ಡಿಜಿಟಲ್‌ ಬ್ರೈಲ್‌ ಬುಕ್‌

ಅಂಧರು, ಕಾದಂಬರಿ, ಅಂಕಣಗಳನ್ನು ಓದಬಹುದು!

Team Udayavani, Aug 5, 2019, 5:00 AM IST

c-13

ಜಗತ್ತಿನಾದ್ಯಂತ ಲಭ್ಯವಿರುವ ಪುಸ್ತಕಗಳಲ್ಲಿ ಶೇ. 1 ರಷ್ಟು ಮಾತ್ರ ಬ್ರೈಲ್‌ ಪುಸ್ತಕಗಳಾಗಿವೆ. ಅಲಭ್ಯತೆ ಒಂದು ಸಮಸ್ಯೆಯಾದರೆ ಬ್ರೈಲ್‌ ಪುಸ್ತಕದ ತೂಕ ಇನ್ನೊಂದು ಸಮಸ್ಯೆ. ಏಕೆಂದರೆ ಬ್ರೈಲ್‌ ಲಿಪಿಗೆ ಪರಿವರ್ತನೆಗೊಂಡ 500 ಪುಟಗಳ ಪುಸ್ತಕ ಏನಿಲ್ಲವೆಂದರೂ 4 ಕೆ.ಜಿ ತೂಕವಿರುತ್ತದೆ. ಅಲ್ಲದೆ, ಅದರ ಬೆಲೆಯೂ ಹೆಚ್ಚಿರುತ್ತದೆ. ಇವೆಲ್ಲಾ ಸಮಸ್ಯೆಯನ್ನು ಮನಗಂಡ ಬೆಂಗಳೂರಿನ ಎಂ.ವಿ.ಜೆ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾದ ರೋಹಿತ್‌ ಹಾಗೂ ರುಚಿತಾ ಅದಕ್ಕೊಂದು ಕೊನೆಗಾಣಿಸಲು, “ಬಿ ಬುಕ್‌’ ಉಪಕರಣವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಏನಿದು ಬಿ ಬುಕ್‌?
ಪಿ.ಡಿ.ಎಫ್, ಟೆಕ್ಸ್ಟ್, ಇ- ಪಬ್‌ ಮಾದರಿಯ ಫೈಲ್‌ಗ‌ಳನ್ನು ಪೆನ್‌ಡ್ರೈವ್‌ ಮೂಲಕ ಈ ಬಿ- ಬುಕ್‌ ಉಪಕರಣಕ್ಕೆ ಸಿಕ್ಕಿಸಿದರೆ ಅದು ಅಕ್ಷರಗಳನ್ನು ಗುರುತು ಹಿಡಿದು, ಅವನ್ನು ಬ್ರೈಲ್‌ ಸಂಕೇತದಲ್ಲಿ ವ್ಯಕ್ತಪಡಿಸುತ್ತದೆ. ಈ ಉಪಕರಣ, ಬ್ರೈಲ್‌ ಸಂಕೇತವನ್ನು 6 ಪಿನ್‌ಗಳ ಮೂಲಕ ವ್ಯಕ್ತಪಡಿಸುತ್ತದೆ. ಪಿನ್‌ ಎಂದರೆ ಬಟನ್‌ನಂತೆ ಕಾರ್ಯ ನಿರ್ವಹಿಸುವ ಸ್ವಿಚ್‌ ಎಂದುಕೊಳ್ಳಬಹುದು. ಆದರೆ ಅದನ್ನು ಒತ್ತಲಾಗುವುದಿಲ್ಲ. ಅದನ್ನು ಯಂತ್ರವೇ ನಿಯಂತ್ರಿಸುತ್ತದೆ. 6 ಬಟನ್‌ಗಳಲ್ಲಿ ಆನ್‌ ಮತ್ತು ಆಫ್ ಎಂಬ ಎರಡು ಸ್ಥಿತಿಗಳಿರುತ್ತವೆ. ಪಿನ್‌ ಮೇಲಕ್ಕೆ ಎದ್ದಿದ್ದರೆ ಆಫ್ ಎಂದುಕೊಳ್ಳಬಹುದು, ಕೆಳಕ್ಕೆ ಹೋಗಿದ್ದರೆ ಆನ್‌ ಎಂದುಕೊಳ್ಳಬಹುದು. ಅಂಧರು ಈ ಪಿನ್‌ಗಳ ಮೇಲೆ ಬೆರಳಾಡಿಸುವ ಮೂಲಕ ಯಾವೆಲ್ಲ ಪಿನ್‌ ಆನ್‌ ಅಥವಾ ಆಫ್ ಆಗಿವೆ ಎಂಬುದನ್ನು ಕಂಡುಹಿಡಿದು ಅಕ್ಷರಗಳ ಗುರುತು ಹಿಡಿಯುತ್ತಾರೆ. ಆ ಮೂಲಕ ಅಂಧರು, ಕಾದಂಬರಿ ಪುಸ್ತಕ, ಇಂಟರ್‌ನೆಟ್‌ನ ಅಂಕಣಗಳನ್ನು ಪಿಡಿಎಫ್, ಟೆಕ್ಸ್ಟ್ ಅಥವಾ ಇ ಪಬ್‌ ಫಾಮ್ಯಾಟ್‌ಗೆ ಕನ್ವರ್ಟ್‌ ಮಾಡಿಕೊಂಡರೆ ಪೆನ್‌ಡ್ರೈವ್‌ ಮೂಲಕ ಬಿ-ಬುಕ್‌ಗೆ ಅಳವಡಿಸಿ ಅದನ್ನು ಬ್ರೈಲ್‌ ರೂಪದಲ್ಲಿ ಓದಬಹುದಾಗಿದೆ.
ಈ ಯಂತ್ರವನ್ನು ಆಭಿವೃದ್ಧಿಪಡಿಸುವ ಮುನ್ನ ವಿದ್ಯಾರ್ಥಿಗಳು ಅಂಧರ ಶಾಲೆಗೆ ಭೇಟಿ ನೀಡಿ, ಶಿಕ್ಷಕ ವೃಂದ ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಅಗತ್ಯತೆಗಳನ್ನು ಮನಗಂಡಿದ್ದಾರೆ. ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಇರಾದೆಯೂ ಈ ವಿದ್ಯಾರ್ಥಿಗಳಿಗಿದೆ.

9591119113

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.