ದುಬಾರಿ ವಸ್ತುಗಳು: ಕೀಪ್ಯಾಡ್‌ ಫೋನ್‌; ಬೆಲೆ: 2.3 ಕೋಟಿ ರೂ.


Team Udayavani, May 11, 2020, 10:52 AM IST

Costly-items

ದುಬಾರಿ ಫೋನು ಎಂದರೆ, ಐಫೋನ್‌ ಅಥವಾ ಹೈ ಎಂಡ್‌ ಸ್ಯಾಮ್‌ಸಂಗ್‌ ಫೋನುಗಳು ನೆನಪಾಗುತ್ತವೆ. ಆದರೆ, ಬ್ರಿಟನ್‌ ಮೂಲದ “ವರ್ಚು’ ಎನ್ನುವ ಫೋನ್‌ ತಯಾರಕ ಸಂಸ್ಥೆ, ದುಬಾರಿ ಬೆಲೆಯ ಫೋನುಗಳನ್ನು ತಯಾರಿಸುತ್ತದೆ. ಈ ಸಂಸ್ಥೆ ತಯಾರಿಸಿರುವ ಹೊಸ ಫೋನ್‌ ಮಾಡೆಲ್‌ನ ಹೆಸರು, “ಸಿಗ್ನೇಚರ್‌ ಕೋಬ್ರಾ’. ಸ್ಮಾರ್ಟ್‌ ಫೋನ್‌ಗಳ ಭರಾಟೆಯ ನಡುವೆ, ಈ ಕೀಪ್ಯಾಡ್‌ ಫೋನಿಗೆ ಕೋಟಿಗಟ್ಟಲೆ ಹಣವನ್ನೇಕೆ ಕೊಡಬೇಕು ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಈ ಫೋನ್‌ನಲ್ಲಿ ಹಾವಿನ ಆಕೃತಿಯದೆಯಲ್ಲ (ಚಿತ್ರ ನೋಡಿ ) ಅದನ್ನು ಸಿದ್ಧಪಡಿಸಲು, 439 ರತ್ನಗಳನ್ನು ಬಳಸಲಾಗಿದೆ. ಅಲ್ಲದೆ, ಎರಡು ವಜ್ರಗಳಿಂದ ಹಾವಿನ ಕಣ್ಣುಗಳನ್ನು ರೂಪಿಸಲಾಗಿದೆ. ಇದರಲ್ಲಿ ಟಿ.ಎಫ್.ಟಿ. ಡಿಸ್‌ಪ್ಲೇ ಇದ್ದು, 2
ಜಿ.ಬಿ. ರ್ಯಾಮ್‌ ಮತ್ತು ಇಂಟರ್ನಲ್‌ ಸ್ಟೋರೇಜ್‌ 16 ಜಿ.ಬಿ. ನೀಡಲಾಗಿದೆ. ರಿಮೂವೆಬಲ್‌ ಬ್ಯಾಟರಿ ಇದ್ದು, ಐದೂವರೆ ಗಂಟೆಗಳ ಕಾಲ ಟಾಕ್‌ ಟೈಮ್‌ ಹೊಂದಿದೆ. ಅಂದಹಾಗೆ, ವರ್ಚು ಕಂಪನಿಯನ್ನು ಸ್ಥಾಪಿಸಿದ್ದು ನೋಕಿಯ. 1998ರ ತನಕ ವರ್ಚು, ನೋಕಿಯಾದ ಅಂಗಸಂಸ್ಥೆಯಾಗಿಯೇ ಇತ್ತು. ನಂತರ ಅದನ್ನು ಬ್ರಿಟನ್‌ ಮೂಲದ ಸಂಸ್ಥೆಗೆ ಮಾರಾಟ ಮಾಡಲಾಯಿತು.

ವೈಜ್ಞಾನಿಕ ವಿನ್ಯಾಸದ ಪೆನ್‌ ಬೆಲೆ: 60 ಕೋಟಿ ರೂ.
ಒಂದು ಕಾಲದಲ್ಲಿ, ಶಾಲೆಗಳಲ್ಲಿ ಇಂಕ್‌ ಪೆನ್‌ ಅನ್ನು ಮಾತ್ರವೇ ಬಳಸಬೇಕು ಎಂಬ ನಿಯಮವಿತ್ತು. ಆದರೆ, ಈಗ ಎಲ್ಲೆಲ್ಲೂ, ಬಾಲ್‌ ಪೆನ್‌ನ ದರ್ಬಾರು ಜೋರಾಗಿದೆ. ಇಂದು ಇಂಕ್‌ ಪೆನ್‌ ಅನ್ನು, ಸ್ಟೇಟಸ್‌ ಸಿಂಬಲ್‌ ಆಗಿ ನೋಡಲಾಗುತ್ತಿದೆ. ಹೀಗಾಗಿಯೇ, ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಫೌಂಟೇನ್‌ ಪೆನ್ನನ್ನು ಕಾಣಬಹುದು. ಅಂದಹಾಗೆ, ಜಗತ್ತಿನ ಅತಿ ದುಬಾರಿ ಫೌಂಟೇನ್‌ ಪೆನ್‌ ಎಂಬ ಖ್ಯಾತಿಗೆ ಪಾತ್ರವಾದ ಪೆನ್ನು “ಫ‌ಲ್ಗೊರ್‌ ನಾಕ್ಟರ್ನಸ್‌’. ಇಟಲಿಯ ಸಂಸ್ಥೆ “ತಿಬಾಲ್ದಿ’ ಈ ಪೆನ್ನನ್ನು ತಯಾರಿಸಿದೆ. ಇದರ ವಿನ್ಯಾಸ ಮಾಡಲು, ನುರಿತ ತಂತ್ರಜ್ಞರು
ವೈಜ್ಞಾನಿಕವಾಗಿ ಕಷ್ಟಪಟ್ಟಿದ್ದಾರೆ. ವಿಜ್ಞಾನದಲ್ಲಿ, ಪೈ ಅನುಪಾತ ಸೂತ್ರ ಹೆಸರುವಾಸಿಯಾದದ್ದು. ಅದಕ್ಕೆ ಅನುಗುಣವಾಗಿ, ಈ ಪೆನ್ನನ್ನು ರೂಪಿಸಲಾಗಿದೆ. ಅಷ್ಟು ಮಾತ್ರವಲ್ಲ; 123 ರತ್ನಗಳು, 945 ಕಪ್ಪು ವಜ್ರಗಳನ್ನು ಕೂರಿಸಲಾಗಿದೆ. ಆಭರಣ ಸಂಸ್ಥೆಯಾದ ತಿಬಾಲ್ದಿ, ಈ ಪೆನ್ನನ್ನು ಆಭರಣದಂತೆಯೇ ರೂಪಿಸಿರುವುದು ಅಚ್ಚರಿಯೇನಲ್ಲ!

 

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.