ಗಿರಿಜಕ್ಕನ ಹೋಟೆಲಲ್ಲಿ ಗರಿಗರಿ ಮಂಡಕ್ಕಿ


Team Udayavani, Dec 17, 2018, 6:05 AM IST

girijakka.jpg

ಕೆಲವರು ಎಷ್ಟೇ ಶ್ರೀಮಂತರಾಗಿದ್ರೂ ಹೊರಗಡೆ ಹೋದಾಗ ರಸ್ತೆ ಬದಿಯಲ್ಲಿರುವ ಸಣ್ಣ ಪುಟ್ಟ ಹೋಟೆಲ್‌ನಲ್ಲಿ ತಿಂಡಿ ತಿನ್ನುವುದಕ್ಕೆ ಇಷ್ಟ ಪಡುತ್ತಾರೆ. ಏಕೆಂದರೆ,  ಅಲ್ಲಿ ಸಿಗುವ ತಿಂಡಿ ಸ್ಟಾರ್‌ ಹೋಟೆಲ್‌ ತಿನಿಸಿನ ರುಚಿಯನ್ನೂ ಮೀರಿಸುತ್ತದೆ. ಇಂತಹುದೇ ಒಂದು ಹೋಟೆಲ್‌ ಇಟ್ಟಿಗುಡಿ ಗ್ರಾಮದಲ್ಲಿದೆ.

ದಾವಣಗೆರೆಯಿಂದ ಮೈಲಾರಕ್ಕೆ ಹೋಗುವ ರಸ್ತೆಯಲ್ಲಿ ಇರುವ ಈ ಗ್ರಾಮದ ಬಸ್‌ ನಿಲ್ದಾಣದ ಎದುರು ಯಾವುದೇ ದೊಡ್ಡ ಟೇಬಲ್‌, ಚೇರು, ಹೆಸರಿನ ಬೋರ್ಡ್‌ ಇಲ್ಲ, ಚಪ್ಪರ ಹಾಕಿರುವ ಸಣ್ಣ ಮನೆಯಂತೆ ಕಾಣುವ ಈ ಹೋಟೆಲ್‌ 40 ವರ್ಷ ಹಳೆಯದು.

ಮನೆಯಲ್ಲಿ ತೀರಾ ಬಡತನವಿದ್ದ ಸಮಯದಲ್ಲಿ ತನ್ನ ಮಕ್ಕಳೊಂದಿಗೆ ಬೈರಾಪುರದಿಂದ 5 ಕಿ.ಮೀ. ದೂರದ ಇಟ್ಟಿಗುಡಿಗೆ ಬಂದ ಸೋಮವ್ವ ಎಂಬಾಕೆ ಪುಟ್ಟ ಗುಡಿಸಲು ಕಟ್ಟಿಕೊಂಡು ಹೋಟೆಲ್‌ ಪ್ರಾರಂಭಿಸಿದ್ದರು. ಇದರಲ್ಲಿ ಸಂಪಾದಿಸಿದ ಹಣದಲ್ಲಿ ಮೊಮ್ಮಳನ್ನು ಓದಿಸಿದ್ದೂ ಅಲ್ಲದೆ, ಜಮೀನು, ನಿವೇಶನ ಪಡೆದು ಮಕ್ಕಳಿಗೆ ಆಧಾರ ಮಾಡಿದ್ದಾರೆ. ಈ ಮನೆಗೆ ಸೊಸೆಯಾಗಿ ಬಂದ ಗಿರಿಜಮ್ಮ, ಈ ಹೋಟೆಲ್‌ಅನ್ನು ಮತ್ತಷ್ಟು ವಿಸ್ತರಿಸಿದರು. ಈಗ ಇವರ ಮಗ ಸಂತೋಷ್‌ ಹಾಗೂ ಸೊಸೆ ಸುಧಾ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.

15 ವರ್ಷಗಳ ಹಿಂದೆ ಪತಿ ಮೃತಪಟ್ಟ ನಂತರ ಮನೆಯ ಜವಾಬ್ದಾರಿ ಹೊತ್ತ ಗಿರಿಜಮ್ಮ ಈ ಪುಟ್ಟ ಗುಡಿಸಲಿನಲ್ಲಿ  ಗ್ರಾಹಕರಿಗೆ ರುಚಿಯಾದ ತಿಂಡಿ ಮಾಡಿಕೊಡುತ್ತಾ ಅಕ್ಕಪಕ್ಕದ ಗ್ರಾಮಸ್ಥರಿಗೂ ಚಿರಪರಿಚಿತರಾದರು. ಹೀಗಾಗಿ ಇದು ಗಿರಿಜಕ್ಕನ ಹೋಟೆಲ್‌ ಎಂದೇ ಹೆಸರಾಗಿದೆ.

ಬೆಳಗ್ಗಿನ ಉಪಾಹಾರ:
ಬೆಳಗ್ಗೆ 4 ಗಂಟೆಗೆ ಆರಂಭವಾಗುವ ಈ ಹೋಟೆಲ್‌ನಲ್ಲಿ 11 ಗಂಟೆವರೆಗೂ ಇಡ್ಲಿ, ವಡೆ, ಪೂರಿ, ದೋಸೆ ಜೊತೆಗೆ ಟೀ ಕಾಫಿ ಸಿಗುತ್ತದೆ. 15 ರೂ. ಕೊಟ್ರೆ 5 ಇಡ್ಲಿ, ದೋಸೆ(ಗ್ರಾತದಲ್ಲಿ ದೊಡ್ಡದು)ಯಾದ್ರೆ ಎರಡು ಕೊಡುತ್ತಾರೆ. 30 ರೂ. ಕೊಟ್ರೆ 5 ಇಡ್ಲಿ ಜತೆ, ಗರಿಗರಿಯಾದ ರುಚಿಯಾದ ಎರಡು ಮೆಣಸಿನಕಾಯಿ ಬಜ್ಜಿ, ಟೀ ಅಥವಾ ಕಾಫಿ ಸಿಗುತ್ತದೆ. ತಿಂಡಿ ಜತೆ ಕೊಡುವ ಶೇಂಗಾ ಚಟ್ನಿ ಹಾಗೂ (ಮಸೆದಿದ್ದು)ಸೊಪ್ಪಿನ ಸಾರು, ಬೇಳೆ ಸಾರು ಬಾಯಿ ಚಪ್ಪರಿಸುವಂತೆ ಮಾಡುತ್ತದೆ.

ಮಧ್ಯಾಹ್ನ 12ರ ನಂತರ ದಾವಣಗೆರೆ ಜಿಲ್ಲೆಯ ಮಿರ್ಚಿ ಮಂಡಿಕ್ಕಿ ಸಿಗುತ್ತದೆ. ಖಾರ ಮಂಡಕ್ಕಿ, ಸೂಸ್ಲ (ಒಗ್ಗರಣೆ ಮಂಡಕ್ಕಿ), ನರ್ಗೀಸ್‌, ಒಗ್ಗರಣೆ ಹಾಕಿದ ಅವಲಕ್ಕಿ ಯಾವುದೇ ತೆಗೆದುಕೊಂಡ್ರೂ ಒಂದು ಪ್ಲೇಟ್‌ಗೆ 15 ರೂ. ಇದರ ಜತೆ ಎರಡು ಮೆಣಸಿನಕಾಯಿ ಬಜ್ಜಿ ಅಥವಾ ವಡೆ ಕೂಡ ಕೊಡ್ತಾರೆ.  

ಆರ್ಡರ್‌ ಕೊಟ್ರೆ ಊಟ ಸಿಗುತ್ತೆ:

ಈ ಹೋಟೆಲ್‌ನಲ್ಲಿ ಊಟವೂ ಸಿಗುತ್ತದೆ. ಯಾರಾದ್ರೂ ಮೊದಲೇ ಆರ್ಡರ್‌ ಕೊಟ್ರೆ ಊಟನೂ ಮಾಡಿಕೊಡುತ್ತಾರೆ. ಹಳ್ಳಿಯಾಗಿರುವ ಕಾರಣ, ಊಟಕ್ಕಿಂತ ಮಂಡಕ್ಕಿ ಕೇಳ್ಳೋದು ಜಾಸ್ತಿ. ಹೀಗಾಗಿ ಮಧ್ಯಾಹ್ನ ಊಟ ವ್ಯವಸ್ಥೆ ಮಾಡಿಲ್ಲ ಎನ್ನುತ್ತಾರೆ ಸಂತೋಷ್‌. ಅಜ್ಜಿ ಹಾಗೂ ಅಮ್ಮನ ಕೈಯಲ್ಲಿ ಪಳಗಿರುವ ಸಂತೋಷ್‌ ಹಾಗೂ ಇತನ ಪತ್ನಿ ಸುಧಾ ಹಿಂದಿನಿಂದಲೂ ಕಾಪಾಡಿಕೊಂಡು ಬಂದಿರುವ ರುಚಿಯನ್ನು ಮುಂದುವರಿಸುತ್ತಿದ್ದಾರೆ.

ಹೋಟೆಲ್‌ ಸಮಯ:ಮುಂಜಾನೆ 4 ಗಂಟೆಗೆ ಪ್ರಾರಂಭವಾದ್ರೆ ರಾತ್ರಿ 6 ಗಂಟೆಯವರೆಗೂ ತೆರೆದಿರುತ್ತದೆ. ಹಬ್ಬದಲ್ಲಿ ಮಾತ್ರ ರಜೆ. ಉಳಿದಂತೆ ಎಲ್ಲಾ ದಿನಗಳಲ್ಲೂ ಓಪನ್‌ ಇರುತ್ತೆ.

ಹೋಟೆಲ್‌ ವಿಳಾಸ: ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿಗೆ ಸೇರಿರುವ ಇಟ್ಟಿಗುಡಿ ಗ್ರಾಮದ ಮೈಲಾರಕ್ಕೆ ಹೋಗುವ ರಸ್ತೆಯಲ್ಲೇ ಈ ಹೋಟೆಲ್‌ ಇದೆ. 

– ಭೋಗೇಶ ಎಂ.ಆರ್‌.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.