ಎಂಜನಿಯರ್‌ ಚಿತ್ತ ಸಾವಯವದತ್ತ


Team Udayavani, Jun 19, 2017, 5:39 PM IST

engineer.jpg

ವೃತ್ತಿಯಿಂದ ಸಾಪ್ಟ್ವೇರ್‌ ಎಂಜನಿಯರ್‌. ಬಿಡುವಿನ ವೇಳೆಯಲ್ಲಿ ಈ ನಾಗರಾಜ್‌ ಖುಷಿ ಪಡುವುದು ತಮ್ಮ ಹೆಸರುಘಟ್ಟದ ಸಾವಯವ ತರಕಾರಿ ತೋಟದಲ್ಲಿ.  ಬೆಂಗಳೂರಿನ ತಮ್ಮ ಮನೆಯಿಂದ 20ಕಿ.ಮೀ ದೂರದಲ್ಲಿದೆ ತೋಟ. ನಾಗರಾಜ್‌ ಅವರದು ನಾಲ್ಕು ಎಕರೆ ತೋಟ. 

ನಾಗರಾಜ್‌ ಅವರು ಮೂಲತ ಕೃಷಿ ಕುಟುಂಬದಿಂದ ಬರದೇ ಇದ್ದರೂ ತಮ್ಮ ಕಾಲೇಜು ಜೀವನದಲ್ಲಿಯೇ ಬೇರೆಯವರ ಭೂಮಿಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಂಡು ಕೃಷಿ ಮಾಡುತ್ತಿದ್ದರು.  ಬಿ.ಎಸ್‌.ಸಿ ಕೃಷಿ ಪದವಿ ಮಾಡಬೇಕೆಂಬ ಕನಸನ್ನು ಹೊತ್ತರೂ ಅದು ಫ‌ಲಿಸದೇ  ಬಿ.ಇ ಪದವಿ ಮುಗಿಸಿ ಬೆಂಗಳೂರಲ್ಲಿ ಎಂಜನೀಯರ್‌ ಆಗಿ ಕಳೆದ 4 ವರ್ಷದಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ನಾಗರಾಜ್‌ ವಾರದಲ್ಲಿ ಶನಿವಾರ ಒಂದು ದಿನ ಪೂರ್ತಿ ಹಾಗೂ ನಿತ್ಯ ಬೆಳಗ್ಗೆ ಒಂದು ಗಂಟೆಗಳ ಕಾಲ ಫಾರ್ಮ್ನಲ್ಲಿ ನೀರು ಹರಿಸುತ್ತಾರೆ. ಕಳೆ ಕೀಳುವ ಕೆಲಸದಲ್ಲಿ ತಲ್ಲೀನರಾಗುತ್ತಾರೆ.  4 ಎಕರೆಯಲ್ಲಿ 1,000 ಹೂಕೋಸು, ಒಂದೂವರೆ ಎಕರೆಯಲ್ಲಿ ಬೆಂಡೆ, ಟೊಮೆಟೊ, ದೊಡ್ಡ ಮೆಣಸಿನಕಾಯಿ, ಉಳಿದಂತೆ ಕ್ಯಾರೆಟ್‌, ಹಾಗಲಕಾಯಿ, ಹೀರೆಕಾಯಿ, ನುಗ್ಗೆಕಾಯಿ, ಉರುಳಿಕಾಯಿ ,ಮೆಂತ್ಯ ಹಾಗೂ ದಂಟಿನ ಸೊಪ್ಪು, ಕೊತ್ತಂಬರಿ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.  ವರ್ಷಕ್ಕೆ ಖರ್ಚು ಎಲ್ಲಾ ಖರ್ಚು ತೆಗೆದರೂ 2 ಲಕ್ಷ ರೂಗಳ ನಿವ್ವಳ ಆದಾಯ.

ಕಳೆದ ಐದು ವ‚ರ್ಷಗಳಿಂದ ಬಾದಾಮಿ, ಮಲ್ಲಿಕಾ, ರಸಪುರಿ  200 ಮಾವು, 15 ಸಪೊಟಾ, 5 ಸೀತಾಫ‌ಲ, 20 ನುಗ್ಗೆ, 10 ಹಲಸು, 7 ನೆಲ್ಲಿ ಗಿಡಗಳನ್ನು ಬೆಳೆಯುತ್ತಿದ್ದಾರೆ. ಎಲ್ಲ ಹಣ್ಣುಗಳ ಫ‌ಸಲಿನಿಂದ ವರ್ಷಕ್ಕೆ 2 ಲಕ್ಷ ರೂ. ಆದಾಯ ಬರುತ್ತಿದೆ. ಮಾವು ಫ‌ಸಲು ಬರುವ ಸಂದರ್ಭದಲ್ಲಿ ಕುಂಬಳ ಬೆಳೆ ಬೆಳೆಯುತ್ತಾರೆ.

ಎರಡು ಸೀಮೆ ಹಸುವಿನಿಂದ ಬೆಳಗ್ಗೆ ಸಂಜೆ 10 ಲೀಟರ್‌ ಹಾಲು ನೀಡುತ್ತಿದೆ.  ಇದರಿಂದ ತಿಂಗಳಿಗೆ 30 ಸಾವಿರ ರೂಗಳ ಆದಾಯ ದೊರೆಯುತ್ತಿದೆ.

ಜೊತೆಗೆ ಸಗಣಿ, ಅರಿಷಿಣ, ಗಂಜಲಾ ಹಾಗೂ ಬೇವಿನೆಣ್ಣೆಗಳನ್ನು ಸೇರಿಸಿ ಜೀವಾಮೃತ ತಯಾರಿಸುತ್ತಾರೆ.  ಗಿಡ ಚಿಕ್ಕದಿದ್ದಾಗ, ಹೂ ಬಿಡುವ ಸಮಯದಲ್ಲಿ ಹಾಗೂ ಕಾಯಿ ಬಿಡುವ ಸಂದರ್ಭದಲ್ಲಿ ಜೀವಾಮೃತ ಹೊರತು ಪಡಿಸಿ ಯಾವುದೇ ರಾಸಾಯನಿಕ ಔಷಧಗಳನ್ನು ಸಿಂಪಡಿಸುವುದಿಲ್ಲ. ಮೂರು ಇಂಚಿನ ಬೋರವೆಲ್‌ ನಿಂದ ಎರಡು ದಿನಕ್ಕೊಮ್ಮೆ ನೀರು ಹಾಯಿಸುತ್ತಾರೆ.  

ಇನ್ನೊಂದು ವಿಶೇಷ ಎಂದರೆ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ದೊಡ್ಡ ಬೆಲೆಗೆ ಮಾರಾಟ ಮಾಡಬಹುದಿತ್ತು. ಆದರೆ ಇವರು ಬೆಂಗಳೂರಿನ ವಿದ್ಯಾರಣ್ಯಪುರದ ಅಪಾರ್ಟ್‌ಮೆಂಟ್‌ಗಳ ಸುಮಾರು 100 ಮಧ್ಯಮ ವರ್ಗ ಕುಟುಂಬಗಳಿಗೆ ಹಾಪ್‌ ಕಾಮ್ಸ್‌ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ವ್ಯಾಟ್ಸ್‌ ಆಫ್ ಗುಂಪು ಸಹ ಮಾಡಿಕೊಂಡಿದ್ದಾರೆ.  “ಮಧ್ಯಮ ವರ್ಗದ ಜನರಿಗೆ ವಿಷರಹಿತ ಶುದ್ಧ ತರಕಾರಿ ಹಾಗೂ ಹಣ್ಣು ತಲುಪಿಸುವ ಮಹಾದಾಸೆ ನನ್ನದು’ ಎನ್ನುತ್ತಾರೆ ನಾಗರಾಜ್‌. 

– ಗುರುರಾಜ.ಬ.ಕನ್ನೂರ.ಆರೂಢನಂದಿಹಾಳ.

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.