ರೇಷ್ಮೆ ನೋಡು…

ಶಿವನಗೌಡರ‌ ಕೈಡಿದ ರೇಷ್ಮೆ ಕೃಷಿ

Team Udayavani, Sep 16, 2019, 5:00 AM IST

shutterstock_1283440369

ವಾಣಿಜ್ಯ ಬೆಳೆಗಳಿಂದ ಕೈ ಸುಟ್ಟುಕೊಂಡಿದ್ದ ರೈತನ ಸಹಾಯಕ್ಕೆ ನಿಂತು ಆರ್ಥಿಕವಾಗಿ ಬಲಿಷ್ಠನಾಗುವಂತೆ ಮಾಡಿದ್ದು ರೇಷ್ಮೆ ಬೆಳೆ. ಸರಕಾರದ ಸಹಾಯ ಪಡೆಯದೆ, ಯಾರ ಮಾರ್ಗದರ್ಶನವಿಲ್ಲದೆ, ಸ್ವಯಂ ಅನುಭವದಿಂದ ಭತ್ತದ ನಾಡಲ್ಲಿ ರೇಷ್ಮೆ ಬೆಳೆ ತೆಗೆದು ಯಶಸ್ಸು ಪಡೆದ ರೈತ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಶಿವನಗೌಡ ಮೇಟಿ.

ವಾಣಿಜ್ಯ ಬೆಳೆಗಳಾದ ಶೇಂಗಾ, ಹತ್ತಿ, ತೊಗರಿ ಮತ್ತಿತರ ಬೆಳೆಗಳನ್ನು ಸುಮಾರು 20 ವರ್ಷಗಳಿಂದ ಬೆಳೆಯುತ್ತಿದ್ದರೂ ಯಾವುದೇ ಲಾಭವಾಗಿರಲಿಲ್ಲ. ಇದರಿಂದ ಬೇಸತ್ತು ರೇಷ್ಮೆ ಬೆಳೆಯಲು ಮುಂದಾದರು. ಅದರಿಂದ ದೊರೆತ ಲಾಭದಿಂದಲೇ ಮನೆ ಕಟ್ಟಿಸಿಕೊಂಡಿದ್ದಾರೆ. ಮಕ್ಕಳ ಮದುವೆ ಕೂಡಾ ಮಾಡಿ ಮುಗಿಸಿದ್ದಾರೆ. ಜೊತೆಗೆ ನಾಲ್ಕಾರು ಜನ ಬಡವರಿಗೆ ಕೆಲಸ ನೀಡಿದ್ದಾರೆ.

ಹಿಪ್ಪುನೇರಳೆ ಸಸಿ ಖರೀದಿ
ಹೈದರಾಬಾದ್‌- ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಬಿಸಿಲಿರುವುದರಿಂದ ಯಾವ ಭಾಗದಿಂದ ಸಸಿ ತಂದರೆ ಒಳ್ಳೆಯದೆಂದು ಹಲವರಲ್ಲಿ ಚರ್ಚಿಸಿ, ಬೆಂಗಳೂರಿನ ರಾಮನಗರದಿಂದ ಹಿಪ್ಪು ನೇರಳೆ ಸಸಿ ತರಿಸಿದರು. 3.50 ರೂ.ಗೆ ಒಂದರಂತೆ ಸಸಿ ಖರೀದಿಸಿ ಎಕರೆಗೆ ಸುಮಾರು 6000 ಸಸಿಗಳನ್ನು ತರಿಸಿದ್ದರು. ಸಾಲಿನಿಂದ ಸಾಲಿಗೆ 5 ಮತ್ತು 3 ಅಡಿ ಅಂತರವಿದ್ದು, 2 ಅಡಿಗೊಂದರಂತೆ ಸಸಿ ನಾಟಿ ಮಾಡಲಾಗಿದೆ. ಬೆಳೆ ಸಂರಕ್ಷಣೆಗಾಗಿ ಹನಿ ನೀರಾವರಿ ಅಳವಡಿಸಲಾಗಿದೆ. ರಸಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಬಳಕೆ ಮಾಡಿಲ್ಲ. ಸಾವಯವ ಗೊಬ್ಬರ ಉಪಯೋಗಿಸುತ್ತಿರುವುದರಿಂದ ಉತ್ತಮ ಇಳುವರಿ ಬರುತ್ತಿದೆ.

ರೇಷ್ಮೆ ಗೂಡು
ರೇಷ್ಮೆ ಹುಳಗಳನ್ನು ಸಾಕಾಣಿಕೆ ಮಾಡಲು 12 ಅಡಿ ಎತ್ತರದ, 20×30 ಅಡಿ ವಿಸ್ತಾರದ ಹಸಿರುಮನೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ 5500 ರೂ. ವೆಚ್ಚ ತಗುಲಿದ್ದು, 7200 ರೂ. ಸಬ್ಸಿಡಿ ದರದಲ್ಲಿ 325 ಮೊಟ್ಟೆ ಮನೆ (ಚಂದ್ರಿಕೆ) ತರಲಾಗಿದೆ. ರಾಯಚೂರು ಜಿಲ್ಲೆಯ ಮಟ್ಟೂರಿನಿಂದ 2 ಜ್ವರ ಪಾಸಾದ ರೇಷ್ಮೆ ಹುಳು ತುರುವ ಲಿಂಗ್ಸ್‌ವೊಂದಕ್ಕೆ (ಸುಮಾರು 600 ಹುಳು) 2700 ರೂ. ವೆಚ್ಚ ತಗಲುತ್ತಿದೆ. ಈ ಹುಳಗಳನ್ನು 30 ದಿನದವರೆಗೂ ಸಾಕಲಾಗುತ್ತದೆ. 2 ಜ್ವರ ಪಾಸಾದ ಹುಳಗಳಿಗೆ 4 ದಿನ ಸೊಪ್ಪು ಒದಗಿಸಲಾಗುತ್ತದೆ. 3ನೇ ಜ್ವರಕ್ಕೆ ಹೋದಾಗ 36 ಗಂಟೆಗಳ ಕಾಲ ಉಪವಾಸ ಹಾಕಲಾಗುತ್ತದೆ. ನಾಲ್ಕು ದಿನ, ದಿನಕ್ಕೆ 2 ಬಾರಿ ಸೊಪ್ಪು ಒದಗಿಸಲಾಗುತ್ತದೆ. ಬಳಿಕ 4ನೇ ಜ್ವರಕ್ಕೆ ಬಂದಾಗ 48 ಗಂಟೆಗಳ ಕಾಲ ಹುಳುಗಳಗೆ ಉಪವಾಸ ಹಾಕಲಾಗುತ್ತದೆ. 8 ದಿನಗಳ ಕಾಲ ದಿನಕ್ಕೆ ಎರಡು ಸಲ ಸೊಪ್ಪು ಕೊಡಲಾಗುತ್ತದೆ. ಇದಾದ ನಂತರ ಹುಳು ಹಳದಿ ಬಣ್ಣಕ್ಕೆ ತಿರುಗಿದಾಗ ಗೂಡು ಕಟ್ಟುಕೊಳ್ಳುತ್ತದೆ. 6ರಿಂದ 7ನೇ ದಿನಕ್ಕೆ ಗೂಡು ಬಿಡಿಸಿ ಮಾರುಕಟ್ಟೆಗೆ ಮಾರಾಟ ಮಾಡಲು ಒಯ್ಯಲಾಗುವುದು.

ವರ್ಷಕ್ಕೆ 5 ಬೆಳೆ
ಒಂದು ಎಕರೆ ಹೊಲದಲ್ಲಿ 2 ಹಂತದಲ್ಲಿ ಬರುವ ಹಾಗೆ ರೇಷ್ಮೆ ಬೆಳೆ ನಾಟಿ ಮಾಡಲಾಗಿದೆ. ವರ್ಷದಲ್ಲೇ 5 ಬೆಳೆಗಳನ್ನು ಬೆಳೆಯಲಾಗುತ್ತದೆ. ಏನಿಲ್ಲವೆಂದರೂ ಪ್ರತಿ ಬೆಳೆಗೆ 40 ಸಾವಿರದಂತೆ ವರ್ಷಕ್ಕೆ 2 ಲಕ್ಷ ರೂ. ಆದಾಯ ಬರುತ್ತಿದೆ. ಆರಂಭದಲ್ಲಿ ತೊಡಗಿಸಿದ ಬಂಡವಾಳ ಮೊದಲ ವರ್ಷದಲ್ಲೇ ವಾಪಸ್‌ ಬಂದಿತ್ತು. 2ನೇ ವರ್ಷದಿಂದ ಖರ್ಚು ಕಳೆದು ಶೇ. 70ರಷ್ಟು ಲಾಭ ದೊರೆಯುತ್ತಿದೆ. ನಿರ್ವಹಣೆ ಮತ್ತು ಕೂಲಿ ಸೇರಿದಂತೆ ಶೇ. 30ರಷ್ಟು ಖರ್ಚು ತಗಲುತ್ತದೆ. ಪ್ರತಿ ವರ್ಷ ಹೆಚ್ಚಿನ ದರವಿರುತ್ತಿದ್ದ ರೇಷ್ಮೆಗೆ ಪ್ರಸಕ್ತ ಸಾಲಿನಲ್ಲಿ ಹೇಳಿಕೊಳ್ಳುವಂಥ ಬೆಲೆ ದೊರಕುತ್ತಿಲ್ಲ. ಕೆಜಿಗೆ 300ರೂ.ನಿಂದ 400ರೂ.ಗೆ ಮಾರಾಟವಾಗುತ್ತಿದೆ. ದರ ಹೆಚ್ಚಾದರೆ ಇನ್ನಷ್ಟು ಲಾಭ ರೈತರಿಗೆ ದೊರೆಯಲಿದೆ.

ಸಿದ್ದಯ್ಯ ಪಾಟೀಲ್‌ ಸುರಪುರ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.