ನ್ಯಾಯಾಲಯದ ಮುಂದೆ ಹಾಜರಾಗಲು ನಿರ್ದೇಶನ


Team Udayavani, Oct 21, 2019, 4:30 AM IST

law-point-summons-copy-copy

ಯಾವುದೇ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಒತ್ತಾಯಿಸಲು ನ್ಯಾಯಾಲಯವು ಎರಡು ರೀತಿಯಲ್ಲಿ ನಿರ್ದೇಶಿಸಲಬಹುದು.

ಮೊದಲನೆಯದು- ಸಮನ್ಸ್‌ ಮೂಲಕ
ಎರಡೆಯದು- ವಾರೆಂಟ್‌ ಮೂಲಕ
ನ್ಯಾಯಾಲಯ ಹೊರಡಿಸುವ ಸಮನ್ಸ್‌ ನಿರ್ದಿಷ್ಟ ನಮೂನೆಯಲ್ಲಿ ಬರವಣಿಗೆಯಲ್ಲಿದ್ದು ದ್ವಿಪ್ರತಿಯಲ್ಲಿರಬೇಕು. ಸಾಮಾನ್ಯವಾಗಿ ಇದನ್ನು ನ್ಯಾಯಾಧೀಶರಾಗಲೀ ಅಥವಾ ಹೈಕೋರ್ಟ್‌ ನಿರ್ದೇಶಿಸಿದ ಇತರೆ ಯಾವುದೇ ಅಧಿಕಾರಿಯಾಗಲಿ ಸಹಿ ಮಾಡಬೇಕು. ಸಮನ್ಸಿಗೆ ನ್ಯಾಯಾಲಯದ ಮುದ್ರೆ ಕೂಡಾ ಇರಬೇಕು.
ಸಮನ್ಸ್‌ ಕೆಳಗಿನ ವಿವರಗಳನ್ನು ಒಳಗೊಂಡಿರುತ್ತದೆ.
1. ನ್ಯಾಯಾಲಯದ ಹೆಸರು ಮತ್ತು ಮುದ್ರೆ
2. ಊರು
3. ಪ್ರಕರಣದ ಸಂಖ್ಯೆ
4. ಆರೋಪಿಯ ಹೆಸರು ಮತ್ತು ವಿಳಾಸ
5. ಯಾವ ಅಪರಾಧದ ಬಗ್ಗೆ ಸಮನ್ಸ್‌ ನೀಡಲಾಗಿದೆ
6. ಆರೋಪಿಯು ಹಾಜರಾಗಬೇಕಾದ ದಿನಾಂಕ ಮತ್ತು ಸಮಯ
ಯಾವುದೇ ಸಮನ್ಸ್‌ಅನ್ನು ಪೊಲೀಸ್‌ ಅಧಿಕಾರಿಯ ಮೂಲಕ ಜಾರಿ ಮಾಡಿಸಬೇಕು. ಸಮನ್ಸ್‌ ಅನ್ನು ಆರೋಪಿಗೆ ಮುಖತಃ ಜಾರಿ ಮಾಡಬೇಕು. ಆ ರೀತಿ ಜಾರಿ ಮಾಡಿದ ಬಗ್ಗೆದ್ವಿಪ್ರತಿಯ ಹಿಂಭಾಗದಲ್ಲಿ ಅವನ ಸಹಿ ಪಡೆದುಕೊಳ್ಳಬೇಕು. ಒಂದು ವೇಳೆ ಸಮನ್ಸಿನಲ್ಲಿ ನಮೂದಾದ ವ್ಯಕ್ತಿಯು ಪ್ರಯತ್ನಪಟ್ಟರೂ ಸಿಗದೇ ಹೋದಲ್ಲಿ ಅದನ್ನು ಅವನ ಕುಟುಂಬದ ಸದಸ್ಯನಾದ ವಯಸ್ಕ ಪುರುಷನ ಮೇಲೆ ಜಾರಿ ಮಾಡಬಹುದು ಮತ್ತು ಅವನ ಸಹಿಯನ್ನು ದ್ವಿಪ್ರತಿಯ ಹಿಂದೆ ಪಡೆದುಕೊಳ್ಳಬೇಕು. ಸೇವಕನು ಮನೆಯ ಸದಸ್ಯನೆಂದು ಗಣನೆಗೆ ಬರುವುದಿಲ್ಲವಾದ್ದರಿಂದ ಅವನ ಮೇಲೆ ಸಮನ್ಸ್‌ ಜಾರಿ ಮಾಡುವ ಹಾಗಿಲ್ಲ.

ಒಂದು ವೇಳೆ ಸಮನ್ಸ್‌ಅನ್ನು ಮುಖತಃ ಆಗಲೀ ಅಥವಾ ಮೇಲೆ ತಿಳಿಸಿದ ರೀತಿಯಲ್ಲಿ ಕುಟುಂಬದ ಸದಸ್ಯನ ಮೇಲೇ ಆಗಲಿ ಜಾರಿ ಮಾಡಲಾಗದಿದ್ದಲ್ಲಿ ಆರೋಪಿಯು ವಾಸಿಸುತ್ತಿರುವ ಮನೆಯ ಮೇಲೆ ಎದ್ದು ಕಾಣು ಜಾಗದಲ್ಲಿ ಅಂಟಿಸಿ ನ್ಯಾಯಾಲಯಕ್ಕೆ ವರದಿ ಮಾಡಬೇಕು. ಒಂದು ವೇಳೆ ನ್ಯಾಯಾಲಯಕ್ಕೆ ಆ ರೀತಿ ಜಾರಿ ಮಾಡಿರುವುದು ಸೂಕ್ತವಲ್ಲವೆಂದು ಕಂಡುಬಂದಲ್ಲಿ ಹೊಸದಾಗಿ ಸಮನ್ಸ್‌ಅನ್ನು ಜಾರಿ ಮಾಎಡಬೇಕೆಂದು ನಿರ್ದೇಶಿಸಬಹುದು. ಸಮನ್ಸ್‌ ಜಾರಿಯಾಗಬೇಕಾದ ವ್ಯಕ್ತಿ ಸರ್ಕಾರಿ ಸೇವೆಯಲ್ಲಿದ್ದರೆ ಯಾಯಾಲಯವು ಸಮನ್ಸ್‌ಅನ್ನು ದ್ವಿಪ್ರತಿಯಲ್ಲಿ ಆ ಕಛೇರಿಯ ಮುಖ್ಯ ಅಧಿಕಾರಿಗೆ ಕಳಿಸಿಕೊಡುತ್ತದೆ. ಆ ಅದಿಕಾರಿ ನೌಕರನ ಮೇಲೆ ಸಮನ್ಸ್‌ಅನ್ನು ಆಜರಿ ಮಾಡಿ ನ್ಯಾಲಯಕ್ಕೆ ಹಿಂದಿರುಗಿಸುತ್ತಾನೆ. ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ಹೊರಗೆ ಸಮನ್ಸ್‌ ಜಾರಿ ಆದರೆ ಹಾಗೆ ಜಾರಿ ಮಾಡಿದ ವ್ಯಕ್ತಿಯ ಪ್ರಮಾಣ ಪತ್ರವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ.

ಆರೋಪಿಗಲ್ಲದೆ, ಸಾಕ್ಷಿಗೂ ಸಹ ಸಮನ್ಸ್‌ ಕಳಿಸಲಾಗುತ್ತದೆ. ಸಾಕ್ಷಿಗೆ ಸಮನ್ಸ್‌ ಕಳಿಸುವಾಗ, ನ್ಯಾಯಾಲಯಕ್ಕೆ ಅವಶ್ಯಕವೆಂದು ತೋರಿದರೆ, ಮುದ್ದಾಂ ಮೂಲಕವಲ್ಲದೆ ನೋಂದಣಿ ಅಂಚೆಯಲ್ಲೂ ಸಹ ಸಮನ್ಸ್‌ಅನ್ನು ಕಳಿಸಬೇಕೆಂದು ನಿರ್ದೇಶಿಸಬಹುದು. ಒಂದು ವೇಳೆ ಸಾಕ್ಷಿ ಸಮನ್ಸ್‌ಅನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ನ್ಯಾಲಯ ಸಮನ್ಸ್‌ ಜಾರಿ ಆಗಿದೆ ಎಂದು ಘೋಷಣೆ ಮಾಡಬಹುದು.

-ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

ಟಾಪ್ ನ್ಯೂಸ್

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.