ಹಣ್ಣು ತರಕಾರಿ ಒಣಗಿಸೋ ಯಂತ್ರ
Team Udayavani, Dec 16, 2019, 6:00 AM IST
ದ್ರಾಕ್ಷಿ ಮತ್ತಿತರ ಹಣ್ಣು, ಕೆಲವಾರು ತರಕಾರಿಗಳನ್ನು ಒಣಗಿಸಿ ಮಾರಾಟ ಮಾಡುವ ಕಾರ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಅವುಗಳನ್ನು ಅಂಗಳದಲ್ಲಿ ಒಣಗಿಸಲು ಸಾಧ್ಯವಿಲ್ಲ. ಮಲೆನಾಡು ಭಾಗಗಳಲ್ಲಂತೂ ಚಳಿಗಾಲ, ಮಳೆಗಾಲದಲ್ಲಿ ಶೀತ ವಾತಾವರಣವೇ ಹೆಚ್ಚು. ಇಂಥ ಸಂದರ್ಭಗಳಲ್ಲಿ ಒಣಹಣ್ಣು, ತರಕಾರಿಗಳಿಗೆ ಹೆಚ್ಚು ಬೇಡಿಕೆಯಿರುತ್ತದೆ.
ಇದನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತಜ್ಞರು ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರದ ವಿಶೇಷತೆ ಎಂದರೆ ಸೌರಶಕ್ತಿ ಮತ್ತು ಬಯೋಮಾಸ್(ಸಸ್ಯ ತ್ಯಾಜ್ಯ) ಎರಡನ್ನೂ ಬಳಸಿಯೂ ಚಾಲನೆ ಮಾಡಬಹುದು. ಬೇಸಿಗೆ ಕಾಲದಲ್ಲಿ ಸೌರಶಕ್ತಿ ಬಳಸಿದರೆ ಮಳೆಗಾಲದಲ್ಲಿ ಬಯೋಮಾಸ್ ಬಳಸಬಹುದು. ಬಯಲುಸೀಮೆಯಲ್ಲಿ ಚಳಿಗಾಲದಲ್ಲಿಯೂ ಸೌರಶಕ್ತಿ ಬಳಸಬಹುದು.
ಈ ಡ್ರೈಯರ್ನಲ್ಲಿ ಒಂದು ಬಾರಿಗೆ 10- 15 ಕೆ.ಜಿ. ಹಣ್ಣು ಅಥವಾ ತರಕಾರಿ ಒಣಗಿಸಬಹುದು. ಶೀಘ್ರವಾಗಿಯೂ ಒಣಗುತ್ತದೆ. ಡೀಸೆಲ್, ವಿದ್ಯುತ್ ಶಕ್ತಿ ಬಳಕೆಗೆ ಹೋಲಿಸಿದರೆ ಇದು ಮಿತವ್ಯಯಕಾರಿ. ಇದರ ಬೆಲೆ ಮತ್ತಿತರ ಹೆಚ್ಚಿನ ವಿವರಗಳಿಗೆ ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ಕರೆ ಮಾಡಿ ತಿಳಿದುಕೊಳ್ಳಬಹುದು. ಸಂಪರ್ಕ: 080- 23330153
* ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ