ಶುರುವಾಯ್ತು ನೆಕ್ಸಾನ್‌ ಕ್ರೇಜ್‌


Team Udayavani, Sep 10, 2018, 9:27 PM IST

12.jpg

ಭಾರತದ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಮಿನಿ ಎಸ್‌ಯುವಿಗಳಿಗೆ ಬೇಡಿಕೆ ಸಾಕಷ್ಟಿದೆ.  ಅಷ್ಟೇ ಕಠಿಣ ಸ್ಪರ್ಧೆಯೂ ಇದೆ. ಈಗಾಗಲೇ ಹೊಸ ಹೊಸ ಮಾಡೆಲ್‌ಗ‌ಳನ್ನು, ವೇರಿಯಂಟ್‌ಗಳನ್ನು ಪರಿಚಯಿಸಿರುವ ಬಹುತೇಕ ಕಂಪನಿಗಳು ಬೇಡಿಕೆ ದುಪ್ಪಟ್ಟು ಮಾಡಿಕೊಳ್ಳುವ ಪ್ರಯತ್ನದಲ್ಲಿವೆ. ಅದಕ್ಕಾಗಿಯೇ ಆಗಾಗ ಒಂದೊಂದು ಶಿಷ್ಟವೆನ್ನುವ ಪ್ರಯತ್ನವನ್ನೂ  ಮಾಡುತ್ತಿವೆ. ಸಾಮಾನ್ಯವಾಗಿ, ಮೈಲಿಗಲ್ಲು ತಲುಪಿದ ಸಂಭ್ರಮದ ವೇಳೆ ಇಂಥ ಕೆಲವೊಂದು ಪ್ರಯೋಗಗಳನ್ನು ಮಾಡಲಾಗುತ್ತದೆ.

ಇದರಿಂದ ಟಾಟಾ ಮೋಟಾರ್ ಕೂಡ ಹೊರತಾಗಿಲ್ಲ. ತನ್ನ ಮಹತ್ವಾಕಾಂಕ್ಷೆಯ ಮಿನಿ ಎಸ್‌ಯು ಸೆಗೆ¾ಂಟ್‌ ಮೂಲಕ ಮಾರುಕಟ್ಟೆಯಲ್ಲಿ ಒಂದು ಹಂತದಲ್ಲಿ ಸದ್ದು ಮಾಡಿರುವ ನೆಕ್ಸಾನ್‌ನ ಲಿಮಿಟೆಡ್‌ ವೇರಿಯಂಟ್‌ ಒಂದನ್ನು ಟಾಟಾ ಕಂಪನಿ ಪರಿಚಯಿಸಿದೆ. ಎಲ್ಲಾ ಕಂಪನಿಗಳಂತೆ, ಬಣ್ಣಗಳಲ್ಲಿ ಒಂದಿಷ್ಟು ವಿಶೇಷವಾದ ಪ್ರಯತ್ನದೊಂದಿಗೆ ಲಿಮಿಟೆಡ್‌ ಎಡಿಷನ್‌ ಅನ್ನು ಅನಾವರಣಗೊಳಿಸಿದೆ. ಅದೇ “ನೆಕ್ಸಾನ್‌ ಕ್ರೇಜ್‌’!

ತಕ್ಷಣಕ್ಕೆ ನೆಕ್ಸಾನ್‌ ಎಂದು ಪರಿಚಯಿಸಲಾಗದ ರೀತಿಯಲ್ಲಿ ಈ ವಾಹನದ  ಬಣ್ಣ ಬದಲಾಯಿಸಲಾಗಿದೆ. ನೆಕ್ಸಾನ್‌ ಕ್ರೇಜ್‌, ಪೆಟ್ರೋಲ್‌ ಮತ್ತು ಡೀಸೆಲ್‌  ಎರಡೂ ಮಾದರಿಗಳಲ್ಲಿ ಕ್ರೇಜ್‌ ಮತ್ತು ಕ್ರೇಜ್‌+ ವೇರಿಯಂಟ್‌ಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಟಾಟಾ ಮೋಟಾರ್ ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಕ್ರೇಜ್‌ ಪದವನ್ನೇ ಸ್ಪೆಲ್‌ ಮಾಡುವಾಗಲೂ ಕ್ರೇಜಾಗಿಯೇ ಹೇಳುವಂತೆ ಬಳಸಿಕೊಳ್ಳಲಾಗಿದೆ.

ಎಂಜಿನ್‌ ಸಾಮರ್ಥ್ಯ ಎಂದಿನಂತೆ
ಲಿಮಿಟೆಡ್‌ ಎಡಿಷನ್‌ ಆಗಿರುವ ಕಾರಣ, ಕಾರಿನ ಸಾಮರ್ಥ್ಯದಲ್ಲಿ ಅಂಥದ್ದೇನೂ ಬದಲಾವಣೆ ಮಾಡಲಾಗಿಲ್ಲ. ಪೆಟ್ರೋಲ್‌ ಕಾರಿನಲ್ಲಿ 1.2 ಲೀಟರ್‌ ರೆವೊಟ್ರಾನ್‌ ಎಂಜಿನ್‌ ಬಳಕೆ ಮಾಡಿಕೊಳ್ಳಲಾಗಿದೆ. ಡೀಸೆಲ್‌ ಕಾರಿನಲ್ಲಿ 1.5 ಲೀಟರ್‌ ರೆವೋ ಟಾರ್ಕ್‌ ಎಂಜಿನ್‌ ಬಳಸಿಕೊಳ್ಳಲಾಗಿದೆ. ಪೆಟ್ರೋಲ್‌ ಎಂಜಿನ್‌ 108ಬಿಎಚ್‌ಪಿ ಮತ್ತು 170 ಎನ್‌ಎಂ ಟಾರ್ಕ್‌ ಶಕ್ತಿ ಉತ್ಪಾದಿಸುವ ಶಕ್ತಿ ಹೊಂದಿದೆ. ಡೀಸೆಲ್‌ ಎಂಜಿನ್‌ 108 ಬಿಎಚ್‌ಪಿ ಮತ್ತು 260ಎನ್‌ಎಂ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಎಂಜಿನ್‌ ಕಾರುಗಳು 6 ಸ್ಪೀಡ್‌ ಗೇರ್‌ ಬಾಕ್ಸ್‌ ಹೊಂದಿವೆ. ಅಲಾಯ್‌ ಬೀಲ್‌ ಬಳಸಿಕೊಂಡಿದ್ದರಿಂದ ಔಟ್‌ಲುಕ್‌ ಇನ್ನಷ್ಟು ಸೊಗಸಾಗಿ ಕಾಣಿಸಲಿದೆ. ಎಕ್ಸ್‌ಟಿ ಟ್ರಿಮ್‌ ಮಾದರಿಯ ಮಿನಿ ಎಸ್‌ವಿ ಯು ಇದಾಗಿದ್ದು, ಮುಂಬರುವ ದಿನಗಳಲ್ಲಿ ಬೇಡಿಕೆ ವೃದ್ಧಿಸಲಿದೆ ಎನ್ನುವುದು ಕಂಪನಿಯ ನಿರೀಕ್ಷೆಯಾಗಿದೆ.

ವಿನ್ಯಾಸದಲ್ಲಿ ಕೊಂಚ ಬದಲಾವಣೆ
ಲಿಮಿಟೆಡ್‌ ಎಡಿಷನ್‌ ಆಗಿದ್ದರಿಂದ ಆಧುನಿಕ ಉಪಕರಣಗಳನ್ನೇ ಬಳಸಿಕೊಳ್ಳಲಾಗಿದ್ದು, ತನ್ನ ಹಳೆಯ ವರ್ಷನ್‌ಗಳಿಗಿಂತ ಸ್ವಲ್ಪ ಮಟ್ಟಿಗಿನ ಬದಲಾವಣೆ ಮಾಡಲಾಗಿದೆ. ವಿಶೇಷವಾಗಿ ಒಳಾಂಗಣ ವಿನ್ಯಾಸದಲ್ಲಿ ಹೆಚ್ಚುವರಿಯಾಗಿ ಒಂದಿಷ್ಟು ಚಾಲಕ ಸ್ನೇಹಿ ಆಪ್ಶನ್‌ಗಳನ್ನು ನೀಡಲಾಗಿದೆ. ನಾಲ್ಕು ಸ್ಪೀಕರ್‌ಗಳ ಇನ್ಫೋಟೈನ್ಮೆಂಟ್‌ ಅಳವಡಿಸಲಾಗಿದೆ. ಕಪ್ಪು ಬಣ್ಣದ ಕ್ರೇಜ್‌ನಲ್ಲೂ ಗಿಳಿ ಹಸಿರು ಬಣ್ಣವನ್ನು ಹೊಸ ಟ್ರೆಂಡ್‌ ಹುಟ್ಟು ಹಾಕುವಂತೆ ಭಿನ್ನವಾಗಿ ಬಳಸಿಕೊಳ್ಳಲಾಗಿದೆ.

4 ವೇರಿಯಂಟ್‌ಗಳ ಎಕ್ಸ್‌ ಶೋ ರೂಂ ಬೆಲೆ
– ಕ್ರೇಜ್‌ ಪೆಟ್ರೋಲ್‌ ಎಂಟಿ : 7.15 ಲಕ್ಷ ರೂ.
– ಕ್ರೇಜ್‌+ ಪೆಟ್ರೋಲ್‌ ಎಂಟಿ : 7.77 ಲಕ್ಷ ರೂ.
– ಕ್ರೇಜ್‌ ಡೀಸೆಲ್‌ ಎಂಟಿ : 8.08 ಲಕ್ಷ ರೂ.
– ಕ್ರೇಜ್‌ ಡೀಸೆಲ್‌ ಎಂಟಟಿ : 8.64 ಲಕ್ಷ ರೂ.

 ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.