ಬಾಳೆ ಬದುಕು


Team Udayavani, Jul 29, 2019, 9:22 AM IST

bale

ನೈಸರ್ಗಿಕ ಮಾರ್ಗಗಳನ್ನು ಅನುಸರಿಸಿ ಬಾಳೆ ಬೆಳೆದು ಲಕ್ಷಾಂತರ ರೂ. ಲಾಭ ಗಳಿಸುವ ಮೂಲಕ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ದಯಾನಂದ ಅವರು ಇತರೆ ರೈತರಿಗೆ ಸ್ಫೂರ್ತಿಗಿದ್ದಾರೆ…

ರಬಕವಿ-ಬನಹಟ್ಟಿ ತಾಲೂಕಿನ ರೈತ ದಯಾನಂದ ಹೊರಟ್ಟಿಯವರು ತಮ್ಮ 4 ಎಕರೆ ಜಮೀನಿನಲ್ಲಿ ಕಬ್ಬು, ಹತ್ತಿ, ಕಾಳು ಬೆಳೆ ಸೇರಿದಂತೆ ಮೊಲ ಸಾಕಣಿಕೆಯನ್ನೂ ಮಾಡಿಕೊಂಡು ಬದುಕು ಬಂಗಾರವಾಗಿಸಿಕೊಂಡಿದ್ದಾರೆ. ವಿಶೇಷವೆಂದರೆ, ಒಂದು ಎಕರೆಯಲ್ಲಿ ಸಾವಯವ ಗೊಬ್ಬರವನ್ನೇ ಉಪಯೋಗಿಸಿ ಬಾಳೆ ಬೆಳೆಯುವುದರ ಮೂಲಕ ಆದರ್ಶಪ್ರಾಯರಾಗಿದ್ದಾರೆ. ಬೇವಿನ ಎಣ್ಣೆಯ ಸಾವಯವ ಗೊಬ್ಬರ ದಯಾನಂದ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ 700 ಬಾಳೆ ಸಸಿಗಳನ್ನು ನೆಟ್ಟಿದ್ದು, ಇದಕ್ಕೆ ಬೇವಿನ ಎಣ್ಣೆ, ಗೋಮೂತ್ರ ಹಾಗು ಸೆಣಬು(ಡ್ರೆಂಟಾ) ಸಾವಯವ ಗೊಬ್ಬರವನ್ನು ಹಾಕಿದ್ದಾರೆ. ಇದಕ್ಕೆ ಪೂರಕವಾಗಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದು, ಕಡಿಮೆ ನೀರನ್ನು ಬಳಸಿಕೊಂಡು ನೀರಿನ ದುಂದುವೆಚ್ಚಕ್ಕೂ ಕಡಿವಾಣ ಹಾಕಿದ್ದಾರೆ. ದಯಾನಂದ ಅವರು ಒಂದು ಎಕರೆ ಬಾಳೆ ಬೆಳೆಯಲು 45 ಸಾವಿರ ರೂ.ಗಳನ್ನು ಖರ್ಚು ಮಾಡಿದ್ದಾರೆ. ಒಂದೇ ವರ್ಷದಲ್ಲಿ ಲಕ್ಷ ರೂ.ಗಳವರೆಗೂ
ಆದಾಯ ಗಳಿಸುತ್ತಿದ್ದಾರೆ. ಸಾಮಾನ್ಯವಾಗಿ, ರಾಸಾಯನಿಕ ಗೊಬ್ಬರ ಬಳಸಿದರೆ ಒಂದು ಗಿಡದಲ್ಲಿ 2 ಬೆಳೆಯನ್ನು ಮಾತ್ರ ಪಡೆಯಬಹುದು. ಆದರೆ, ದಯಾನಂದ ಅವರು ಸಾವಯವ ಗೊಬ್ಬರವನ್ನು ಬಳಸುತ್ತಿರುವುದರಿಂದ ಒಂದೊಂದು ಬಾಳೆ ಗಿಡದಲ್ಲಿ 3 ರಿಂದ 4 ಬೆಳೆ ತೆಗೆಯಬಹುದಾಗಿದೆ. ಬೆಳೆಯನ್ನು ಪಡೆದ ನಂತರ ಕಡಿದ ಬಾಳೆ ಗಿಡಗಳನ್ನು ಗೊಬ್ಬರವಾಗಿಸಿ
ಅದೇ ಜಮೀನಿಗೆ ಬಳಸುತ್ತಿದ್ದು, ಇದರಿಂದಾಗಿ ಜಮೀನಿನ ಮಣ್ಣಿನಲ್ಲಿ ಎರೆ ಹುಳುಗಳ ಸಂತತಿ ಹೆಚ್ಚಿ ಭೂಮಿ ಫಲವತ್ತತೆಯಿಂದ ಕೂಡಿದೆ.

ಮಣ್ಣಿಗೆ ಜೀವಾಮೃತ
ಸಾವಯವ ಬಾಳೆಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವಲ್ಲಿ ಜೀವಾಮೃತ ಮಹತ್ವ ಪಡೆದಿದೆ. 2 ಕೆ.ಜಿ. ಕಡಲೆ ಹಿಟ್ಟು, 2 ಕೆ.ಜಿ. ಸಾವಯವ ಬೆಲ್ಲ, 10 ಕೆ.ಜಿ. ಸಗಣಿ, 10 ಲೀ. ಗೋಮೂತ್ರ, 4- 5 ಕೆ.ಜಿ.ಯಷ್ಟು ಸಜೀವ ಮಣ್ಣು ಸೇರಿಸಿ ಬ್ಯಾರೆಲ್‌ನಲ್ಲಿ ಮಿಶ್ರಣ ಮಾಡಿ ಪ್ರತಿ ದಿನ ಎರಡು ಹೊತ್ತು ಕಲಸುತ್ತಾ ಒಂದು ವಾರ ಬಿಡಬೇಕು. ಹಾಗೆ ತಯಾರು ಮಾಡುವುದೇ ಜೀವಾಮತ ಸಾವಯವ ಗೊಬ್ಬರ. ಇದನ್ನು ಪ್ರತಿ ಬಾಳೆ ಗೊಣೆಯ ತುಂಬನ್ನು ಕತ್ತರಿಸಿ ಅದನ್ನು 50 ಮಿ.ಲೀ ನಷ್ಟು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಕಟ್ಟಬೇಕು. ಬಾಳೆ ಬೆಳೆಯುವ ತಿಂಗಳಲ್ಲಿ ಬೇವಿನ ಹಿಂಡಿಯನ್ನು ತಳದಲ್ಲಿ ಹಾಕುವುದರಿಂದ ಗಿಡಗಳು ಸದೃಢ ಹಾಗೂ ಸಮದ್ಧವಾಗಿ ಬೆಳೆಯಲು ಅನುಕೂಲ ವಾ ಗುತ್ತದೆ ಎನ್ನುವುದು ಅವರ ಅನುಭವದ ಮಾತು

ಸಾವಯವ ಕೃಷಿಯಿಂದಾಗಿ, ಹಳದಿ ರೋಗ ಸೇರಿದಂತೆ ಯಾವುದೇ ರೋಗಕ್ಕೂ ಬಾಳೆ ತುತ್ತಾಗುವುದಿಲ್ಲ. ಭೂಮಿ, ಸಂಪೂರ್ಣ ರೋಗನಿರೋಧಕ ಶಕ್ತಿಯನ್ನು ಹೊಂದಿ ಎಲ್ಲ ರೋಗಗಳಿಂದ ದೂರವಾಗಲು ಸಾಧ್ಯವಿದೆ. ಈ ವರ್ಷದ ಬಿರು ಬಿಸಿಲಿನಲ್ಲಿಯೂ ಯಾವುದೇ ತೊಂದರೆ ಅನುಭವಿಸದೆ ಹನಿ ನೀರಾವರಿಯಿಂದ ಭೂಮಿಯನ್ನು ಉತ್ತಮ ಫಸಲನ್ನಾಗಿಸುವಲ್ಲಿ ಸಹಾಯವಾಗಿದೆ.

ಕಿರಣ ಶ್ರೀಶೈಲ ಅಳಗಿ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.