ಪೋಲಿ ಹೋಟೆಲ್‌ನಲ್ಲಿ ಘಮ ಘಮಾ ಬೆಣ್ಣೆದೋಸೆ


Team Udayavani, Aug 13, 2018, 6:15 AM IST

hotel1.jpg

ಬ್ರಾಹ್ಮಣರ ಫ‌ಲಾರಾರ ಮಂದಿರ, ವೀರಶೈವರ ಖಾನಾವಳಿ, ಉಡುಪಿ ಹೋಟೆಲ್‌, ಗೌಡರ ಹೋಟೆಲ್‌, ಇವೆಲ್ಲಾ ಹೆಸರುಗಳನ್ನು ಓದಿರುತ್ತೀರಿ. ಮನೆದೇವರು, ಇಷ್ಟದ ದೇವರ ಹೆಸರಿನಲ್ಲಿ ಇರುವ ಹೋಟೆಲುಗಳಿಗೂ ಲೆಕ್ಕವಿಲ್ಲ. ಸೋದರ-ಸೋದರಿಯರ, ಮೆಚ್ಚಿನ ನಟ-ನಟಿಯರ, ಪ್ರೇಯಸಿಯರ ಹಾಗೂ ಮಕ್ಕಳ ಹೆಸರು ಹೊಂದಿದ ಹೋಟೆಲುಗಳೂ ಸಾಕಷ್ಟಿವೆ. ಆದರೆ ಹೋಟೆಲೊಂದಕ್ಕೆ ಪೋಲಿ ಹೋಟೆಲ್‌ ಎಂದೇ ಹೆಸರಿಡಲಾಗಿದೆ ಮತ್ತು ಅದು ತುಂಬಾ ಫೇಮಸ್‌ ಆಗಿದೆ ಅಂದರೆ…

ಈ ಅಚ್ಚರಿಯನ್ನು ನೋಡಬೇಕೆಂದರೆ ನೀವು ಹಲಗೂರಿಗೆ ಬರಬೇಕು. ಮಂಡ್ಯ ಜಿಲ್ಲೆ ಮಳವಳ್ಳಿಯಿಂದ ಮುತ್ತತ್ತಿಗೆ ಹೋಗುವ ದಾರಿಯಲ್ಲಿ ಸೆಂಟರ್‌ ಪಾಯಿಂಟ್‌ ಥರಾ ಸಿಗುವ ಸ್ಥಳವೇ ಹಲಗೂರು. ಮುತ್ತತ್ತಿಗೆ ಹೋಗುವ ಮುಖ್ಯರಸ್ತೆಯಲ್ಲೇ ಈ ಹೋಟೆಲ್‌ ಇದೆ. 

ಪ್ರವಾಸಿಗರಿಂದ, ತಿಂಡಿ ಪ್ರಿಯರಿಂದ ಸದಾ ಗಿಜಿ ಗಿಜಿ ಅನ್ನುವುದು ಈ ಹೋಟೆಲಿನ ಹೆಚ್ಚುಗಾರಿಕೆ. ಪೋಲಿ ಹೋಟಲಿಗೆ ನಾ ಮುಂದು ತಾಮುಂದು ಎಂದು ಜನ ನುಗ್ಗಿ ಬರಲಿಕ್ಕೆ ಕಾರಣ ಇಲ್ಲಿನ ಬೆಣ್ಣೆ ದೋಸೆ! ಬಹಳಷ್ಟು ಮಂದಿ ಅರ್ಧಡಜನ್‌ ದೋಸೆ ತಿನ್ನುತ್ತಾರೆ ಅಂದರೆ, ಇಲ್ಲಿ ದೋಸೆಯ ರುಚಿ ಹೇಗಿರಬಹುದು ಲೆಕ್ಕ ಹಾಕಿ. 

ಈಗ ಹೋಟೆಲನ್ನು ಸುರೇಂದ್ರ ಎನ್ನುವವರು ನೋಡಿಕೊಳ್ಳುತ್ತಾರೆ ‘ ಸಾರ್‌, ಎಲ್ಲರೂ ಹೋಟೆಲಿಗೆ ದೇವರ ಹೆಸರು ಇಡುತ್ತಾರೆ. ಇದ್ಯಾಕೆ ನಿಮ್ಮ ಹೋಟೆಲಿಗೆ ಪೋಲಿ ಹೋಟೆಲ್‌ ಎಂಬ ಹೆಸರು ಬಂತು ಎಂದರೆ ಅವರು ಒಂದು ಸ್ವಾರಸ್ಯದ ಕಥೆ ಹೇಳುತ್ತಾರೆ.

60 ವರ್ಷದ ಹಿಂದೆ ಹವಾಲ್ದಾರ್‌ ಶಿವಣ್ಣ ಎಂಬಾತ ಇಲ್ಲಿ ಒಂದು ಹೋಟೆಲ್‌ ಇಟ್ಟಿದ್ದರಂತೆ. ಈ ಶಿವಣ್ಣ ಮತ್ಯಾರು ಅಲ್ಲ; ಸುರೇಂದ್ರ ಅವರ ತಾತ. ಹೋಟೆಲ್‌ ಶುರುವಾದ ದಿನಗಳಲ್ಲಿ ಈ ಪ್ರದೇಶವಿಡೀ ಕೃಷಿ ಭೂಮಿಯಿಂದ ಸುತ್ತುವರಿದಿತ್ತಂತೆ. ಜಮೀನಿನ ಮಧ್ಯೆಯೇ ಈ ಹೋಟೆಲೂ ಇತ್ತು. ಅದಕ್ಕೆ ಯಾವ ಹೆಸರೂ ಇರಲಿಲ್ಲ. ಜನ ಅದನ್ನು ಶಿವಣ್ಣನ ಹೋಟೆಲ್‌ ಎಂದೇ ಕರೆಯುತ್ತಿದ್ದರಂತೆ. 

ಹಳ್ಳಿ ಜನ ಅಂದಮೇಲೆ ಕೇಳಬೇಕೆ? ಅವರೆಲ್ಲ ದನ-ಕರು, ಕುರಿ-ಆಡುಗಳನ್ನೆಲ್ಲ ಮೇಯಲು ಬಿಟ್ಟು ಮತ್ತೆಲ್ಲೋ ಹರಟುತ್ತ ಕೂತುಬಿಡುತ್ತಿದ್ದರಂತೆ. ಮೇಯಲು ಬಂದ ಜಾನುವಾರುಗಳು ಕೆಲವೊಮ್ಮೆ ಸೀದಾ ಹೋಟೆಲಿಗೇ ಬರುತ್ತಿದ್ದವಂತೆ. ನೋಡುವಷ್ಟು ದಿನ ನೋಡಿದ ಶಿವಣ್ಣ, ಕಡೆಗೊಮ್ಮೆ ಆ ಜಾನುವಾರಗಳನ್ನೆಲ್ಲ ಕಟ್ಟಿ ಹಾಕಿ, ಅವುಗಳ ಮಾಲೀಕರಿಗೆ ಪೋಲಿ ಮಾತುಗಳಲ್ಲೇ ಬೈಯ್ದರಂತೆ. ಅಂದಿನಿಂದ ಜನ ಅವಲರಿಗೆ ಪೋಲಿ ಹೋಟೆಲ್‌ ಶಿವಣ್ಣ ಎಂದು ಹೆಸರಿಟ್ಟರಂತೆ. 

ಶಿವಣ್ಣ ಅವರ ತರುವಾಯ ಅವರ ಮಗ ನಾಗರಾಜು ಹೋಟೆಲಿನ ಓನರ್‌ ಆದರು. ಈ ಸಂದರ್ಭದಲ್ಲಿಯೇ, ಇದೇ ಹೋಟೆಲಿನ ಹಿಂದೆ ಬೋರ್‌ವೆಲ್‌ ಯಂತ್ರ ಕೊರೆಸುವ ಶಾಪ್‌ ಆರಂಭವಾಗಿದೆ. ಅವರು ಅಡ್ರೆಸ್‌ ಬರೆಸುವಾಗ, ಪೋಲಿ ಹೋಟೆಲ್‌ ಹಿಂಭಾಗ ಎಂದು ಬರೆಸಿದರಂತೆ. ಅಂದಿನಿಂತ ಇದು ಪೋಲಿ ಹೋಟೆಲ್‌ ಎಂದೇ ಹೆಸರಾಗಿದೆ. 

ಇಲ್ಲಿ ಸಿಗುವ ಸೆಟ್‌ ದೋಸೆ, ಬೆಣ್ಣೆ ದೋಸೆ, ಕೆಂಪು ಚಟ್ನಿಗೆ ಮರುಳಾಗದವರಿಲ್ಲ. ಬೆಳಗಿನಿಂದ ಸಂಜೆಯವರೆಗೂ ದೋಸೆ ಸಿಗುತ್ತದೆ. ಸಾದಾ ದೋಸೆಗೆ 40 ಹಾಗೂ ಬೆಣ್ಣೆ ದೋಸೆಗೆ 50ರೂ. ಉಪ್ಪಿಟ್ಟು, ರೈಸ್‌ಬಾತ್‌ ಹಾಗೂ ಮಿನಿ ಮೀಲ್ಸ್‌ಗೆ 25 ರೂ. ದರವಿದೆ. 

ಈ ಹೋಟೆಲಿನ ತಿಂಡಿ ಅದೆಷ್ಟು ರುಚಿಯಾಗಿದೆ ಅಂದರೆ, ಶೂಟಿಂಗ್‌ಗೆಂದು ಮುತ್ತತ್ತಿ ಅಥವಾ ಶಿವನಸಮುದ್ರಕ್ಕೆ ಹೋಗುವಾಗ, ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಸೇರಿದಂತೆ ಹಲವರು ತಪ್ಪದೇ ಇಲ್ಲಿಗೆ ಬಂದು ಬೆಣ್ಣೆ ದೋಸೆ ತಿಂದೇ ಹೋಗುತ್ತಾರೆ. 

ಪೋಲಿ ಹೋಟೆಲ್‌ ಎಂಬುದು ಹೋಟೆಲಿನ ಹೆಸರಷ್ಟೇ ಆಗಿದೆ. ಹೋಟೆಲಿನ ಒಳಗೆ ಸಭ್ಯರೇ ಇರುತ್ತಾರೆ. ಮುತ್ತತ್ತಿಯ ಕಡೆಗೆ ಟ್ರಿಪ್‌ ಹೋದರೆ, ಪೋಲಿ ಹೋಟೆಲಿಗೂ ಹೋಗಿಬರಲು  ಮರೆಯಬೇಡಿ. 

– ಜಗದೀಶ್‌ ಮಂಡ್ಯ

ಟಾಪ್ ನ್ಯೂಸ್

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.