ಚೆಂಡು ಎಂದರೆ ಚೆಂಡೂ…


Team Udayavani, Jun 17, 2019, 5:00 AM IST

CHENDU10

ಬಾಗಲಕೋಟೆಯ ಸನಿಹವಿರುವ ಶಿರೂರು ಗ್ರಾಮಕ್ಕೆ ಕಾಲಿಟ್ಟರೆ, ಹೂವಿನದ್ದೇ ಪರಿಮಳ. ದುಂಡುಮಲ್ಲಿಗೆ, ಗಲಾಟೆ ಹೂ, ಗುಲಾಬಿ, ಚಂಡು ಹೂಗಳು ಇಲ್ಲಿ ಎಲ್ಲೆಂದರಲ್ಲಿ ರಾರಾಜಿಸುತ್ತಿರುತ್ತವೆ. ಕಬ್ಬು, ಬಾಳೆ, ಸಜ್ಜಿ, ಜೋಳ, ಕಡಲೆ, ಶೇಂಗಾ ಬೆಳೆಗೆ ಸೀಮಿತವಾಗಿದ್ದ ಶಿರೂರು ಗ್ರಾಮದಲ್ಲಿ ಈಗೀಗ ಹೂಗಳದ್ದೇ ಪಾರುಪತ್ಯ. ಅದರಲ್ಲೂ ಚೆಂಡು ಹೂ, ಇಲ್ಲಿನ ರೈತರಿಗೆ ಚೆಂದದ ಬದುಕು ಕಲ್ಪಿಸಿಕೊಟ್ಟಿದೆ.

ಆರಂಭದಲ್ಲಿ ಶಿರೂರಿನ ರೈತ ನಾಗಪ್ಪ ಅಚನೂರ ಅವರು ಚೆಂಡು ಹೂ ಬೆಳೆಯಲು ಮುಂದಾದಾಗ, ಯೋಗ್ಯ ಬೆಲೆ ಸಿಗದೇ ನಷ್ಟ ಅನುಭವಿಸಿದರಂತೆ. ಸತತ ನಷ್ಟದಿಂದ ಕಂಗೆಟ್ಟರೂ, ಧೃತಿಗೆಡದೆ, ಮತ್ತೆ ತಮ್ಮ ಎರಡು ಎಕರೆಯಲ್ಲಿ ಚೆಂಡು ಹೂ ಬೆಳೆದರು.
ಜಮೀನಿನಲ್ಲಿ 3 ಅಡಿಯ ಸಾಲುಗಳನ್ನು ಬಿಡಿಸಿ, 15 ಸಾವಿರ ಸಸಿಗಳನ್ನು, ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿಯ ಆಸರೆ ನೀಡಿದರು. ಕೇವಲ 45 ದಿನಗಳಲ್ಲಿ ಗಿಡಗಳು, ಹೂ ಬಿಡಲಾರಂಭಿಸಿದವು. ಸತತ ಬರದಿಂದ ಕಂಗೆಟ್ಟಿದ್ದ ರೈತನಿಗೆ ಬೇಸಿಗೆಯಲ್ಲಿ ಉತ್ತಮ ಲಾಭ ಬೆಳೆಯಾಗಿ, ಚೆಂಡು ಹೂ ಕಂಡಿತು. ಹೂ ಬಿಡಲು ಆರಂಭಿಸಿದ ಒಂದೇ ತಿಂಗಳಲ್ಲಿ ನಾಗಪ್ಪ, 1 ಲಕ್ಷಕ್ಕೂ ಅಧಿಕ ಹಣ ಗಳಿಸಿದ್ದಾರೆ. ಪ್ರತಿವಾರ 2 ರಿಂದ 3 ಸಲ ಹೂ ಕಟಾವು ಮಾಡುತ್ತಾರೆ.

ಬಾಂಬೆಗೆ ಹೊರಟ ಹೂವು…
ನಾಗಪ್ಪ ಬೆಳೆದ ಚೆಂಡು ಹೂ ಬಾಂಬೆ ಮಾರುಕಟ್ಟೆಯಲ್ಲೂ ಭರ್ಜರಿ ಹಣ ಗಳಿಸಿತು. “ಕರ್ನಾಟಕದ ಮಾರುಕಟ್ಟೆಗಿಂತ ಹೂರ ರಾಜ್ಯದಲ್ಲಿ ಸಾಕಷ್ಟು ಲಾಭ ಸಿಗುತ್ತದೆ. ಒಂದು ಕೆ.ಜಿ.ಗೆ ಅಂದಾಜು 50- 80 ರೂ. ವರೆಗೆ ಲಾಭ ಸಿಗುತ್ತದೆ’ ಅಂತಾರೆ ನಾಗಪ್ಪ. ಅಲ್ಲಿ ಮಾರುಕಟ್ಟೆಯ ಬೆಲೆ ಇಳಿಮುಖ ಕಂಡಾಗ, ಬಾಗಲಕೋಟೆ ಮಾರುಕಟ್ಟೆಗೆ ಸಾಗಿಸುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 30- 50 ರೂ. ವರೆಗೆ ಆದಾಯ ಸಿಗುತ್ತದೆ. ಹಬ್ಬ ಹರಿದಿನಗಳಲ್ಲಿ ಅಮವಾಸ್ಯೆಯ ದಿನಗಳಲ್ಲಿ 100 ರೂ.ವರೆಗೂ ಬೆಲೆ ಸಿಗುತ್ತದಂತೆ.

ಹಳದಿ ಚೆಂಡು ಹೂವಿನಲ್ಲಿ ಹಲವಾರು ತಳಿಗಳಿವೆ. ಆದರೆ, ಅದರಲ್ಲಿ ಗೋಲ್ಡ್‌ ಸ್ಪಾಟ್‌ 2 ಮತ್ತು ಕಲ್ಕತ್ತಾ ಆರೆಂಜ್‌ ತಳಿಯ ಚೆಂಡು ಹೂವಿಗೆ ಬೇಡಿಕೆ ಹೆಚ್ಚು. ಇವು ಗಾತ್ರದಲ್ಲಿ ದೊಡ್ಡದಾಗಿರದೇ, ನೋಡಲು ಆಕರ್ಷಕವಾಗಿರುತ್ತವೆ.ಓದಿದ್ದು ಎಸ್ಸೆಸ್ಸೆಲ್ಸಿಯೇ ಆದರೂ, ನಾಗಪ್ಪ (ಮೊ. 9008153295) ಇಂದು ಕೃಷಿಯಿಂದ ನೆಮ್ಮದಿ ಬದುಕು ಕಾಣುತ್ತಿದ್ದಾರೆ.

ಯಶಸ್ಸಿನ ಗುಟ್ಟು…
ಕ್ರಿಮಿನಾಶಕ ಸಿಂಪಡಣೆಯಿಂದ ಹೂವಿನ ಫ‌ಸಲು ಬೇಗ ಸಿಗುತ್ತದೆ. ಅಲ್ಲದೇ, ದುಂಡು ದುಂಡಾಗಿಯೂ ಅರಳುತ್ತವೆ. ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆದರೆ, ಜಾಸ್ತಿ ನೀರು ಬೇಡುವುದಿಲ್ಲ. ನಾಗಪ್ಪ ಅವರು ತಮ್ಮ ಉಳಿದ 25 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಕಲ್ಲಂಗಡಿ ಬೆಳೆದಿದ್ದಾರೆ. ಹಬ್ಬದ ಸೀಜನ್‌ ನೋಡಿಕೊಂಡು ಮುಂಚಿತವಾಗಿ ಹಬ್ಬಕ್ಕೆ ಬರುವ ಹಾಗೆ ನಾಟಿ ಮಾಡಿದರೆ ಲಾಭ ನಿಶ್ಚಿತ ಎನ್ನುವುದು ನಾಗಪ್ಪ ಅವರ ಸಕ್ಸಸ್ಸಿನ ಗುಟ್ಟು.

ಪ್ರಶಾಂತ ಜಿ. ಹೂಗಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.