಸುಲಭವಾಗಿ ಬಡ್ಡಿದರವನ್ನು ಕಡಿಮೆಮಾಡುವುದಿಲ್ಲ. ಬ್ಯಾಂಕಿನಲ್ಲಿ ಬಡ್ಡಿದರ ನಿಗದಿಮಾಡುವ ಪ್ರಕ್ರಿಯೆ ಸುದೀರ್ಘ‌ವಾಗಿದ್ದು,ಹಲವು ಹತ್ತು ಕೋನಗಳಲ್ಲಿ ವಿಶ್ಲೇಷಿಸಿ, ಹಲವು ಹತ್ತು ಅಂಶಗಳನ್ನು  ಪರಿಗಣಿಸಿ ಲೆಕ್ಕಹಾಕಬೇಕಾಗುತ್ತದೆ.

ರಮಾನಂದ ಶರ್ಮಾ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.