ರಾಮ ರಕ್ಷೆ : ಭಟ್ಟರ ಫೇಸ್‌ಶೀಲ್ಡ್‌ ಉದ್ಯಮದ ಸಾಹಸ


Team Udayavani, Oct 12, 2020, 7:27 PM IST

ರಾಮ ರಕ್ಷೆ ಭಟ್ಟರ ಫೇಸ್‌ಶೀಲ್ಡ್‌ ಉದ್ಯಮದ ಸಾಹಸ

 

ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟ ಎದುರಾದಾಗ ಆಟೊಮೊಬೈಲ್‌ ಉದ್ಯಮಿ ಶ್ರೀರಾಮ ಭಟ್ಟರು ಎದೆಗುಂದಲಿಲ್ಲ. ತಮ್ಮಲ್ಲಿದ್ದ ನೌಕರರನ್ನುಕೆಲಸದಿಂದ ತೆಗೆಯಲಿಲ್ಲ. ಬದಲಾಗಿ, ಆಟೊಮೊಬೈಲ್‌ ಉದ್ಯಮಕ್ಕೆ ಚಿಕ್ಕ ಬ್ರೇಕ್‌ಕೊಟ್ಟು, ಕೋವಿಡ್ ಸೋಂಕು ತಡೆಯಲು ಅಗತ್ಯವಿರುವ ಫೇಸ್‌ ಶೀಲ್ಡ್ ಗಳ ಉತ್ಪಾದನೆಗೆ ಮುಂದಾದರು…

ಭಾರತದಲ್ಲಿ ಕೋವಿಡ್ ವೈರಸ್‌ ಹರಡುವಿಕೆಯನ್ನು ತಡೆಯಲು ಮಾರ್ಚ್‌ ತಿಂಗಳಲ್ಲಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಲಾಕ್‌ಡೌನ್‌ ದೆಸೆಯಿಂದಾಗಿ ಹಲವಾರು ಕಂಪನಿಗಳು,ಕೈಗಾರಿಕೆಗಳು ಬಾಗಿಲು ಮುಚ್ಚಿದವು. ಪರಿಣಾಮ, ಹಲವು ಮಂದಿ “ವರ್ಕ್‌ ಫ್ರಂ ಹೋಂ’ ಎನ್ನುತ್ತಾಊರಿನ ಹಾದಿ ಹಿಡಿದರೆ, ಇನ್ನೂಕೆಲವರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾದರು. ಇಂಥ ಸಂಕಷ್ಟದಕಾಲದಲ್ಲಿಯೂ ತಮ್ಮ ಕೈಗಾರಿಕೆಗೆ ಹೊಸ ಸ್ವರೂಪ ನೀಡಿ, ಹಲವಾರುಕಾರ್ಮಿಕರಿಗೆ ಉದ್ಯೋಗವನ್ನೂ ನೀಡಿ ಮಾದರಿಯಾಗಿದ್ದಾರೆ, ಹೊನ್ನಾವರ ಮೂಲದ ಉದ್ಯಮಿ ಶ್ರೀರಾಮ್‌ ಭಟ್‌.

ಫೇಸ್‌ಶೀಲ್ಡ್ ಉದ್ಯಮ ಪ್ರಾರಂಭ : ಹತ್ತು ವರ್ಷಗಳ ದೇಶದ ವಿವಿಧಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀರಾಮ್‌ ಭಟ್‌, ವಿದೇಶದಲ್ಲಿಯೂ ಎರಡು ವರ್ಷ ಕಾರ್ಯನಿರ್ವಹಿಸಿದ್ದರು. ಬಳಿಕ2006ರಲ್ಲಿ ಬೆಂಗಳೂರಿನಲ್ಲಿ ಶ್ರೀಮಾತಾ ಪೆಸಿಶನ್‌ಕಂಪೋನೆಚಿಟ್‌ಎಂಬ ಆಟೊಮೊಬೈಲ್‌ ಬಿಡಿಭಾಗಗಳ ತಯಾರಿಕೆಯ ಸ್ವಂತ ಉದ್ಯಮ ಪ್ರಾರಂಭಿಸಿದರು. ” ಕೋವಿಡ್ ಪ್ರಾರಂಭವಾದ ಬಳಿಕ ಸೋಂಕು ಹರಡದಂತೆ ತಡೆಗಟ್ಟಲು ಫೇಸ್‌ ಶೀಲ್ಡ್ ನ ಅಗತ್ಯ ಇತ್ತು. ಆದರೆ ಫೇಸ್‌ ಶೀಲ್ಡ್ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ ನಮ್ಮ ಆಟೊಮೊಬೈಲ್‌ ಬಿಡಿಭಾಗಗಳ ಉತ್ಪಾದನೆಯೂ ನಿಂತಿತ್ತು.

ಹೀಗಾಗಿ, ನಮ್ಮ ಕಾರ್ಮಿಕರು ಕೂಡಾ ಸಂಕಷ್ಟದಲ್ಲಿದ್ದರು.  ಬೇಡಿಕೆಗೆ ತಕ್ಕಷ್ಟು ಫೇಸ್‌ ಶೀಲ್ಡ್ ಗಳು ವಿದೇಶಗಳಿಂದ ಭಾರತಕ್ಕೆ ಪೂರೈಕೆಯಾಗಲಿಲ್ಲ. ಆ ಸಂದರ್ಭದಲ್ಲಿ ವೈದ್ಯಕೀಯ ಸೇರಿದಂತೆ ವಿವಿಧ ಇಲಾಖೆಗಳು ಫೇಸ್‌ಶೀಲ್ಡ್ ಗೆ ಬೇಡಿಕೆಯಿಟ್ಟವು. ಇದನ್ನೇ ಸವಾಲಾಗಿ ಸ್ವೀಕರಿಸಿ ಫೇಸ್‌ಶೀಲ್ಡ್  ಉದ್ಯಮವನ್ನು ಆರಂಭಿಸಿದೆವು” ಎನ್ನುತ್ತಾರೆ ಶ್ರೀರಾಮ್‌ ಭಟ್.

ಪ್ರಾರಂಭದಲ್ಲಿ ತಮ್ಮ ಬಳಿ ಇರುವ ಉಪಕರಣಗಳನ್ನು ಫೇಸ್‌ಶೀಲ್ಡ್  ತಯಾರಿಕೆಗೆ ಬೇಕಾಗುವಂತೆ ಮಾರ್ಪಾಡು ಮಾಡಿಕೊಂಡರು. ಅದರ ಬೆನ್ನಿಗೇ, ಫೇಸ್‌ ಶೀಲ್ಡ್  ತಯಾರಿಕೆಗೆ ಅಗತ್ಯವಿದ್ದ ಹಲವು ಉಪಕರಣಗಳನ್ನು ಖರೀದಿಸಿ ಉತ್ಪಾದನೆಗೆ ಮುಂದಾದರು. ಐಎಸ್‌ಓ ಮಾನ್ಯತೆ ಹೊಂದಿರುವ ಈ ಸಂಸ್ಥೆಯಲ್ಲಿ ಪ್ರತಿ ತಿಂಗಳು ಐದು ವಿಧದ, ಲಕ್ಷಕ್ಕೂ ಅಧಿಕ ಫೇಸ್‌ಶೀಲ್ಡ್ ಉತ್ಪಾದನೆಯಾಗುತ್ತಿದೆ. ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸರು, ಪತ್ರಕರ್ತರು ಹೀಗೆ ವಿವಿಧ ವಲಯಗಳಿಂದ ಫೇಸ್‌ಶೀಲ್ಡ್ ಗೆ ಉತ್ತಮ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಶ್ರೀರಾಮ್.

ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆಕೇವಲ 25 ರೂ. ಗೆ ಗ್ರಾಹಕರಿಗೆ ಫೇಸ್‌ ಶೀಲ್ಡ್ ಒದಗಿಸುವ ಮೂಲಕ, ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತಕರೆಗೆ ಭಟ್ಟರು ಸ್ಪಂದಿಸಿದ್ದಾರೆ.

ಹೊಸ ಪ್ರಾಡಕ್ಟ್ ಗಳು ಮಾರುಕಟ್ಟೆಗೆ :  ಇವರ ಕೈಗಾರಿಕಾ ಘಟಕದಲ್ಲಿ ಆಟೋಮೊಬೈಲ್‌ ಬಿಡಿಭಾಗಗಳು ಮತ್ತು ಫೇಸ್‌ಶೀಲ್ಡ್ ಗಳ ಜೊತೆಗೆ ಮತ್ತೂಕೆಲವು ಉತ್ಪನ್ನಗಳು ಸಿದ್ಧಗೊಳ್ಳುತ್ತಿವೆ. ಫೇಸ್‌ ಶೀಲ್ಡ್ ತಯಾರಿಕೆಯಿಂದಾಗಿ ಸಂಕಷ್ಟದಕಾಲದಲ್ಲಿ ನೌಕರರಿಗೆ ಉದ್ಯೋಗ ನೀಡಿದ್ದಲ್ಲದೇ, ಸ್ವ ಉದ್ಯಮದಕುರಿತು ಇನ್ನಷ್ಟು ಅನುಭವ ದೊರೆಯಿತು ಎಂಬುದು ಶ್ರೀರಾಮ್‌ ಅವರ ಅಂಬೋಣ. ಸ್ವದೇಶಿ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಕನಸಿದ್ದು, ಈಗಾಗಲೇ ಹೊಸ ಉತ್ಪನ್ನಗಳ ತಯಾರಿಕಾಕಾರ್ಯ ಪ್ರಾರಂಭ ಗೊಂಡಿದ್ದು, ಶೀಘ್ರವೇ ಮಾರುಕಟ್ಟೆ ಯನ್ನು ಪ್ರವೇಶಿಸಲಿವೆ. ಮುಂದಿನ ದಿನಗಳಲ್ಲಿ ಶ್ರೀಮಾತಾ ಪೆಸಿಶನ್‌ ಕಂಪೋನೆಚಿಟ್‌ನ ಸ್ವದೇಶಿ ಪ್ರಾಡಕ್ಟ್ ಗಳನ್ನು ಅಮೆಜಾನ್‌ ಸೇರಿದಂತೆ ವಿವಿಧ ಆನ್‌ಲೈನ್‌ ಮಾರುಕಟ್ಟೆ ಗೂ ಪರಿಚಯಿಸುವ ಆಕಾಂಕ್ಷೆ ಹೊಂದಿದ್ದಾರೆ ಭಟ್‌. ಶ್ರೀರಾಮ್‌ ಭಟ್‌ ಅವರ ಸಂಪರ್ಕ:98455 82997

ಫೇಸ್‌ಶೀಲ್ಡ್ ನ ಉಪಯೋಗಗಳು :

  • ಮರುಬಳಕೆ ಮಾಡಬಹುದಾಗಿದೆ
  • ಮಾಲಿನ್ಯ ತಡೆಗಟ್ಟಲು ಸಹಾಯಕ
  • ಹೆಚ್ಚು ಪಾರದರ್ಶಕ ಧೂಳಿನಿಂದ ಮುಕ್ತಿ
  • ಮಾಸ್ಕ್ ಗಳಿಗಿಂತ ಹೆಚ್ಚು ಸುರಕ್ಷಿತ.

 

ಎಂ.ಎಸ್‌. ಶೋಭಿತ್‌, ಮೂಡ್ಕಣಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.