ಬೆನಿಫಿಟ್‌ ಖೋತಾ!

ಇಎಂಐ ಮುಂದೂಡಿಕೆಯಿಂದ ನಷ್ಟವೇನು?

Team Udayavani, Jul 13, 2020, 4:05 PM IST

ಬೆನಿಫಿಟ್‌ ಖೋತಾ!

ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆರ್‌ಬಿಐ, ತಿಂಗಳ ಕಂತು ಕಟ್ಟುವ ಪ್ರಕ್ರಿಯೆಯನ್ನು ಮುಂದೂಡುವ ಸವಲತ್ತನ್ನು ಪರಿಚಯಿಸಿತ್ತು. ಹಣದ ತುರ್ತು ಇದ್ದವರು ಮಾತ್ರ ಈ ಸವಲತ್ತನ್ನು ಬಳಸಿಕೊಂಡರೆ ಉತ್ತಮ. ಏಕೆಂದರೆ, ಇಎಂಐ ಮುಂದೂಡಿಕೆ ಸವಲತ್ತಿನಿಂದ ಭವಿಷ್ಯದಲ್ಲಿ ಹೆಚ್ಚುವರಿ ಮೊತ್ತ ತೆರಬೇಕಾಗುತ್ತದೆ. ಇಎಂಐ ಮುಂದೂಡಿಕೆ ಸವಲತ್ತನ್ನು ಬಳಸಿಕೊಳ್ಳದಿರಲು ಇನ್ನೊಂದು ಕಾರಣವೆಂದರೆ, ಮನೆ ಸಾಲದ ಮೇಲಿನ ತೆರಿಗೆ ಕಡಿತದ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದು.

ಮನೆ ಸಾಲದ ಪ್ರಿನ್ಸಿಪಲ್‌ ಮೊತ್ತದ ಮೇಲೆ ದೊರೆಯುವ ತೆರಿಗೆ ಕಡಿತದ ಬೆನಿಫಿಟ್ ಇಎಂಐ ಮುಂದೂಡಿಕೆ ಸವಲತ್ತನ್ನು ಬಳಸಿಕೊಳ್ಳುವುದರಿಂದ ಕಡಿಮೆಯಾಗುತ್ತದೆ. 6 ತಿಂಗಳ (ಮಾರ್ಚ್‌- ಆಗಸ್ಟ್) ಇಎಂಐ ಮುಂದೂಡಿಕೆ ಅಳವಡಿಸಿಕೊಂಡಿದ್ದರೆ, ಅಷ್ಟು ದೀರ್ಘ‌ ಸಮಯ ಕಂತು ಕಟ್ಟಬೇಕಿಲ್ಲ. ಹಾಗಾಗಿ, ಮರುಪಾವತಿ ಮಾಡಬೇಕಾದ ಮೊತ್ತ ಉಳಿದುಹೋಗುತ್ತದೆ. ಇದರಿಂದಾಗಿ ಹಣ ಮರುಪಾವತಿಸಿದ ಆಧಾರದ ಮೇಲೆ ಟ್ಯಾಕ್ಸ್ ಡಿಡಕ್ಷನ್‌ ಬೆನಿಫಿಟ್‌ ಕ್ಲೈಮ್‌ ಮಾಡಲು ಆಗುವುದಿಲ್ಲ.

ಕ್ಲೈಮ್‌ ಮಾಡಲು ಆಗುವುದಿಲ್ಲ :  ಒಬ್ಬ ವ್ಯಕ್ತಿ ತಾನು ಮನೆ ಸಾಲ ತೀರಿಸಲು ಪಾವತಿಸಿದ ಮೊತ್ತದ ಮೇಲೆ ಸೆಕ್ಷನ್‌ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ ಬೆನಿಫಿಟ್‌ ಅನ್ನು ಕ್ಲೈಮ್‌ ಮಾಡಬಹುದು. ಡಿಡಕ್ಷನ್‌ ಬೆನಿಫಿಟ್‌ ಅನ್ನು ಸಾಲ ಮರುಪಾವತಿಯ ಅಧಾರದ ಮೇಲೆ ಮಾತ್ರವೇ ಕ್ಲೈಮ್‌ ಮಾಡಬಹುದು ಎಂದು ಸೆಕ್ಷನ್‌ 80ಸಿಯಲ್ಲಿ ಹೇಳಲಾಗಿದೆ. ಹೀಗಾಗಿ ಇಎಂಐ ಮುಂದೂಡಿಕೆ ಸವಲತ್ತನ್ನು ಅಳವಡಿಸಿಕೊಂಡವರು ಕಂತು ಕಟ್ಟದೇ ಇರುವುದರಿಂದ, ಮರುಪಾವತಿಯ ಆಧಾರದ ಮೇಲೆ ಕ್ಲೈಮ್‌ ಮಾಡಲು ಆಗುವುದಿಲ್ಲ. ಹೀಗಾಗಿ ಅವರು ತೆರಿಗೆ ಕಡಿತದ ಬೆನಿಫಿಟ್‌ನಿಂದ ವಂಚಿತರಾಗುತ್ತಾರೆ.

 ಉದಾಹರಣೆಗೆ, ವ್ಯಕ್ತಿಯೊಬ್ಬ 8% ಬಡ್ಡಿಯಂತೆ, 50 ಲಕ್ಷ ರೂ. ಮನೆಸಾಲ ಮಾಡಿರುತ್ತಾನೆ ಎಂದುಕೊಳ್ಳೋಣ. ಸಾಲದ ಅವಧಿ 20 ವರ್ಷಗಳು. ಇದು ಮರುಪಾವತಿಯ ಮೊದಲ ವರ್ಷ ಎಂದುಕೊಂಡರೆ ಮುಂದಿನ 12 ತಿಂಗಳು ಆತ ಮರುಪಾವತಿಸಬೇಕಿರುವ ಮೊತ್ತ 1,05,683. ಒಂದು ವೇಳೆ ಆತ 6 ತಿಂಗಳ ಕಾಲ ಇ ಎಂ ಐ ಮುಂದೂಡಿಕೆ ಸವಲತ್ತನ್ನು ಅಳವಡಿಸಿಕೊಂಡರೆ, 6 ತಿಂಗಳು ಕಳೆದ ನಂತರ 43,517ರೂ.ಪ್ರಿನ್ಸಿಪಲ್‌ ಮೊತ್ತವನ್ನು ಮರುಪಾವತಿಸ  ಬೇಕಾಗುತ್ತದೆ. ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳ ಬೇಕಾಗುತ್ತದೆ. ಆಗ ಟ್ಯಾಕ್ಸ್ ಡಿಡಕ್ಷನ್‌ ಬೆನಿಫಿಟ್‌ ಕೂಡಾ ಕಡಿಮೆಯಾಗುತ್ತದೆ.

ಬೆನಿಫಿಟ್‌ ಉಳಿಸಿಕೊಳ್ಳುವ ಮಾರ್ಗ :  ಕೆಲ ಸಾಲಗಾರರಿಗೆ ಇಎಂಐ ಮುಂದೂಡಿಕೆ ಅಳವಡಿಸಿಕೊಳ್ಳುವುದರಿಂದ ಟ್ಯಾಕ್ಸ್ ಬೆನಿಫಿಟ್‌ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ. ಇನ್ನು ಕೆಲ ಮಂದಿಗೆ ಟ್ಯಾಕ್ಸ್ ಬ್ರೇಕ್‌ ಅವಧಿ ಹೆಚ್ಚಬಹುದು. ಮನೆಸಾಲದ ಮೇಲೆ ಕಟ್ಟಿದ ಬಡ್ಡಿಯ ಆಧಾರದ ಮೇಲೆ 2 ಲಕ್ಷದವರೆಗೂ ಟ್ಯಾಕ್ಸ್ ಬೆನಿಫಿಟ್‌ ಪಡೆಯಬಹುದಾಗಿದೆ. ಇಎಂಐ ಮುಂದೂಡಿಕೆ ಸವಲತ್ತನ್ನು ಪಡೆದುಕೊಳ್ಳುವುದರಿಂದ ಪ್ರಿನ್ಸಿಪಲ್‌ ಮೊತ್ತದ ಮರುಪಾವತಿಗೆ ವಿರಾಮ ನೀಡಬಹುದು.

ಇದೇ ವೇಳೆ ಬಡ್ಡಿಯನ್ನು ಪಾವತಿಸುವ ಸ್ವಾತಂತ್ರ ಇದ್ದೇ ಇರುತ್ತದೆ. ಬಡ್ಡಿ ಮೊತ್ತವನ್ನು ಪಾವತಿಸುವುದರಿಂದ ಟ್ಯಾಕ್ಸ್ ಬೆನಿಫಿಟ್‌ ಅನ್ನು ಪಡೆದುಕೊಳ್ಳಬಹುದು. ಅಂದರೆ, ಟ್ಯಾಕ್ಸ್ ಬೆನಿಫಿಟ್‌ ಅನ್ನು ಬಡ್ಡಿ ಮರುಪಾವತಿಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ, ಬಾಕಿ ಉಳಿದಿರುವ ಪ್ರಿನ್ಸಿಪಲ್‌ ಮೊತ್ತದ ಮೇಲಲ್ಲ. ಸಾಲದ ಕಂತಿನ ಮೊದಲ ತಿಂಗಳುಗಳಲ್ಲಿ ಬಡ್ಡಿಯೇ ಕಂತಿನ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿರುತ್ತದೆ. ವರ್ಷಗಳು ಉರುಳಿದಂತೆ, ತಿಂಗಳ ಕಂತಿನಲ್ಲಿ ಬಡ್ಡಿಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಹೀಗಾಗಿ, ಬಡ್ಡಿಯ ಮೊತ್ತವನ್ನಾದರೂ ಕಟ್ಟುವುದರಿಂದ ಟ್ಯಾಕ್ಸ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ­

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.