ಗರ್ಮಾಗರಂ ರುಚಿಯ ಕಂದಕೂರು ಮಂಡಕ್ಕಿ


Team Udayavani, Dec 9, 2019, 6:06 AM IST

gsrmsgsrm

ಯಾದಗಿರಿ ಜಿಲ್ಲೆಯ ಕಂದಕೂರು ಒಗ್ಗರಣೆ ಮಂಡಕ್ಕಿಗೆ ಹೆಸರುವಾಸಿ. ಒಮ್ಮೆ ಇಲ್ಲಿನ ಒಗ್ಗರಣೆ ಮಂಡಕ್ಕಿ ರುಚಿ ನೋಡಿದವರು ಯಾವತ್ತೂ ಮರೆಯುವುದಿಲ್ಲ. ಮತ್ತೆ ಈ ಕಡೆ ಬಂದಾಗ ಮಂಡಕ್ಕಿ ಸವಿಯದೇ ಹೋಗುವುದಿಲ್ಲ.

ಯಾದಗಿರಿ ಜಿಲ್ಲಾ ಕೇಂದ್ರದಿಂದ 24 ಕಿ.ಮೀ. ಇರುವ ಕಂದಕೂರಿನಲ್ಲಿ ಇತಿಹಾಸ ಪ್ರಸಿದ್ಧ ಕೊಂಡಮಾಯಿದೇವಿ ಮಂದಿರ ಎಷ್ಟು ಪ್ರಸಿದ್ಧಿ ಪಡೆದಿದೆಯೋ, ಅಷ್ಟೇ ಜನಪ್ರಿಯತೆಯನ್ನು ಲಕ್ಷ್ಮಣ್‌ ಅವರ ಭವಾನಿ ಹೋಟೆಲಿನ ಮಂಡಕ್ಕಿ ಒಗ್ಗರಣೆಯೂ ಪಡೆದುಕೊಂಡಿದೆ. ಶುದ್ಧ ಎಣ್ಣೆ, ಹಾಲು, ಟೊಮೆಟೋ, ಉಳ್ಳಾಗಡ್ಡಿ, ಮೆಣಸಿನಕಾಯಿ, ಜೀರಿಗೆ, ಸಾಸಿವೆ, ಅರಶಿಣ, ಬೆಳ್ಳುಳ್ಳಿ, ಶುಂಠಿಯನ್ನು ಬಳಸಿ ಮಾಡಿದ ಬಿಸಿ ಬಿಸಿಯಾದ, ಘಮಘಮಿಸುವ ಮಂಡಕ್ಕಿ ಒಗ್ಗರಣೆ ಎಂಥವರ ಬಾಯಲ್ಲೂ ನೀರು ತರಿಸುತ್ತದೆ.

1974ರಲ್ಲಿ, ತಮ್ಮ ಜಮೀನಿಗೆ ಹೋಗುವ ದಾರಿಯಲ್ಲೇ ಸ್ವಲ್ಪ ಜಾಗ ಖರೀದಿಸಿದ ಲಕ್ಷ್ಮಣ್‌ ಅವರ ತಂದೆ ನಾಗೋಜಿ, ಅಲ್ಲಿ ಪುಟ್ಟದಾಗಿ ಗುಡಿಸಲು ಹಾಕಿ ಟೀ, ಕಾಫಿ, ಮಂಡಕ್ಕಿ ಒಗ್ಗರಣೆ ಮಾಡಲು ಶುರು ಮಾಡಿದ್ರು. ಆರಂಭದಲ್ಲಿ 15 ಪೈಸೆಗೆ ಒಂದು ಪ್ಲೇಟ್‌ ಮಂಡಕ್ಕಿ ಒಗ್ಗರಣೆ ಸಿಗುತ್ತಿತ್ತು. ದಿನಕಳೆದಂತೆ ಗ್ರಾಮವು ಪ್ರಗತಿಯತ್ತ ಸಾಗಿದ್ದು, 1986ರಲ್ಲಿ, ಇದ್ದ ಜಾಗದಲ್ಲೇ ಮನೆ ಕಟ್ಟಿಕೊಂಡು ಅದಕ್ಕೆ ಶ್ರೀ ಭವಾನಿ ಹೋಟೆಲ್‌ ಎಂದು ಹೆಸರಿಟ್ಟು, ತಿಂಡಿ -ಊಟ ಮಾರಾಟ ಮಾಡಲು ಶುರು ಮಾಡಿದ್ದರು. ಇದಕ್ಕೆ ಮನೆಯ ಸದಸ್ಯರೂ ಸಾಥ್‌ ನೀಡುತ್ತಿದ್ದರು.

10 ವರ್ಷದಿಂದ ಒಂದೇ ಬೆಲೆ: ಒಗ್ಗರಣೆ ಮಂಡಕ್ಕಿಯ ಬೆಲೆ ಪ್ಲೇಟ್‌ಗೆ 15 ಪೈಸೆ ಇದ್ದಾಗ, ಇಡೀ ದಿನದಲ್ಲಿ 20 ರೂ. ವ್ಯಾಪಾರ ಆದ್ರೆ ಅದೇ ಹೆಚ್ಚು ಎನ್ನಲಾಗುತ್ತಿತ್ತು. ಆದ್ರೆ, ಈಗ ದಿನಸಿ ಸಾಮಗ್ರಿ, ತರಕಾರಿ ಬೆಲೆ ಹೆಚ್ಚಾದಂತೆಲ್ಲ ಮಂಡಕ್ಕಿ ಒಗ್ಗರಣೆಯ ಬೆಲೆ 15 ರೂ.ಗೆ ಹೆಚ್ಚಿಸಲಾಗಿದೆ. 10 ವರ್ಷಗಳಿಂದಲೂ ಒಂದೇ ದರ ಇದೆ ಎನ್ನುತ್ತಾರೆ ಲಕ್ಷ್ಮಣ್‌.

ಕಟ್ಟಿಗೆ ಒಲೆ: ಇಂದಿಗೂ ಕಟ್ಟಿಗೆಯನ್ನು ಬಳಕೆ ಮಾಡಿ ಉಪಾಹಾರದ ತಯಾರಿ ಮಾಡುವ ಲಕ್ಷ್ಮಣ್‌ಗೆ, ಪತ್ನಿ ತಾರಾಬಾಯಿ, ಪುತ್ರ ಈಶ್ವರ ಮತ್ತು ಸೊಸೆ ಸಂಧ್ಯಾ ಸಾಥ್‌ ನೀಡುತ್ತಾರೆ. ಗ್ರಾಹಕರ ಸಂಖ್ಯೆ ಹೆಚ್ಚಾದ ಕಾರಣ ಇಬ್ಬರು ನೌಕರರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

“ಈ ಪುಟ್ಟ ಹೋಟೆಲ್‌ ನಡೆಸಿಕೊಂಡೇ ಬದುಕು ಕಟ್ಟಿಕೊಂಡಿರುವೆ. ಮೂವರು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸಿರುವೆ. ಮುಖ್ಯವಾಗಿ, ಗ್ರಾಹಕರು ಸಂತೃಪ್ತರಾದರೆ, ಅದಕ್ಕಿಂತ ಖುಷಿ ಮತ್ತೂಂದಿಲ್ಲ’ ಎನ್ನುತ್ತಾರೆ ಲಕ್ಷ್ಮಣ್‌. ಮೊದಲು ಮಧ್ಯಾಹ್ನದ ಊಟದ ವ್ಯವಸ್ಥೆ ಇತ್ತು. ಈಗ ಪಕ್ಕದಲ್ಲೇ ಅಣ್ಣನ ಮಗಳು ಖಾನಾವಳಿ ಪ್ರಾರಂಭಿಸಿದ ನಂತರ ಊಟ ಕೊಡುವುದನ್ನು ನಿಲ್ಲಿಸಿದ್ದಾರೆ. ಇಲ್ಲಿ ಮಂಡಕ್ಕಿಯ ಜೊತೆಗೆ ಮಿರ್ಚಿ, ಬಜ್ಜಿ, ಪೂರಿ-ಪಿಟ್ಲಾ ಕೂಡ ತಯರಾಗುತ್ತದೆ.

ಲಭ್ಯವಿರುವ ತಿಂಡಿ: ಬೆಳಗ್ಗೆ 6.30ಯಿಂದ ಮಧ್ಯಾಹ್ನ 12.30ರವರೆಗೆ ಪೂರಿ(ನಾಲ್ಕಕ್ಕೆ 20 ರೂ.), ಒಗ್ಗರಣೆ ಮಂಡಕ್ಕಿ ಸಿಗುತ್ತೆ. ಮಧ್ಯಾಹ್ನದ ನಂತರ ಒಗ್ಗರಣೆ ಮಂಡಕ್ಕಿ, ಬಜ್ಜಿ, ಟೀ, ಕಾಫಿ, ತಂಪು ಪಾನೀಯ ಸಿಗುತ್ತದೆ. ದರ 20 ರೂ. ಒಳಗೆ.

ಪಿಟ್ಲಾ ಸೂಪರ್‌: ಪೂರಿ ಜೊತೆ ಕೊಡುವ ಪಿಟ್ಲಾ(ಸಾಗು) ತಿಂಡಿಯ ರುಚಿಯನ್ನು ಹೆಚ್ಚಿಸುತ್ತೆ. ಹುಳಗಟ್ಟಿ, ಟೊಮೆಟೋ, ಖಾರದ ಪುಡಿ, ಮಸಾಲೆ ಹಾಕಿ ಕಡ್ಲೆ ಇಟ್ಟು ಹಾಕಿ ಮಾಡುವ ಪಿಟ್ಲಾ ಪೂರಿ ರುಚಿಯನ್ನು ಹೆಚ್ಚಿಸಿದೆ.

ಹೋಟೆಲ್‌ ಸಮಯ: ಬೆಳಗ್ಗೆ 6.30ರಿಂದ ರಾತ್ರಿ 7.30ರವರೆಗೆ, ವಾರದ ರಜೆ ಇಲ್ಲ.

ಹೋಟೆಲ್‌ ವಿಳಾಸ: ಯಾದಗಿರಿಯಿಂದ 24 ಕಿ.ಮೀ., ಕಂದಕೂರ ಗ್ರಾಮ, ಬಸ್‌ ನಿಲ್ದಾಣ ಎದುರು. ಶ್ರೀ ಭವಾನಿ ಹೋಟೆಲ್‌

* ಭೋಗೇಶ ಆರ್‌. ಮೇಲುಕುಂಟೆ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.