- Saturday 07 Dec 2019
ಸುರಕ್ಷತೆಯೇ ಮಂತ್ರ
ಡ್ಯುಎಲ್ ಚಾನೆಲ್ ಎಬಿಎಸ್ ಬೈಕ್ಗಳು
Team Udayavani, Jun 24, 2019, 5:00 AM IST
ವಾಹನಗಳಿಗೆ ಬ್ರೇಕ್ ಇರುವುದು ಸಹಜ. ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಬ್ರೇಕ್ ಹಾಕಿದರೆ, ತನ್ನಿಂದತಾನೇ ಬ್ರೇಕ್ ಲಾಕ್ ಆಗುತ್ತದೆ (ಹಿಡಿದಿಟ್ಟುಕೊಂಡ ರೀತಿ) ಇದರಿಂದ ಸ್ಕಿಡ್ ಆಗಿ ವಾಹನ ನಿಯಂತ್ರಣ ಕಳೆದುಕೊಳ್ಳುತ್ತದೆ. ಇದರಿಂದ ಅಪಘಾತ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಆವಿಷ್ಕಾರಗೊಂಡ ಒಂದು ತಾಂತ್ರಿಕ ವಿಧಾನ ಎಬಿಎಸ್. ಇದು ಬ್ರೇಕ್ ಹಿಡಿದಿಟ್ಟುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಎಲೆಕ್ಟ್ರಾನಿಕ್ ಸೆನ್ಸರ್ ವ್ಯವಸ್ಥೆ ಇದ್ದು, ಬ್ರೇಕ್ ಅನ್ನು ಹಿಡಿದು-ಬಿಟ್ಟು ಎಂಬಂತೆ ಮಾಡುತ್ತದೆ. ಇದರಿಂದ ಚಕ್ರದ ಮೇಲೆ ಒತ್ತಡ ಬೀಳದೆ ಇದ್ದು, ವಾಹನ ಸ್ಕಿಡ್ ಆಗುವುದನ್ನು ತಪ್ಪಿಸುತ್ತದೆ.
ರಸ್ತೆ ಅಪಘಾತ ತಡೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಂತ ಹಂತವಾಗಿ ಕಾನೂನುಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ. ಅದರಂತೆ, ಈ ಆರ್ಥಿಕ ವರ್ಷದಲ್ಲಿ 150 ಸಿ.ಸಿ. ಮೇಲ್ಪಟ್ಟ ಬೈಕ್ಗಳಿಗೆ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ಹೊಂದಿರುವುದು ಕಡ್ಡಾಯವಾಗಿದೆ. ಹಾಗೆಯೇ, 150 ಸಿಸಿ ವರೆಗಿನ ಬೈಕ್ಗಳಿಗೆ ಕಾಂಬಿ ಬ್ರೇಕ್ ಸಿಸ್ಟಂ (ಒಂದು ಬ್ರೇಕ್ ಅದುಮಿದರೆ, ಇನ್ನೊಂದು ಬ್ರೇಕ್ ಕಾರ್ಯಾಚರಿಸುವಂತೆ ಇರುವ ವ್ಯವಸ್ಥೆ) ಕಡ್ಡಾಯವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಮಹತ್ವದ್ದು.
ಏನಿದು ಎಬಿಎಸ್ ವ್ಯವಸ್ಥೆ?
ವಾಹನಗಳಿಗೆ ಬ್ರೇಕ್ ಇರುವುದು ಸಹಜ. ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಬ್ರೇಕ್ ಹಾಕಿದರೆ, ತನ್ನಿಂದತಾನೇ ಬ್ರೇಕ್ ಲಾಕ್ ಆಗುತ್ತದೆ (ಹಿಡಿದಿಟ್ಟುಕೊಂಡ ರೀತಿ) ಇದರಿಂದ ಸ್ಕಿಡ್ ಆಗಿ ವಾಹನ ನಿಯಂತ್ರಣ ಕಳೆದುಕೊಳ್ಳುತ್ತದೆ. ಇದರಿಂದ ಅಪಘಾತ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಆವಿಷ್ಕಾರಗೊಂಡ ಒಂದು ತಾಂತ್ರಿಕ ವಿಧಾನ ಎಬಿಎಸ್. ಇದು ಬ್ರೇಕ್ ಹಿಡಿದಿಟ್ಟುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಎಲೆಕ್ಟ್ರಾನಿಕ್ ಸೆನ್ಸರ್ ವ್ಯವಸ್ಥೆ ಇದ್ದು, ಬ್ರೇಕ್ ಅನ್ನು ಹಿಡಿದು-ಬಿಟ್ಟು ಎಂಬಂತೆ ಮಾಡುತ್ತದೆ. ಇದರಿಂದ ಚಕ್ರದ ಮೇಲೆ ಒತ್ತಡ ಬೀಳದೆ ಇದ್ದು, ವಾಹನ ಸ್ಕಿಡ್ ಆಗುವುದನ್ನು ತಪ್ಪಿಸುತ್ತದೆ. ಸದ್ಯ 150 ಸಿಸಿ ವರೆಗಿನ ಬೈಕ್ಗಳಲ್ಲಿ ಎಬಿಎಸ್ ಇರುವುದಾದರೂ ಸಿಂಗಲ್ ಚಾನೆಲ್ ಎಬಿಎಸ್ (ಒಂದೇ ಚಕ್ರಕ್ಕೆ- ಮುಂಭಾಗ ಮಾತ್ರ) ಅಳವಡಿಸಿರಲಾಗುತ್ತದೆ. ಅದಕ್ಕಿಂತ ಮೇಲ್ಪಟ್ಟ ಸಿಸಿಯ ಬೈಕ್ಗಳಲ್ಲಿ , ಕೆಲವುಗಳಲ್ಲಿ ಡ್ಯುಎಲ್ ಚಾನೆಲ್ ಎಬಿಎಸ್ ಅಳವಡಿಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಇದು ಹೆಚ್ಚು ಸೂಕ್ತವಾಗಿವೆ.
2 ಲಕ್ಷ ರೂ. ಒಳಗಿನ ಬೈಕ್ಗಳು
ಹೋಂಡಾ ಸಿಬಿಆರ್ 250 ಆರ್
ಫುಲ್ಫೇರಿಂಗ್ನ ರೇಸಿಂಗ್ ಮಾದರಿಯ ಈ ಬೈಕ್ ಸುಧಾರಿತ ಆವೃತ್ತಿಯನ್ನು 2018ರಲ್ಲಿ ಹೋಂಡಾ ಬಿಡುಗಡೆ ಮಾಡಿದ್ದು, ಡ್ಯುಎಲ್ ಚಾನೆಲ್ ಎಬಿಎಸ್ ಹೊಂದಿದೆ. 249.6 ಸಿಸಿಯ ಈ ಬೈಕ್ 26.5 ಎಚ್ಪಿ 22.9 ಎನ್ಎಂ ಟಾರ್ಕ್ ಹೊಂದಿದೆ. ಬಿಎಸ್-4 ಎಂಜಿನ್ ಆವೃತ್ತಿ ಹೊಂದಿದೆ. ಎಲ್ಲ ಎಲ್ಇಡಿ ಲೈಟ್ಗಳನ್ನು ಹೊಂದಿದೆ. ನ್ಪೋರ್ಟ್ಸ್ ಟೂರಿಂಗ್ಗೆ ಈ ಬೈಕ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಬಜಾಜ್ ಡಾಮಿನೋರ್ 400
ಬಜಾಜ್ನ ಅತಿ ಶಕ್ತಿಶಾಲಿ ಬೈಕ್. 400 ಸಿಸಿಯ ಎಂಜಿನ್ ಹೊಂದಿದ ಡಾಮಿನಾರ್, 40 ಎಚ್ಪಿ, 35 ಎನ್ಎಂ. ಟಾರ್ಕ್ ಹೊಂದಿದೆ. ಬಿಎಸ್6 ಆವೃತ್ತಿಯ ಎಂಜಿನ್ ಹೊಂದಿದೆ. ಸಿಂಗಲ್ ಸಿಲಿಂಡರ್, ತ್ರಿಪಲ್ ಸ್ಪಾರ್ಕ್, ಸ್ಲಿಪರಿ ಕ್ಲಚ್, ಸಂಪೂರ್ಣ ಎಲ್ಇಡಿ ಲೈಟ್ಗಳು ಈ ಬೈಕ್ನ ಹೆಚ್ಚುಗಾರಿಕೆ. ಟೂರಿಂಗ್ ಉದ್ದೇಶಕ್ಕಾಗಿ ಈ ಬೈಕ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಎನ್ಫೀಲ್ಡ್ 350
ಅತಿ ಹೆಚ್ಚು ಮಾರಾಟವಾಗುವ ಬೈಕ್ ಇದು. ಹಲವಾರು ಜನರ ಕನಸು ಎನ್ಫೀಲ್ಡ್. 346 ಸಿಸಿ ಯುಸಿಇ ಎಂಜಿನ್, ಡ್ಯುಎಲ್ ಸ್ಪಾರ್ಕ್ ಪ್ಲಗ್ ವ್ಯವಸ್ಥೆ ಹೊಂದಿದ ಈ ಬೈಕ್ನಲ್ಲೂ ಈಗ ಎಬಿಎಸ್ ವ್ಯವಸ್ಥೆ ಇದೆ. ಸದ್ಯ ಎನ್ಫೀಲ್ಡ್ನ ಸ್ಟಾಂಡರ್ಡ್ ಆವೃತ್ತಿ ಹೊರತು ಪಡಿಸಿ ಎಲ್ಲದರಲ್ಲೂ ಡಿಸ್ಕ್ಬ್ರೇಕ್ ಮತ್ತು ಎಬಿಎಸ್ ವ್ಯವಸ್ಥೆ ಇದೆ. ಎನ್ಫೀಲ್ಡ್ನ ಇನ್ನೊಂದು ಮಾದರಿ ಥಂಡರ್ಬರ್ಡ್ ಕೂಡ, ಕಡಿಮೆ ದರಕ್ಕೆ ಡ್ಯುಎಲ್ ಚಾನೆಲ್ ಎಬಿಎಸ್ ಹೊಂದಿರುವ ಬೈಕ್ ಆಗಿದೆ.
ಅಪಾಚೆ 200
197 ಸಿಸಿಯ ಈ ಬೈಕ್ನಲ್ಲಿ ಟಿವಿಎಸ್ ಆರಂಭದಿಂದಲೇ ಡ್ಯುಎಲ್ ಚಾನೆಲ್ ಎಬಿಎಸ್ ಅನ್ನು ನೀಡುತ್ತಿದೆ. 4 ವಾಲ್Ìಗಳ ಎಂಜಿನ್ ಇದರಲ್ಲಿದ್ದು, 20.2 ಎಚ್ಪಿ ಶಕ್ತಿ, 18.1 ಎನ್ಎಂ ಟಾರ್ಕ್ ಹೊಂದಿದೆ. ಹಿಂಭಾಗ ಎಲ್ಇಡಿ, ಮುಂಭಾಗ ಹ್ಯಾಲೋಜನ್ ಲ್ಯಾಂಪ್ ಅನ್ನು ಇದು ಹೊಂದಿದೆ.
ಅಪಾಚೆ 180
ದೇಶದಲ್ಲಿ ಮೊದಲ ಬಾರಿಗೆ ಡ್ಯುಎಲ್ ಚಾನೆಲ್ ಎಬಿಎಸ್ ಹೊಂದಿದ ಬೈಕ್ ತಯಾರಿಸಿದ ಕೀರ್ತಿ ಸಿಕ್ಕಿದ್ದು ಟಿವಿಎಸ್ಗೆ. ಅದು ಅಪಾಚೆ 180 ಮೂಲಕ. ಆರಂಭದಿಂದಲೇ ಈ ಬೈಕ್ನಲ್ಲಿ ಎಬಿಎಸ್ ವ್ಯವಸ್ಥೆ ನೀಡಲಾಗುತ್ತಿತ್ತು. 177ಸಿಸಿಯ 16.6 ಎಚ್ಪಿಯ ಶಕ್ತಿ, 15.5 ಎನ್ಎಂ ಟಾರ್ಕ್ ಅನ್ನು ಇದು ಹೊಂದಿದೆ.
-ಈಶ
ಈ ವಿಭಾಗದಿಂದ ಇನ್ನಷ್ಟು
-
ಕ್ಯಾಲಿಫೋರ್ನಿಯಾ / ನಾರ್ವೆ: ತಾಂತ್ರಿಕ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಆವಿಷ್ಕಾರಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಅಂತಹದೇ ಹೊಸ ಸಾಹಸಕ್ಕೆ ಗೂಗಲ್...
-
ಕ್ಯಾಲಿಫೋರ್ನಿಯಾ: ರಾತ್ರಿಯ ವೇಳೆ ಸುರಕ್ಷತೆಯಿಂದ ಜನರನ್ನು ಮನೆಗೆ ತಲುಪಿಸುವ ಉದ್ದೇಶದಿಂದ ಗೂಗಲ್ ಮ್ಯಾಪ್ ಹೊಸ ಫೀಚರ್ ಒಂದನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಗೂಗಲ್...
-
ಮುಂಬಯಿ: 'ಕಾಲ್ ಆಫ್ ಡ್ಯೂಟಿ ಮೊಬೈಲ್' ಎಂಬ ಮೊಬೈಲ್ ಗೇಮ್ 2019ರ ಗೋಗಲ್ ಪ್ಲೇನ ಅತ್ಯುತ್ತಮ ಮೊಬೈಲ್ ಗೇಮ್ ಪ್ರಶಸ್ತಿಗೆ ಭಾಜನವಾಗಿದೆ. ಜೊತೆಗೆ ಗೂಗಲ್ ಪ್ಲೇಸ್...
-
ಹೊಸದಿಲ್ಲಿ: ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ನ ಭಾರತೀಯ ಅಧಿಕಾರಿಗಳು ಬುಧವಾರ, ಮಹಿಳೆಯ ಸಬಲೀಕರಣದ ಸಂಸದೀಯ ಸಮಿತಿಯ ಮುಂದೆ ಹಾಜರಾಗಿ, ಆನ್ಲೈನ್ ಕ್ಷೇತ್ರದಲ್ಲಿ...
-
ನವದೆಹಲಿ: ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಟೆಲಿಕಾಂ ಕಂಪೆನಿಗಳು ಇದೀಗ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಮುಂದಾಗಿವೆ. ಟೆಲಿಕಾಂ ಕ್ಷೇತ್ರದಲ್ಲಿ...
ಹೊಸ ಸೇರ್ಪಡೆ
-
ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಿ ಮಾತನಾಡುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್...
-
ಬೆಂಗಳೂರು: ಕನ್ನಡದ ಜನಪ್ರಿಯ ಲಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬರುತ್ತಿದೆ. ಈಗಾಗಲೇ 50 ಎಪಿಸೋಡ್ಗಳನ್ನು ಪೂರೈಸಿದೆ....
-
ವಿಟ್ಲ: ಕಟ್ಟಡ ಕೆಲಸ ಮಾಡುತಿದ್ದ ಕಾರ್ಮಿಕರ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಸಾವನ್ನಪ್ಪಿದ್ದು ಓರ್ವ ಕಾರ್ಮಿಕ ಗಂಭೀರ ಗಾಯಗೊಂಡ...
-
ಮಂಗಳೂರು : ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾವನ್ನು ಸರ್ಕಾರ ವಶಕ್ಕೆ ಪಡೆದಿದೆ ಎನ್ನುವ ವದಂತಿಯ ಕುರಿತು ಸ್ಪಷ್ಟನೆ ನೀಡಿರುವ ದರ್ಗಾದ ನೂತನ ಆಡಳಿತಾಧಿಕಾರಿ...
-
ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಪ್ರತಿಭಾವಂತ ನಟ, ನಟಿಯರು. ಹಾಸ್ಯದಿಂದ ಹಿಡಿದು ಗಂಭೀರ ಪಾತ್ರದವರೆಗೂ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ....