ಮನೆಯಲ್ಲೇ ವೀಳ್ಯ


Team Udayavani, Jun 4, 2018, 11:48 AM IST

veelya.jpg

ಬಹುಪಯೋಗಿ ವೀಳ್ಯದೆಲೆ ಯಾರಿಗೆ ತಾನೆ ಬೇಡ? ಪ್ರತಿಯೊಬ್ಬರ ಮನೆಯಲ್ಲೂ ವೀಳ್ಯದೆಲೆಗಳ ಬಳಕೆ ಇದ್ದೇ ಇರುತ್ತೆ. ಅದರಲ್ಲೂ ಶುಭಕಾರ್ಯಗಳಿದ್ದಲ್ಲಿ ಅದಕ್ಕೇ ಪ್ರಥಮ ಸ್ಥಾನ. ಮನೆಯಲ್ಲಿ ಯಾರಿಗಾದರೂ ಶೀತವಾದಾಗ ಅಥವಾ ಅಜೀರ್ಣ ಸಮಸ್ಯೆಗೆ ತುತ್ತಾದಾಗ ಸಹಾಯಕ್ಕೆ ಬರುವ ಔಷಧಿ ವೀಳ್ಯದೆಲೆ. ಪೂಜಾ ಕಾರ್ಯ, ಆರೋಗ್ಯ ಸೇರಿದಂತೆ ಹಲವು ಸಂದರ್ಭಗಳಲ್ಲಿ ಬಳಕೆಯಾಗಿರುವ ಇನ್ನೂ ಹಲವು ಉಪಯೋಗಗಳಿರುವ ವೀಳ್ಯದೆಲೆಯನ್ನು ಮನೆಯಲ್ಲಿ ಬೆಳೆಯುವವರು ಕಡಿಮೆ. ಅಗತ್ಯ ಬಿದ್ದಾಗ ಸಂತೆಗೋ ಅಂಗಡಿಗೋ ಹೋಗಿ ಕೊಂಡು ತರಬಹುದಲ್ಲ ಎಂದೇ ಎಲ್ಲರ ಯೋಚನೆ. 

ವೀಳ್ಯದೆಲೆಯನ್ನು ಬೆಳೆಯಲು ಹೆಚ್ಚಿನ ಜಾಗವೇನೂ ಬೇಕಿಲ್ಲ. ಸರಳ ಉಪಾಯ ಮಾಡಿದರೆ ಎಷ್ಟು ಚಿಕ್ಕ ಜಾಗದಲ್ಲೂ ವೀಳ್ಯವನ್ನು ಬೆಳೆಯಬಹುದು. ಒಂದು ಹಳೆಯ ಪ್ಲಾಸ್ಟಿಕ್‌ ಬಕೆಟ್‌ ಅಥವಾ ಚೀಲದಲ್ಲಿ ಮೂರು ತೂತು ಮಾಡಿ, ಮಣ್ಣು ತುಂಬಿರಿ. ಒಣಗಿದ ಸಗಣಿ ಗೊಬ್ಬರ ಹಾಗೂ ಹಸಿರು ಎಲೆಗಳನ್ನು ಆ ಮಣ್ಣಿನಲ್ಲಿ ಬೆರಸಿ. ನಂತರ ವೀಳ್ಯದೆಲೆಯ ಸಸಿ ನೆಟ್ಟು ಮನೆಯ ಹೊರಗೆ ಅಥವಾ ಮಹಡಿ ಮೇಲೆ ಬಿಸಿಲು ಬೀಳುವ ಕಡೆ ಇಡಿ. ದಿನಕ್ಕೆ ಒಂದು ಬಾರಿ ನೀರು ಹಾಕಿ. ಅಡುಗೆ ಮನೆಯಲ್ಲಿ ಕತ್ತರಿಸಿ ಉಳಿದ ತರಕಾರಿಗಳು ಮತ್ತು ಕೊಳೆತ  ಹಣ್ಣು ತರಕಾರಿ, ಸೊಪ್ಪನ್ನು ಈ ಗಿಡಕ್ಕೆ ಹಾಕಿ ಮಣ್ಣು ಮುಚ್ಚಿ. ಈ ರೀತಿ ಮಾಡಿದರೆ ಗಿಡ ಸೊಗಸಾಗಿ ಬೆಳೆಯುತ್ತದೆ. ವೇಸ್ಟ್‌ ಮ್ಯಾನೇಜ್‌ಮೆಂಟ್‌ ಜೊತೆಗೆ ಸೊಂಪಾಗಿ ಬೆಳೆದ ವೀಳ್ಯದೆಲೆಯೂ ನಿಮ್ಮದಾಗುತ್ತದೆ. 

ವೀಳ್ಯದೆಲೆಯಲ್ಲಿ ಮೈಸೂರು, ರಾಸ್ಥಾನ, ಆಂಧ್ರ, ಮದರಾಸ್‌ ಎಲೆಗಳು ಎಂಬ ವಿಧಗಳಿವೆ. ಇದರಲ್ಲಿ ಕಪ್ಪು ಎಲೆಗಳು ಸ್ವಲ್ಪ ಖಾರ. ವೀಳ್ಯದೆಲೆ ಬೆಳೆಯಲು ಕೆಂಪು ಮಣ್ಣು ಉತ್ತಮ. ಮನೆಯಲ್ಲಿ ಉಳಿಯುವ ಹಸಿರು ತ್ಯಾಜ್ಯವನ್ನು ಬಳಸಿದರೆ ಬಳ್ಳಿ ಚೆನ್ನಾಗಿ ಹಬ್ಬುತ್ತದೆ. ವೀಳ್ಯದೆಲೆಗೆ ವೈಟ್‌ ಪ್ಯಾಚಸ್‌ ಅನ್ನೋ ರೋಗ ಬರುವ ಅವಕಾಶವಿರುತ್ತದೆ. ಇದಕ್ಕೆ ಮೋನೋಕ್ರಟೋಫಾಸ್‌ ಅನ್ನು ಲೀ. 5 ಎಂ.ಎಲ್‌ ರೀತಿ ಬೆರೆಸಿ ಸಿಂಪಡಿಸಬೇಕು. 

ಗಿಡಬಳ್ಳಿಗೆ ಆಸರೆಯಾಗಿ ಕಾಂಪೌಂಡ್‌ ಸರಳಿಗೆ ಅಥವಾ ಒಂದು ಬಲಿಷ್ಠ ದಾರದ ಆಸರೆಯೊಂದಿಗೆ ಹಬ್ಬಿಸಿ ಬೆಳೆಸಿದರೆ ವೀಳ್ಯದೆಲೆ ಹುಲುಸಾಗಿ ಬೆಳೆದು ನೋಡುವ ಕಣ್ಣಿಗೆ ಹಬ್ಬವುಂಟು ಮಾಡುತ್ತದೆ.  ಪಾಟ್‌ಗಳಲ್ಲೂ ಇದನ್ನು ಬೆಳೆಯಬಹುದು. ಆದರೆ ಪ್ರತಿ 6 ತಿಂಗಳಿಗೊಂದು ಸಲ ಮಣ್ಣನ್ನು ಬದಲಾಯಿಸಬೇಕು. ಒಂದು ಬಳ್ಳಿಯಲ್ಲಿ ಹೆಚ್ಚಾ ಕಮ್ಮಿ 50-60 ಎಲೆಗಳು ಇರುತ್ತವೆ. ಪ್ರತಿದಿನ ನೀರು ಕೊಡುವುದು ಕಡ್ಡಾಯ. ಮಳೆಗಾಲದಲ್ಲಿ ಎರಡು, ಮೂರು ದಿನಕ್ಕೊಮ್ಮೆ ನೀರು ಹಾಕಿದರೆ ಸಾಕು.   ಎರಡು, ಮೂರು ತಿಂಗಳಿಗೊಮ್ಮೆ ಪಾಟ್‌ನಲ್ಲಿರುವ ಕಳೆಯನ್ನು ತೆಗೆದರೆ ಗಿಡ ಸೋಂಪಾಗಿ ಬೆಳೆಯುತ್ತದೆ. 

– ರತ್ನಮ್ಮ ಎ.ಆರ್‌.

ಟಾಪ್ ನ್ಯೂಸ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.