ಕಂಡಿದೀರಾ ರಥ ಬೆಂಡೆ


Team Udayavani, Jan 28, 2019, 4:17 AM IST

isiri-1.jpg

ರಥ ಬೆಂಡೆಯ ಬೀಜ ಬಿತ್ತಿದ ಬಳಿಕ ಗಿಡ ದೊಡ್ಡದಾಗಿ ಹೂ ಬಿಟ್ಟು ಕಾಯಿ ಕೈಗೆ ಸಿಗಬೇಕಿದ್ದರೆ ತೊಂಭತ್ತು ದಿವಸ ಕಾಯಬೇಕು. ಆಮೇಲೆ 120 ದಿನಗಳ ಕಾಲ ಗಿಡವು ಕಾಯಿಗಳಿಂದ ತುಂಬಿ ನೆಲದವರೆಗೂ ಹರಡುತ್ತದೆ.

ಒಂದಾಳಿಗಿಂತ ಹೆಚ್ಚು ಎತ್ತರ, ತೋಳಿನಷ್ಟು ದಪ್ಪ ಬೆಳೆಯುವ ಈ ಬೆಂಡೆ ಗಿಡದ ನೋಟವೇ ಶೋಭಾಯಮಾನ. ಬಳ್ಳಿಯ ಹಾಗೆ ಬೆಂಡೆಕಾಯಿಗಳನ್ನು ಹೊತ್ತು ಅದರ ರೆಂಬೆ, ಕೊಂಬೆಗಳು ಕೆಳಗೆ ಬಾಗುತ್ತವೆ. ಪ್ರತಿದಿನ ಕಾಯಿ ಕೊಯ್ದು ಪಲ್ಯ, ಸಾಂಬಾರು, ಗೊಜ್ಜು ಮುಂತಾದ ವೈವಿಧ್ಯಮಯ ಪಾಕಗಳಿಗೆ ಬಳಸಬಹುದು. ಮಜ್ಜಿಗೆ ಹುಳಿಗಂತೂ ಈ ಬೆಂಡೆ ಮುದ ನೀಡುವ ಸ್ವಾದ ಕೊಡುತ್ತದೆ. ಬಣ್ಣದಲ್ಲಿ, ಊರಿನಲ್ಲಿ ಬೆಳೆಯುವ ಹಾಲು ಬೆಂಡೆಯ ವರ್ಣವಿದ್ದರೂ ಈ ದಪ್ಪ ಬೆಂಡೆಯ ಗಾತ್ರ ಮಾತ್ರ ಬೆರಳಿನಷ್ಟೇ ಇದೆ ಎಂಬುದು ಅದರ ವಿಶೇಷ.

ಇದು ರಥ ಬೆಂಡೆ. ಗಿಡದಲ್ಲಿ ಬೆಳೆಯುವ ಸಾಲು ಸಾಲು ಕಾಯಿಗಳು ಅದನ್ನು ರಥದ ಹಾಗೆ ಸಿಂಗರಿಸಿ ಬಿಡುತ್ತವೆ. ಅಪರೂಪದ ಬೆಂಡೆ ತಳಿಯನ್ನು ಬೆಳೆಯುವ ಮೂಲಕ ಇದನ್ನು ಉಳಿಸಿಕೊಂಡವರು ಪ್ರಗತಿಪರ ರೈತರಾದ ಎಂ. ಜಿ. ಸತ್ಯನಾರಾಯಣ. ಸುಳ್ಯ ತಾಲೂಕಿನ ಕುಕ್ಕುಜಡ್ಕದ ಬಳಿ ಮಾಯಿಪಡ್ಕದಲ್ಲಿದೆ ಅವರ ಮೆಗೊಸಾನ್‌ ಫಾಮ್ಸ್‌ರ್. ಹತ್ತಾರು ಎಕರೆಗಳಲ್ಲಿ ಬಹು ಬಗೆಯ ಬೆಳೆಗಳನ್ನು ಬೆಳೆಯುತ್ತಿರುವ ಅವರು ಕೃಷಿಯ ಕೌಶಲಗಳನ್ನು ಕಾಣಲೆಂದು ದೇಶ ವಿದೇಶಗಳಿಗೆ ಹೋಗಿ ಬಂದವರು. ಜೊತೆಗೆ, ಸಸ್ಯ ವೈವಿಧ್ಯ ಸಂಗ್ರಹದ ಫ‌ಲವಾಗಿ ರಥ ಬೆಂಡೆ ಅವರ ಮನೆಯಂಗಳಕ್ಕೆ ಬಂದಿದೆ. ಗಿಡದಲ್ಲಿ ಸಾವಿರಾರು ಕಾಯಿಗಳಾಗಿ ನಿತ್ಯದ ತರಕಾರಿ ಅಗತ್ಯವನ್ನು ಪೂರೈಸಿದೆ.

ರಥ ಬೆಂಡೆಗೆ ಹಲವು ಗುಣ ವಿಶೇಷಗಳಿವೆ. ಪ್ರಮುಖವಾಗಿ ಅದರ ರೋಗ ನಿರೋಧಕ ಶಕ್ತಿ. ಯಾವುದೇ ಕೀಟಗಳ ಬಾಧೆ ಇಲ್ಲ. ಹಳದಿ ರೋಗ ಬಳಿಗೆ ಸುಳಿಯುವುದಿಲ್ಲ. ಸತ್ಯನಾರಾಯಣರು ಅಪ್ಪಟ ಸಾವಯವ ಕೃಷಿಕ. ಹತ್ತಾರು ಹಸು ಸಾಕಿ ಹೈನುಗಾರಿಕೆ ಮಾಡುತ್ತಿದ್ದಾರೆ. ಗೋಬರ್‌ ಅನಿಲ ಸ್ಥಾವರವಿದೆ. ಗೋಬರ್‌ ಬಗ್ಗಡ, ಸುಡುಮಣ್ಣು, ಕಟ್ಟಿಗೆಯ ಬೂದಿಯ ಬಳಕೆಯಿಂದ ಸಮೃದ್ಧವಾಗಿ ತರಕಾರಿ ಮತ್ತಿತರ ಬೆಳೆಗಳ ಕೃಷಿ ಸಾಧ್ಯವೆಂಬುದನ್ನು ಅವರು ತೋರಿಸಿಕೊಟ್ಟಿ­ದ್ದಾರೆ. ರಥ ಬೆಂಡೆಯ ಬೀಜ ಬಿತ್ತಿದ ಬಳಿಕ ಗಿಡ ದೊಡ್ಡದಾಗಿ ಹೂ ಬಿಟ್ಟು ಕಾಯಿ ಕೈಗೆ ಸಿಗಬೇಕಿದ್ದರೆ ತೊಂಭತ್ತು ದಿವಸ ಕಾಯಬೇಕು. ಆಮೇಲೆ 120 ದಿನಗಳ ಕಾಲ ಗಿಡ ಕಾಯಿಗಳಿಂದ ತುಂಬಿ ನೆಲದವರೆಗೂ ಹರಡುತ್ತದೆ. ಎರಡು ದಿನಗಳಿಗೊಮ್ಮೆ ಬಳಸದಿದ್ದರೆ ಬಲಿತು ಗಟ್ಟಿಯಾಗುತ್ತದೆ. ಒಂದು ಗಿಡವಿದ್ದರೂ ಪುಟ್ಟ ಸಂಸಾರಕ್ಕೆ ದಿನನಿತ್ಯ ಬಳಸುವಷ್ಟು ಕಾಯಿಗಳಾಗುತ್ತವೆ. ಈ ಕಾಯಿಗಳನ್ನು ಉರುಟಾಗಿ ಕತ್ತರಿಸಿ ಹುರಿಯ ಬಹುದು. ಇದರಿಂದ ಬೋಂಡಾ ಮಾಡಬಹುದು, ಒಣಗಿಸಿಟ್ಟು, ಬೇಕಾದಾಗ ಬಾಳಕದಂತೆ ಬಳಸಬಹುದು ಎನ್ನುತ್ತಾರೆ ಸತ್ಯನಾರಾಯಣರ ಶ್ರೀಮತಿ. ಹಾಗೆಯೇ, ಗಿಡದ ಬುಡದಲ್ಲಿ ಒಂದು ಅಲಸಂದೆ ಬೀಜ ಬಿತ್ತಿದರೆ ಅದರ ಬಳ್ಳಿಗೆ ಬೆಂಡೆ ಗಿಡ ಆಧಾರದ ಗೂಟವೂ ಆಗುವುದಂತೆ.

ಈ ಬೆಂಡೆಯ ಸಾಕಷ್ಟು ಕಾಯಿಗಳನ್ನು ಒಣಗಿಸಿಟ್ಟು ಮನೆಗೆ ಬಂದ ಅತಿಥಿಗಳಿಗೆ ಬೆಂಡೆಯ ರುಚಿಕರ ಪಲ್ಯದ ಊಟದ ಜೊತೆಗೆ ಹೋಗುವಾಗ ಒಂದು ಕಾಯಿಯನ್ನೂ ಕೊಟ್ಟು ಅದರ ಕೃಷಿ ಮಾಡಲು ಪ್ರೇರೇಪಿಸುತ್ತಾರೆ ಈ ರೈತರು.

•ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.