ಬೆಳಗಾವಿಯ ಈ ಸುವರ್ಣ ಮಂದಿರಕ್ಕೆ ಬನ್ನಿ: ತಿಂಡಿ ತಿನುಸು ತಿನ್ನಿ…


Team Udayavani, Jan 29, 2018, 12:18 PM IST

29-21.jpg

 ಮೀಸೆ ಮಾವನ ಒಂದ್‌ ಪೈಸೆ, ಬಿಳಿ ಕೋಟ್‌ ಅಜ್ಜಾಂದು ಮೂರ್‌ ಪೈಸೆ, ಟೋಪಿ ಕಾಕಾ ದೋನ್‌ ಪೈಸೆ, ಹಾಪ್‌ ಚಡ್ಡಿ ದಾದಾಂಚ ಚಾರಾಣೆ, ಛತ್ರಿ ಮಾಮಾಂದು ನಾಕಾಣೆ ತಗೋರ್ರಿ- ಎಂಬ ವೇಟರ್‌ನ ಧ್ವನಿಯನ್ನು ನಮ್ಮ ಹಿಂದಿನ 2-3 ಪೀಳಿಗೆಯ ಜನ ಕೇಳಿಯೇ ಇಲ್ಲ. ಆದರೆ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಕೆಲವು ವರ್ಷ ಬದುಕಿದ ಪ್ರತಿಯೊಬ್ಬರೂ ಈ ಧ್ವನಿ ಕೇಳಿರಲೇಬೇಕಾಗುತ್ತದೆ. 

ಹೋಟೆಲ್‌ಗ‌ಳಲ್ಲಿ ತಿಂಡಿ, ತಿನಿಸು ತಿಂದವರು ಬಿಲ್‌ ನೀಡುವ  ಸಂದರ್ಭದಲ್ಲಿ ವೇಟರುಗಳು ಬಳಸುತ್ತಿದ್ದ ಭಾಷೆ ಇದಾಗಿತ್ತು. ಬಹು ಸಂಸ್ಕೃತಿಯ ಹಾಗೂ ಕನ್ನಡ-ಮರಾಠಿ ಭಾಷೆಯ ಸಮ್ಮಿಲನಗೊಂಡ ಬೆಳಗಾವಿ ನಗರದ ಉದ್ಯಮದಲ್ಲಿ ಹೋಟೆಲ್‌ನ ಪಾಲು ಕೂಡ ದೊಡ್ಡದು. ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಿಂದ ಬಂದವರೇ ಬೆಳಗಾವಿಯಲ್ಲಿ ಹೋಟೆಲ್‌ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. 30ರ ದಶಕದಿಂದಲೂ ಅಲ್ಲಿರುವ ಹೋಟೆಲ್‌ಗ‌ಳು ಉದರ ಪೋಷಣೆಗೆ ಕಾರಣವಾಗಿವೆ. 

 ಆಗಿನ ಹೊಟೇಲ್‌ಗ‌ಳು ಲಕ್ಸುರಿ, ಡಿಲಕ್ಸ್‌ ಆಗಿರುತ್ತಿರಲಿಲ್ಲ. ಹೋಟೆಲ್‌ಗ‌ಳೂ ಮನೆಯಂತೆಯೇ ಇದ್ದವು. ಕಟ್ಟಿಗೆ ಟೇಬಲ್‌, ಕುರ್ಚಿಗಳನ್ನು ಹಾಕಿ ಗಿರಾಕಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಕಟ್ಟಿಗೆ ಒಲೆಯ ಮೇಲೆಯೇ ಊಟ, ತಿಂಡಿ ತಯಾರಿಸುವ ಪದ್ಧತಿ ಇತ್ತು. ಉತ್ತರ ಕನ್ನಡ ಜಿಲ್ಲೆ ಕುಮುಟಾದ ಕಾಗಾಲದಿಂದ ಬೆಳಗಾವಿಗೆ ಬಂದ  ಶಂಕರ ಪೈ ಅವರು 1936ರಲ್ಲಿ ಸೀತಾರಾಮ ನಿವಾಸ ಎಂಬ ಹೆಸರಿನಡಿ ಹೊಟೇಲ್‌ ಆರಂಭಿಸಿದ್ದರು. 

 ತಂದೆಯ ನಿಧನಾನಂತರ ಶಂಕರ ಅವರ ಸಹೋದರ ವಿಶ್ವನಾಥ ನರಸಿಂಹ ಪೈ  ಕೂಡ  1936ರಲ್ಲಿ ಬೆಳಗಾವಿಗೆ ಬಂದರು. ಸಹೋದರ ಶಂಕರ ಅವರ ಮಾರ್ಗದರ್ಶನದಲ್ಲಿ ಕೆಲಸ ಕಲಿತು, ಹಗಲಿರುಳು ದುಡಿದು ಹೋಟೆಲ್‌ ಕಟ್ಟುವ ಕನಸು ಕಂಡರು.   1948 ಅಗಸ್ಟ್‌ 24ರಂದು ಸುವರ್ಣ ಮಂದಿರ ಎಂಬ ಹೋಟೆಲ್‌ ಆರಂಭಿಸುವ ಮೂಲಕ ಗಿರಾಕಿಗಳಿಗೆ ಮತ್ತಷ್ಟು ಹತ್ತಿರಾದರು. ಈಗ ಸದ್ಯ 94ರ ಇಳಿ ವಯಸ್ಸಿನಲ್ಲೂ ವಿಶ್ವನಾಥ ಅವರು ಇದನ್ನು ಮುಂದುವರಿಸಿದ್ದಾರೆ.

ಫೇಮಸ್‌ ತಿಂಡಿ-ತಿನಿಸು
 ವಿಶ್ವನಾಥ ಪೈ ಅವರು,  ರುಚಿಕಟ್ಟಾದ ತಿಂಡಿ-ತಿನಿಸು ತಯಾರಿಸುವಲ್ಲಿ ಫೇಮಸ್‌ ಆಗಿದ್ದರು. ಬೆಳಗಾವಿಯಲ್ಲಿ ಕನ್ನಡ ಹಾಗೂ ಮರಾಠಿ ಭಾಷೆ ಮುಖ್ಯವಾಗಿದ್ದರಿಂದ ವಿಶ್ವನಾಥ ಅವರು ಎರಡನ್ನೂ ಕರಗತ ಮಾಡಿಕೊಂಡರು. ಆಗ ಹೊಟೇಲ್‌ಗ‌ಳಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು, ಶೀರಾ, ಫುರಿ ಭಾಜಿ ಬಹಳ ಫೇಮಸ್‌ ತಿಂಡಿಗಳಾಗಿದ್ದವು.  ಆಗ ಆರಂಭಿಸಿದ ಹೋಟೆಲ್‌ ಇನ್ನೂವರೆಗೆ ಅದೇ ಹೆಸರಿನಲ್ಲಿಯೇ ಮುಂದುವರಿದಿದೆ. ಈಗ ವಿಶ್ವನಾಥ ಅವರತ ಒಡೆತನದಲ್ಲಿ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದ ಬಳಿ ಪೈ ರೆಸ್ಟೋರೆಂಟ್‌, ಕೋಟೆ ಕೆರೆ ಬಳಿಯ ಪೈ ರೆಸಾರ್ಟ್‌ ಇವೆ. ಇವರ ಮಕ್ಕಳಾದ ಬಾಲಕೃಷ್ಣ ಪೈ, ಅಶೋಕ ಪೈ, ಶ್ರೀಪಾದ ಪೈ, ಗಿರೀಶ ಪೈ ಹೋಟೆಲ್‌ ಉದ್ಯಮವನ್ನೇ ಮೈಗೂಡಿಸಿಕೊಂಡು ನಡೆಸುತ್ತಿದ್ದಾರೆ. 

ಒಂದು ಪೈಸೆಗೆ ಚಹಾ
 ಸುವರ್ಣ ಮಂದಿರದ  ಬಿಸಿ, ಬಿಸಿ ಉಪ್ಪಿಟ್ಟು, ದೋಸೆ ಹಾಗೂ ಪೂರಿ ಭಾಜಿ, ಚಹಾ ಭಾರೀ ಫೇಮಸ್‌. ಹಲ್ವಾ, ಕುಂದಾ, ಮೈಸೂರು ಪಾಕ್‌, ಅವಲಕ್ಕಿಯನ್ನು ಇಲ್ಲಿ ತಯಾರಿಸಲಾಗುತ್ತಿತ್ತು. ಮೊದಲು ಒಂದು ಪೈಸೆಗೆ ಚಹಾ ಮಾರಾಟ ಮಾಡಲಾಗುತ್ತಿತ್ತು. 100 ಕಪ್‌ ಚಹಾ ಮಾರಿದಾಗ ಒಂದು ರೂಪಾಯಿ ವ್ಯಾಪಾರವಾಗುತ್ತಿತ್ತು. ಅಬ್ಬಬ್ಟಾ ಎಂದರೆ ಒಂದು, ಎರಡು ರೂಪಾಯಿ ವ್ಯಾಪಾರ ಆಗುತ್ತಿತ್ತು. ಸಂತೆ ದಿನಗಳಲ್ಲಿ ಬೇರೆ ಊರುಗಳಿಂದ ಜನ ಬಂದಾಗ ಮಾತ್ರ ಹೆಚ್ಚಿನ ವ್ಯಾಪಾರ ಭರಾಟೆ ಭಾರೀ ಆಗಿರುತ್ತಿತ್ತು. ಆಗಿನ ಕಾಲದಲ್ಲಿ ಪೈಸೆ ಲೆಕ್ಕದಲ್ಲಿಯೇ ಜನ ವ್ಯವಹಾರ ಮಾಡುತ್ತಿದ್ದರು. ಗಿರಾಕಿಗಳನ್ನು ದೇವರೆಂದು ಭಾವಿಸಿ ಗೌರವ ಆದರದಿಂದ ನೋಡಿಕೊಳ್ಳುವ ಜಾಯಮಾನ ಹೊಟೇಲ್‌ ಮಾಲೀಕರಿಗಿತ್ತು ಎನ್ನುತ್ತಾರೆ ವಿಶ್ವನಾಥ ಪೈ. 

ನೆಹರು-ಇಂದಿರಾ-ವಾಜಪೇಯಿಗೆ ಸುವರ್ಣ ಮಂದಿರದ್ದೇ ಊಟ
ಬೆಳಗಾವಿಗೆ ಆಗಿನ ಪ್ರಧಾನಿ ಜವಾಹರ ಲಾಲ್‌ ನೆಹರು, ಇಂದಿರಾ ಗಾಂಧಿ ಆಗಮಿಸಿದರೆ ಅವರಿಗೆ ಸುವರ್ಣ ಮಂದಿರದ್ದೇ ಊಟ.  ಇಂದಿರಾ ಗಾಂಧಿ ಸಮಾವೇಶಕ್ಕೆ 10 ಸಾವಿರಕ್ಕೂ ಹೆಚ್ಚು ಜನರಿಗೆ ಈ ಹೊಟೇಲ್‌ನಲ್ಲೇ ಊಟ ತಯಾರಿಸಲಾಗಿತ್ತು.  ಅಟಲ್‌ ಬಿಹಾರಿ ವಾಜಪೇಯಿ ಅವರು ಜನಸಂಘದಲ್ಲಿದ್ದಾಗ  ಮಂದಿರಕ್ಕೆ ಬಂದು ಚಹಾ ಕುಡಿದಿದ್ದರು. ಎಚ್‌.ಡಿ. ದೇವೇಗೌಡ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಗಲಾ ಹೀಗೆ ಅನೇಕರು ಈ ಹೋಟೆಲಿಗೆ ಭೇಟಿ ನೀಡಿದ್ದಾರೆ. 

ಕೈ-ಕಾಲು ತೊಳೆಯಲು ಬಿಸಿ ನೀರು
ಹೊಟೇಲ್‌ಗ‌ಳಿಗೆ ಬರುವ ಗಿರಾಕಿಗಳಿಗೆ ಸಾಮಾನ್ಯವಾಗಿ ಬಿಸಿ ನೀರು ತುಂಬಿದ ಬಕೆಟ್‌ ಇಡಲಾಗುತ್ತಿತ್ತು. ಗಿರಾಕಿಗಳು ಕೈ, ಕಾಲು, ಮುಖ ತೊಳೆದುಕೊಂಡು ಒಳ ಬರುತ್ತಿದ್ದರು. ಆಗಿನ ಕಾಲದ ಜನರ ಸಂಚಾರ ಕಾಲ್ನಡಿಗೆಯೇ ಆಗಿರುತ್ತಿತ್ತು. ಹೀಗಾಗಿ ಆಯಾಸಗೊಂಡು ಬರುವ ಗಿರಾಕಿಗಳನ್ನು ಸಂತೃಪ್ತಿಗೊಳಿಸುವ ಕೆಲಸವನ್ನು ಹೊಟೇಲ್‌ನವರು ಮಾಡುತ್ತಿದ್ದರು.
ವಿಶ್ವನಾಥ ಪೈ, ಸುವರ್ಣ ಮಂದಿರ ಮಾಲೀಕ

ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.