ಬಾಳೆ ಬಾಳು; ಲಾಭ ಕೇಳು


Team Udayavani, Mar 27, 2017, 12:24 PM IST

bale.jpg

ಮಲೆನಾಡಿನ ಭಾಗದಲ್ಲಿ ಹೊಸದಾಗಿ ಅಡಿಕೆ ತೋಟದ ಕೃಷಿ ಆರಂಭಿಸಿದಾಗ ಅಡಿಕೆ ನಡುವೆ ಅಂತರ್‌ ಬೆಳೆಯಾಗಿ ಯಾವುದಾದರೂ ಒಂದು ಬೆಳೆ ಬೆಳೆಯುತ್ತಾರೆ. ಇದರಿಂದ ಅಡಿಕೆ ಫ‌ಸಲು ಬರುವವರೆಗೆ ಕೃಷಿ ವೆಚ್ಚ,ನೀರಾವರಿ ವ್ಯವಸ್ಥೆ, ಗೊಬ್ಬರ ಮತ್ತು ಕೂಲಿ ನಿರ್ವಹಣೆಯ ಖರ್ಚು ಉಳಿತಾಯವಾಗಿ ಫ‌ಸಲಿನ ಮಾರಾಟದಿಂದ ಲಾಭ ಸಹ ಸಿಗುತ್ತದೆ. 
ಇದೇ ತಂತ್ರವನ್ನು ಜಗದೀಶ್‌ ಮಾಡಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಎಲ್‌.ಜಗದೀಶ ಗವಟೂರು ಗ್ರಾಮದಲ್ಲಿ ಅಡಿಕೆ ಗಿಡಗಳ ನಡುವೆ ನೇಂದ್ರ ಬಾಳೆಯ  ಕೃಷಿ ನಡೆಸುತ್ತಿದ್ದು ಸಾಕಷ್ಟು ಆದಾಯ ಪಡೆದು ಯಶಸ್ಸಿನ ನಗು ಬೀರುತ್ತಿದ್ದಾರೆ.

 ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಗವಟೂರಿನಲ್ಲಿ ಇವರ ಹೊಲವಿದೆ.  ಇವರು ಅಡಿಕೆ ಸಸಿ ಹೊಸದಾಗಿ ನೆಟ್ಟಿರುವ ಕೃಷಿ ಭೂಮಿ ಖುಷ್ಕಿ ಭೂಮಿಯಾಗಿದ್ದು ಕೊಳವೆ ಬಾವಿಯ ನೀರಾವರಿ ರೂಪಿಸಿಕೊಂಡಿದ್ದಾರೆ. 

ಕೃಷಿ ಹೇಗೆ?
ಕಳೆದ ವರ್ಷ ಅಂದರೆ 2015ರ ಮೇ ಅಂತ್ಯದ ಸುಮಾರಿಗೆ ಇವರು ಅಡಿಕೆ ಸಸಿ ನಾಟಿ ಮಾಡಿದ್ದರು. ಅಡಿಕೆ ಸಸಿ ಚಿಗುರಿ ಬೆಳೆಯುತ್ತಿದ್ದಂತೆ ಆದಾಯ ಪಡೆಯುವ ಅಂತರ್‌ ಬೆಳೆ ಪಡೆಯಲು ನಿರ್ಧರಿಸಿದರು. ಅದಕ್ಕಾಗಿ 2015ರ ಡಿಸೆಂಬರ್‌ ಮೊದಲವಾರ ಅಡಿಕೆ ಗಿಡಗಳ ನಡುವೆ ನೇಂದ್ರಬಾಳೆ ಸಸಿ ನೆಟ್ಟರು. ಗಿಡ ನೆಡುವಾಗ 1.5 ಆಳ ಮತ್ತು ಸುತ್ತಳತೆ ಇರುವ ಗುಂಡಿ ನಿರ್ಮಿಸಿ, ಥಿಮೆಟ್‌ ಹಾಗೂ ಹಸಿರೆಲೆ ಗೊಬ್ಬರ ಹಾಕಿದ್ದರು. 6 ಅಡಿ ಅಂತರ್‌ ಬರುವಂತೆ ಒಟ್ಟು 2000 ನೇಂದ್ರಬಾಳೆ ಗಿಡ ಬೆಳೆಸಿದ್ದರು. ಗಿಡ ನೆಟ್ಟು 25 ದಿನವಾಗುತ್ತಿದ್ದಂತೆ ಪೊಟ್ಯಾಷ್‌ ಮತ್ತು ಯೂರಿಯಾ ಮಿಶ್ರಿತ ಗೊಬ್ಬರ ಪ್ರತಿ ಗಿಡಕ್ಕೆ ಸರಾಸರಿ 100 ಗ್ರಾಂ.ನಷ್ಟು ನೀಡಿದರು. ನಂತರ ಪ್ರತಿ ಒಂದು ತಿಂಗಳಿಗೆ ಒಮ್ಮೆಯಂತೆ ಪ್ರತಿ ಗಿಡಕ್ಕೆ ಸರಾಸರಿ 100 ಗ್ರಾಂ.ನಷ್ಟು 20:20 ಕಾಂಪ್ಲೆಕ್ಸ್‌ ಗೊಬ್ಬರ ನೀಡಿ ಕೃಷಿ ಮುಂದುವರೆಸಿದರು. ಅಡಿಕೆ ಸಸಿಗಳಿಗೆ ಅಳವಡಿಸಿದ ಸ್ಪ್ರಿಂಕ್ಲರ್‌ ನೀರು ಬಾಳೆ ಸಸಿಗೂ ಸಿಗುವ ಕಾರಣ ಪ್ರತ್ಯೇಕ ನೀರಾವರಿ ವ್ಯವಸ್ಥೆ ಮಾಡಲಿಲ್ಲ. ಗಿಡ ನೆಟ್ಟು 7 ತಿಂಗಳಾಗುತ್ತಿದ್ದಂತೆ  ಹೂ ಬಿಟ್ಟು ಗೊನೆ ಅರಳಾಲರಂಭಿಸಿದವು. ಗೊನೆ ಬಂದ ಮೂರು ತಿಂಗಳಿಗೆ ಫ‌ಸಲ ಕಟಾವಿಗೆ ಸಿದ್ಧವಾಯಿತು.

ಲಾಭದ ಲೆಕ್ಕಾಚಾರ
ಇವರು ತಮ್ಮ ಅಡಿಕೆ ಸಸಿ ಬೆಳೆಸಿದ 2 ಎಕರೆ ವಿಸ್ತೀರ್ಣದ ಹೊಲದಲ್ಲಿ ಅಂತರ್‌ ಬೆಳೆಯಾಗಿ ಈ ಬಾಳೆ ಕೃಷಿ ನಡೆಸಿದ್ದಾರೆ. ಬಾಳೆ ಸಸಿ ಎತ್ತರಕ್ಕೆ ಬೆಳೆದ ಕಾರಣ ಅಡಿಕೆ ಸಸಿಗಳಿಗೆ ಒಳ್ಳೆಯ ನೆರಳು ದೊರೆತು ಹುಲುಸಾಗಿ ಬೆಳೆದಿವೆ. ಇವರು ಒಟ್ಟು 2,000 ನೇಂದ್ರಬಾಳೆ ಸಸಿ ಬೆಳೆಸಿದ್ದಾರೆ. ಪ್ರತಿ ಗಿಡದಂದ ಸರಾಸರಿ 18 ಕಿ.ಗ್ರಾಂ.ತೂಕದ ಬಾಳೆ ಗೊನೆಗಳು ದೊರೆತಿವೆ. ನೇಂದ್ರ ಬಾಳೆಕಾಯಿಗಳು ಚಿಪ್ಸ್‌, ಹಪ್ಪಳ ಇತ್ಯಾದಿಗಳಿಗೆ ಬಹಳ ಬೇಡಿಕೆಯಿಂದ ಮಾರಾಟವಾಗುತ್ತವೆ. ಈ ವರ್ಷ ಉಳಿದ ಬಾಳೆಗಳಾದ ಪುಟ್‌ ಬಾಳೆ, ಏಲಕ್ಕಿ ಬಾಳೆ, ಜಿ9 , ಇತ್ಯಾದಿಗಳಿಗೆ ಸರಾಸರಿ ದರ ಕಿ.ಗ್ರಾಂ.ಒಂದಕ್ಕೆ ರೂ 10 ರಿಂದ 15 ರೂ.ಇದ್ದರೆ ನೇಂದ್ರಬಾಳೆಗೆ ಕಿ.ಗ್ರಾಂ.ಒಂದಕ್ಕೆ ರೂ.40 ಮಾರುಕಟ್ಟೆ ದರ ದೊರೆತಿದೆ. ಇವರು ಬೆಳೆಸಿದ ಬಾಳೆ ಗಿಡಗಳು ಸುಮಾರು 400 ಗಿಡಗಳು ಬಹುಬೇಗ ಫ‌ಸಲು ನೀಡಿದ ಕಾರಣ ಡಿಸೆಂಬರ್‌ ಮೊದಲವಾರ ಕಟಾವು ಮಾಡಿ ಮಾರಿದ್ದಾರೆ. ಇದರಿಂದ ಇವರಿಗೆ ಒಟ್ಟು 7 ಟನ್‌ ಬಾಳೆಗೊನೆ ದೊರೆತಿದೆ. ಇದರಿಂದ ಇವರಿಗೆ ಒಟ್ಟು ರೂ.2 ಲಕ್ಷ 80 ಸಾವಿರ ಆದಾಯ ದೊರೆತಿದೆ. ಬಾಳೆ ಸಸಿ ಖರೀದಿ, ಗುಂಡಿ ತೆಗೆದು ನಾಟಿ,ಗೊಬ್ಬರ, ನೀರಾವರಿ ಖರ್ಚು ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ರೂ.1.25 ಲಕ್ಷ ಖರ್ಚು ಬಂದಿದೆ. ಆದರೂ ಸಹ 1.50 ಲಕ್ಷ ರೂ.ಲಾಭ ದೊರೆತಿದೆ. 

ಮಾಹಿತಿಗೆ -9972661820.

– ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.