ಕೇಳದೆ ನಿಮಗೀಗ ಮಲೆನಾಡ ರೋದನ?


Team Udayavani, Oct 21, 2019, 4:00 AM IST

ADIKE

ಮಲೆನಾಡಿನ ಭೂರಮೆಯ ಸೌಂದರ್ಯವೇ ಬೇರೆ ತೆರನಾದುದು. ಭೂಮಿ ಹುಣ್ಣಿಮೆ ಬರುವಾಗ ಮಲೆನಾಡಿನ ಅಡಕೆ ತೋಟಗಳಲ್ಲಿ ಫ‌ಸಲಿನ ಸಮೃದ್ಧಿ. ಬೆಳೆದು ನಿಂತ ಹಸಿರು ಬಾಳೆಗೊನೆಗಳಿಂದ, ಅಡಕೆ ಮರಗಳಲ್ಲಿ ತೊನೆಯುವ ಬೆಳೆದು ತೂಗುವ ಅಡಕೆ ಗೊನೆಗಳು, ಹಾಲು ತುಂಬಿದ ಭತ್ತದ ತೆನೆಗಳು… ಸಮೃದ್ಧ ಭೂದೇವಿಯ ಒಡಲು ಅದು. ದೀಪಾವಳಿಯ ಸಿದ್ಧತೆ ಪ್ರಾರಂಭವಾಯಿತೆಂದರೆ ಕೃಷಿಕರಿಗೆ ಬಿಡುವಿಲ್ಲದ ಚಟುವಟಿಕೆ. ವರ್ಷ ಋತುವಿಗೆ ವಿದಾಯ ಹೇಳಿ ಮಾರ್ಗಶಿಶಿರದ ಚಳಿಗೆ ಅನುವಾಗುವ ಪ್ರಾಕೃತಿಕ ಸಿದ್ಧತೆಗಳು.

ವಾಡಿಕೆಯಂತೆ ಜುಲೈ ಆಗಸ್ಟ್‌ನಲ್ಲಿ ಮಲೆನಾಡಿನ ಮಳೆ ಭರ್ಜರಿ ಹೊಳೆ ತೋಡು ಕೊಳ್ಳಗಳನ್ನು ತುಂಬಿ ಝರಿ ಒರತೆಗಳ ಧಾರೆಗಳನ್ನು ಹರಿಸಿ ಇಡೀ ಭೂಪ್ರದೇಶವನ್ನು ಹಸಿ ಹಸಿ ಹಸಿರಾಗಿಸಿ ತೆರಳುತ್ತದೆ. ಅಕ್ಟೋಬರ್‌ ಬಂತೆಂದರೆ ಆ ಹಸಿಯ ಪಸೆಗೆ ಕೊನೆ ಬಿದ್ದು ಹೀರಿಕೊಂಡ ನೀರಿನ ತನಿಯನ್ನು ಒಡಲೊಳಗಿಟ್ಟುಕೊಂಡ ವಸುಂಧರೆ ಹಸಿರಾಗಿ “ಹಸಿರುಡುಗೆ ಪೊಸೆದುಟ್ಟು’ ಲಾಸ್ಯವನ್ನು ಪ್ರದರ್ಶಿಸುತ್ತಿರುತ್ತಾಳೆ. ದೀಪಾವಳಿಯ ಸಿದ್ಧತೆಗಳು ನಡೆಯುವುದೆಂದರೆ ಕೊರಕಲು ಬಿದ್ದ ಕೊಟ್ಟಿಗೆಯ ರಸ್ತೆಗಳನ್ನು ಕಲ್ಲು ಮಣ್ಣುಗಳಿಂದ ಮುಚ್ಚಿ ಸಿದ್ಧಪಡಿಸಿ ಕೊಟ್ಟಿಗೆಗೂ ಹೊಸ ಮಣ್ಣು ಹಾಕಿಸಿ ದನಕರುಗಳನ್ನು ಬೆಚ್ಚನೆಯ ವಾಸ್ತವ್ಯಕ್ಕೆ ಸಿದ್ಧಗೊಳಿಸುವುದು ಮಳೆಗಾಲದಿಂದ ಮುಕ್ತಿ ಪಡೆದ ರಾಸುಗಳು ಈಗ ತಿಳಿ ಬಿಸಿಲಿಗೆ ಮೈಯೊಡ್ಡಿ ಹೊರಗೆ ಅಡ್ಡಾಡಿ ಬೆಟ್ಟ ಗುಡ್ಡಗಳನ್ನು ನಿಶ್ಚಿಂತೆಯಿಂದ ಅಲೆದು ಮೇಯ್ದು ಬಂದು ಸಮೃದ್ಧವಾಗಿ ಹಾಲು ಕರೆಯುವ ಕಾಲ. ತೋಟಗಳಲ್ಲಿಯೂ ಅಷ್ಟೇ ಅಡಕೆ ಕೊಯ್ಲಿಗೆ ಇನ್ನೂ ದಿನವಿದೆ. ಮಳೆಗಾಲದಲ್ಲಿ ಬಿದ್ದ ಕೊಳೆ ಅಡಕೆಗಳನ್ನು ಹೆಕ್ಕಿ ತೆಗೆದಾಗಿದೆ. ತೋಟವೂ ಸ್ವತ್ಛವಾಗಿ ಇರುವಂಥ ದಿನಗಳು. ಭೂಮಿ ಹುಣ್ಣಿಮೆಯಂದು ತೋಟದಲ್ಲಿಯೇ ಕೂತು ಊಟ ಮಾಡುವ ಸಂಪ್ರದಾಯವಿದೆ. ಇದು ಹೆಚ್ಚು ಕಡಿಮೆ ವಾರ್ಷಿಕವಾಗಿ ಮಲೆನಾಡು ಕಾಣುವ ವರ್ಷಾಕಾಲದ ವಿದಾಯದ ದಿನಗಳ ನೋಟ.

ಆದರೆ ಈ ಬಾರಿ ಇದೇನಾಗಿ ಹೋಗಿದೆ? ಮಳೆಯಿಂದ ತತ್ತರಿಸಿ ಹೋದ ಮಲೆನಾಡು ತನ್ನ ಪ್ರಾಕೃತಿಕ ಹದವನ್ನು ಕಳೆದುಕೊಂಡು ಬಿಟ್ಟಿದೆ. ತೋಟಕ್ಕೆ ಇಳಿದರೆ ಕೊಳೆತು ನಾರುವ ಕೊಳೆ ಅಡಕೆಯ ರಾಶಿ! ದುರ್ಗಂಧ. ಪ್ರತಿ ವರ್ಷ ಕೊಳೆ ಔಷಧಿ ಹಾಕಿದ ಬಳಿಕ ಎÇÉೋ ಸ್ವಲ್ಪ ಪ್ರಮಾಣದಲ್ಲಿ ಕೊಳೆ ರೋಗ ಬಂದು ವಾಸಿಯಾಗಿ ಅಡಕೆ ಬೆಳೆಯನ್ನು ತೀರಾ ಅಲ್ಪ ಪ್ರಮಾಣದಲ್ಲಿ ನಾಶ ಮಾಡಿರುತ್ತಿತ್ತು. ಅದನ್ನು ತೆಗೆದು ಒಣಗಿಸಿ ಕಚ್ಚಾ ಅಡಕೆಯನ್ನು ಸಿದ್ಧ ಪಡಿಸುವಷ್ಟರಲ್ಲಿ ನಿಜವಾದ ಸದೃಢ ಸುಂದರ ಅಡಕೆ ಗೊನೆಗಳು ಮನೆ ಸೇರಲು ಸಿದ್ಧವಾಗಿರುತ್ತಿದ್ದವು. ಅಡಕೆ ಬೆಳೆಗಾರ ಸಂಭ್ರಮದಿಂದ ಅಡಕೆ ಕೊಯ್ಲು ಮಾಡುತ್ತಿದ್ದ. ಆದರೆ ಈ ಬಾರಿ ಮಲೆನಾಡಿನಲ್ಲಿ ಅಡಕೆ ಕೊಯ್ಲಿನ ಸಂಭ್ರಮವೇ ಇಲ್ಲ.

ನೂರರಲ್ಲಿ ತೊಂಬತ್ತು ಭಾಗ ಕೊಳೆ ರೋಗದಿಂದ ಉದುರಿ ಹೋದ ಅಡಕೆಗಳು. ಇದು ಅಡಕೆ ಭಾಗಾಯ್ತುದಾರರ ಜೀವನಾಧಾರವನ್ನೇ ಉಡುಗಿಸಿ ಬಿಟ್ಟಿದೆ. ವಾಹನ ಬಿಡಿ ಮನುಷ್ಯರು ಸಂಚರಿಸಲೂ ಸಾಧ್ಯವಿಲ್ಲದ ಕೊರಕಲು ಬಿದ್ದ ರಸ್ತೆಗಳು. ಅವುಗಳನ್ನು ರಿಪೇರಿ ಮಾಡಿಸಲು ಯಾರು ಮುಂದಾಗಬೇಕೆಂಬುದೇ ಸಮಸ್ಯೆ. ಹಳ್ಳಿಗರು ತಮ್ಮ ತಮ್ಮ ಮನೆಗಳ ಕೂಡು ರಸ್ತೆಗಳನ್ನು ತಾವೇ ಶ್ರಮವಹಿಸಿ ಕಲ್ಲು ಗೊಚ್ಚು ಹಾಕಿ ಸಿದ್ಧಪಡಿಸಿಕೊಂಡಾರು. ಆದರೆ ವಾಹನಗಳ ಓಡಾಟವೇ ಸಾಧ್ಯವಿಲ್ಲದ ಗ್ರಾಮೀಣ ರಸ್ತೆಗಳನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿಗಳ ಬಳಿ ಹಣವಿಲ್ಲ. ಸರಕಾರ ಎಂದಿನಂತೆ ತನಗೆ ಸಂಬಂಧವಿಲ್ಲದ ವಿಷಯವೆಂಬಂತೆ ದಿವ್ಯ ನಿರ್ಲಕ್ಷ್ಯ ತೋರಿದೆ. ಗ್ರಾಮೀಣ ಬದುಕು ಈ ಬಾರಿ ಅತ್ಯಂತ ದುಸ್ತರ.

ತೋಟದಲ್ಲಿ ಉದುರಿ ಬಿದ್ದ ಕೊಳೆ ಅಡಕೆ ರಾಶಿಯನ್ನು ನೋಡಿದ ಅಡಕೆ ಬೆಳೆಗಾರನ ಜಂಘಾಬಲವೇ ಉಡುಗಿ ಹೋಗಿದೆ. ಅದನ್ನು ಹೆಕ್ಕಿ ತಂದು ಅಂಗಳದಲ್ಲಿ ಸುಲಿದು ಬೆಂಕಿಯಲ್ಲಿ ಒಣಗಿಸಿ ಶ್ರಮವಹಿಸಿ ಪರಿಷ್ಕರಿಸಿದರೂ ಅತ್ಯಂತ ಕಳಪೆ ಮಟ್ಟದ ಕೊಳೆಅಡಕೆ ಸಿದ್ಧವಾಗುತ್ತದೆ. ಮಾರುಕಟ್ಟೆಯಲ್ಲಿ ಅದಕ್ಕೆ ಬೆಲೆ ಇಲ್ಲ. ಅನಿವಾರ್ಯವೆಂಬಂತೆ ವಹಿಸಲಾದ ಶ್ರಮದ ಖರ್ಚು ವೆಚ್ಚ ಯಾವುದೂ ಅದರಿಂದ ಬರುವಂತಿಲ್ಲ. ಅಲ್ಲದೆ ಈ ಕಳಪೆ ಕೊಳೆ ಅಡಕೆಯಿಂದಾಗಿ “ಅಡಕೆಯ ಮಾನ’ ಹೋಗುವ ಸಂದರ್ಭವೂ ಎದುರಾಗಿದೆ.

ಮಲೆನಾಡಿನ ಅಡಕೆ ಬೆಳೆಗಾರರ ದುರಂತವೆಂದರೆ ಈ ಕೊಳೆ ಅಡಕೆಯ ನಷ್ಟವನ್ನು ಭರಿಸುವಂತೆ ಪ್ರಾಕೃತಿಕ ವಿಪ್ಲವದಡಿ ಸೇರಿಸಿ ಕೊಡುವ ಪರಿಹಾರಕ್ಕೆ ಇದು ಅರ್ಹವಾಗಿಯೇ ಇಲ್ಲ. ಒಂದಲ್ಲ ಒಂದು ದಿನ ನೆರೆ ಪರಿಹಾರದ ಹಣ ಸಿಗಬಹುದೆಂಬ ದೂರದ ಆಸೆ ಉತ್ತರ ಕರ್ನಾಟಕದ ಮಳೆ ಸಂತ್ರಸ್ತರಿಗೆ ಇರಬಹುದು. ಆದರೆ ಮಲೆನಾಡಿನ ಅಡಕೆ ಬೆಳೆಗಾರರು ಈ ಯಾವುದೇ ಭರವಸೆಯನ್ನು ಹೊಂದಿಲ್ಲ. ಪ್ರಕೃತಿ ಮಾತೆ ತಮಗಿತ್ತ ಶಿಕ್ಷೆಯನ್ನು ಮೂಕವಾಗಿ ಅನುಭವಿಸುವ ಮೌನ ರೋದನ ಮಾತ್ರ ಅವರ ಪಾಲಿಗಿದೆ. ಮರಳಿ ಅರಳುವ ಮಲೆನಾಡಿಗಾಗಿ ಪ್ರಾರ್ಥನೆ.

– ಭುವನೇಶ್ವರಿ ಹೆಗಡೆ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.