ಬೋಯರ್‌ ಮೇಕೆಯಿಂದ ಭಾರೀ ಲಾಭ ಉಂಟು


Team Udayavani, Dec 10, 2018, 6:00 AM IST

goat-south-african-breed.jpg

ಬೋಯರ್‌ ತಳಿಯ ಮೇಕೆಗಳಿಗೆ ಬೇಡಿಕೆ ಹೆಚ್ಚು. ಒಂದು ವರ್ಷ ಆಗುತ್ತಿದ್ದಂತೆಯೇ ಸಂತಾನೋತ್ಪತ್ತಿಗೆ ಸಿದ್ಧವಾಗುವ ಈ ಮೇಕೆ ಕೆಲವೊಮ್ಮೆ ಮೂರು ಮರಿಗಳನ್ನು ಹಾಕುವುದು ಉಂಟು. ಈ ಮೇಕೆಗಳನ್ನು ಸಾಕುವ ಮೂಲಕ ಇಬ್ಬರು ಟೆಕ್ಕಿಗಳು ಲಕ್ಷಾಧಿಪತಿಗಳಾಗಿದ್ದಾರೆ. 

ಹೊಸ ಹೊಸ ಸಂಶೋಧನೆಗಳ ಪರಿಣಾಮವಾಗಿ ಕುರಿಸಾಕಾಣಿಕೆಯಲ್ಲಿಯೂ ಸಾಕಷ್ಟು ಪ್ರಗತಿಪರ ಬದಲಾವಣೆಗಳಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮಹಾರಾಷ್ಟ್ರದ ಫ‌ಲ್ಟಾನ್‌ನಲ್ಲಿರುವ ನಿಂಬಕರ್‌ ಸಂಶೋಧನಾ ಕೇಂದ್ರದವರು ಸಾಕಷ್ಟು ವರ್ಷಗಳ ಸಂಶೋಧನೆಯ ಫ‌ಲವಾಗಿ ಬೋಯರ್‌ ತಳಿಯ ಮೇಕೆಗಳ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.  ಅವು ವರ್ಷಕ್ಕೆ ಎರುಡು ಬಾರಿಯಂತೆ, ಒಮ್ಮೆಗೆ ಎರಡು ಮರಿಗಳಿಗೆ ಜನ್ಮನೀಡುತ್ತಿವೆ. ಒಮ್ಮೊಮ್ಮೆ ಮೂರು ಮರಿಹಾಕಿದ್ದೂ ಉಂಟು. ಸೌತ್‌ ಆಫ್ರಿಕನ್‌ ತಳಿಯ ಈ ಬೋಯರ್‌ ಮೇಕೆಗಳು ಅಮೇರಿಕಾ, ಆಸ್ಟ್ರೇಲಿಯಾ, ಕೆನಡಾಗಳಲ್ಲಿ ಮಾಂಸ‌ಕ್ಕಾಗಿ ಪ್ರಖ್ಯಾತಿ ಹೊಂದಿವೆ. 

ಸ್ವಲ್ಪ ತಡೀರಿ.  ಇಷ್ಟೆಲ್ಲಾ ಹೇಳುತ್ತಿರುವುದಕ್ಕೆ ಕಾರಣವೂ ಇದೆ. ಮೈಸೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಪ್ಟ್ವೇರ್‌ ಎಂಜಿನಿಯರ್‌ಗಳಾಗಿರುವ ಭಾನುಪ್ರಕಾಶ್‌ ಹಾಗೂ ನಜೀರ್‌ ಎಂಬ ಇಬ್ಬರು ಯುವ ಟೆಕ್ಕಿಗಳು ಕುರಿ ಸಾಕಾಣಿಕೆಯ ತರಬೇತಿ ಪಡೆದಿದ್ದಾರೆ. ನಂತರ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಎಂಬಲ್ಲಿ ಮಿಹಿಕಾ ಗೋಟ್‌ಫಾರಂ ಅಂತ ಶುರು ಮಾಡಿದ್ದಾರೆ.  ಇಲ್ಲಿ ಬೋಯರ್‌ ತಳಿಯ ಸುಮಾರು 85 ಮೇಕೆಗಳಿವೆ.

ಅತ್ಯಾಧುನಿಕ ಶೆಡ್‌
ತಮ್ಮ ಜಮೀನಿನಲ್ಲಿ ಐದು ಎಕರೆಗಳಷ್ಟು ಜಾಗವನ್ನು ಮೇಕೆ ಸಾಕಾಣಿಕೆಗಾಗಿಯೇ ಮೀಸಲಿರಿಸಿದ್ದು, ಸುಮಾರು 4.5 ಲಕ್ಷ ವೆಚ್ಚದಲ್ಲಿ ವಿಶಾಲ ಜಾಗದಲ್ಲಿ (30-50)  ಆಧುನಿಕ ಶೆಡ್‌ ನಿರ್ಮಿಸಿದ್ದಾರೆ.  ಮೇಕೆಗಳಿಗೆ ನೀರು, ಗಾಳಿ ಹಾಗೂ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ನೆಲಮಟ್ಟದಿಂದ ಸುಮಾರು ಐದು ಅಡಿಗಳಷ್ಟು ಎತ್ತರದಲ್ಲಿರುವ ಈ ಶೆಡ್‌ನ‌ಲ್ಲಿ ಮೇಕೆ¿ ಸ್ವತ್ಛತೆಗೆ ಆಧ್ಯತೆ ನೀಡಲಾಗಿದೆ. ಉಳಿದ ಜಾಗದಲ್ಲಿ ಮೇಕೆಗಳಿಗೆ ಅಗತ್ಯವಾದ ಮೇವನ್ನು ಬೆಳೆಯುತ್ತಿದ್ದು, ಮೇಕೆಗಳ ಪೋಷಣೆಗಾಗಿ ಇಬ್ಬರು ಕೆಲಸಗಾರರನ್ನು ನೇಮಿಸಿದ್ದಾರೆ. 

ಜಾಗರೂಕ ಪಾಲನೆ
ನೆರಳು ಹಾಗೂ ಗಾಳಿಮಳೆಯಿಂದ ರಕ್ಷಣೆಗಾಗಿ ನಿರ್ಮಿಸಿಕೊಂಡ ಶೆಡ್ಡಿನೊಳಗೆ ಈ ತಳಿಯ ಮೇಕೆಗಳಿಗೆ ಕಾಲಕಾಲಕ್ಕೆ ಸರಿಯಾಗಿ ಅಗಸೆ, ರೇಷ್ಮೆ ಸೊಪ್ಪು, ಒಣಮೇವು, ಕಡಲೆಬಳ್ಳಿ, ಮೆಕ್ಕೆಜೋಳದ ತೆನೆ – ಹೀಗೆ ಸಾಕಷ್ಟು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.

ಸಂಪೂರ್ಣ ಬಿಳಿ ಬಣ್ಣದ ದೇಹ ಮತ್ತು ಕತ್ತಿನ ಸುತ್ತಲೂ ಕಡು ಕಂದು (ಮೆಹಂದಿ) ಬಣ್ಣವನ್ನು ಹೊಂದಿರುವ ಬೋಯರ್‌ ತಳಿಯ ಮೇಕೆಯ ಸರಾಸರಿ ಜೀವಿತಾವಧಿ ಹದಿನಾಲ್ಕು ವರ್ಷ.  ಮೂರು ವರ್ಷದಲ್ಲೇ ಗಂಡು ಮೇಕೆಯು ಸರಾಸರಿ 130ಕಿ.ಲೋ ಗ್ರಾಂಗಳಷ್ಟು ತೂಕವಿರುತ್ತದೆ.  ಹೆಣ್ಣು ಮೇಕೆಯು ಸರಾಸರಿ 100ಕೆ.ಜಿಯಷ್ಟಿರುತ್ತದೆ. ತನ್ನ ಜೀವಿತಾವಧಿಯಲ್ಲಿ ಆರರಿಂದ ಎಂಟು ವರ್ಷಗಳವರೆಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೊಂದಿರುವ ಈ ಮೇಕೆಯು ಹುಟ್ಟಿದ ಎಂಟರಿಂದ ಒಂಭತ್ತು ತಿಂಗಳಲ್ಲೇ ಸಂತಾನೋತ್ಪತ್ತಿಗೆ ಸಿದ್ಧಗೊಳ್ಳುವುದರಿಂದ ಲಾಭ ಹೆಚ್ಚು.  ಗರ್ಭಧರಿಸಿದ ಐದೇ ತಿಂಗಳಲ್ಲಿ ಎರಡು ಮರಿಗಳನ್ನು ಹಾಕುತ್ತದೆ. ಒಮ್ಮೊಮ್ಮೆ ಮೂರು ಮರಿಗಳನ್ನೂ ಹಾಕುವುದುಂಟು. ಹುಟ್ಟಿದ ಮರಿಗಳು ಸುಮಾರು ನಾಲ್ಕು ಕೆ.ಜಿ ತೂಕವಿರುತ್ತವೆ. ಈ ಬೋಯರ್‌ ತಳಿಯ ಹಾಲೂ ಶ್ರೇಷ್ಠವಾಗಿದ್ದು ನಾಟಿ ಹಾಲಿಗಿಂತಲೂ ದುಪ್ಪಟ್ಟು ಕೊಬ್ಬಿನಂಶವನ್ನು ಹೊಂದಿರುತ್ತದೆಯೆಂದು ಸಂಶೋಧನೆಗಳು ದೃಢಪಡಿಸಿವೆ.

ತಳಚರಿಯೊಂದಿಗೆ ಕ್ರಾಸಿಂಗ್‌
ಕೇರಳದಿಂದ ಕೊಂಡು ತಂದ ತಳಚರಿ ತಳಿಯೊಂದಿಗೆ ಬೋಯರ್‌ ಮೇಕೆಗಳನ್ನು ಕ್ರಾಸ್‌ ಮಾಡಿಸಿ ಸಾಕಷ್ಟು ಉತ್ತಮ ಗುಣಮಟ್ಟದ ಬೋಯರ್‌ ಮರಿಗಳನ್ನು ಅಭಿವೃದ್ಧಿಪಡಿಸುತ್ತಿರುವ ಭಾನುಪ್ರಕಾಶ್‌ ಮತ್ತು ನಜೀರ್‌ರವರು ಸುಮಾರು ಆರು ತಿಂಗಳವರೆಗೂ ಮರಿಗಳನ್ನು ಪೋಷಿಸಿ, ತದನಂತರ ಅದು ಗರ್ಭಕಟ್ಟುವ ಸಾಮರ್ಥ್ಯ ಹೊಂದುವ ಸಮಯಕ್ಕೆ ಬೇಡಿಕೆಗನುಗುಣವಾಗಿ ಮಾರಾಟ ಮಾಡುತ್ತಾರೆ. 

ಕಡಿಮೆ ಖರ್ಚು, ಅಧಿಕ ಲಾಭ
ಆರು ತಿಂಗಳ ಬೋಯರ್‌ ಮರಿಯೊಂದು 20ರಿಂದ 25 ಕೆಜಿ ತೂಗುತ್ತಿದ್ದು ಅದು ಇಂದಿನ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯಕ್ಕೆ ಮಾರಾಟಗೊಳ್ಳುತ್ತದೆ. ಈ ಮೇಕೆ ಸಾಕಾಣಿಕೆಯು ಆರ್ಥಿಕ ಹಾಗೂ ಶ್ರಮದ ದೃಷ್ಟಿಯಿಂದ ಅಷ್ಟೊಂದು ತ್ರಾಸದಾಯಕವಲ್ಲ ಎನ್ನುತ್ತಾರೆ ನಜೀರ್‌. ಇದರ ಅಂದಾಜು ವಾರ್ಷಿಕ 2 ಲಕ್ಷಗಳಷ್ಟು ವ್ಯಯಮಾಡಿ, ತಮ್ಮ ಫಾರ್ಮನಲ್ಲಿ ಪ್ರತೀ ವರ್ಷ ನೂರೈವತ್ತರಿಂದ ಇನ್ನೂರು ಮರಿಗಳನ್ನು ಮಾರಾಟ ಮಾಡುತ್ತಿದ್ದು. ತಮ್ಮೆಲ್ಲಾ ಖರ್ಚು ಕಳೆದು ಅಂದಾಜು 10 ರಿಂದ 12 ಲಕ್ಷಗಳಷ್ಟು ಲಾಭ ಪಡೆಯುತ್ತಿದ್ದಾರಂತೆ. ಇನ್ನು ಹಾಲು ಹಾಗೂ ಗೊಬ್ಬರ ಮಾರಾಟದಿಂದ ಸಿಗುವ ಲಾಭದ ಲೆಕ್ಕವೇ ಬೇರೆ.

ಈ ತಳಿಯ ಮೇಕೆಗಳ ಮರಿಗಳನ್ನು ಅವು ಸಂತಾನೋತ್ಪತ್ತಿಗೆ ಸಿದ್ಧವಾಗುವ ವೇಳೆಗೆ ಹಣತೆತ್ತು ಕೊಂಡೊಯ್ಯುವ ಸಾಕುದಾರರು, ಅವುಗಳನ್ನು ನಾಟಿ ಮೇಕೆಗಳೊಂದಿಗೆ ಕ್ರಾಸ್‌ ಮಾಡಿಸುತ್ತಾರೆ. ಹೀಗೆ ಹುಟ್ಟಿದ ನಾಟಿ ಮೇಕೆಗಳೂ ಸಹ ಸಾಕಷ್ಟು ಕಡಿಮೆ ಅವಧಿಯಲ್ಲಿಯೇ ಮರಿಗಳಿಗೆ ಜನ್ಮನೀಡಿ ಮಾಂಸೋತ್ಪಾದನೆಯು ದ್ವಿಗುಣಗೊಳ್ಳುವುದರಿಂದ ಲಾಭದಾಯಕವಂತೆ.  

ಮಾಹಿತಿಗೆ-9900204718. 

– ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.